Wednesday 11 December 2019

ಡಿಸೆಂಬರ್ ತಿಂಗಳ ಹುಣ್ಣಿಮೆಯ ವಿಶೇಷ

ಡಿಸೆಂಬರ್ ತಿಂಗಳ ಹುಣ್ಣಿಮೆಯ ವಿಶೇಷ



  ಇದು ಈ ವರ್ಷದಲ್ಲಿ(2019) 11 &12  ದಿನಾಂಕದಲ್ಲಿ ಬರುತ್ತದೆ ಈ ದಿನದಂದು ಬೇರೆ ದೇಶಗಳ ಬೌದ್ಧರಿಗಿಂತ ಶ್ರೀಲಂಕದ ಬೌದ್ಧರಿಗೆ ಅತ್ಯಂತ ಪ್ರಾಶಸ್ತ್ಯವಾದುದು. ಏಕೆಂದರೆ ಈ ದಿನದಂದು ಸುಮಾರು 2562 ವರ್ಷಗಳ ಹಿಂದೆ ಪವಿತ್ರವಾದ ಜಯಸಿರಿ ಮಹಾಬೋಧಿ ವೃಕ್ಷದ ಗಿಡವನ್ನು ಬೋಧ್ ಗಯಾದಿಂದ ಶ್ರೀಲಂಕದ ಅನುರಾಧಪುರಕ್ಕೆ ತರಲಾಯಿತು. ಆಗ ಅಲ್ಲಿ ದೇವನಾಂಪಿಯ ತಿಸ್ಸರವರು ಆಳ್ವಿಕೆಯನ್ನು ಮಾಡುತ್ತಿದ್ದರು.(ಕಿ.ಪೂ. 250-210)..

ಸಾಮ್ರಾಟ್ ಅಶೋಕರ ಪುತ್ರರಾದ ಮಹಿಂದರವರು(ಮಹೇಂದ್ರ) ಆ ಸಮಯದಲ್ಲಿ ಶ್ರೀಲಂಕಕ್ಕೆ ಬುಧ್ಧಧಮ್ಮವನ್ನು ತಂದರು. ಹಾಗೇಯೆ ಅವರ ತಂಗಿಯಾದ ಸಂಘಮಿತ್ರೆಯು ತನ್ನ 18ನೇ ವಯಸ್ಸಿನಲ್ಲಿಯೇ ಭಿಕ್ಖುಣಿಯಾಗಿದ್ದಳು. ಆಕೆಯು ಬೋಧಿ ವೃಕ್ಷವನ್ನು ಹೊತ್ತುಕೊಂಡು ಶ್ರೀಲಂಕದ ಅನುರಾಧಪುರದಲ್ಲಿ ಬಂದಿಳಿದ ದಿನವು ಇಂದೇ ಆಗಿತ್ತು. ಶ್ರೀಲಂಕದ ಭಿಕ್ಖುಣಿ ಶಾಸನದ ಸ್ಥಾಪನಕರ್ತೆ ಆಕೆಯೇ ಆಗಿದ್ಧಳು.

ಈ ಆಣ್ಣ.ಹಾಗೂ ತಂಗಿಯು ಶ್ರೀಲಂಕ ಬುಧ್ಧಧಮ್ಮಕ್ಕೆ ಸ್ಥಾಪನಾಕರ್ತರೂ ಅಷ್ಟೇ  ಅಲ್ಲದೆ ಅಲ್ಲಿನ ಸಾಮಾಜಿಕ, ಸಾಂಸ್ಕೃತಿಕ, ಆರ್ಥಿಕ, ಧಾರ್ಮಿಕ ಇತ್ಯಾದಿಗಳ ಕ್ರಾಂತಿಗೂ ಅವರೇ ಕಾರಣಕರ್ತರಾಗಿದ್ದಾರೆ. ಅವರಿಗೆ ಸಿಂಹಳಿಯರೂ ಸದಾ ಚಿರಋಣಿ ಎಂದು ಭಾವಿಸುತ್ತಾರೆ.

ಮಹಾನ್ ತೇಜಸ್ವಿಯು ಪರಮ ಸಾಧ್ವಿಯು ಆಗಿದ್ದಂತಹ ಪರಮಪೂಜ್ಯ ಸಂಘಮಿತ್ರೆಗೆ ಪಾಟಲಿಪುತ್ರಕ್ಕೆ ಆಗಮಿಸಿದ್ದಂತಹ ದೇವನಾಂಪಿಯ ತಿಸ್ಸರು ಸಂಘಮಿತ್ರೆಗೆ ಶ್ರೀಲಂಕಕ್ಕೆ ಬರಲು ಆಹ್ವಾನ ನೀಡಿದರು. ಏಕೆಂದರೇ ಮಹಾರಾಣಿಯಾಗಿದ್ದಂತಹ ಅನುಲ ಹಾಗೂ ಆಕೆಯ ಸಖಿಯರು ಭಿಕ್ಖುಣಿಯಾಗಲು ಬಯಸಿದ್ದರು. ಹೀಗಾಗಿ ಸಿಂಹಳ ರಾಜನಾದ ದೇವಾಂಪಿಯ ತಿಸ್ಸರು ಆಕೆಯನ್ನು ಕರೆ ತರಲು ವಿದೇಶಾಂಗ ಮಂತ್ರಿಯಾದ ಅರಿಟ್ಟರವರನ್ನು ಕಳುಹಿಸಿದ್ದನು.

  ಪಾಟಲಿಪುತ್ರದಿಂದ ಸಿಂಹಳಕ್ಕೆ ಸಮುದ್ರ ಯಾನದಲ್ಲಿ ಬರಲು 7 ದಿನಗಳು ಹಿಡಿಯಿತು‌. ಆಕೆಯೊಂದಿಗೆ 11 ಭಿಕ್ಖುಣಿಯರು ಆಕೆಯ ಜೋತೆಗೆ ಇದ್ದರು.ಆಕೆಯು ಶ್ರೀಲಂಕದ ಉತ್ತರದಲ್ಲಿರುವ ಜಂಬುಕೊಳೆ ಬಂದರಿನಲ್ಲಿ ಇಳಿದಳು. ಆಕೆಯು ಅಲ್ಲಿಗೆ ತಂದಂತಹ ಮಹಾ ಉಡೂಗೊರೆ ಎಂದರೇ ಮಹಾಬೋಧಿ ವೃಕ್ಷದ ಸಸಿಯಾಗಿತ್ತು. ಅಲ್ಲಿ ಅವರು ಅದನ್ನು ಜಯಸಿರಿ ಮಹಾಬೋಧಿ ಎಂದು ಕರೆಯುತ್ತಾರೆ. ಅಲ್ಲಿನ ರಾಜನಾದ ತಿಸ್ಸರೂ ಅತಿ ಗೌರವ ಭಕ್ತಿಯಿಂದ ಅದನ್ನು ನೆಟ್ಟರು. ಅಂದಿನಿಂದ ಇಂದಿನವರೆವಿಗೂ ಅದನ್ನು ಜೀವಂತ ಭಗವಾನ್ ಬುಧ್ಧರಿಗೆ ಗೌರವಿಸುವಂತೆ ಗೌರವಿಸುತ್ತಾರೆ ಹಾಗೂ ಪೂಜಿಸುತ್ತಾರೆ.

ನಂತರ ಮೂದಲು ಅಲ್ಲಿ ಮಹಾರಾಣಿ ಅನುಲರವರು ಭಿಕ್ಖುಣಿಯಾಗುತ್ತಾರೆ. ನಂತರ ಸಾವಿರಾರು ಸ್ತ್ರೀಯರು ಸಂಘವನ್ನು ಪ್ರವೇಶಿಸಿದರು.

   ಹೀಗಾಗಿ ಸಿಂಹಳಿಯರಿಗೆ ಈ ಹುಣ್ಣಿಮೆಯು ಪರಮ ಪವಿತ್ರವಾದುದು.ಈ ದಿನದಂದು ಸಿಃಹಳಿಯರು ಪಂಚಶೀಲ, ಅಷ್ಟಾಂಗ ಶೀಲ, ದಾನ, ಧ್ಯಾನ, ತಿರತನ ಪೂಜೆ ಇತ್ಯಾದಿಗಳ ಆಚರಣೆ ಇರುತ್ತದೆ.ಹಾಗೂ ವಿಶೇಷವಾಗಿ ಬೋಧಿವೃಕ್ಷದ ಪೂಜೆಯು ಇರುತ್ತದೆ.

ಹಾಗೇಯೆ ಸಿಂಹಳ ದೇವನಾದ ಸುಮನ ಸಮನರ ಕೋರಿಕೆಯಂತೆ ಬುಧ್ಧಭಗವಾನರು ಶ್ರೀಲಂಕಕ್ಕೆ ಭೇಟಿ ನೀಡಿದ್ದರು ಹಾಗೂ ಅವರ ಪಾದದ ಚಿನ್ಹೆಯನ್ನು ನಾವು ಶ್ರೀಲಂಕದ ಸಿರಿಪಾದ ಪರ್ವತದಲ್ಲಿ ಕಾಣಬಹುದು.

Monday 2 December 2019

ಪುಣ್ಯದ ಎಂಟು ಇಳುವರಿಗಳು


 ಪುಣ್ಯದ ಎಂಟು ಇಳುವರಿಗಳು



ಭಿಕ್ಷುಗಳೇ, ಇವು ಪುಣ್ಯದ ಮತ್ತು ಸುಖದ ಎಂಟು ಇಳುವರಿಗಳಾಗಿವೆ. ಸುಖಕ್ಕೆ ಆಹಾರವಾಗಿದೆ, ದಿವ್ಯವಾದುದ್ದು, ಸುಖದ ಪರಿಣಾಮವಾಗಿರುವಂತಹುದು, ಸ್ವರ್ಗಗಾಮಿಯಾಗಿರುವಂತಹುದು, ಸುಖಕಾರಿಯಾಗಿರುವಂತಹುದು, ಪ್ರಿಯವಾದುದು, ಅತ್ಯಮೂಲ್ಯವಾದುದು, ಹಿತಕಾರಿಯಾಗಿರುವುದಾಗಿದೆ, ಯಾವುದವು ಎಂಟು?

1. ಭಿಕ್ಷುಗಳೇ, ಇಲ್ಲಿ ಆರ್ಯರ ಶಿಷ್ಯನು ಬುದ್ಧರಲ್ಲಿ ಶರಣುಹೋಗುತ್ತಾನೆ. ಭಿಕ್ಷುಗಳೇ, ಇದು ಪುಣ್ಯಕ್ಕೆ ಮತ್ತು ಒಳಿತಿಗೆ, ಸುಖಕ್ಕೆ ಪ್ರಥಮ ಇಳುವರಿಯಾಗಿದೆ...

2. ಮತ್ತೆ ಭಿಕ್ಷುಗಳೇ, ಇಲ್ಲಿ ಆರ್ಯರ ಶಿಷ್ಯನು ಧಮ್ಮಕ್ಕೆ ಶರಣು ಹೋಗುತ್ತಾನೆ. ಭಿಕ್ಷುಗಳೇ, ಇದು ಪುಣ್ಯಕ್ಕೆ, ಒಳಿತಿಗೆ ಮತ್ತು ಸುಖಕ್ಕೆ ದ್ವತೀಯ ಇಳುವರಿಯಾಗಿದೆ...

3. ಮತ್ತೆ ಭಿಕ್ಷುಗಳೇ, ಇಲ್ಲಿ ಆರ್ಯರ ಶಿಷ್ಯನು ಸಂಘಕ್ಕೆ ಶರಣು ಹೋಗುತ್ತಾನೆ. ಭಿಕ್ಷುಗಳೇ, ಇದು ಪುಣ್ಯಕ್ಕೆ, ಒಳಿತಿಗೆ ಮತ್ತು ಸುಖಕ್ಕೆ ತೃತೀಯ ಇಳುವರಿಯಾಗಿದೆ...

 ಭಿಕ್ಷುಗಳೇ, ಐದು ದಾನಗಳಿವೆ. ಅವು ಮಹತ್ತರ ಲಾಭವನ್ನುಂಟು ಮಾಡುತ್ತದೆ. ಸನಾತನ ಕಾಲದಿಂದಲೂ, ಸಂಪ್ರದಾಯದಿಂದಲೂ ಸ್ವೀಕೃತವಾಗಿವೆ. ಗೊಂದಲಾತೀತವಾಗಿದೆ, ಅವು ಯಾರಿಂದಲೂ ತಿರಸ್ಕೃತವಾಗಿಲ್ಲ. ಅವು ಯಾವುದು?

4.ಇಲ್ಲಿ ಭಿಕ್ಷುಗಳೇ, ಆರ್ಯ ಶಿಷ್ಯನು, ಜೀವಹತ್ಯೆಯಿಂದ ವಿರತನಾಗುತ್ತಾನೆ. ಹೀಗೆ ಅಂತಹುದರಿಂದ ದೂರಾಗಿ, ಆತನು ಅಸಂಖ್ಯಾತ ಜೀವಿಗಳಿಗೆ ಅಭಯವನ್ನು ನೀಡಿದ್ದಾನೆ. ದ್ವೇಷರಹಿತತೆ ನೀಡಿದ್ದಾನೆ, ವೈರರಹಿತತೆ ನೀಡಿದ್ದಾನೆ. ಹೀಗೆ ಆತನು ನಿಂದಾತೀತವಾದ ಅಭಯ ದಾನವನ್ನೇ ಮಾಡಿದ್ದಾನೆ. ಮೈತ್ರಿಯಿಂದ, ದಯೆಯಿಂದ, ಕೂಡಿದವನಾಗಿದ್ದಾನೆ. ಇದೇ ಭಿಕ್ಷುಗಳೇ, ಮೊದಲ ದಾನವಾಗಿದೆ. ಇದು ಎಲ್ಲರಿಂದ ಪ್ರಶಂಸಿತವಾಗಿದ್ದು, ಯಾರಿಂದಲೂ ತಿರಸ್ಕೃತವಾಗಿಲ್ಲ, ಗೊಂದಲಾತೀತವಾಗಿದೆ.

5. ಮತ್ತೆ ಭಿಕ್ಷುಗಳೇ, ಇದೇರೀತಿಯಲ್ಲಿ ಆರ್ಯಶಿಷ್ಯನು ಕಳ್ಳತನದಿಂದಾಗಿ ದೂರವಿರುತ್ತಾನೆ. 

6. ಅನೈತಿಕ ಕಾಮುಕತೆಯಿಂದ ದೂರವಿರುತ್ತಾನೆ.
7. ಸುಳ್ಳಿನಿಂದ ದೂರವಿರುತ್ತಾನೆ. 
8.ಎಲ್ಲಾ ಬಗೆಯ ಮಾದಕ ವಸ್ತುಗಳು, ಮದ್ಯಪಾನಗಳಿಂದ ದೂರವಾಗುತ್ತಾನೆ. 

ಹೀಗಿದ್ದೂ ಆತನು ಅಸಂಖ್ಯಾತ ಜೀವಿಗಳಿಗೆ ಅಭಯವನ್ನು ನೀಡುತ್ತಿದ್ದಾನೆ. ದ್ವೇಷರಹಿತತೆಯನ್ನು ನೀಡುತ್ತಿದ್ದಾನೆ, ವೈರರಹಿತತೆಯನ್ನು ನೀಡುತ್ತಿದ್ದಾನೆ. ಹೀಗಿದ್ದೂ ಸೀಮಾತೀತವಾದ ಅಭಯ ದಾನಕ್ಕೆ ಭಾಗಿಯಾಗುತ್ತಾನೆ. ಮೈತ್ರಿಯ ಮತ್ತು ಕರುಣೆಯ ನೆಲೆಸುವಿಕೆಗೆ ಕಾರಣವಾಗುತ್ತಾನೆ. ಭಿಕ್ಷುಗಳೇ, ಇವೇ ಆ ಐದು ಮಹಾದಾನಗಳಾಗಿದ್ದು, ಇದು ಪುರಾತನ ಕಾಲದಿಂದಲೂ ಪ್ರಶಂಸಿತವಾಗಿದ್ದು, ಯಾರಿಂದಲು ತಿರಸ್ಕೃತವಾಗಿಲ್ಲ. ಇವೇ ಭಿಕ್ಷುಗಳೇ, ಪುಣ್ಯಗಳ ಇಳುವರಿಗೆ ಸಹಾಯಕವಾದ ಎಂಟು ಅಂಗಗಳಾಗಿವೆ. ಅದರಿಂದಾಗಿ ಆತನು ಒಳಿತನ್ನು, ಸುಖವನ್ನು, ಸ್ವರ್ಗಗಾಮಿತ್ವವನ್ನು, ಆನಂದವನ್ನು, ಲಾಭವನ್ನು ಪಡೆಯುತ್ತಾನೆ. 

Wednesday 27 November 2019

ಜಿಪುಣತನದ ಮುಂದಿನ ಗತಿ (ಪುನರ್ಜನ್ಮದ ಕಥೆ)

 ಜಿಪುಣತನದ ಮುಂದಿನ ಗತಿ (ಪುನರ್ಜನ್ಮದ ಕಥೆ)

ಶ್ರಾವಸ್ತಿಯಲ್ಲಿ ಆನಂದನೆಂಬ ಜಿಪುಣಾಗ್ರೇಸರನಿದ್ದನು. ಆತನು ಬಹಳ ಶ್ರೀಮಂತನಾದರೂ ದಾನಿಯಾಗಿರಲಿಲ್ಲ. ಆತನ ಮಗನಾದ ಮೂಲಸಿರಿಗೆ ಆತನು ಆಗಾಗ್ಗೆ ಈ ರೀತಿ ಹೇಳುತ್ತಿದ್ದನು. ನಾವು ಶ್ರೀಮಂತರೆಂದು ಯೋಚಿಸಲೇಬಾರದು, ನಾವು ಖಚರ್ು ಮಾಡಬಾರದು, ನಾವು ಸದಾ ಐಶ್ವರ್ಯವನ್ನು ಸಂಗ್ರಹ ಮಾಡುತ್ತಿರಬೇಕು, ಇಲ್ಲದೆ ಹೋದರೆ ನಮ್ಮ ಐಶ್ವರ್ಯವೇ ಕ್ಷಯಿಸಿಹೋಗುತ್ತದೆ. ಈ ಶ್ರೀಮಂತ ಆನಂದನು 5 ಬಿಂದಿಗೆಗಳಷ್ಟು ಚಿನ್ನವನ್ನು ತನ್ನ ಮನೆಯಲ್ಲಿ ಹೂತಿಟ್ಟು ಅದನ್ನು ಯಾರಿಗೂ ತಿಳಿಸದೆ ಸತ್ತುಹೋದನು.
ನಂತರ ಆತನು ಶ್ರಾವಸ್ತಿಯ ಸಮೀಪದ ಹಳ್ಳಿಯಲ್ಲಿ ಭಿಕ್ಷುಕರ ಮನೆಯಲ್ಲಿ ಹುಟ್ಟಿದನು. ಆತನು ತಾಯಿಯ ಗರ್ಭದಲ್ಲಿರುವಾಗ ಭಿಕ್ಷುಕರ ಆದಾಯವೇ ಕ್ಷೀಣಿಸಿತು. ಆಗ ಅವರಿಗೆ ತಮ್ಮಲ್ಲಿ ಯಾರು ದುರಾದೃಷ್ಟವಂತರಿದ್ದಾರೆ ಎನಿಸಿತು. ಅವರು ತಮ್ಮಲ್ಲೇ ವಿಭಾಗಿಸುತ್ತ ಪರೀಕ್ಷಿಸಿದಾಗ ಗಭರ್ಿಣಿ ಸ್ತ್ರೀಯ ದುರಾದೃಷ್ಟವಂತೆ ಎಂದು ಲೆಕ್ಕಾಚಾರ ಹಾಕಿದನು. ಹೀಗಾಗಿ ಆಕೆಯನ್ನು ಹಳ್ಳಿಯಿಂದ ದೂರ ಅಟ್ಟಿದರು. ಕೊನೆಗೆ ಆಕೆ ಕುರೂಪಿ ಅಸಹ್ಯಕರ ಮಗನನ್ನು ಹೆತ್ತಳು. ಆಕೆ ಒಂಟಿಯಾಗಿ ಆಹಾರಕ್ಕಾಗಿ ಭಿಕ್ಷೆಗೆ ಹೋದರೆ ಆಕೆಗೆ ಮೊದಲಿನಷ್ಟೇ ಸಿಗುತ್ತಿತ್ತು. ಒಂದುವೇಳೆ ಆತನನ್ನು ಕರೆದುಕೊಂಡು ಭಿಕ್ಷೆಗೆ ಹೋದರೆ ಆಕೆಗೆ ಏನೂ ಸಿಗುತ್ತಿರಲಿಲ್ಲ. ಹೀಗಾಗಿ ಆ ಹುಡುಗ ಸ್ವಲ್ಪ ದೊಡ್ಡವನಾದ ಮೇಲೆ ಆತನನ್ನು ಒಂಟಿಯಾಗಿಯೇ ಭಿಕ್ಷೆಗೆ ಕಳುಹಿಸುತ್ತಿದ್ದಳು. ಹೀಗಿರಲು ಆತನು ಸುತ್ತಾಡುತ್ತಾ ಒಂದುದಿನ ಶ್ರಾವಸ್ತಿಯ ಹಳೆಯ ಮನೆಗೆ ಬಂದನು. ತನ್ನ ಹಳೆಯ ನೆನಪಿನಿಂದ ಆತನು ಮನೆಯೊಳಗೆ ಪ್ರವೇಶಿಸಿದನು. ಆಗ ಮೂಲಸಿರಿಯ ಮಕ್ಕಳು ಆತನನ್ನು ಕಂಡು ಹೆದರಿ ಸೇವಕರಿಂದ ಆಚೆಗೆ ದಬ್ಬಿಸಿದರು.
ಅದೇವೇಳೆಯಲ್ಲಿ ಭಗವಾನರು ಈ ಘಟನೆ ನೋಡಿದನು. ಅವರು ಮೂಲಸಿರಿಯನ್ನು ಕರೆಯಿಸಿದರು. ನಂತರ ಆತನಿಗೆ ಆ ಭಿಕ್ಷುಕ ಅವರ ಸ್ವತಃ ತಂದೆ ಬೇರಾರು ಅಲ್ಲ ಎಂದು ಹೇಳಿದರು. ಆದರೆ ಆತನು ನಂಬಲಿಲ್ಲ. ನಂತರ ಭಗವಾನರು ಭಿಕ್ಷುಕನಿಗೆ ಕರೆಸಿ ಆತನು ಹಿಂದಿನ ಜನ್ಮದಲ್ಲಿ ಎಲ್ಲೆಲ್ಲಿ ನಿಧಿ ಅಡಗಿಸಿರುವನು ತೋರಿಸು ಎಂದಾಗ ಆತನು ತೋರಿಸಿದ ಕಡೆ ಚಿನ್ನವು ದೊರೆಯಿತು. ಆಗ ಮೂಲಸಿರಿಯು ಭಿಕ್ಷುಕನನ್ನು ತನ್ನ ತಂದೆ ಎಂದು ಒಪ್ಪಿದನು. ನಂತರ ಅವರು ಭಗವಾನರ ಉಪಾಸಕರಾದರು. ಆ ವೇಳೆಯಲ್ಲಿ ಭಗವಾನರು ಈ ಗಾಥೆಯನ್ನು ನುಡಿದರು:
"ನನಗೆ ಪುತ್ರರಿರುವರು,
 ನನ್ನಲ್ಲಿ ಧನವು ಇರುವುದು
 ಎಂದು ಮೂರ್ಖರು ಚಿಂತೆಪಡುವರು. 
ತಾನೇ ತನ್ನವಲ್ಲ ಎಂದಮೇಲೆ
 ಎಲ್ಲಿಯ ಪುತ್ರರು, ಎಲ್ಲಿಯ ಧನ."

Friday 22 November 2019

ಬುದ್ಧ ವಂದನ ಹಾಗೂ ಬುದ್ಧಪೂಜೆ BUDDHA VANDANA & BUDDHA PUJE

 ಬುದ್ಧ ವಂದನ ಹಾಗೂ ಬುದ್ಧಪೂಜೆ

ನಮೋ ತಸ್ಸ ಭಗವತೋ, ಅರಹತೋ, ಸಮ್ಮಸಂಬುದ್ಧಸ್ಸ
ನಮೋ ತಸ್ಸ ಭಗವತೋ, ಅರಹತೋ, ಸಮ್ಮಸಂಬುದ್ಧಸ್ಸ
ನಮೋ ತಸ್ಸ ಭಗವತೋ, ಅರಹತೋ, ಸಮ್ಮಸಂಬುದ್ಧಸ್ಸ
(ಅರಹಂತರೂ ಹಾಗೂ ಸಮ್ಮಸಂಬುದ್ಧರೂ ಆಗಿರುವ ಭಗವಾನರಿಗೆ ವಂದನೆಗಳು.)
ಇತಿ ಪಿ ಸೊ ಭಗವಾ ಅರಹಂ, ಸಮ್ಮಾಸಂಬುದ್ಧೊ
ವಿಜ್ಜಾಚರಣಸಂಪನ್ನೋ, ಸುಗತೋ, ಲೋಕವಿದೋ, 
ಅನುತ್ತರೊ, ಪುರಿಸದಮ್ಮ ಸಾರಥಿ, ಸತ್ಥಾ ದೇವಮನುಸ್ಸಾನಂ
ಬುದ್ಧೊ ಭಗವಾತಿ
    ಯೇಚ ಬುದ್ಧಾ ಅತೀತಾ ಚ
ಯೇಚ ಬುದ್ಧಾ ಅನಾಗತಾ
ಪಚ್ಚುಪ್ಪನ್ನಾಚಯೇ ಬುದ್ಧಾ
ಅಹಂ ವಂದಾಮಿ ಸಬ್ಬದಾ
ನತ್ಥಿಮೇ ಸರಣಂ ಅಞ್ಞಂ
ಬುದ್ಧೋಮೆ ಸರಣಂ ವರಂ.
ಏತೇನ ಸಚ್ಛವಜ್ಜೇನ,
ಹೋತು ನೊ ಜಯಮಙ್ಗಳಂ
ಉತ್ತಮಙ್ಗೇನ ವನೇಹಂ
ಪಾದಪಂಸು ವರುತ್ತಮಂ
ಬುದ್ಧೇ ಯೋ ಖಲಿತೋ ದೋಸೋ
ಬುದ್ಧೋ ಖಮತು ತಂ ಮಮಂ
ಬುದ್ಧಂ ಯಾವ ನಿಬ್ಬಾಣ ಪರಿಯಂತಂ
ಸರಣಂ ಗಚ್ಛಾಮಿ 
   ಭಗವಾನರು ಇಂತಿರುವವರು : ಅವರು ಅರ್ಹಂತರು, ಸಮ್ಯಕ್ ಸಂಬುದ್ಧರು, ವಿದ್ಯಾಚರಣ ಸಂಪನ್ನರು, ಸುಗತರು, ಲೋಕವಿಧರು, ಅನುತ್ತರರು, ಪುರುಷರನ್ನು(ವ್ಯಕ್ತಿಗಳನ್ನು )ದಮಿಸುವ ಸಾರಥಿಯು, ದೇವತೆಗಳ ಹಾಗೂ ಮಾನವರ ಗುರುವು, ಬುದ್ಧರು ಹಾಗೂ ಭಗವಾನರು ಆಗಿದ್ದಾರೆ.
ಹಿಂದಿನ ಎಲ್ಲಾ ಬುದ್ಧರೆಲ್ಲರಿಗೂ
ಮುಂದಿನ ಎಲ್ಲಾ ಬುದ್ಧರೆಲ್ಲರಿಗೂ ಮತ್ತು
ವರ್ತಮಾನದಲ್ಲಿ ಇರುವ ಬುದ್ಧರಿಗೂ ನಾನು ವಂದಿಸುವೆನು.
ನಾನು ಯಾವಾಗಲೂ ವಿನಯ ಪೂರ್ವಕವಾಗಿ ನಮಸ್ಕರಿಸುತ್ತೇನೆ.
ಬೇರೆಲ್ಲಿಯೂ ನನಗೆ ರಕ್ಷಣೆ ಇಲ್ಲ.
ಬುದ್ಧರು ನನ್ನ ಶ್ರೇಷ್ಠ ರಕ್ಷಕರು
ಈ ಸತ್ಯವಚನದಿಂದ ನನಗೆ ಜಯಮಂಗಳವಾಗಲಿ !
ಅವರ ಪವಿತ್ರ ಪಾದಧೂಳಿಯನ್ನು ನನ್ನ ಶಿರಸ್ಸಿನಿಂದ ಪೂಜಿಸುತ್ತೇನೆ.
ನಾನೇನಾದರೂ ಬುದ್ಧರಲ್ಲಿ ಎಸಗಿದ ತಪ್ಪಿದ್ದರೆ ಬುದ್ಧರು ನನ್ನನ್ನು ಕ್ಷಮಿಸಲಿ. ನಾನು ನಿಬ್ಬಾಣ ಸಾಧಿಸುವವರೆಗೂ ಬುದ್ಧರಲ್ಲಿ ಶರಣು ಹೋಗುತ್ತೇನೆ.
ನಾನು ಬುದ್ಧರ ಚೇತಿಯಗಳೆಲ್ಲವನ್ನು ವಂದಿಸುತ್ತೇನೆ,
ಜಗತ್ತಿನ ಎಲ್ಲಡೆ ಎಲ್ಲೇ ಭಗವಾನರ ಶಾರೀರಿಕ ಧಾತುಗಳಾಗಲಿ,
ಮಹಾ ಬೋಧಿವೃಕ್ಷವಾಗಲಿ, ಭಗವಾನರ ರೂಪಗಳಾಗಲಿ (ವಿಗ್ರಹವಾಗಲಿ ಅಥವಾ ಭಾವ ಚಿತ್ರವಾಗಲಿ)
ಆ ಸಕಲಕ್ಕೂ ವಂದಿಸುವೆನು..
ಈ ತ್ರಿರತನ ವಂದನೆಗಳಿಂದ ಲಭಿಸುವ ಆಪಾರ ಪುಣ್ಯಗಳಿಂದಾಗಿ
ನನ್ನ ತಡೆಗಳೆಲ್ಲವೂ ದೂರಾಗಲಿ
ಮೋಹಾಂಧಕಾರಗಳನ್ನು ದೂರಾಗಿಸುವ ತ್ರಿಲೋಕ ಪ್ರದೀಪಕರಾಗಿರುವ ಪರಿಪೂರ್ಣ ಬುದ್ಧರಿಗೆ ಅಂಧಕಾರವನ್ನು ದೂರಾಗಿಸುವ ದೀಪಗಳಿಂದ ನಾನು ಪೂಜಿಸುವೆನು.
ದಾನಕ್ಕೇ ಪರಮಾರ್ಹರಾಗಿರುವ ಸದ್ಗುಣಸುಗಂಧಿತರಾಗಿರುವ ಭಗವಾನರಿಗೆ ಗಂಧ ಸಂಬಾರಯುಕ್ತಾದಿಗಳಿಂದ ಪೂಜಿಸುವೆನು.
ಮುನೀಂದ್ರರರ ಪದ್ಮಪಾದಗಳಿಗೆ ಸುಂದರ ವರ್ಣಗಂಧಯುಕ್ತವಾದ ಕುಸುಮಗಳಿಂದ ಪೂಜಿಸುವೆನು. ಇದರಿಂದಾಗಿ ಮೋಕ್ಷವು ದೊರೆಯಲಿ. ಹೇಗೆ ಈ ಹೂಗಳು ಬಾಡಿ ಒಣಗಿ ಹೋಗುವವೋ ಹಾಗೇಯೆ ಈ ಶರೀರವೂ ಸಹಾ
ಈ ರೀತಿಯ ಹಾಗೂ ಇತರ ಧಮ್ಮಾಚರಣೆಯಿಂದ ನಾನು ಬುದ್ಧರನ್ನು ಪೂಜಿಸುವೆ.
    ಧಮ್ಮವನ್ನು(ಜ್ಞಾನವನ್ನು ಅಥವಾ ಬೋಧನೆಯನ್ನು) ದಶರ್ಿಸುವುದೇ ಬುದ್ಧರನ್ನು ದಶರ್ಿಸುವಂತೆ ಎಂದು ಸ್ವತಃ ಬುದ್ಧರೇ ಹೇಳಿದ್ದಾರೆ.
   ರೋಗಿಗಳಿಗೆ (ದುಃಖಿತರಿಗೆ) ಸೇವೆ ಮಾಡುವುದೇ ಬುದ್ಧರಿಗೆ ಸೇವೆ ಮಾಡಿದಂತೆ ಎಂದು ಸ್ವತಃ ಬುದ್ಧರೇ ಹೇಳಿದ್ದಾರೆ. ಮತ್ತು ಮಹಾಪರಿನಿಬ್ಬಾನ ಸುತ್ತದಲ್ಲಿ ಭಗವಾನರು ಆನಂದನಿಗೆ ಹೀಗೆ ಹೇಳಿದ್ದಾರೆ ಈ ಕಾಲದಲ್ಲಿ ಶಾಲವೃಕ್ಷ ಜೀವಿಯು ಹೂಗಳಿಂದ ತುಂಬಿಹೋಗಿದೆ. ಆ ಹೂಗಳು ತಥಾಗತನನ್ನು ಪೂಜಿಸಲು ಅವನ ಶರೀರದ ಮೇಲೆ ಹರಡಿಕೊಂಡು ಅದನ್ನು ಮುಚ್ಚಿಬಿಟ್ಟಿವೆ. ದಿವ್ಯವಾದ ಮಂದಾರ ಪುಷ್ಪಗಳು ಅಂತರಿಕ್ಷದಿಂದ ಸುರಿಯುತ್ತಿವೆ. ತಥಾಗತನನ್ನು ಪೂಜಿಸುವ ಸಲುವಾಗಿ ಆ ಪುಷ್ಪಗಳು ಅವನ ಶರೀರದ ಮೇಲೆ ಹರಡಿಕೊಂಡು ಅವನ್ನು ಮುಚ್ಚಿಬಿಟ್ಟಿವೆ. ದಿವ್ಯವಾದ ಚಂದನ ಚೂರ್ಣವು ಅಂತರಿಕ್ಷದಿಂದ ಬೀಳುತ್ತಿದೆ. ತಥಾಗತನನ್ನು ಪೂಜಿಸಿ ಆತನ ಶರೀರದ ಮೇಲೆಲ್ಲಾ ಹರಡಿಕೊಂಡು ಅದನ್ನು ಮುಚ್ಚಿಬಿಟ್ಟಿದೆ. ತಥಾಗತನ ಪೂಜೆಗೆ ತಕ್ಕಂತೆ ಅಂತರಿಕ್ಷದಲ್ಲಿ ದಿವ್ಯವಾದ ಸಂಗೀತವೂ ಸಂಗೀತವಾದ್ಯಗಳೂ ಅಂತರಿಕ್ಷದಲ್ಲಿ ಮೊಳಗುತ್ತಿವೆ. ಅದರೆ ತಥಾಗತನನ್ನು ಗೌರವಿಸುವುದೂ, ಮಾನ್ಯ ಮಾಡುವುದೂ ಪೂಜಿಸುವುದೂ ಅವನಿಗೆ ಭಕ್ತಿ ತೋರಿಸುವುದೂ ಹೀಗಲ್ಲ. ಆನಂದ, ಯಾವ ಭಿಕ್ಷು ಭಿಕ್ಷುಣಿಯರೂ ಉಪಾಸಕ ಉಪಾಸಿಕೆಯರೂ ಧಮ್ಮ ಅನುಧಮ್ಮದಂತೆ ನಡೆದು ಸನ್ಮಾರ್ಗದಲ್ಲಿ ನಡೆಯುತ್ತಾ (ಅಸ್) ಧರ್ಮಚಾರಿಗಳಾಗಿದ್ದಾರೋ ಅವರು ಮಾತ್ರ ತಥಾಗತನನ್ನು ಸತ್ಕರಿಸುತ್ತಾರೆ ಗೌರವಿಸುತ್ತಾರೆ. ಆತನಿಗೆ ಮಾನ್ಯ ಮಾಡುತ್ತಾರೆ, ಆತನನ್ನು ಪೂಜಿಸುತ್ತಾರೆ, ಆತನಿಗೆ ಭಕ್ತಿ ತೋರಿಸುತ್ತಾರೆ. ಆತನಿಗೆ ಇದೇ ಪರಮಪೂಜೆ. ಆದುದರಿಂದ, ಆನಂದ, ಧರ್ಮ ಮತ್ತು ಅನುಧರ್ಮಗಳಂತೆ ನಡೆಸು ಸನ್ಮಾರ್ಗದಲ್ಲಿ ನಡೆಯುತ್ತಾ  ಧರ್ಮಚಾರಿಯಾಗಿ ಬಾಳಿ, ಇದನ್ನು ಕಲಿಯತಕ್ಕದ್ದು ಆನಂದ.

Wednesday 20 November 2019

ತಥಾಗತರು ಸಾವಿನ ಬಳಿಕ ಏನಾಗುತ್ತಾರೆ?

ತಥಾಗತರು ಸಾವಿನ ಬಳಿಕ ಏನಾಗುತ್ತಾರೆ?

ಆಗ ಪ್ರಚಲಿತವಾಗಿದ್ದ ಪ್ರಶ್ನೆಯಿದು. ಆದರೆ ಇಲ್ಲಿ ತಥಾಗತರ ಅರ್ಥ ನುಡಿದಂತೆ ನಡೆದವರು, ನಡೆದಂತೆ ನುಡಿಯುವವರು ಯಾರೂ ಈ ಸತ್ಯಪಥದಲ್ಲಿ ಚಲಿಸಿರುವವರೋ ಅವರು ಸಾವಿನ ನಂತರ ಏನಾಗುವರು? ಆಗ ತರ್ಕದಿಂದ ಮತ್ತು ಹಲವರು ಬೋಧಿಸುವಂತೆ ಈ ನಾಲ್ಕು ಗತಿಗಳಿದ್ದವು. (1) ಇರುವರು (2) ಇರುವುದಿಲ್ಲ (3) ಇದ್ದು ಇರುವುದಿಲ್ಲ (4) ಇರುವುದಿಲ್ಲ, ಇಲ್ಲವೆಂದೂ ಅಲ್ಲ. ಆದರೆ ಭಗವಾನರು ಈ ನಾಲ್ಕು ಉತ್ತರವನ್ನು ಒಪ್ಪುವುದಿಲ್ಲ, ನಿರಾಕರಿಸುತ್ತಾರೆ. ಏಕೆಂದರೆ ಸತ್ಯವು ಇಲ್ಲಿ ತರ್ಕವನ್ನು ಮೀರಿದೆ ಅಥವಾ ಅರಿಯಲು ಕಡುಕಷ್ಟಕರವಾಗಿದೆ.
ಒಮ್ಮೆ ಅಗ್ಗಿ ವಚ್ಚಗೊತ್ತನು ಇದೇ ಪ್ರಶ್ನೆ ಕೇಳಿದಾಗ, ಭಗವಾನರು ಈ ನಾಲ್ಕು ಗತಿಗಳ ಉತ್ತರವನ್ನು ನಿರಾಕರಿಸಿದರು. ಆಗ ವಚ್ಚನು ಹೀಗೆ ನಿರಾಶನಾಗಿ ಉತ್ತರಿಸಿದನು: ಈ ಅಂಶದಲ್ಲಿ ನಾನು ಕಳೆದುಕೊಂಡೆನು ಭಗವಾನ್, ನಾನು ದಿಗ್ಭ್ರಮೆಗೊಂಡಿರುವೆನು. ನನಗೆ ಹಿಂದೆ ನಿಮ್ಮ ಬೋಧನೆಯಲ್ಲಿ ಸಿಕ್ಕಿದ ತೃಪ್ತಿ ನಾನು ಈಗ ಕಳೆದುಕೊಂಡಿರುವೆನು.
ಆಗ ಭಗವಾನರು ಹೀಗೆ ಉತ್ತರಿಸುತ್ತಾರೆ: ಓ ವಚ್ಚ, ನೀನು ಅತೃಪ್ತನಾಗಿರುವುದು ಆಶ್ಚರ್ಯಕರ ಸಂಗತಿಯೇನಲ್ಲ. ಏಕೆಂದರೆ ವಚ್ಚ ಈ ಧಮ್ಮವು ಅತ್ಯಂತ ಆಳವಾದದ್ದು, ಅರಿಯಲು ಕಷ್ಟಕರವಾದದ್ದು, ವಿಶ್ಲೇಷಿಸಲು ಕಷ್ಟಕರವಾಗಿರುವುದು, ಶಾಂತವಾದುದು, ಉತ್ಕೃಷ್ಟವಾದುದು, ಚಚರ್ೆಗೆ, ತರ್ಕಕ್ಕೆ ಮೀರಿದ್ದು, ಪರಮಸೂಕ್ಷ್ಮವಾದದ್ದು, ಕೇವಲ ಪ್ರಜ್ಞಾವಂತರು ಅರಿಯುವಂತಹುದು. ಆದರೆ ಇದು ಕಷ್ಟಕರವಾಗಿರುವುದು ಏಕೆಂದರೆ ಪರಸಿದ್ಧಾಂತಕ್ಕೆ ಅಂಟಿರುವುದು, ಪೂರ್ವಗ್ರಹ ಪೀಡಿತವಾಗಿರುವುದು, ಬೇರೊಂದು ದೃಷ್ಟಿಕೋನಗಳಿಗೆ ಅಂಟಿರುವುದು. ಬೇರೆ ಸಿದ್ಧಾಂತಕ್ಕೆ ನಿಷ್ಟನಾಗಿರುವುದು, ಬೇರೊಂದು ಗುರಿಯನ್ನು ಹೊಂದಿರುವುದು, ಬೇರೆಯದನ್ನು ಪಾಲಿಸುತ್ತಿರುವುದು ಮತ್ತು ಬೇರೆ ಗುರುವನ್ನು ಹೊಂದಿರುವುದು ಆಗಿದೆ. ಸರಿ ವಚ್ಚ, ನಾನು ಒಂದು ಪ್ರಶ್ನೆಯನ್ನು ಕೇಳುವೆ, ಅದರ ಬಗ್ಗೆ ನಿನಗೆ ಸರಿ ಎನಿಸುವಂತೆ ಉತ್ತರಿಸು. ನಿನ್ನ ಮುಂದೆ ಅಗ್ನಿಯು ಉರಿಯುತ್ತಿರುವುದು ಎಂದು ಭಾವಿಸು, ಅದು ಯಾವುದನ್ನು ಆಧರಿಸಿ ಉರಿಯುತ್ತಿರುವುದು?
ಅದು ಹುಲ್ಲು ಮತ್ತು ಕಟ್ಟಿಗೆಗಳನ್ನು ಆಧರಿಸಿ ಉರಿಯುತ್ತಿರುವುದು.
ವಚ್ಚ, ಈಗ ಆ ಅಗ್ನಿಯು ಆರಿಹೋಗುವುದು, ಈಗ ನಿನಗೆ ಯಾರಾದರು ಈ ರೀತಿ ಪ್ರಶ್ನಿಸುತ್ತಾರೆ, ಏನೆಂದರೆ ಆ ಅಗ್ನಿಯು ಪೂರ್ವಕ್ಕೆ ಹೋಯಿತೆ? ಅಥವಾ ದಕ್ಷಿಣಕ್ಕೆ ಅಥವಾ ಪಶ್ಚಿಮಕ್ಕೆ ಅಥವಾ ಉತ್ತರಕ್ಕೆ ಹೋಯಿತೆ? ಎಂದು ಪ್ರಶ್ನಿಸಿದರೆ ಏನೆಂದು ಉತ್ತರಿಸುವೆ?
ಭಗವಾನ್ ಇಲ್ಲಿ ಈ ಪ್ರಶ್ನೆಯೇ ಹೊಂದಿಕೆಯಾಗದು, ಏಕೆಂದರೆ ಹುಲ್ಲು, ಕಟ್ಟಿಗೆಗಳನ್ನು ಆಧರಿಸಿ ಉರಿಯುತ್ತಿತ್ತು. ಇಂಧನ ಮುಗಿದನಂತರ ಆರಿಹೋಯಿತು ಎಂದಷ್ಟೇ ಹೇಳಬಹುದು.
ಅದೇರೀತಿಯಲ್ಲಿ ವಚ್ಚ, ಇಲ್ಲಿ ತಥಾಗತರವನ್ನು ಕಾಯದಿಂದ, ಅನುಭವಗಳಿಂದ, ಗ್ರಹಿಕೆಗಳಿಂದ, ಚಿತ್ತದ ಚಟುವಟಿಕೆಗಳಿಂದ ಅರಿವುಗಳಿಂದ (ಒಟ್ಟಾರೆ ದೇಹ ಮತ್ತು ಮನಸ್ಸಿನಿಂದ) ಗುತರ್ಿಸುತ್ತಾರೆ. ಆದರೆ ಅವೆಲ್ಲವೂ ಭವದಲ್ಲಿ ಬೆಳೆಯದಂತೆ, ತಾಳೆ ಮರವನ್ನು ಬುಡದ ಬಳಿ ಕತ್ತರಿಸುವಂತೆ, ತೆಗೆದುಹಾಕಲಾಗಿದೆ. ಹೀಗಿರುವಾಗ ಅವರು ಮರುಹುಟ್ಟುವರೆ, ಇರುವುದಿಲ್ಲವೆ, ಇರುತ್ತಾರೆ ಹಾಗೆ ಇರುವುದಿಲ್ಲವೆ, ಇರುವುದಿಲ್ಲ ಹಾಗೆ ಇಲ್ಲವೆಂದು ಅಲ್ಲ ಎಂಬುದು ಅನ್ವಯಿಸುವುದಿಲ್ಲ. ಏಕೆಂದರೆ ತಥಾಗತರನ್ನು ಗುತರ್ಿಸಬಹುದಾದ ದೇಹ ಮತ್ತು ಮನಸ್ಸನ್ನು ತಾಳೆ ಮರವನ್ನು ಬುಡದಲ್ಲಿ ಕತ್ತರಿಸಿ ಅದು ಮೊಳೆಯದಂತೆ ಮಾಡಿರುವರೋ ಹಾಗೆಯೇ ತಥಾಗತರು ನಿಬ್ಬಾಣ ಸಾಧಿಸಿದ್ದಾರೆ. ಅವರು ಇರುತ್ತಾರೆ, ಇರುವುದಿಲ್ಲ ಇಂತಹ ಪ್ರಶ್ನೆಗಳು ಅವರಿಗೆ ಅನ್ವಯಿಸುವುದಿಲ್ಲ.
ಆಗ ವಚ್ಚನಿಗೆ ಸತ್ಯಗೋಚರವಾಗಿ ಆತನು ತಿಸರಣ ಪಡೆದು ನಿಷ್ಠ ಉಪಾಸಕನಾಗುತ್ತಾನೆ.
*  *  *
ಇದೇ ವಿಷಯದ ಬಗ್ಗೆ ಅನಿರುದ್ಧರು ವಿಚಾರಿಸಿದಾಗ ಭಗವಾನರು ಹೀಗೆ ಆತನಿಗೆ ಪ್ರಶ್ನಿಸುತ್ತಾರೆ: ಅನಿರುದ್ಧ ದೇಹ ಮತ್ತು ಮನಸ್ಸು (ವೇದನ, ಸಞ್ಞ, ಸಂಖಾರ ಮತ್ತು ವಿಞ್ಞಾನ) ಅನಿತ್ಯವೋ ಅಥವಾ ನಿತ್ಯವೋ?
ಅನಿತ್ಯ ಭಗವಾನ್.
ಅನಿರುದ್ಧ ತಥಾಗತರ ಶರಿರವನ್ನು ತಥಾಗತರೆಂದು ಪರಿಗಣಿಸಿದೆಯೇನು?
ಖಂಡಿತ ಇಲ್ಲ ಭಗವಾನ್.
ಹಾಗಾದರೆ ತಥಾಗತರ ಮನಸ್ಸನ್ನು (ವೇದನ, ಸಞ್ಞ, ಸಂಖಾರ ಮತ್ತು ವಿಞ್ಞಾನ) ತಥಾಗತರೆಂದು ಪರಿಗಣಿಸಿದೆಯೇನು?
ಖಂಡಿತ ಇಲ್ಲ ಭಗವಾನ್.
ಹಾಗಾದರೆ ಅನಿರುದ್ಧ ಈ ಜನ್ಮದಲ್ಲೇ ಈ ದೇಹ ಮತ್ತು ಮನಸ್ಸು ತಥಾಗತರು ಅಲ್ಲವೆಂದು ಪರಿಗಣಿಸಿರುವಾಗ ತಥಾಗತರು ಸಾವಿನ ಬಳಿಕ ಇರುವರೇ, ಇರುವುದಿಲ್ಲವೇ ಇತ್ಯಾದಿ ಪ್ರಶ್ನೆಗಳು ಉಚಿತವೇ?
ಖಂಡಿತ ಇಲ್ಲ ಭಗವಾನ್.
ಸರಿಯಾಗಿ ಹೇಳಿದೆ, ಅನಿರುದ್ಧ, ಸರಿಯಾಗಿಯೇ ಗ್ರಹಿಸಿರುವೆ. ಹಿಂದೆಯು ಮತ್ತು ಈಗಲು ಸಹಾ ಅನಿರುದ್ಧ, ನಾನು ದುಃಖವನ್ನು ಮತ್ತು ಅದರ ನಿರೋಧವನ್ನು ಬೋಧಿಸುತ್ತೇನೆ.

Tuesday 19 November 2019

ಸೋತಪನ್ನ ಯಾರು? who is sotapanna ?


ಸೋತಪನ್ನ ಯಾರು?

ಸಮುದ್ರದಲ್ಲಿ ರಾತ್ರಿ ಪ್ರಯಾಣ ಮಾಡುವ ಪ್ರಯಾಣಿಕನು ದೂರದಿಂದ ಭೂ ಪ್ರದೇಶದ ಬೆಳಕನ್ನು ಕಂಡು ಮರೆಯಾದಂತೆ ಧ್ಯಾನಿಗೆ ಇಲ್ಲಿ ನಿಬ್ಬಾಣದ ದರ್ಶನವಾಗುತ್ತದೆ. ಮೊದಲಬಾರಿಗೆ ನಿಬ್ಬಾಣ ಸಾಕ್ಷಾತ್ಕರಿಸುವುದರಿಂದ, ನಿಬ್ಬಾಣದ ಹೊಳೆಯಲ್ಲಿ ಪ್ರವೇಶಿಸುವುದರಿಂದಾಗಿ ಆತನಿಗೆ ಸೋತಾಪನ್ನ ಎನ್ನುತ್ತಾರೆ.
ಈ ಹೊಳೆಯಲ್ಲಿ ಗೆದ್ದ ವಿಜಯಶಾಲಿ (ಸೋತಾಪನ್ನ) ಈಗ ಪ್ರಾಪಂಚಿಕನಲ್ಲ (ಪುತುಜ್ಜನ) ಬದಲಾಗಿ ಆರ್ಯನಾಗಿರುತ್ತಾನೆ (ಶ್ರೇಷ್ಠ).

ಆತನಲ್ಲಿ 3 ಸಂಕೋಲೆಗಳು ಕತ್ತರಿಸಲ್ಪಟ್ಟಿರುತ್ತದೆ. ಅವೆಂದರೆ :

1. ಸಕ್ಕಾಯದಿಟ್ಟಿ - ಅಂದರೆ ಆತ್ಮ ಇದೆ ಎನ್ನುವ ದೃಷ್ಟಿ ಮತ್ತು ಸಾವೇ ದೇಹದ ಕೊನೆ ಎಂಬ ದೃಷ್ಟಿಗಳು ನಾಶವಾಗುತ್ತದೆ.
2. ಸಂಶಯಗಳು - ತ್ರಿರತ್ನದಲ್ಲಿ ಮತ್ತು 3 ಕಾಲದಲ್ಲಿರುವ ಸಂಶಯಗಳೆಲ್ಲಾ ಆತನಲ್ಲಿ ನಾಶವಾಗುತ್ತದೆ.
3. ಸೀಲಬ್ಬತ ಪರಾಮಾಸ : ಅಂದರೆ ಮಿಥ್ಯಾ ಆಚರಣೆಗಳಿಗೆ ಮತ್ತು ಮಿಥ್ಯಾ ಸಮಾರಂಭಗಳಿಗೆ ಅಂಟಿರುವುದು.
ಇವೆಲ್ಲವೂ ಸೋತಾಪನ್ನಾನಲ್ಲಿ ಕತ್ತರಿಸಲ್ಪಟ್ಟಿರುತ್ತದೆ.

ಸೋತಾಪನ್ನರವರು ಬುದ್ಧರಲ್ಲಿ, ಧಮ್ಮದಲ್ಲಿ, ಸಂಘದಲ್ಲಿ ಅಪಾರ ಅಚಲ ಶ್ರದ್ಧೆಯಿಂದ ಕೂಡಿರುತ್ತಾರೆ.
ಸೋತಾಪನ್ನರವರು ಎಂದಿಗೂ ಪಂಚಶೀಲವನ್ನು ಭಂಗ ಮಾಡುವುದಿಲ್ಲ ಮತ್ತು ಅವರು ಅಪಾಯ ಲೋಕಗಳಾವುದರಲ್ಲೂ ಜನಿಸುವುದಿಲ್ಲ ಮತ್ತು ಅವರು ಬೋಧಿಗೆ ವಾಲಿರುವುದರಿಂದಾಗಿ ಹೆಚ್ಚೆಂದರೆ 7 ಜನ್ಮಗಳನ್ನು ಹೊಂದಿರುತ್ತಾರೆ. ಅದರ ಒಳಗೆಯೇ ನಿಬ್ಬಾಣವನ್ನು ಪಡೆಯುತ್ತಾರೆ ಮತ್ತು ಅವರಿಗೆ 7 ಸಂಕೋಲೆಗಳು ಮಾತ್ರ ಉಳಿದಿರುತ್ತದೆ. ಮೆತ್ತಾ ಕರುಣೆಯಿಂದ ಕೂಡಿರುವ ಅವರು ಪರರನ್ನು ಸೋತಾಪನ್ನ ಮಾಡಲು ಸದಾ ಪ್ರಯತ್ನಶೀಲರಾಗಿರುತ್ತಾರೆ


 ಸೋತಾಪನ್ನರಲ್ಲಿ ಈ 5 ದೋಷಗಳು ಇರುವುದಿಲ್ಲ.

1. ಬೇರೆಯವರು ಬೋಧನೆ ಮಾಡಿದರೆ ಬೇಸರಪಡುವುದು (ಮಾಕ್ಕೋ)
2. ತನ್ನನ್ನು ಶ್ರೇಷ್ಠರಿಗೆ ಹೋಲಿಸಿಕೊಳ್ಳುವುದು (ಫಲಿಸೋ)
3. ಅಸೂಯೆ (ಇಸ್ಸಾ)
4. ಸ್ವಾರ್ಥ (ಮಚ್ಚರಿಯ)
5. ಮಾಯಾವಿಯತೆ (ಮಾಯಾ) ಅಂದರೆ ಮೋಸ, ವಂಚನೆ.


ಭಿಕ್ಷುಗಳೇ, ಯಾರೆಲ್ಲಾ ಅವಿಚಲಿತ ಶ್ರದ್ಧೆಯನ್ನು ನನ್ನಲ್ಲಿ ಇರಿಸಿದ್ದಾರೋ ಅವರು ಸೋತಪನ್ನರಾಗುತ್ತಾರೆ. ಸೋತಪನ್ನರು ಇಲ್ಲಿಯೇ 5 ವಿಜಯಗಳನ್ನು ಪಡೆಯುತ್ತಾರೆ ಮತ್ತು ಪರಲೋಕದಲ್ಲೂ 5 ವಿಜಯಗಳನ್ನು ಪಡೆಯುತ್ತಾರೆ. ಯಾವುವವು?
ಆತನಿಗೆ ಹೆಚ್ಚೆಂದರೆ 7 ಜನ್ಮಗಳು ಮಾತ್ರ ಇರುತ್ತದೆ. ಒಳ್ಳೆಯ ಶುದ್ಧ ವಂಶದಲ್ಲಿ ಹುಟ್ಟುತ್ತಾನೆ. ಆತನ ಪ್ರಜ್ಞಾಹರಿತವಾಗಿರುತ್ತದೆ. ಈ ಜನ್ಮದಲ್ಲೇ ಅರಹಂತವಾಗುವ ಸಾಧ್ಯತೆಯಿರುತ್ತದೆ.
ಪರಲೋಕದಲ್ಲಿ ಪಡೆಯುವ ವಿಷಯಗಳೆಂದರೆ: ಮಧ್ಯದಲ್ಲೇ ಆತನು ವಿಮುಕ್ತನಾಗಬಹುದು, ಕಾಲಕ್ಕೆ ಮೊದಲೇ ವಿಮುಕ್ತನಾಗಬಹುದು, ಹೆಚ್ಚು ಕಷ್ಟಗಳಿಲ್ಲದೆ ಅಥವಾ ಅಲ್ಪ ಕಷ್ಟಗಳಿಂದ ವಿಮುಕ್ತನಾಗಬಹುದು ಮತ್ತು ಹಿರಿಯ ಅರಹಂತರಂತೆ ವಿಮುಕ್ತನಾಗುತ್ತಾನೆ.

ಸೋತಪನ್ನ ಹೇಗಾಗುತ್ತಾನೆ?


ಭಿಕ್ಷುಗಳೇ, ಯಾವಾಗ ಆರ್ಯಶ್ರಾವಕನು ಪಂಚ ಉಪಾದಾನ ಖಂಧಗಳಿಗೆ (ದೇಹ ಮತ್ತು ಮನಸ್ಸುಗಳ ಅಂಟುವಿಕೆಯನ್ನು) ಅವು ಹೇಗಿದೆಯೋ ಹಾಗೆಯೇ ಅರಿಯುತ್ತಾನೋ, ಅವುಗಳ ಉದಯವನ್ನು ಅರಿಯುತ್ತಾನೋ ಮತ್ತು ಅವುಗಳು ಅಳಿಯುವಿಕೆ ಅರಿಯುತ್ತಾನೋ, ಉದಯವಯಗಳೆರಡನ್ನು ಅರಿಯುತ್ತಾನೋ, ಅವುಗಳ ಸ್ವಾದವನ್ನು, ಅವುಗಳ ಅಪಾಯವನ್ನು ಅವುಗಳಿಂದ ಪಾರಾಗುವಿಕೆಯನ್ನು ಯತಾಭೂತವಾಗಿ ಅರಿಯುತ್ತಾನೋ ಅಂತಹ ಆರ್ಯಶ್ರಾವಕನಿಗೆ ಸೋತಪನ್ನ (ಶೋಕವನ್ನು ಗೆದ್ದಿರುವವನು) ಎನ್ನುತ್ತಾರೆ. ಆತನು ಎಲ್ಲಾ ಅಪಾಯಗಳಿಂದ ಪಾರಾಗಿದ್ದಾನೆ, ಅಂತಹವನು ಬೋಧಿಯನ್ನು ಖಚಿತವಾಗಿ ಪಡೆಯುತ್ತಾನೆ.

Monday 18 November 2019

ಅಳುವಿಗೆ ಆನಂದವೇ ಕಾರಣ

ಅಳುವಿಗೆ ಆನಂದವೇ ಕಾರಣ

ಭಗವಾನರು ಶ್ರಾವಸ್ತಿಯಲ್ಲಿದ್ದಾಗ ಹೀಗೆ ಹೇಳಿದರು:
ಭಿಕ್ಷುಗಳೇ, ಯಾರು ಶರೀರದ ಬಗ್ಗೆ ಆನಂದಿಸುವರೋ, ಅವರು ದುಃಖವನ್ನು ಪಡೆಯುತ್ತಾರೆ. ಆತನ ಬಗ್ಗೆ ನಾನು ಖಚಿತವಾಗಿ ಹೇಳುವುದು ಏನೆಂದರೆ ಆತನು ದುಃಖದಿಂದ ಮುಕ್ತನಾಗಿಲ್ಲ. ಹಾಗೆಯೇ ಯಾರು ವೇದನೆಗಳಲ್ಲಿ (ಸುಖಾನುಭವ, ದುಃಖಾನುಭವ, ತಟಸ್ಥಾನುಭವ) ಆನಂದಿಸುವನೋ, ಆತನು ದುಃಖವನ್ನು ಪಡೆಯುತ್ತಾನೆ. ಹಾಗೆಯೇ ಯಾರು ಚಿತ್ತದ ಚಟುವಟಿಕೆಗಳಲ್ಲಿ (ಸಂಖಾರಗಳಲ್ಲಿ)... ವಿಞ್ಞಾನ (ಅರಿವಿನಲ್ಲಿ) ದಲ್ಲಿ ಆನಂದಿಸುವನೋ ಆತನು ದುಃಖವನ್ನು ಪಡೆಯುತ್ತಾನೆ. ನಾನು ಖಚಿತವಾಗಿ ಹೇಳುವುದು ಏನೆಂದರೆ ಆತನು ದುಃಖದಿಂದ ಮುಕ್ತನಾಗಿಲ್ಲ. ಆದರೆ ಯಾರು ಶರೀರದಲ್ಲಿ, ವೇದನೆಗಳಲ್ಲಿ, ಗ್ರಹಿಕೆಗಳಲ್ಲಿ, ಚಿತ್ತದ ಚಟುವಟಿಕೆಗಳಲ್ಲಿ ಮತ್ತು ಅರಿವಿನಲ್ಲಿ ಆನಂದಿಸುವುದಿಲ್ಲವೋ ಆತನು ದುಃಖದಲ್ಲಿ ಆನಂದಿಸುವುದಿಲ್ಲ. ನಾನು ಆತನ ಬಗ್ಗೆ ಖಚಿತವಾಗಿ ಹೇಳುವುದು ಏನೆಂದರೆ ಆತನು ದುಃಖದಿಂದ ಮುಕ್ತನಾಗಿದ್ದಾನೆ.

Saturday 16 November 2019

5 ವಿಧವಾದ ಸಮ್ಮಾದೃಷ್ಟಿಗಳಿವೆ 5 types of right views in kannada

 5 ವಿಧವಾದ ಸಮ್ಮಾದೃಷ್ಟಿಗಳಿವೆ


1. ಕಮ್ಮಾಸಕತ ಸಮ್ಮಾದಿಟ್ಠಿ:   ಕರ್ಮಫಲದ ಜ್ಞಾನ ಅಂದರೆ ಮಾನವನ ಸುಕರ್ಮ ಮತ್ತು ಕುಕರ್ಮಕ್ಕೆ ಫಲವಿದೆ. ಪ್ರತಿಯೊಂದಕ್ಕೂ ಕಾರಣವಿದೆ, ಪರಲೋಕವಿದೆ, ಪ್ರತಿಯೊಂದಕ್ಕೂ ಹಿಂದಿನ ಜನ್ಮವೇ ಕಾರಣವಲ್ಲ, ಸೃಷ್ಟಿಕರ್ತ ಇಲ್ಲ ಎಂಬ ಸಮ್ಮಾದೃಷ್ಟಿ.

2. ಪಚ್ಚವೇಕ್ಖಣ ಸಮ್ಮಾದೃಷ್ಟಿ :   ಚಿಂತನೆಯಿಂದ ಉದಯಿಸುವ ಸಮ್ಮಾದೃಷ್ಟಿ. ಇದು ಎರಡು ಭಾಗವಾಗಿ ವಿಂಗಡಿತವಾಗುತ್ತದೆ.
ಅ) ನಾಮರೂಪ ಪರಿಗ್ರಹ ಸಮ್ಮಾದೃಷ್ಟಿ: ಇಲ್ಲಿ ಸತ್ಕಾಯ ದೃಷ್ಟಿಗಳು ದುರ್ಬಲವಾಗಿ  ಹೋಗುತ್ತದೆ. ಇದು ದೃಷ್ಟಿ ವಿಶುದ್ಧಿಯಾಗಿದೆ.
ಆ) ಹೇತು ಪಚ್ಛಾಯ ಪರಿಗ್ರಹ ಸಮ್ಮಾದೃಷ್ಟಿ : ಇಲ್ಲಿ ಯಾವುದು ಮೂಲ ಕಾರಣಗಳು, ತತ್ಕ್ಷಣದ ಕಾರಣ ಯಾವುದು, ಸಹಾಯಕ ಅಂಶಗಳು ಯಾವುವು? ಎಂದೆಲ್ಲಾ ಸಮ್ಮಾದೃಷ್ಟಿ ಸಿಗುತ್ತದೆ. ಇದು ಕಂಖಾವಿತರಣ ವಿಶುದ್ಧಿಯಾಗಿದೆ. ಇಲ್ಲಿ ಎಲ್ಲಾಬಗೆಯ ಸಂಶಯಗಳು ನಿವಾರಣೆಯಾಗುತ್ತದೆ.

4. ಲೋಕೋತ್ತರ ಮಾರ್ಗ ಸಮ್ಮಾದೃಷ್ಟಿ: ಇಲ್ಲಿ ಮಾರ್ಗದ ಸಾಕ್ಷತ್ಕಾರದಿಂದ ಸಮ್ಮಾದಿಟ್ಠಿ ಉದಯಿಸುತ್ತದೆ.

5. ಲೋಕೋತ್ತರ ಫಲ ಸಮ್ಮಾದೃಷ್ಟಿ: ಇಲ್ಲಿ ಲೋಕೋತ್ತರ ಫಲ ಸಾಕ್ಷಾತ್ಕಾರದಿಂದ ಸೋತಪನ್ನನಾಗುತ್ತಾನೆ. ಇಲ್ಲಿ ಎಲ್ಲಾ ಮಿಥ್ಯಾದೃಷ್ಟಿಗಳು ನಾಶವಾಗಿರುತ್ತದೆ.

ಐದು ವಿಷಯಗಳಿಂದ ಸಮ್ಮಾದಿಟ್ಠಿಯು ಫಲವಾಗುತ್ತದೆ

ಭಿಕ್ಷುಗಳೇ, ಐದು ವಿಷಯಗಳಿಂದ ಸಮ್ಮಾದಿಟ್ಠಿಯು ಫಲವಾಗಿ ಚಿತ್ತವಿಮುಕ್ತಿಗೆ ಸಹಕಾರಿಯಾಗುತ್ತದೆ, ಲಾಭಕಾರಿಯಾಗುತ್ತದೆ, ಯಾವುವವು ಐದು?
 ಅವೆಂದರೆ: 1.ಶೀಲ, 2. ಕಲಿಯುವಿಕೆ, 3. ಚಚರ್ೆ, 4. ಪ್ರಶಾಂತತೆ ಮತ್ತು 5. ಚಿಂತನೆ (ಅಂತರ್ದೃಷ್ಟಿ).
ಯಾರಿಗೆ ಧಮ್ಮವನ್ನು ಆಲಿಸಲು ಆಸೆಯಿಲ್ಲವೋ, ಕಿವಿಯಿಂದ ಗಮನ ಹರಿಸುವುದಿಲ್ಲವೋ ಅರ್ಥ ಮಾಡಿಕೊಳ್ಳಲು ಹೋಗುವುದಿಲ್ಲವೋ, ಅವರು ಧಮ್ಮದಿಂದ ಯಾವ ಲಾಭವನ್ನು ಪಡೆಯದೆ ಹೋಗುತ್ತಾರೆ. ಅರ್ಥವನ್ನು ಕಳೆದುಕೊಳ್ಳುತ್ತಾರೆ.

ಸಮ್ಮಾದೃಷ್ಟಿ ಹೊಂದಿರುವವರ ಲಕ್ಷಣಗಳು

ಸಮ್ಮಾದೃಷ್ಟಿ ಹೊಂದಿರುವವನು:
1. ಮಾತೃ ಹಂತಕನಾಗಿರುವುದಿಲ್ಲ,
2.  ಪಿತೃಹಂತಕನಾಗಿರುವುದಿಲ್ಲ,
3. ಅರಹಂತರ ಹಂತಕನು ಆಗಿರುವುದಿಲ್ಲ,
 4.ತಥಾಗತರಿಗೆ ಗಾಯ ಮಾಡುವುದಿಲ್ಲ,
5. ಸಂಘಬೇಧ ಮಾಡುವುದಿಲ್ಲ,
6.  ಇನ್ನೋರ್ವ ಗುರುವಿಗೆ ಶರಣು ಹೋಗುವುದಿಲ್ಲ.
7.ಆತನು ಯಾವುದೇ ಆಗು-ಹೋಗುವಿಕೆಯನ್ನು ನಿತ್ಯವೆಂದು, ಶಾಶ್ವತವೆಂದು ಸ್ವೀಕರಿಸುವುದಿಲ್ಲ,
8.ಯಾವುದೇ ಆಗು-ಹೋಗುವಿಕೆಯನ್ನು ಸುಖವೆಂದು ಸ್ವೀಕರಿಸುವುದಿಲ್ಲ,
9. ಯಾವುದೇ ಆಗುಹೋಗುವಿಕೆಯನ್ನು ಆತ್ಮವೆಂದು ಸ್ವೀಕರಿಸುವುದಿಲ್ಲ.
10.  ಯಾವುದೇ ಸಮಾರಂಭಗಳಿಂದ ಪರಿಶುದ್ಧತೆ ಲಭಿಸುವುದು ಎಂದು ತಿಳಿಯುವುದಿಲ್ಲ.
11. ಬುದ್ಧ ಸಂಘದ ಹೊರತು ಬೇರೆ ಸಂಘವನ್ನು ದಾನಕ್ಕೆ ಅರ್ಹವೆಂದು ಭಾವಿಸುವುದಿಲ್ಲ.
12. ಯಾರು ಸಮ್ಮಾದಿಟ್ಠಿಯನ್ನು ಪ್ರಾಪ್ತಿಮಾಡಿರುವರೋ ಅವರು ಸುಖ ಹಾಗು ದುಃಖಗಳು ಸ್ವನಿಮರ್ಿತವೆಂದು ಭಾವಿಸುವುದಿಲ್ಲ.
13. ಹಾಗೆಯೇ ಪರನಿಮರ್ಿತವೆಂದು ಭಾವಿಸುವುದಿಲ್ಲ.
14. ಹಾಗೆಯೇ ಸ್ವ ಮತ್ತು ಪರನಿಮರ್ಿತವೆಂದು ಭಾವಿಸುವುದಿಲ್ಲ.
15. ಹಾಗೆಯೇ ಸ್ವ ಮತ್ತು ಪರ ನಿಮರ್ಿತವಿಲ್ಲದೆ ಆಕಸ್ಮಿಕವೆಂದೂ ಹೇಳುವುದಿಲ್ಲ.
16.ಯಾರು ಸಮ್ಮಾದೃಷ್ಟಿಯನ್ನು ಹೊಂದಿರುವರೋ ಅವರು ಗೌರವವಿಲ್ಲದೆ ಬಾಳುವುದಿಲ್ಲ.
17. ಕೃತಜ್ಞತೆಯಿಲ್ಲದೆ ಬಾಳುವುದಿಲ್ಲ.
18. ಬುದ್ಧರಲ್ಲಿ, ಧಮ್ಮದಲ್ಲಿ, ಸಂಘದಲ್ಲಿ, ಶಿಕ್ಷಣದಲ್ಲಿ ಅಪಾರವಾಗಿ ಗೌರವನಿಷ್ಠೆ, ಪಾಲನೆ ಹೊಂದಿರುತ್ತಾರೆ.
19.  ಪರವಾಗಿಲ್ಲ ಬಿಡು, ಏನೂ ಆಗುವುದಿಲ್ಲ ಎಂಬ ದೃಷ್ಟಿಯಲ್ಲಿ ಬೀಳುವುದಿಲ್ಲ.
20. ಅವರಿಗೆ ಎಂಟನೆಯ ಜನ್ಮವಿರುವುದಿಲ್ಲ.
21. ಮಿಥ್ಯಾದೃಷ್ಟಿಗಳನ್ನು ಹೊಂದಿರುವುದಿಲ್ಲ,
22. ಸಂಶಯಗಳಿಂದ ಕೂಡಿರುವುದಿಲ್ಲ,
23.ವಿಧಿ, ಸಂಸ್ಕಾರ, ಮೌಢ್ಯ ಆಚರಣೆಗಳಲ್ಲಿ ನಂಬಿಕೆ ಹೊಂದಿರುವುದಿಲ್ಲ,
24. ಮಿಥ್ಯಾ ಮಾರ್ಗಕ್ಕೆ ಕರೆದೊಯ್ಯುವ ಭಾವೋದ್ರೇಕ, ದ್ವೇಷ ಮತ್ತು ಮೋಹಗಳನ್ನು ಹೊಂದಿರುವುದಿಲ್ಲ.
ಏಕೆ ಹೀಗೆ?
ಏಕೆಂದರೆ ಯಾರು ಸಮ್ಮಾದಿಟ್ಠಿಯನ್ನು ಹೊಂದಿರುತ್ತಾರೋ ಅವರು ಸುಖ-ದುಃಖಗಳ ಉದಯದ ಸ್ಪಷ್ಟವಾದ ಕಾರಣಗಳನ್ನು ಅರಿತಿರುತ್ತಾರೆ. ಪಟಿಚ್ಚ ಸಮುಪ್ಪಾದವನ್ನು ಸ್ಪಷ್ಟವಾಗಿ ಅರಿತಿರುತ್ತಾರೆ. ಆದ್ದರಿಂದಾಗಿ ಅವರು ಹೀಗೆ ಹೇಳುತ್ತಾರೆ.

Thursday 14 November 2019

ಎಲ್ಲಿಯವರೆಗೆ ಸಮ್ಮಾದೃಷ್ಟಿ

ಎಲ್ಲಿಯವರೆಗೆ ಸಮ್ಮಾದೃಷ್ಟಿ

ಒಮ್ಮೆ ಭಗವಾನರು ಶ್ರಾವಸ್ತಿಯಲ್ಲಿ ತಂಗಿರುವಾಗ ಪೂಜ್ಯ ಕಚ್ಚಾಯನರು ಅಲ್ಲಿಗೆ ಬಂದು ವಂದಿಸಿ ಗೌರವದಿಂದ ಒಂದೆಡೆ ಕುಳಿತರು. ನಂತರ ಭಗವಾನರೊಂದಿಗೆ ಹೀಗೆ ಪ್ರಶ್ನಿಸಿದರು: ಭಗವಾನ್ ಸಮ್ಮಾದೃಷ್ಟಿ, ಸಮ್ಮಾದೃಷ್ಟಿ ಎನ್ನುತ್ತಾರೆ, ಎಲ್ಲಿಯವರೆಗೆ ಸಮ್ಮಾದೃಷ್ಟಿ ಎನಿಸುತ್ತದೆ?
ಓ ಕಚ್ಚಾಯನ, ಈ ಲೋಕದಲ್ಲಿ ಎರಡುರೀತಿಯ ವಿಷಯಗಳಲ್ಲಿ ದೃಷ್ಟಿಗಳು ರಚಿತವಾಗುತ್ತದೆ, ಅಸ್ತಿತ್ವದ ಬಗ್ಗೆ ಮತ್ತು ಅಸ್ತಿತ್ವವಿಲ್ಲದಿರುವ ಬಗ್ಗೆ.
ಯಾರಿಗೆ ಯೋಗ್ಯ ದೃಷ್ಟಿಯಿರುತ್ತದೋ ಆತನು ಉದಯಿಸುವ ಲೋಕವನ್ನು ಅದು ಇರುವಂತೆ ನೊಡುತ್ತಾನೆ. ಹೀಗಾಗಿ ಆತನು ಅಸ್ತಿತ್ವವಿಲ್ಲ ಎಂಬ ದೃಷ್ಟಿಕೋನಕ್ಕೆ ಅಂಟಲಾರ. ಆದರೆ ಯಾರು ಯೋಗ್ಯ ದೃಷ್ಟಿಯಿಂದ ಲೋಕವು ಅಳಿಯುವುದನ್ನು ಮರೆಯಾಗುವುದನ್ನು ಕಾಣುತ್ತಾನೋ ಆತನು ಅಸ್ತಿತ್ವ ಇದೆ ಎಂಬ ದೃಷ್ಟಿಕೋನಕ್ಕೆ ಅಂಟಲಾರ.
ಹೀಗೆ ಸಿದ್ಧಾಂತಗಳಿಗೆ ಅಂಟಿಕೊಂಡು ಅದಕ್ಕೆ ಬಂಧಿತರಾಗುತ್ತಾರೆ ಮತ್ತು ಯಾರು ಸಿದ್ಧಾಂತಗಳಿಗೆ ಅಂಟುವುದಿಲ್ಲವೋ ಪೂವರ್ಾಗ್ರಹ ಪೀಡಿತರಾಗುವುದಿಲ್ಲವೋ, ಪಕ್ಷಾಪಾತರಹಿತರೋ ಅವರು ಇದು ನನ್ನ ಆತ್ಮ ಎಂದು ತೀಮರ್ಾನಿಸುವುದಿಲ್ಲ. ಅವರು ದುಃಖವು ಉದಯಿಸಿದೆ ಮತ್ತು ದುಃಖವು ಅಳಿಯುತ್ತಿದೆ ಎಂದು ವೀಕ್ಷಿಸುತ್ತಾರೆ.
ಅಂತಹವನು ಸಂಶಯಗಳಿಗೆ ಬೀಳಲಾರ, ದ್ವಂದ್ವಕ್ಕೆ ಸಿಲುಕಲಾರ. ಇಲ್ಲಿಯವರೆಗೆ ಕಚ್ಚಾಯನ ಇದು ಸಮ್ಮಾದೃಷ್ಟಿ ಎನಿಸುತ್ತದೆ.
ಪ್ರತಿಯೊಂದು ಇದೆ (ಅಸ್ತಿತ್ವದಲ್ಲಿದೆ) ಇದು ಒಂದು ಅತಿರೇಕ, ಹಾಗೆಯೇ ಯಾವುದೂ ಇಲ್ಲ (ಅಸ್ತಿತ್ವದಲ್ಲಿಲ್ಲ). ಇದು ಇನ್ನೊಂದು ಅತಿರೇಕವಾಗಿದೆ. ಆದ್ದರಿಂದಾಗಿ ತಥಾಗತರು ಮಧ್ಯಮ ಮಾರ್ಗವನ್ನು ಬೋಧಿಸುತ್ತಾರೆ. ಅದು ಹೀಗಿದೆ:
ಅಜ್ಞಾನದಿಂದಾಗಿ ಸಂಖಾರಗಳು (ಚಿತ್ತದ ಚಟುವಟಿಕೆಗಳು) ಉಂಟಾಗುತ್ತದೆ. ಸಂಖಾರಗಳಿಂದ ವಿಞ್ಞಾನವು (ಅರಿವು) ಉಂಟಾಗುತ್ತದೆ.
ವಿಞ್ಞಾನದಿಂದ ನಾಮರೂಪಗಳು (ದೇಹ ಮತ್ತು ಮನಸ್ಸು) ಉಂಟಾಗುತ್ತದೆ, ನಾಮರೂಪದಿಂದ ಸಳಾಯಾತನ (ಆರು ಇಂದ್ರೀಯಗಳ ಆಧಾರಗಳು) ಉಂಟಾಗುತ್ತದೆ, ಸಳಾಯಾತನದಿಂದ ಸ್ಪರ್ಶವು ಉಂಟಾಗುತ್ತದೆ, ಸ್ಪರ್ಶದಿಂದ ವೇದನೆಗಳು ಉಂಟಾಗುತ್ತದೆ, ವೇದನೆಗಳಿಂದ ತನ್ಹಾ (ತೃಷ್ಣೆ) ಉಂಟಾಗುತ್ತದೆ, ತನ್ಹಾದಿಂದ ಅಂಟುವಿಕೆ ಉಂಟಾಗುತ್ತದೆ, ಅಂಟುವಿಕೆಯಿಂದ ಭವ ಉಂಟಾಗುತ್ತದೆ, ಭವದಿಂದ ಜನ್ಮ ಉಂಟಾಗುತ್ತದೆ, ಜನ್ಮದಿಂದ ದುಃಖರಾಶಿಯು ಉಂಟಾಗುತ್ತದೆ.
ಹೀಗೆ ಇವುಗಳ ಉದಯದಿಂದ ಇಡೀ ದುಃಖರಾಶಿ ಉದಯಿಸುತ್ತದೆ. ಆದರೆ ಅಜ್ಞಾನದ ನಿರೋಧದಿಂದ ಸಂಖಾರದ ನಿರೋಧವಾಗುತ್ತದೆ. ಸಂಖಾರದ ನಿರೋಧದಿಂದ ವಿಞ್ಞಾನದ ನಿರೋಧವಾಗುತ್ತದೆ, ವಿಞ್ಞಾನದ ನಿರೋಧದಿಂದ ನಾಮರೂಪದ ನಿರೋಧವಾಗುತ್ತದೆ. ನಾಮರೂಪದ ನಿರೋಧದಿಂದ ಆರು ಇಂದ್ರೀಯಗಳ ಆಧಾರಗಳು ನಿರೋಧವಾಗುತ್ತದೆ, ಆರು ಇಂದ್ರೀಯಗಳ ನಿರೋಧದಿಂದ ಸ್ಪರ್ಶವು ನಿರೋಧವಾಗುತ್ತದೆ, ಸ್ಪರ್ಶದ ನಿರೋಧದಿಂದ ವೇದನೆಗಳ ನಿರೋಧ ಆಗುತ್ತವೆ, ವೇದನೆಗಳ ನಿರೋಧದಿಂದ ತನ್ಹಾದ ನಿರೋಧವಾಗುತ್ತದೆ, ತನ್ಹಾದ ನಿರೋಧದಿಂದ ಅಂಟುವಿಕೆಯ ನಿರೋಧವಾಗುತ್ತದೆ, ಅಂಟುವಿಕೆಯ ನಿರೋಧದಿಂದ ಭವದ ನಿರೋಧವಾಗುತ್ತದೆ, ಭವದ ನಿರೋಧದಿಂದ ಜನ್ಮ ನಿರೋಧವಾಗುತ್ತದೆ, ಜನ್ಮದ ನಿರೋಧದಿಂದ ಇಡೀ ದುಃಖ ನಿರೋಧವಾಗುತ್ತದೆ. ಹೀಗೆ ಇವುಗಳ ನಿರೋಧದಿಂದ ಇಡೀ ದುಃಖರಾಶಿ ನಿರೋಧವಾಗುತ್ತದೆ. ಓ ಕಚ್ಚಾಯನ ಇಷ್ಟರಮಟ್ಟಿಗೆ ಇದು ಸಮ್ಮಾದೃಷ್ಟಿಯಾಗಿದೆ.

ಹೆಣ್ಣು ಮಗುವು ಅಶುಭವೇ?

ಹೆಣ್ಣು ಮಗುವು ಅಶುಭವೇ?


ಒಮ್ಮೆ ಭಗವಾನರು ಶ್ರಾವಸ್ತಿಯಲ್ಲಿದ್ದಾಗ ಮಹಾರಾಜ ಪಸೇನದಿಯು ಭಗವಾನರಲ್ಲಿಗೆ ಬಂದನು. ಮತ್ತು ವಂದಿಸಿ ಅವರೊಂದಿಗೆ ಮಾತನಾಡುತ್ತ ಕುಳಿತಿರುವಾಗ, ರಾಜಧೂತರು ಅಲ್ಲಿಗೆ ಬಂದು ರಾಜನ ಕಿವಿಯಲ್ಲಿ, ಮಹಾರಾಣಿ ಮಲ್ಲಿಕಾಳು ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾಳೆ ಎಂದು ನುಡಿದರು. ಆಗ ಪಸೇನದಿ ಮಹಾರಾಜನು ಅಸಂತುಷ್ಟನಾದನು.
ಆಗ ಭಗವಾನರಿಗೆ ವಿಷಯ ಅರಿವಾಗಿ ಈ ಗಾಥೆ ನುಡಿದರು:
ಓ ಮಹಾರಾಜ, ಹೆಣ್ಣು ಮಗುವು ಗಂಡು ಮಗುವಿಗಿಂತ ಉತ್ತಮಳೆಂದು ರುಜುವಾತು ಮಾಡಬಲ್ಲಳು. ಹೇಗೆಂದರೆ ಆಕೆ ಶೀಲವಂತೆಯಾಗಿ, ಪ್ರಜ್ಞಾವಂತೆಯಾಗಿ ಬೆಳೆದು ಅತ್ತೆ ಮನೆಯಲ್ಲಿ ಗೌರವಯುತವಾಗಿದ್ದು, ನಿಜಪತ್ನಿಯಾಗಿರುತ್ತಾಳೆ. ಮಹತ್ಕಾರ್ಯಗಳನ್ನು ಮಾಡುವಂತಹ ಮಹಾ ಕ್ಷೇತ್ರಗಳನ್ನು ಆಳುವಂತಹ ಸುಪುತ್ರನನ್ನು ಹೆರುತ್ತಾಳೆ. ಅಂತಹ ಮಗನಿಗೆ, ಯೋಗ್ಯ ಪತ್ನಿ ದೊರೆತರೆ ಆಕೆ ದೇಶಕ್ಕೆ ಮಾರ್ಗದಶರ್ಿಯು ಆಗುತ್ತಾಳೆ.

Wednesday 13 November 2019

ಸೀಲಬ್ಬತ ಪಾರಮಾಸ (ದುಃಖವಿಮುಕ್ತಿಗೆ ಮೂಢ ಮಾರ್ಗಗಳು):silabbata paramasa

ಸೀಲಬ್ಬತ ಪಾರಮಾಸ (ದುಃಖವಿಮುಕ್ತಿಗೆ ಮೂಢ ಮಾರ್ಗಗಳು):

ಒಮ್ಮೆ ಭಗವಾನರು ಪಾವದಲ್ಲಿನ ಮಾವಿನ ತೋಪಿನಲ್ಲಿ ತಂಗಿದ್ದರು. ಅಲ್ಲಿಗೆ ಅಕ್ಕಸಾಲಿಗನ ಮಗನಾದ ಚುಂದನು ಭಗವಾನರನ್ನು ಕಾಣಲು ಬಂದನು. ಅಲ್ಲಿಗೆ ಬಂದು ವಂದಿಸಿ ಗೌರವದಿಂದ ಒಂದೆಡೆ ಕುಳಿತನು. ಆಗ ಆತನಿಗೆ ಭಗವಾನರು ಈ ರೀತಿಯಾಗಿ ಪ್ರಶ್ನಿಸಿದರು:
ಚುಂದ ಯಾರ ಪರಿಶುದ್ಧತೆಯ ಆಚರಣೆಗಳು ನಿನಗೆ ತೃಪ್ತಿಯನ್ನು ಕೊಟ್ಟಿವೆ?
ಭಗವಾನ್ ಪಶ್ಚಿಮದಲ್ಲಿನ ಬ್ರಾಹ್ಮಣರು ನೀರಿನ ಬಿಂದಿಗೆಗಳನ್ನು ತಂದು, ಕಮಲದ ಹೂಗಳ ಹಾರಗಳನ್ನು ಹಾಕಿಕೊಂಡು, ಅಗ್ನಿಯನ್ನು ಪೂಜಿಸುತ್ತ, ನೀರನ್ನು ಹಾಕಿಕೊಳ್ಳುತ್ತ ಆಚರಣೆಗಳನ್ನು ಮಾಡುತ್ತಾರೆ. ಅವರ ಬಗ್ಗೆ ನನಗೆ ತೃಪ್ತಿಯಿದೆ.
ಓ ಚುಂದ, ಆ ಬ್ರಾಹ್ಮಣರು ನೀರಿನ ಬಿಂದಿಗೆಗಳನ್ನು ತಂದು ಯಾವರೀತಿಯಲ್ಲಿ ಆಚರಣೆ ಮಾಡುತ್ತಾರೆ?
ಭಗವಾನ್, ಅವರು ನೀರಿನ ಬಿಂದಿಗೆಗಳನ್ನು ತಂದು ಈ ರೀತಿ ಹಿಂಬಾಲಕರಿಗೆ ಆಜ್ಞಾಪಿಸುತ್ತಾರೆ. ಬಾ ಇಲ್ಲಿ ಸೋದರ, ಬ್ರಾಹ್ಮೀ ಮುಹೂರ್ತದಲ್ಲಿ ಎದ್ದೇಳು, ಭೂಮಿಗೆ ವಂದಿಸು, ಭೂಮಿಗೆ ತಲೆಬಾಗಿ ವಂದಿಸದಿದ್ದರೆ ಒದ್ದೆಯಾದ ಸಗಣಿಯನ್ನು ಸ್ಪಶರ್ಿಸು,  ಅದನ್ನು ಮುಟ್ಟದಿದ್ದರೆ ಹಸಿರು ಹುಲ್ಲನ್ನು ಸ್ಪಶರ್ಿಸು, ಹೀಗೂ ಮಾಡಲು ಸಾಧ್ಯವಾಗದಿದ್ದರೆ ಅಗ್ನಿಪೂಜೆಯನ್ನು ಮಾಡು, ಹಾಗು ಮಾಡಲು ಸಾಧ್ಯವಾಗದಿದ್ದರೆ ಸೂರ್ಯನಿಗೆ ನಮಸ್ಕರಿಸು, ಇದು ಸಾಧ್ಯವಾಗದಿದ್ದರೆ ನೀನು ಸಂಜೆ ವೇಳೆ ನೀರಿನಲ್ಲಿ ಮೂರುಬಾರಿ ಮುಳುಗಿ ಏಳು. ಹೀಗೆ ಭಂತೆ, ಬ್ರಾಹ್ಮಣರು ನೀರಿನ ಬಿಂದಿಗೆಗಳಿಂದ ನೀರನ್ನು ಹಾಕಿಕೊಂಡು ಆಚರಣೆಗಳನ್ನು ಮಾಡುತ್ತಾರೆ. ಇದರಲ್ಲಿ ನನಗೆ ತೃಪ್ತಿಯಿದೆ.
ಒಳ್ಳೆಯದು ಚುಂದ, ಈ ಬ್ರಾಹ್ಮಣರ ಶುದ್ಧೀಕರಣ ಆಚರಣೆಯು ಆರ್ಯ ವಿಶುದ್ಧಿಗಿಂತ ಭಿನ್ನವಾಗಿದೆ.
ಭಗವಾನ್, ಆರ್ಯರ ವಿಶುದ್ಧಿ ಹೇಗಿರುತ್ತದೆ?
ಹಾಗಾದರೆ ಚುಂದ, ನಾನು ವಿವರಿಸುವೆ, ಗಮನವಿಟ್ಟು ಆಲಿಸು.
ಸರಿ ಭಂತೆ.
ಓ ಚುಂದ, ಶರೀರದಿಂದ ಮೂರು ಬಗೆಯಲ್ಲಿ ಕಲುಷಿತ ಕಾರ್ಯವಾಗುತ್ತದೆ. ಮಾತಿನಲ್ಲಿ ನಾಲ್ಕುಬಗೆಯ ಕಲುಷಿತವಾಗುತ್ತದೆ. ಯೋಚನೆಗಳಿಂದ ಮೂರುಬಗೆಯಲ್ಲಿ  ಕಲುಷಿತವಾಗುತ್ತದೆ ಮತ್ತು ಹೇಗೆ ಶರೀರದಿಂದ ಮೂರುಬಗೆಯಲ್ಲಿ ಕಲುಶಿತತೆಯಾಗುತ್ತದೆ? ಇಲ್ಲಿ ಚುಂದ, ಒಬ್ಬನು ಜೀವಹತ್ಯೆ ಮಾಡುತ್ತಾನೆ, ಬೇಟೆಗಾರನಾಗಿರುತ್ತಾನೆ, ರಕ್ತವುಳ್ಳ ಕೈಗಳುಳ್ಳವನು ಆಗುತ್ತಾನೆ. ಜೀವಿಗಳ ದಯೆಯಿಲ್ಲದೆ ಕೊಲ್ಲುತ್ತಲೇ ಇರುತ್ತಾನೆ. ಹಾಗೆಯೇ ಒಬ್ಬನು ತನಗೆ ನೀಡದುದನ್ನು ತೆಗೆದುಕೊಳ್ಳುತ್ತಾನೆ. ಆತನು ತನಗೆ ನೀಡದ ಎಲ್ಲವನ್ನು ಕಳ್ಳತನ ಮಾಡುತ್ತಾನೆ. ಪರರಿಗೆ ಸೇರಿದ ಆಸ್ತಿಯನ್ನು ಕಬಳಿಸುತ್ತಾನೆ. ಹಾಗೆಯೇ ಒಬ್ಬನು ವ್ಯಭಿಚಾರಿಯಾಗುತ್ತಾನೆ. ಆತನು ತಂದೆ-ತಾಯಿಗಳ, ಸೋದರರ, ಬಂಧುಗಳಲ್ಲಿ ಸುರಕ್ಷಿತವಾದ ಕನ್ಯೆ ಅಥವಾ ಸ್ತ್ರೀಯಲ್ಲಿ ಅನಾಚಾರ ಮಾಡುತ್ತಾನೆ, ಇದು ದೇಹದಲ್ಲಿನ ಕಲುಶಿತತೆಯಾಗಿದೆ.
ಮತ್ತೆ ಚುಂದ, ಆತನು ಮಾತಿನಲ್ಲಿ ಹೇಗೆ ಕಲುಷಿತನಾಗುತ್ತಾನೆ? ಇಲ್ಲಿ ಚುಂದ, ಒಬ್ಬನು ಸುಳ್ಳುಗಾರನಾಗುತ್ತಾನೆ, ಆತನು ಸಭಾ ಮಧ್ಯೆ ಅಥವಾ ನ್ಯಾಯಾಚರಣೆಯ ಸಮಯದಲ್ಲಿ ಸುಳ್ಳು ಸಾಕ್ಷಿ ನುಡಿಯುತ್ತಾನೆ. ಗೊತ್ತಿರುವುದನ್ನು ಗೊತ್ತಿಲ್ಲವೆಂದು, ಗೊತ್ತಿಲ್ಲದಿರುವುದನ್ನು ಗೊತ್ತು ಎಂದು ಕಂಡಿಲ್ಲದಿರುವುದನ್ನು ಕಂಡೆ ಎಂದೂ, ಕಂಡಿರುವುದನ್ನು ಕಂಡಿಲ್ಲ ಎಂದು ಸುಳ್ಳು ಹೇಳುತ್ತಾನೆ. ಹೀಗೆ ಆತನು ತನಗಾಗಿ ಅಥವಾ ಪರರಿಗಾಗಿ ಅಥವಾ ಲೌಕಿಕ ಲಾಭಕ್ಕಾಗಿ ಅಥವಾ ಪರರ ಲೌಕಿಕ ಲಾಭಕ್ಕಾಗಿ ಸುಳ್ಳು ಹೇಳುತ್ತಾನೆ.
ಹಾಗೆಯೇ ಒಬ್ಬನು ಚಾಡಿಕೋರನಾಗಿರುತ್ತಾನೆ. ಇಲ್ಲಿ ಕೇಳಿದ್ದನ್ನು ಅಲ್ಲಿ ಹೇಳಿ ಅಥವಾ ಅಲ್ಲಿ ಕೇಳಿದ್ದನ್ನು ಇಲ್ಲಿ ಹೇಳಿ ಜಗಳಗಳನ್ನು ತರುತ್ತಾನೆ. ಹೀಗೆ ಆತನು ವ್ಯಕ್ತಿಗಳಲ್ಲಿ ಅಥವಾ ಸಮೂಹಗಳಲ್ಲಿ ಜಗಳಗಳನ್ನು ತರುತ್ತಾನೆ. ಹೀಗೆ ಆತನು ಐಕ್ಯತೆ ಭಂಗಮಾಡುತ್ತದೆ, ಸಾಮರಸ್ಯಕ್ಕೆ ಸೌಹಾರ್ದತೆಗೆ ಭಂಗ ತರುತ್ತಾನೆ. ಹೀಗೆ ಆತನು ಸ್ನೇಹ ಭಂಗದಲ್ಲೇ ಆನಂದಿಸುತ್ತಾನೆ.
ಹಾಗೆಯೇ ಒಬ್ಬನು ಕಟುವಾಗಿ ಒರಟಾಗಿ ಮಾತನಾಡುವವನಾಗಿರುತ್ತಾನೆ. ತನ್ನ ಮಾತಿನಿಂದ ಪರರಿಗೆ ನೋವಾಗುವಂತೆ, ಕೋಪ ಬರುವಂತೆ, ದುಃಖ ತರುವಂತೆ ಚಿತ್ತ ಕ್ಷೊಭೆ ತರುವಂತಹ ಮಾತುಗಳನ್ನು ಆಡುತ್ತಾನೆ.
ಹಾಗೆಯೇ ಒಬ್ಬನು ಸೋಮಾರಿತನದ ಹರಟೆಗಳಲ್ಲಿ ತಲ್ಲೀನನಾಗುತ್ತಾನೆ. ಸಮಯೋಚಿತವಲ್ಲದ ಮಾತುಗಳನ್ನು ಆಡುತ್ತಾನೆ. ಅವಾಸ್ತವಿಕ ಮಾತುಗಳನ್ನು ಆಡುತ್ತಾನೆ, ಅನರ್ಥಕಾರಿ ಮಾತುಗಳನ್ನು ಆಡುತ್ತಾನೆ, ಧರ್ಮವಲ್ಲದ, ವಿನಯವಲ್ಲದ ಮಾತುಗಳನ್ನು ಆಡುತ್ತಾನೆ, ಶೇಖರಣೆಗೆ ಯೋಗ್ಯವಾದ ಮಾತುಗಳನ್ನು ಆಡುವುದಿಲ್ಲ, ವಿಚಾರಪೂರಿತ ವಲ್ಲದ ಮಾತುಗಳನ್ನು ಆಡುತ್ತಾನೆ. ಕೇಳಲು ಅರ್ಹವಾದ, ವಿವೇಚನೆಯಿಲ್ಲದ ಮತ್ತು ಲಾಭವಿಲ್ಲದ ಮಾತುಗಳನ್ನೇ ಆಡುತ್ತಾನೆ. 
ಹೀಗೆ ಚುಂದ, ಈ ನಾಲ್ಕು ರೀತಿಯಲ್ಲಿ ಮಾತು ಕಲುಶಿತದಿಂದ ಕೂಡಿರುತ್ತದೆ.
ಮತ್ತು ಹೇಗೆ ಮನಸ್ಸು ಮೂರು ವಿಧದಲ್ಲಿ ಕಲುಷಿತದಿಂದಿರುತ್ತದೆ?
ಚುಂದ, ಇಲ್ಲಿ ಒಬ್ಬನು ದುರಾಸೆಯಿಂದ ಕೂಡಿರುತ್ತಾನೆ. ಆತನು ಮತ್ತೊಬ್ಬರ ಆಸ್ತಿಯ ಬಗ್ಗೆ ದುರಾಸೆಯಿಂದ ಕೂಡಿರುತ್ತಾನೆ. ಆತನು ಹೀಗೆ ಯೋಚಿಸುತ್ತಾನೆ: ಓ ಆತನ ಆಸ್ತಿ ನನ್ನದಾಗಿದ್ದರೆ! ಹಾಗೆಯೇ ಒಬ್ಬನು ದ್ವೇಷವುಳ್ಳ ಚಿತ್ತದಿಂದ ಕೂಡಿರುತ್ತಾನೆ, ಆತ ಹೀಗೆ ಪರರ ಬಗ್ಗೆ ಹಾನಿ ಯೋಚಿಸುತ್ತಾನೆ: ಈ ಜೀವಿಗಳು ನಾಶವಾಗಲಿ, ಕೊಲ್ಲಲ್ಪಡಲಿ, ಇರದೆ ಇರಲಿ, ಹಾಗೆಯೇ ಆತನು ಮಿಥ್ಯಾ ದೃಷ್ಟಿಗಳಿಂದ ಕೂಡಿರುತ್ತಾನೆ. ಹೇಗೆಂದರೆ: ದಾನಕ್ಕೆ, ಸೇವೆಗೆ, ಅರ್ಪಣೆಗೆ ಲಾಭವಿಲ್ಲ. ಸುಕರ್ಮ ಅಥವಾ ಕುಕರ್ಮಗಳಿಗೆ ಫಲವಿಲ್ಲ. ಈ ಲೋಕದಲ್ಲೂ ಫಲವಿಲ್ಲ, ಪರಲೋಕವೇ ಇಲ್ಲ. ತಾಯ್ತಂದೆಗಳಿಗೆ ಮಾಡುವ ಸೇವೆಯು ಲಾಭವಲ್ಲ. ತಾವಾಗಿಯೇ ಹುಟ್ಟುವ ಜೀವಿಗಳಿಲ್ಲ, ಶೀಲವಂತರಾದ ಅಭಿಜ್ಞಾ ಸಂಪನ್ನರಾದ, ಪ್ರಜ್ಞಾರಾದ, ಸಾಕ್ಷಾತ್ಕರಿಸಿದ ಸಮಣ ಬ್ರಾಹ್ಮಣರು ಯಾರೂ ಇಲ್ಲ.
ಹೀಗೆ ಚುಂದ, ಇವು ಮನಸ್ಸಿನ ಮೂರು ಕಲುಷಿತಗಳಾಗಿವೆ.
ಚುಂದ, ಈ ಹತ್ತುಬಗೆಯ ಮಿಥ್ಯಾ ಕರ್ಮಗಳಿಂದ ಕಲುಷಿತನಾಗಿರುವವನು ಭೂಮಿಗೆ ನಮಸ್ಕರಿಸಿದರೂ, ಅಶುದ್ಧನಾಗಿಯೇ ಇರುತ್ತಾನೆ, ಹಾಗೆಯೇ ಒದ್ದೆ ಗೊಬ್ಬರವನ್ನು ಸ್ಪಶರ್ಿಸಿದರೂ ಅಶುದ್ಧನಾಗಿಯೇ ಇರುತ್ತಾನೆ, ಹಸಿರು ಹುಲ್ಲುಗಳನ್ನು ಸ್ಪಶರ್ಿಸಿದರೂ ಅಶುದ್ಧನಾಗಿಯೇ ಇರುತ್ತಾನೆ, ಅಗ್ನಿಪೂಜೆಯನ್ನು ಆತ ಮಾಡಿದರೂ ಅಶುದ್ಧನಾಗಿಯೇ ಇರುತ್ತಾನೆ, ಸೂರ್ಯನಿಗೆ ವಂದಿಸಿದರೂ, ನಮಸ್ಕರಿಸಿದರೂ ಅಶುದ್ಧನಾಗಿಯೇ ಇರುತ್ತಾನೆ, ನೀರಿನಲ್ಲಿ ಎಷ್ಟುಬಾರಿ ಮುಳುಗಿದರೂ, ಸ್ನಾನ ಮಾಡಿದರೂ ಅಶುದ್ಧವಾಗಿ ಇರುತ್ತಾನೆ, ಏಕೆ ಹೀಗೆ? ಏಕೆಂದರೆ ಈ 10 ಬಗೆಯ ಮಿಥ್ಯಾಕರ್ಮಗಳಿಂದ ಕಲುಷಿತನಾಗಿರುವವನು, ಕಲುಷಿತಕ್ಕೆ ಕಾರಣಕರ್ತನಾಗಿದ್ದಾನೆ, ಅಂತಹವನು ನಿರಯಗಳಲ್ಲಿ, ಪ್ರಾಣಿಗಳಲ್ಲಿ ಹುಟ್ಟುತ್ತಾನೆ, ಪ್ರೇತವಾಗುತ್ತಾನೆ ಅಥವಾ ಕೆಟ್ಟ ಪರಿಸ್ಥಿತಿಗಳಲ್ಲಿ ಹುಟ್ಟುತ್ತಾನೆ.
ಆದರೆ ಚುಂದ, ನಾಲ್ಕುವಿಧದ ಕಾಯದಿಂದ ನಾಲ್ಕು ವಿಧದ ಮಾತಿನಿಂದ ಮತ್ತು ಮೂರುಬಗೆಯ ಚಿತ್ತದಿಂದಲೂ ಪರಿಶುದ್ಧನಾಗುವ ಬಗೆಯಿದೆ.
ಹೇಗೆಂದರೆ ಇಲ್ಲಿ ಚುಂದ, ಒಬ್ಬನು ಜೀವಹತ್ಯೆ ಮಾಡುವುದರಿಂದ ದೂರಾಗುತ್ತಾನೆ, ದಂಡಶಸ್ತ್ರಗಳನ್ನು ಎಸೆದು, ಸಭ್ಯನಾಗಿ, ದಾನಿಯಾಗಿ, ಸರ್ವಜೀವಿಗಳಲ್ಲಿ ಕರುಣೆಯಿಂದ ಕೂಡಿರುತ್ತಾನೆ. ಹಾಗೆಯೇ ತನಗೆ ಸೇರದುದನ್ನು ತೆಗೆದುಕೊಳ್ಳದೆ, ಪರವಸ್ತು, ಪರಧನ ಮುಟ್ಟದೆ ಪ್ರಾಮಾಣಿಕನಾಗಿರುತ್ತಾನೆ. ಹಾಗೆಯೇ ಅನೀತಿಯುತ ಕಾಮದಲ್ಲಿ ತೊಡಗದೆ, (ಪತ್ನಿಯ ವಿನಃ) ಯಾವ ಸ್ತ್ರೀಯಲ್ಲಿ ಅನುರಕ್ತನಾಗದೆ, ಪರಸ್ತ್ರೀಯನ್ನು ಮುಟ್ಟದೆ, ಪರಿಶುದ್ಧವಾಗಿರುತ್ತಾನೆ. ಇದರಿಂದ ದೇಹವನ್ನು ಶುದ್ಧೀಕರಿಸುತ್ತಾನೆ. ಹಾಗೆಯೇ ಆತನು ಚಾಡಿ ಹೇಳುವಿಕೆಯಿಂದ ವಿರತನಾಗುತ್ತಾನೆ. ಆತನು ಇಲ್ಲಿ ಕೇಳಿದ ಅಥವಾ ಅಲ್ಲಿ ಕೇಳಿದ ಮಾತುಗಳನ್ನು ಯಾರಲ್ಲಿ ಹೇಳಿ ಐಕ್ಯತೆ ಭಂಗ ಮಾಡುವುದಿಲ್ಲ. ಆತ ಸದಾ ಸೌಹಾರ್ದತೆಯ, ಸಾಮರಸ್ಯ ಉಂಟುಮಾಡುವ ಮಾತುಗಳನ್ನೇ ಆಡುತ್ತಾನೆ. ಅಂತಹುದರಲ್ಲೇ ಆನಂದಿಸುತ್ತಾನೆ. ಹಾಗೆಯೇ ಆತನು ಕಟುವಾದ ಒರಟು ಭಾಷೆಯಿಂದ ವಿರತನಾಗುತ್ತಾನೆ. ಆತನು ಕಿವಿಗಳಿಗೆ ಇಂಪಾದ, ಮಧುರವಾದ, ಹೃದಯಕ್ಕೆ ಸ್ಪಶರ್ಿಸುವಂತಹ, ಸರ್ವರೂ ಒಪ್ಪುವಂತಹ, ಆನಂದ ನೀಡುವಂತಹ ಮಾತುಗಳನ್ನೇ ಆಡುತ್ತಾನೆ. ಹಾಗೆಯೇ ಒಬ್ಬನು ಸೋಮಾರಿತನದ ಹರಟೆಯಿಂದ ವಿರತನಾಗುತ್ತಾನೆ. ಆತನು ಸಮಯೋಚಿತ ಮಾತುಗಳನ್ನೇ ಆಡುತ್ತಾನೆ. ವಾಸ್ತವಿಕ ಸತ್ಯಗಳ ಮಾತುಗಳನ್ನು, ಆಡುತ್ತಾನೆ. ಗುರಿಗೆ ಸಂಬಂಧಿಸಿದಂತೆ ಮಾತುಗಳನ್ನು ಆಡುತ್ತಾನೆ. ಧರ್ಮಕ್ಕೆ ಸಂಬಂಧಪಟ್ಟ ಶಿಸ್ತಿಗೆ ಸಂಬಂಧಪಟ್ಟ, ಶೇಖರಣೆಗೆ ಯೋಗ್ಯ ಮಾತುಗಳನ್ನು ಆಡುತ್ತಾನೆ. ಕೇಳಲು ಅರ್ಹವಾದ, ವಿವೇಚನಾಭರಿತ, ಅರ್ಥಕಾರಿ, ಲಾಭಕಾರಿ ಮಾತುಗಳನ್ನೇ ಆಡುತ್ತಾನೆ.
ಹೀಗೆ ಚುಂದ, ಇವು ನಾಲ್ಕುರೀತಿಯಲ್ಲಿ ಮಾತನ್ನು ಶುದ್ಧೀಕರಿಸುತ್ತವೆ ಮತ್ತು ಹೇಗೆ ಮನಸ್ಸನ್ನು ಮೂರು ವಿಧದಿಂದ ಶುದ್ಧೀಕರಿಸಬಹುದು? ಇಲ್ಲಿ ಒಬ್ಬನು ದುರಾಸೆ ಪೀಡಿತನಾಗುವುದಿಲ್ಲ. ಪರರ ಸ್ವತ್ತಿಗೆ ಆಸೆಪಡುವುದಿಲ್ಲ. ಅವು ನನ್ನದಾಗಲಿ ಎಂದು ಯೋಚಿಸುವುದಿಲ್ಲ. ಹಾಗೆಯೇ ಆತನು ದ್ವೇಷಿಸುವವನು ಆಗಿರುವುದಿಲ್ಲ, ಆತನ ಚಿತ್ತವು ಕಲುಶಿತವಾಗುವುದಿಲ್ಲ. ಆತನು ಹೀಗೆ ಹಾರೈಸುತ್ತಾನೆ: ಎಲ್ಲಾ ಜೀವಿಗಳು ಸುಖವಾಗಿರಲಿ, ಶಾಂತತೆಯಿಂದಿರಲಿ, ಕ್ಷೇಮವಾಗಿರಲಿ, ದ್ವೇಷದಿಂದ ದೂರವಾಗಿರಲಿ, ದುಃಖದಿಂದ ಪೂರ್ಣವಾಗಿ ಪಾರಾಗಲಿ.
ಹಾಗೆಯೇ ಆತನು ಸಮ್ಮಾದೃಷ್ಟಿಕೋನದಿಂದ ಕೂಡಿರುತ್ತಾನೆ. ಆತನು ವಿಶಾಲವಾದ ದೃಷ್ಟಿಕೋನದಿಂದ ಕೂಡಿರುತ್ತಾನೆ, ದಾನಕ್ಕೆ ಫಲವಿದೆ, ಶೀಲಕ್ಕೆ ಫಲವಿದೆ, ತಂದೆ-ತಾಯಿಗಳಿಗೆ ಮಾಡುವ ಸೇವೆ, ಪರಮ ಲಾಭಕಾರಿ, ಸ್ತುತಾರ್ಹ. ಸ್ವಯಂ ಹುಟ್ಟುವ ಪ್ರೇತ, ದೇವತೆಗಳು, ಧ್ಯಾನ ಜೀವಿಗಳಾದ ಬ್ರಹ್ಮರು ಇದ್ದಾರೆ. ಶೀಲವಂತರು, ಧ್ಯಾನಿಗಳು, ಜ್ಞಾನಿಗಳು, ಅಭಿಜ್ಞಾ ಸಂಪನ್ನರಾದ ಸಮಣ ಬ್ರಾಹ್ಮಣರು (ವ್ಯಕ್ತಿಗಳು) ಇದ್ದಾರೆ ಎಂಬಂತಹ ಸಮ್ಮಾದೃಷ್ಟಿಯನ್ನು ಹೊಂದಿರುತ್ತಾನೆ.
ಹೀಗೆ ಚುಂದ, ತ್ರಿವಿಧದಲ್ಲಿ ಚಿತ್ತವಿಶುದ್ಧಿಯಾಗುತ್ತದೆ. ಪರಿಶುದ್ಧತೆಯು ಹೀಗೆ ಆಗುವುದೇ ಹೊರತು ಭೂಮಿಗೆ, ಅಗ್ನಿಗೆ, ಸೂರ್ಯನಿಗೆ ಪೂಜಿಸುವುದರಿಂದಲ್ಲ. ಸಗಣಿಯನ್ನು,ಹುಲ್ಲನ್ನು, ಮುಟ್ಟುವುದರಿಂದಲ್ಲ, (ಸ್ನಾನ ಮಾಡುವುದರಿಂದ ಚಿತ್ತ ಶುದ್ಧಿಯಾಗದು, ದೇಹ ಶುದ್ಧಿಯಾಗುತ್ತದೆಯಷ್ಟೇ) ನೀರನ್ನು ಸ್ಪಶರ್ಿಸುವುದರಿಂದಲ್ಲ.
ಹೀಗೆ ಚುಂದ 10 ರೀತಿಯ ಕುಶಲ ಕರ್ಮದಿಂದಾಗಿ ಪರಿಶುದ್ಧತೆ ಲಭಿಸುವುದು, ಸುಖ ಲಭಿಸುವುದು.
ಹೀಗೆ ಅದನ್ನು ಆಲಿಸಿದ ಚುಂದ ಅನುಮೋದನೆ ಮಾಡಿ ತ್ರಿರತ್ನಗಳಿಗೆ ಶರಣಾಗತನಾದನು.



Tuesday 12 November 2019

ಸಾರಿಪುತ್ತರ ಮಹಾ ಪರಿನಿಬ್ಬಾಣಕ್ಕೆ ಪಯಣ THE LAST DAY OF GREAT SARIPUTTA

9. ಸಾರಿಪುತ್ತರ ಮಹಾ ಪರಿನಿಬ್ಬಾಣಕ್ಕೆ ಪಯಣ


9.1 ಸಾರಿಪುತ್ತರ ಸಿಂಹನಾದ

ಒಮ್ಮೆ ಭಗವಾನರು ನಳಂದದ ಪಾವರಿಕನ ಅಮ್ರವನದಲ್ಲಿದ್ದಾಗ ಸಾರಿಪುತ್ತರು ಭಗವಾನರಿಗೆ ಗೌರವೂರ್ವಕವಾಗಿ ವಂದಿಸಿ ಒಂದೆಡೆ ಕುಳಿತು ಹೀಗೆ ನುಡಿದರು: ಭಗವಾನ್, ತಮ್ಮಂತಹ ಪರಮಶ್ರೇಷ್ಠರಾಗಲಿ, ತಮ್ಮಂತಹ ಜ್ಞಾನಿಯಾಗಲಿ ಹಿಂದೆ ಇರಲಿಲ್ಲ, ಮುಂದೆ ಬರಲಾರರು. ಈಗಲೂ ಸಹಾ ತಮ್ಮ ಹೊರತು ಮತ್ಯಾರೂ ಇಲ್ಲ. ಭಗವಾನ್, ಈ ಬಗೆಯ ಶ್ರದ್ಧೆಯನ್ನು ನಾನು ಹೊಂದಿದ್ದೇನೆ.
ಸಾರಿಪುತ್ತ, ಈ ಬಗೆಯ ಸಿಂಹನಾದ ಮಾಡುವ ಮುನ್ನ ಹಿಂದಿನ ಸಮ್ಮಾಸಂಬುದ್ಧರ ಶೀಲ ಹೀಗಿತ್ತು, ಅವರ ಸಮಾಧಿ ಹೀಗಿತ್ತು, ಅವರ ಪ್ರಜ್ಞಾ ಹೀಗಿತ್ತು ಅಥವಾ ಧ್ಯಾನಗಳ ನೆಲೆಸುವಿಕೆ ಇಂತಹ ಅವಸ್ಥೆಯಲ್ಲಿತ್ತು ಮತ್ತು ಅವರ ವಿಮುಕ್ತಿಯು ಈ ಬಗೆಯಲ್ಲಿತ್ತು ಎಂದು ತಿಳಿದಿದೆಯೇ?
ಇಲ್ಲ ಭಗವಾನ್.
ಹೋಗಲಿ ಸಾರಿಪುತ್ತ, ಮುಂದೆ ಬರುವಂತಹ ಸಮ್ಮಾಸಂಬುದ್ಧರ ಶೀಲ ಹೀಗಿರುವುದು, ಅವರ ಸಮಾಧಿಯು ಹೀಗಿರುವುದು, ಇಂತಹ ಸಮಾಧಿಯ ಸ್ಥಿತಿಗಳಲ್ಲಿ ಇರುವರು ಎಂಬುದು ತಿಳಿದಿದೆಯೇ, ಅವರ ಪ್ರಜ್ಞಾ ಹೀಗಿರುವುದು ಮತ್ತು ಅವರ ವಿಮುಕ್ತಿಯು ಈ ಬಗೆಯಲ್ಲಿರುವುದು ಎಂಬುದು ತಿಳಿದಿದೆಯೇ?
ಇಲ್ಲ ಭಗವಾನ್.
ಹೋಗಲಿ ಸಾರಿಪುತ್ತ, ಈಗಿರುನ ನನ್ನ ಬಗ್ಗೆಯಾಗಲಿ, ನನ್ನ ಶೀಲ ಹೀಗಿದೆ, ನನ್ನ ಸಮಾಧಿ ಹೀಗಿದೆ, ನನ್ನ ಪ್ರಜ್ಞಾ ಹೀಗಿದೆ, ನನ್ನ ವಿಮುಕ್ತಿ ಹೀಗಿರುವುದು ಎಂದು ನೇರವಾದ ಅಭಿಜ್ಞಾ ಜ್ಞಾನದಿಂದ ಅರಿತಿರುವೆಯಾ?
ಇಲ್ಲ ಭಗವಾನ್.
ಹಾಗಾದರೆ ಸಾರಿಪುತ್ತ, ಹಿಂದಿನ, ಈಗಿನ ಅಥವಾ ಮುಂದಿನ ಬುದ್ಧರ ಬಗ್ಗೆ ಅಭಿಜ್ಞಾ ಜ್ಞಾನ ಇಲ್ಲದೆ ಈ ಬಗೆಯ ಸಿಂಹನಾದ ಮಾಡುತ್ತಿರುವೆ?
ಭಗವಾನ್, ನನಗೆ ಅಭಿಜ್ಞಾ ಜ್ಞಾನವಿಲ್ಲದೆ ಇರಬಹುದು. ಆದರೂ ನೇರವಾದ ವೈಯಕ್ತಿಕಾನುಭವದಿಂದ ಹಾಗು ತಮ್ಮ ಧಮ್ಮದ ಅರಿವಿರುವುದರಿಂದಾಗಿ ನಾನು ಈ ಬಗೆಯ ಸಿಂಹನಾದವನ್ನು ಮಾಡುತ್ತಿದ್ದೇನೆ. ಸರಿ ಭಗವಾನ್, ಹಿಂದಿನ, ಮುಂದಿನ ಹಾಗು ಇಂದಿನ ಬುದ್ಧ ಭಗವಾನರೆಲ್ಲರೂ ಸಹಾ ಪಂಚನೀವರಣಗಳನ್ನು ದಾಟಿ, ನಾಲ್ಕು ಸತಿಪಟ್ಠಾಣದಲ್ಲಿ ನೆಲೆಸಿ, ಸಪ್ತಬೋಧಿ ಅಂಗಗಳಲ್ಲಿ ವೃದ್ಧಿಸಿ, ಸಮ್ಮಾಸಂಬುದ್ಧರಾಗಿದ್ದಾರೆ ಎಂಬುದನ್ನು ಬಲ್ಲೆನು ಎಂದರು.

9.2 ಪರಿನಿಬ್ಬಾಣಕ್ಕೆ ಪಯಣ

ನಾವೀಗ ಭಗವಾನರ ಪರಿನಿಬ್ಬಾಣದ ವರ್ಷಕ್ಕೆ ಬಂದಿರುವೆವು. ಆ ಸಮಯದಲ್ಲಿ ಭಗವಾನರು ವೈಶಾಲಿಯ ಬೆಲುವಾಗಾಮದಲ್ಲಿ ವರ್ಷವಾಸ ಕಳೆದರು. ನಂತರ ಭಗವಾನರು ಅಲ್ಲಿಂದ ಶ್ರಾವಸ್ತಿಗೆ ಹಿಂದಿರುಗಿದರು. ಆಗ ಅಲ್ಲಿ ಸಾರಿಪುತ್ತರು ಭಗವಾನರಿಗೆ ವಂದಿಸಿ ಅಲ್ಲಿಂದ ಹೊರಟು, ಅರಹಂತಫಲ ಸಮಾಪತ್ತಿಯಲ್ಲಿ ವಿಹರಿಸಿದರು. ನಿಗದಿತ ಕಾಲದ ನಂತರ ಧ್ಯಾನದಿಂದ ಮೇಲೆದ್ದ ಸಾರಿಪುತ್ತರಿಗೆ ಪ್ರಶ್ನೆಯೊಂದು ಉಂಟಾಯಿತು: ಪರಿನಿಬ್ಬಾಣವನ್ನು ಮೊದಲು ಭಗವಾನರು ಪಡೆಯುವರೋ ಅಥವಾ ಅಗ್ರಶ್ರಾವಕರು ಪಡೆಯುವರೋ? ಆಗ ಅವರಿಗೆ ಧ್ಯಾನದಲ್ಲಿ ಮೊದಲು ಅಗ್ರಶ್ರಾವಕರೇ ಪರಿನಿಬ್ಬಾಣವನ್ನು ಪಡೆಯುವರೆಂಬುದು ತಿಳಿಯಿತು. ನಂತರ ಅವರು ತಮ್ಮ ಶೇಷ ಆಯುವನ್ನು ವೀಕ್ಷಿಸಿದಾಗ ಕೇವಲ ವಾರ ಮಾತ್ರ ಉಳಿದಿರುವುದು ಗೋಚರವಾಯಿತು. ಆಗ ಅವರು ತಾವು ಎಲ್ಲಿ ಪರಿನಿಬ್ಬಾಣವನ್ನು ಪಡೆದರೆ ಸಮಂಜಸವೆಂದು ತಕರ್ಿಸತೊಡಗಿದರು. ರಾಹುಲರು ತಾವತಿಂಸ ಲೋಕದಲ್ಲಿ ನಿಬ್ಬಾಣ ಪಡೆದಿದ್ದಾರೆ, ಅಜ್ಞಕೊಂಡಞ್ಞರು ಹಿಮಾಲಯದ ಛದ್ದಂತ ಸರೋವರದಲ್ಲಿ ಪಡೆದಿದ್ದಾರೆ, ನಾನೆಲ್ಲಿ ಪಡೆಯಲಿ? ಆಗ ಅವರಿಗೆ ತಮ್ಮ ತಾಯಿಯ ನೆನಪು ಉಂಟಾಯಿತು. ಓಹ್ ನನ್ನ ತಾಯಿಯು ಏಳು ಜನ ಅರಹಂತರಿಗೆ ಮಾತೆಯಾಗಿಯೂ ಸಹಾ ತ್ರಿರತ್ನದಲ್ಲಿ ಇನ್ನೂ ಶ್ರದ್ಧೆ ಉಂಟಾಗಲಿಲ್ಲವಲ್ಲ! ಆಕೆಯ ಶ್ರದ್ಧೆಗೆ ಸಹಾಯಕ ಅಂಶಗಳು ಇವೆಯಾ? ಅಥವಾ ಇಲ್ಲವೇ? ಹೀಗೆ ಯೋಚಿಸಿ ಆಕೆಯಲ್ಲಿ ಸೋತಪತ್ತಿ ಪ್ರಾಪ್ತಿಗೆ ಸಹಾಯಕವಾಗುವ ಪಂಚೇಂದ್ರಿಯಗಳು, ಪಂಚಬಲಗಳು ಇತ್ಯಾದಿ ಸಹಾಯಕ ಸ್ಥಿತಿಗಳು ಇವೆಯೇ ಎಂದು ಪರೀಕ್ಷಿಸಿದಾಗ ಇವೆಯೆಂದು ತಿಳಿಯಿತು. ನಂತರ ಯಾರ ನಿದರ್ೆಶನದಂತೆ, ಬೋದನೆಯಂತೆ ಆಕೆಯು ಸತ್ಯವನ್ನು ಗ್ರಹಿಸಬಹುದು ಎಂದು ವಿಶ್ಲೇಷಿಸಿದಾಗ ಅದಕ್ಕೆ ತಕ್ಕವರು ತಾವು ಮಾತ್ರವೇ ಎಂದು ಸಾರಿಪುತ್ತರಿಗೆ ತಿಳಿಯಿತು. ನಂತರ ಅವರು ಹೀಗೆ ತಮ್ಮ ಯೋಚನೆ ಮುಂದುವರೆಸಿದರು: ನಾನೇನಾದರೂ ಈಗ ತಟಸ್ಥಭಾವದಲ್ಲಿದ್ದುಬಿಟ್ಟರೇ ಜನರು ಹೀಗೆ ನುಡಿಯಬಲ್ಲರು: ಸಾರಿಪುತ್ತರು ಬಹಳಷ್ಟು ಜನರಿಗೆ ಸಹಾಯ ಮಾಡಿರುವರು. ಒಂದೇ ದಿನದಲ್ಲಿ ಅವರು ದೇವತೆಗಳಿಗೆ ಸಮಚಿತ್ತ ಸುತ್ತವನ್ನು ಬೋಧಿಸಿ ಅಸಂಖ್ಯಾತ ದೇವತೆಗಳಿಗೆ ಅರ್ಹತ್ವವನ್ನು ಗಳಿಸಲು ಸಹಾಯ ಮಾಡಿದವರು, ಉಳಿದ ದೇವತೆಗಳನ್ನು ಅನಾಗಾಮಿ, ಸಕದಾಗಾಮಿ ಹಾಗು ಸೋತಪತ್ತಿ ಫಲಗಳಲ್ಲಿ ಪ್ರತಿಷ್ಠಾಪಿಸುವಂತೆ ಮಾಡಿದವರು ಆಗಿದ್ದಾರೆ. ಅಷ್ಟೇ ಅಲ್ಲ, ಸಾವಿರಾರು ಕುಟುಂಬಗಳು ದೇವತೆಗಳಲ್ಲಿ ಉಗಮಿಸಿ ಅಲ್ಲಿಯೂ ತ್ರಿರತ್ನದಲ್ಲಿ ಅಪಾರ ಶ್ರದ್ಧೆಯಿಟ್ಟು ಪಾಲನೆಯಲ್ಲಿ ಸ್ಥಿರರಾಗಿದ್ದಾರೆ. ಹೀಗೆಲ್ಲಾ ಮಾಡಿದ್ದರೂ ಸಹಾ ತಮ್ಮ ತಾಯಿಯ ಮಿಥ್ಯಾದೃಷ್ಟಿಗಳನ್ನು ತೆಗೆದುಹಾಕಲು ಅವರಿಂದ ಸಾಧ್ಯವಾಗಲಿಲ್ಲ. ಹೀಗೆ ಜನರು ನುಡಿಯುವ ಕಾರಣದಿಂದಾಗಿ, ನನ್ನ ಈಗಿನ ಆದ್ಯ ಕರ್ತವ್ಯ ನನ್ನ ತಾಯಿಯ ಮಿಥ್ಯಾದೃಷ್ಟಿಗಳನ್ನು ತೆಗೆಯುವುದು. ಆಕೆಯನ್ನು ಸೋತಪತ್ತಿ ಫಲದಲ್ಲಿ ನಾನು ಹುಟ್ಟಿದ ಕೋಣೆಯಲ್ಲೇ ಪರಿನಿಬ್ಬಾಣ ಪಡೆಯುವೆನು ಎಂದು ನಿರ್ಧರಿಸಿದರು.

9.3 ಭಗವಾನರಿಗೆ ಅಂತಿಮ ನಮನ

ಈ ರೀತಿ ನಿರ್ಧರಿಸಿದ ನಂತರ ಹೀಗೆ ತೀಮರ್ಾನಿಸಿದರು: ಈ ದಿನವೇ ನಾನು ಭಗವಾನರ ಒಪ್ಪಿಗೆ ಪಡೆದು ನಾಲಕಕ್ಕೆ ಹೊರಡುವೆನು. ನಂತರ ಥೇರ ಚುಂದರವರನ್ನು ಕರೆದು ಆಯುಷ್ಮಂತ ಚುಂದ, ನಮ್ಮ 500 ಭಿಕ್ಷು ಬಳಗಕ್ಕೆ ಸಿದ್ಧರಾಗಿರಲು ಹೇಳು, ನಾನು ನಾಲಕಕ್ಕೆ ಹೊರಡುವವನಿದ್ದೇನೆ. ಚುಂದರು ಹಾಗೆಯೇ ಏಪರ್ಾಡು ಮಾಡಿದರು. ಭಿಕ್ಷುಗಳು ಸಿದ್ಧರಾಗಿ ಸಾರಿಪುತ್ತರ ಎದುರಿಗೆ ನಿಂತರು. ನಂತರ ಆ ಸ್ಥಳವನ್ನು ಬಿಡುವ ಮುನ್ನ ಹೆಬ್ಬಾಗಿಲ ಬಳಿ ನಿಂತು ಈ ರೀತಿ ಯೋಚಿಸಿದರು: ಇದೇ ನನ್ನ ಕೊನೆಯ ನೋಟ. ಇನ್ನೂ ಹಿಂತಿರುಗುವ ಅವಶ್ಯಕತೆಯೇ ಇಲ್ಲ.
ನಂತರ 500 ಭಿಕ್ಷುಗಳೊಂದಿಗೆ ಭಗವಾನರನ್ನು ದಶರ್ಿಸಿ ನಮನ ಸಲ್ಲಿಸಿದರು. ನಂತರ ಸಾರಿಪುತ್ತರು ಹೀಗೆ ನುಡಿದರು: ಓ ಭಗವಾನ್, ಒಪ್ಪಿಗೆ ನೀಡಿ, ತಥಾಗತರು ಅನುಮತಿ ನೀಡುವಂತಾಗಲಿ, ಪರಿನಿಬ್ಬಾಣದ ಕಾಲ ಸನ್ನಿಹಿತವಾಗಿದೆ, ನಾನು ಜೀವಬಲವನ್ನು ತೊರೆಯುವವನಿದ್ದೇನೆ ಎಂದು ನುಡಿದು ಹೀಗೆಂದರು:
ಸರ್ವಲೋಕಾಧಿಪತಿಯಾದ ಓ ಮಹಾನ್ ಋಷಿಯೇ, ಶೀಘ್ರವೇ ನಾನು ಬಿಡುಗಡೆಯಾಗಲಿರುವೆ, ಜೀವದಿಂದ ಇನ್ನೂ ಹೋಗುವಿಕೆ, ಮರಳುವಿಕೆ ಇನ್ನಿಲ್ಲ. ಇದೇ ನನ್ನ ಅಂತಿಮ ಪೂಜೆಯಾಗಿದೆ ಪ್ರಭು! ನನಗೆ ಜೀವನವು ಈಗ ಇನ್ನೂ ಅತಿ ಅಲ್ಪವಾಗಿದೆ; ಏಳು ದಿನಗಳ ನಂತರ ತೊರೆಯುವೆನು ಈ ಶರೀರವ, ಹೊರೆಯನ್ನು ಇಳಿಸಲಿದ್ದೇನೆ. ಓ ಭಗವಾನ್, ಆದ್ದರಿಂದ ಅನುಮತಿಸಿ ಬುದ್ಧ ಭಗವಾನ್! ಕೊನೆಗೂ ನನ್ನ ನಿಬ್ಬಾಣವು ಸನ್ನಿಹಿತವಾಯಿತು. ಈಗ ನಾನು ಜೀವಿಸುವ ಇಚ್ಛೆಯನ್ನು ತೊರೆದೆನು.
ಆಗ ಭಗವಾನರು ಹೀಗೆ ಪ್ರಶ್ನಿಸಿದರು: ಸಾರಿಪುತ್ತ, ಎಲ್ಲಿ ಪರಿನಿಬ್ಬಾಣ ಪಡೆಯಬೇಕೆಂದು ನಿರ್ಧರಿಸಿರುವೆ?
ಭಗವಾನ್, ಮಗಧದಲ್ಲಿ ಇರುವಂತಹ ನನ್ನ ಹುಟ್ಟೂರಾದ ನಾಲಕಹಳ್ಳಿಯಲ್ಲಿ ನಾನು ಹುಟ್ಟಿದಂತಹ ಕೋಣೆಯಲ್ಲೇ ಪರಿನಿಬ್ಬಾಣ ಪಡೆಯಬೇಕೆಂದು ನಿರ್ಧರಿಸಿರುವೆ.
ಸರಿ ಸಾರಿಪುತ್ತ, ನಿನಗೆ ಯಾವುದು ಸಮಯೋಚಿತವಾದುದು ಎನಿಸುವುದೋ ಹಾಗೆಯೇ ಮಾಡು. ಆದರೆ ನಿನ್ನಂಥಹ ಹಿರಿಯ ಥೇರ ಭಿಕ್ಷು ಸಂಘಕ್ಕೆ ಮತ್ತೊಮ್ಮೆ ಕಾಣಸಿಗಲಾರರು. ಆದ್ದರಿಂದಾಗಿ ಅವರಿಗೆ ಕೊನೆಯದಾಗಿ ಧಮ್ಮ ಪ್ರವಚನವನ್ನು ನೀಡುವಂತಾಗು.

9.4 ಅಂತಿಮ ಧಮ್ಮ ಪ್ರವಚನ

ನಂತರ ಸಾರಿಪುತ್ತರು ಅಲ್ಲಿ ತಮ್ಮ ಅದ್ಭುತವಾದ ಪ್ರಜ್ಞಾಬಲವನ್ನು ಪ್ರದಶರ್ಿಸಿದರು. ಅಪ್ರತಿಮವಾಗಿ ಜ್ಞಾನವನ್ನು ಪ್ರಕಾಶಿಸಿದರು. ಪರಮಾರ್ಥ ಸತ್ಯಗಳ ಉನ್ನತಶಿಖರಕ್ಕೆ ಏರಿ, ಹಾಗೆಯೇ ಪ್ರಾಪಂಚಿಕ ವ್ಯವಹಾರಿಕ ಸತ್ಯಗಳವರೆವಿಗೂ ಇಳಿದು, ಧಮ್ಮವನ್ನು ನೇರವಾಗಿ ಉಪಮೆಗಳ ಮೂಲಕ ಅತಿ ಸುಂದರವಾಗಿ ಹಾಗೆಯೇ ಅತ್ಯಂತ ಪರಿಣಾಮಾತ್ಮಕವಾಗಿ ಘೋಷಿಸಿದರು.
ನಂತರ ಸಾರಿಪುತ್ತರು ಭಗವಾನರ ಕಾಲುಗಳನ್ನು ಅಪ್ಪಿಕೊಂಡರು ಹಾಗು ಹೀಗೆ ನುಡಿದರು: ಈ ಪಾದಗಳನ್ನು ಪೂಜಿಸಲು ನಾನು ಒಂದು ಅಸಂಖ್ಯೆಯ ಹಾಗು ಲಕ್ಷ ಕಲ್ಪಗಳ ಕಾಲ 10 ಪಾರಮಿಗಳನ್ನು ಪರಿಪೂರ್ಣಗೊಳಿಸಬೇಕಾಯಿತು. ನನ್ನ ಹೃದಯಕ್ಕೆ ಸಂಪೂರ್ಣ ಸಂತೃಪ್ತಿಯಿದೆ. ಈಗಿನ ನಂತರ ಸಂಪರ್ಕವಾಗಲಿ ಅಥವಾ ಭೇಟಿಯಾಗಲಿ ಇರುವುದಿಲ್ಲ. ಅಂತಹ ಮಧುರವಾದ ಬಾಂಧವ್ಯದ ಬೆಸುಗೆಯು ಇಲ್ಲಿಗೆ ಬೇರ್ಪಡೆಯಾಗುತ್ತದೆ. ನಾನು ಬಹುಬೇಗನೆ ನಿಬ್ಬಾಣ ನಗರಿಯನ್ನು ಪ್ರವೇಶಿಸಲಿದ್ದೇನೆ. ಅದು ಅಜರಾ, ಅಮರ, ಶಾಂತ, ಕ್ಷೇಮ ಹಾಗು ಪರಮಸುಖಕರವಾಗಿದೆ. ಅದು ಲಕ್ಷಾಂತರ ಬುದ್ಧರು ಪ್ರವೇಶಿಸಿರುವಂತಹದ್ದಾಗಿದೆ. ಓ ಭಗವಾನ್, ನನ್ನ ಯಾವುದಾದರೂ ನುಡಿಯಾಗಲಿ ಅಥವಾ ಕಾರ್ಯವಾಗಲಿ ತಮಗೆ ಮೆಚ್ಚಿಸದಿದ್ದರೆ ಕ್ಷಮಿಸಿ, ಇದು ನನ್ನ ಹೊರಡುವ ಸಮಯ.
ಸಾರಿಪುತ್ತ, ನಿನ್ನ ಕಾರ್ಯವಾಗಲಿ ಅಥವಾ ಮಾತುಗಳಾಗಲಿ ಎಂದಿಗೂ ನನಗೆ ಅಪ್ರಿಯವಾಗಿಲ್ಲ. ಏಕೆಂದರೆ ನೀನು ಸಾರಿಪುತ್ತ, ಪರಮಪ್ರಜ್ಞಾ ವಿಸ್ತಾರವಾದ ಜ್ಞಾನಾಚರಣೆಯುಳ್ಳವನು ಆಗಿದ್ದೀಯೆ, ಶೀಘ್ರವಾಗಿ ಗ್ರಹಿಸುವಂತಹವನು. ಹರಿತವಾದ ಮೇಧಾಶಕ್ತಿಯವನು ಆಗಿದ್ದೀಯೇ, ಹಾಗೆಯೇ ನಾನು ಸದಾ ಕ್ಷಮಾಶೀಲನೇ ಆಗಿದ್ದೇನೆ. ನಿನ್ನ ಒಂದು ನುಡಿಯಾಗಲಿ ಅಥವಾ ಒಂದು ಸಣ್ಣ ಕಾರ್ಯವೇ ಆಗಲಿ, ನನ್ನಲ್ಲಿ ಅಪ್ರಿಯವನ್ನುಂಟುಮಾಡಲಿಲ್ಲ. ಸಾರಿಪುತ್ತ ನಿನಗೆ ಸಮಯೋಚಿತ ಹಾಗು ಸಮಂಜಸವೆನಿಸಿದ್ದನ್ನು ಮಾಡುವಂತಾಗು.

9.5 ನಾಲಕದೆಡೆಗೆ ಪಯಣ :

ಭಗವಾನರಿಂದ ಹೀಗೆ ಒಪ್ಪಿಗೆ ಸಿಕ್ಕ ನಂತರ ಸಾರಿಪುತ್ತರು ಮೇಲೆದ್ದರು. ಆಗ ಇಡೀ ಪೃಥ್ವಿಯೇ ಕಂಪಿಸಿತು, ಆಕಾಶದಲ್ಲೆಲ್ಲಾ ಮಿಂಚು ಹಾಗು ಸಿಡಿಲುಗಳ ಆರ್ಭಟಗಳು ಆರಂಭವಾಯಿತು. ಮಹಾ ಮಳೆಯೇ ಆಗಮಿಸಿತು.
ಆಗ ಭಗವಾನರು ಹೀಗೆ ಯೋಚಿಸಿದರು: ನಾನು ಈಗ ಧಮ್ಮಸೇನಾನಿಗೆ ಹೊರಡಲು ಒಪ್ಪಿಗೆ ಸೂಚಿಸಲೇ ಬೇಕು. ನಂತರ ಭಗವಾನರು ಧಮ್ಮಾಸನದಿಂದ ಮೇಲೆದ್ದು ಗಂಧಕುಟಿಯತ್ತ ನಡೆದರು. ಅಲ್ಲಿ ರತ್ನಫಲಕದ ಮೇಲೆ ನಿಂತರು. ಆಗ ಸಾರಿಪುತ್ತರು ಮೂರುಬಾರಿ ಭಗವಾನರಿಗೆ ತಮ್ಮ ಬಲಗಡೆಯಿಂದ ಪ್ರದಕ್ಷಿಣೆ ಮಾಡಿದರು. ನಂತರ ಹೀಗೆ ಯೋಚಿಸಿದರು: ಒಂದು ಅಸಂಖ್ಯೆಯ ಹಾಗು ಲಕ್ಷ ಕಲ್ಪಗಳ ಹಿಂದೆ ಭಗವಾನ್ ಅನೊಮದಸ್ಸಿ ಬುದ್ಧರ ಪಾದದಡಿಗೆ ಪೂಜಿಸಿ, ತಮ್ಮನ್ನು ಕಾಣಲೆಂದು ಹೀಗೆ ಧಮ್ಮಸೇನಾನಿಯಾಗಲು ಸಂಕಲ್ಪಿಸಿದೆನು. ಆ ಸಂಕಲ್ಪವು ಸಾಕ್ಷಾತ್ಕಾರವಾಯಿತು. ತಮ್ಮನ್ನು ದಶರ್ಿಸಿದೆನು. ಪ್ರಥಮ ಭೇಟಿಯಲ್ಲಿ ತಮ್ಮನ್ನು ದಶರ್ಿಸಿದಂತೆಯೇ ಈಗ ಇದುವೇ ಕೊನೆ ಭೇಟೆಯಾಗಿದೆ ಹಾಗು ಭವಿಷ್ಯದಲ್ಲಿ ಯಾವುದು ಸಂಭವಿಸದು. ಹಾಗೆಯೇ ಜೋಡಿಸಿದ ಕೈಗಳಿಂದಲೇ ಸಾರಿಪುತ್ತರು ಮುಮ್ಮುಖವಾಗಿ ಅಲ್ಲಿಂದ ಹಿಂದಕ್ಕೆ ಹೊರಟರು. ಭಗವಾನರು ಕಣ್ಣಿಗೆ ಕಾಣುವವರೆಗೂ ಹೀಗೆಯೇ ನಡೆದರು. ಆಗ ಮತ್ತೊಮ್ಮೆ ಭೂಮಿಯು ಕಂಪಿಸಿತು.
ಆಗ ಭಗವಾನರು ಭಿಕ್ಷುಗಳನ್ನು ಉದ್ದೇಶಿಸಿ ಹೀಗೆಂದರು: ಹೋಗಿ ಭಿಕ್ಷುಗಳೇ, ನಿಮ್ಮ ಹಿರಿಯ ಸಹೋದರನೊಂದಿಗೆ ಜೊತೆಯಲ್ಲಿ ಸಾಗಿ. ಇದನ್ನು ಆಲಿಸಿದಂತಹ ನಾಲ್ಕು ಸಭಾಗಣಗಳು ಭಗವಾನರನ್ನು ಒಂಟಿ ಬಿಟ್ಟು ಜೇತವನದಿಂದ ಹೊರಕ್ಕೆ ಹೋದವು. ಈ ವಿಷಯವು ಶ್ರಾವಸ್ತಿಯ ನಿವಾಸಿಗಳಿಗೆ ತಿಳಿಯುತ್ತಿದ್ದಂತೆಯೇ ಅವರು ಪೂಜಾ ಸಾಮಗ್ರಿಗಳೊಂದಿಗೆ, ಹೂಗಳಿಂದ, ಗಂಧಗಳಿಂದ ಕೂಡಿ, ಒದ್ದೆ ತಲೆಯಿಂದಲೇ ಅಳುತ್ತಾ ಆಶ್ರುಮುಖವಾಗಿ ಧಾವಿಸಿ, ಸಾರಿಪುತ್ತರನ್ನು ಹಿಂಬಾಲಿಸಿದರು....
ಆಗ ಸಾರಿಪುತ್ತರು ಆ ಇಡೀ ಗುಂಪಿಗೆ ಹೀಗೆ ನುಡಿದರು: ಈ ರಸ್ತೆಯನ್ನು ಯಾರು ಸಹಾ ತಡೆಯಲು ಪ್ರಯತ್ನಿಸಬಾರದು ಎಂದು ಹೇಳಿ ಅವರನ್ನು ಹಿಂದಕ್ಕೆ ಹೋಗಲು ವಿನಂತಿಸಿದರು. ನಂತರ ಭಿಕ್ಷುಗಳತ್ತ ತಿರುಗಿ ಹೀಗೆ ನುಡಿದರು: ನೀವು ಕೂಡ ಹಿಂತಿರುಗಿ, ಭಗವಾನರನ್ನು ಅಲಕ್ಷಿಸಬೇಡಿ.
ಹೀಗೆ ಅವರನ್ನು ಕಳುಹಿಸಿಕೊಟ್ಟು ತಮ್ಮ ಶಿಷ್ಯರ ಗುಂಪಿನೊಂದಿಗೆ ನಾಲಕದತ್ತ ಪ್ರಯಾಣಿಸಿದರು. ಆದರೂ ಸಹಾ ಕೆಲವು ಉಪಾಸಕರು ಹಿಂಬಾಲಿಸುತ್ತಾ ಹೀಗೆ ಪ್ರಲಾಪಿಸಿದರು: ಹಿಂದೆ ಈ ಶ್ರೇಷ್ಠ ಭಿಕ್ಷುವು ತಮ್ಮ ಪ್ರಯಾಣದಿಂದ ಹಿಂತಿರುಗುತ್ತಿದ್ದರು. ಆದರೆ ಈಗಿನ ಪ್ರಯಾಣದಲ್ಲಿ ಹಿಂತಿರುಗುವುದಿಲ್ಲವಲ್ಲ! ಆಗ ಸಾರಿಪುತ್ತರು ಅವರಿಗೆ ಹೀಗೆ ಸಮಾಧಾನಿಸಿದರು: ಎಚ್ಚರವುಳ್ಳವರಾಗಿ ಮಿತ್ರರೇ, ಎಲ್ಲಾ ಆಗುಹೋಗುಗಳ ಸ್ವಭಾವವೇ ಹೀಗೆ ರಚಿತವಾಗುತ್ತದೆ, ಹಾಗೆಯೇ ವಿಯೋಗ ಹೊಂದುತ್ತವೆ. ಹೀಗೆ ಸಮಾಧಾನಿಸಿ ಅವರನ್ನು ಹಿಂತಿರುಗುವಂತೆ ಮಾಡುತ್ತಿದ್ದರು. ಹೀಗೆಯೇ ಸಾರಿಪುತ್ತರು ಸಾಗುತ್ತಾ ರಾತ್ರಿಯಾದಾಗ ಅಲ್ಲೇ ತಂಗುತ್ತಾ, ಪುನಃ ಹಗಲಲ್ಲಿ ನಡೆಯುತ್ತಿದ್ದರು. ಹೀಗೆಯೇ ವಾರದ ಕಾಲ ಜನರಿಗೆಲ್ಲಾ ದರ್ಶನವಿತ್ತರು. ನಂತರ ನಾಲಕವೆಂಬ ಹಳ್ಳಿಗೆ ಸಂಜೆಗೆ ಹೊರಟರು. ಆ ಹಳ್ಳಿಯ ದ್ವಾರದಲ್ಲಿರುವ ಆಲದ ಮರದ ಕೆಳಗೆ ನಿಂತರು. ಆಗ ಸಾರಿಪುತ್ತರ ಸೋದರಳಿಯನಾದ ಉಪರೇವತನು ಥೇರರನ್ನು ಕಂಡನು. ತಕ್ಷಣ ಸಾರಿಪುತ್ತರ ಬಳಿಗೆ ಬಂದು ವಂದಿಸಿ, ಗೌರವಯುತವಾಗಿ ಒಂದೆಡೆ ನಿಂತನು.
ನಿನ್ನ ಹಿರಿಯಜ್ಜಿಯು ಮನೆಯಲ್ಲಿರುವಳೇ?
ಹೌದು ಭಂತೆ.
ಹಾಗಾದರೆ ನನ್ನ ಬರುವಿಕೆಯನ್ನು ಆಕೆಗೆ ಹೋಗಿ ತಿಳಿಸು. ಆಗ ಆಕೆಯು ಏತಕ್ಕಾಗಿ ಬಂದೆನೆಂದು ಕೇಳುತ್ತಾಳೆ. ಆಗ ಈ ಹಳ್ಳಿಯಲ್ಲಿ ಒಂದು ರಾತ್ರಿ ಮಾತ್ರ ತಂಗುತ್ತಾರಂತೆ ಎಂದು ನುಡಿದು, ನನ್ನ ಹುಟ್ಟು ಕೋಣೆಯನ್ನೇ ನನಗಾಗಿ ಸಿದ್ಧಪಡಿಸಿ, ಉಳಿದ 500 ಭಿಕ್ಷುಗಳಿಗೂ ರಾತ್ರಿ ನೆಲೆಸಲು ವ್ಯವಸ್ಥೆ ಮಾಡಲು ತಿಳಿಸು ಎಂದರು.
9.6 ಏಳು ಅರಹಂತರ ತಾಯಿಗೆ ಪರಿವರ್ತನೆ:
ಉಪರೇವತನು ಹಿರಿಯಜ್ಜಿಯ ಬಳಿಗೆ ಹೋಗಿ: ಅಜ್ಜಿ ಸೋದರಮಾವನು ಬಂದಿಹನು ಎಂದು ತಿಳಿಸಿದನು.
ಆತನು ಎಲ್ಲಿದ್ದಾನೆ?
ಹಳ್ಳಿಯ ಹೆಬ್ಬಾಗಿಲಿನ ಬಳಿಯಲ್ಲಿ.
ಒಂಟಿಯಾಗಿ ಬಂದಿಹನೆ ಅಥವಾ ಜೊತೆಯಲ್ಲಿ ಯಾರಾದರೂ ಇರುವರೇ?
ಆತನ ಜೊತೆಯಲ್ಲಿ 500 ಭಿಕ್ಷುಗಳು ಇರುವರು.
ಆತನೇಕೆ ಬಂದಿಹನು? ಏತಕ್ಕಾಗಿ ಇಷ್ಟು ಭಿಕ್ಷುಗಳಿಗೆ ವ್ಯವಸ್ಥೆ ಮಾಡಬೇಕು? ಯೌವ್ವನದಲ್ಲೇ ಭಿಕ್ಖುವಾದ ಆತನು ಈ ವಯಸ್ಸಿನಲ್ಲಿ ಗೃಹಸ್ಥನಾಗಲು ಬಯಸುತ್ತಿರುವನೇ? ಎಂದು ಗೊಣಗಿದರೂ ಆಕೆಯು ಭಿಕ್ಷುಗಳಿಗೆ ಇರಲು ವ್ಯವಸ್ಥೆ ಮಾಡಿ, ಸಾರಿಪುತ್ತರ ಹುಟ್ಟು ಕೋಣೆಯನ್ನು ಸ್ವಚ್ಛಗೊಳಿಸಿ ಬೆಳಕಿನ ವ್ಯವಸ್ಥೆ ಮಾಡಿ, ಸಾರಿಪುತ್ತರನ್ನು ಕರೆಸಿದಳು.
ನಂತರ ಸಾರಿಪುತ್ತರವರು ಭಿಕ್ಷುಗಳೊಂದಿಗೆ ಆ ಮನೆಯ ಮಾಳಿಗೆಗೆ ಹೋಗಿ ಅಲ್ಲಿಂದ ತಮ್ಮ ಹುಟ್ಟು ಕೋಣೆಗೆ ಪ್ರವೇಶಿಸಿದರು. ಅಲ್ಲಿ ಕುಳಿತು ಭಿಕ್ಷುಗಳಿಗೆ ತಮ್ಮ ಕೋಣೆಗಳಿಗೆ ಹೋಗಿ ನೆಲೆಸಿ ಎಂದು ಕೇಳಿಕೊಂಡರು. ಅವರೆಲ್ಲರೂ ಭಾರವಾದ ಹೃದಯದಿಂದ ಅಲ್ಲಿಂದ ಹೊರಟರು. ನಂತರ ಸಾರಿಪುತ್ತರಿಗೆ ಅತಿಯಾದ ನೋವು ಕಾಡಿ, ಬೇಧಿ ಆರಂಭವಾಯಿತು, ನಂತರ ತುಸು ಸುಧಾರಿಸಿಕೊಂಡರು. ತಾಯಿಗೂ ಸಹಾ ತನ್ನ ಮಗನ ಆರೋಗ್ಯ ಕೆಟ್ಟಿದೆ ಎಂದು ಭಾಸವಾಯಿತು.
ನಂತರ ಚತುಮಹಾರಾಜಿಕ ದೇವತೆಗಳಿಗೆ ಸಾರಿಪುತ್ತರ ಸ್ಥಿತಿಯು ಅರಿವಾಗಿ ಕೊನೆಯ ದರ್ಶನಕ್ಕಾಗಿ ಬಂದರು. ಹಾಗೆಯೇ ಅವರ ಶುಶ್ರೂಷೆ ಮಾಡಲು ಮುಂದಾದರು. ಆದರೆ ಸಾರಿಪುತ್ತರು ಇಲ್ಲಿ ಶುಶ್ರೂಷೆಗೆ ಶಿಷ್ಯನಿದ್ದಾನೆ ಎಂದು ತಿಳಿಸಿ, ಅವರಿಗೆ ಹೋಗಲು ಅನುಮತಿಯಿತ್ತರು.
ಅವರು ಹೋದನಂತರ, ದೇವತೆಗಳ ಒಡೆಯನಾದ ಸಕ್ಕ ಬಂದನು. ನಂತರ ಮಹಾಬ್ರಹ್ಮನು ಸಹಾ ಸಾರಿಪುತ್ತರ ದರ್ಶನಕ್ಕೆ ಹಾಗು ಸೇವೆಗೆ ಮುಂದಾದರು. ಆದರೆ ಸಾರಿಪುತ್ತರು ಪ್ರತಿಯೊಬ್ಬರಿಗೂ ಹಿಂದಿನಂತೆ ತಿಳಿಸಿ, ಅವರಿಗೆ ಹಿಂತಿರುಗಲು ಅನುಮತಿ ನೀಡಿದರು.
ಈ ಎಲ್ಲಾ ದೃಶ್ಯಗಳನ್ನು ಸಾರಿಪುತ್ತರ ತಾಯಿಯು ಗಮನಿಸಿದಳು. ನನ್ನ ಮಗನಿಗೆ ಸಂದಶರ್ಿಸಿ, ಬೀಳ್ಕೊಡುಗೆ ನೀಡುತ್ತಿರುವ ಈ ದಿವ್ಯ ಜೀವಿಗಳಾರು? ಎಂದು ಆಕೆಗೆ ಕುತೂಹಲವಾಯಿತು. ನಂತರ ಆಕೆಯು ಬಾಗಿಲಲ್ಲಿದ್ದ ಥೇರ ಚುಂದನನ್ನು ತನ್ನ ಮಗನ ಬಗ್ಗೆ ಕೇಳಿದಳು. ಆತನು ಆಕೆಯನ್ನು ಧಮ್ಮಸೇನಾನಿಯ ಬಳಿಗೆ ಕರೆದೊಯ್ದನು.
ಅಮ್ಮಾ ಈ ಅವೇಳೆಯಲ್ಲಿ ಇಲ್ಲಿ ಏತಕ್ಕಾಗಿ ಬಂದಿರುವೆ?
ಮಗು, ನಿನ್ನ ನೋಡಲೆಂದು. ಅದಿರಲಿ ನಿನ್ನನ್ನು ಮೊದಲು ನೋಡಲು ಇಂದು ರಾತ್ರಿ ಬಂದಿದ್ದವರ್ಯಾರು?
ನಾಲ್ಕು ಮಹಾದಿವ್ಯ ದೇವರಾಜರುಗಳು.
ಹಾಗಾದರೆ ನೀನು ಅವರಿಗಿಂತ ಶ್ರೇಷ್ಠನೇ?
ಓ! ಅವರು ಚೈತ್ಯದ (ದೇವಾಲಯದ) ಸೇವಕರಂತೆ, ನಮ್ಮ ಭಗವಾನರು ಹುಟ್ಟಿದಾಗಿನಿಂದ ಕೈಯಲ್ಲಿ ಕತ್ತಿಯನ್ನು ಹಿಡಿದು ಸದಾ ರಕ್ಷಿಸುತ್ತಿರುತ್ತಾರೆ.
ಹಾಗಾದರೆ ನಂತರ ಬಂದವರ್ಯಾರು?
ಓ ಅವರೇ ಸಕ್ಕ, ದೇವತೆಗಳ ಒಡೆಯ.
ಹಾಗಾದರೆ ನೀನು ಅವರಿಗಿಂತ ಶ್ರೇಷ್ಠನೇ?
ಓ ಅವರಂತು ಭಿಕ್ಖುವಿನ ಪರಿಕರಗಳನ್ನು ಹೊರುವ ಸಾಮಣೇರನಂತೆ; ನಮ್ಮ ಭಗವಾನರು ತಾವತಿಂಸ ದೇವಲೋಕದಿಂದ ಹಿಂತಿರುಗುವಾಗ, ಭಗವಾನರ ಚೀವರ ಹಾಗು ಪಿಂಡಪಾತ್ರೆಯನ್ನು ಆತನು ಕೈಯಲ್ಲಿಯೇ ಹಿಡಿದುಕೊಂಡು ಇಳಿದಿದ್ದನು.
ಹಾಗಾದರೆ ನಂತರ ಬಂದಂತಹ ಅತ್ಯಂತ ಪ್ರಕಾಶಮಾನರು ಯಾರು?
ಉಪಾಸಿಕಾ, ನೀನು ಆರಾಧಿಸುವಂತಹ ಮಹಾ ಬ್ರಹ್ಮನೇ ಆಗಿದ್ದಾನೆ.
ಏನು! ಹೌದೇ? ಹಾಗಾದರೆ ಮಗು ನೀನು ನನ್ನ ಆರಾಧ್ಯ ದೈವ ಮಹಾಬ್ರಹ್ಮನಿಗಿಂತಲೂ ಶ್ರೇಷ್ಠನೇ?
ಹೌದು ಉಪಾಸಿಕಾ, ಯಾವಾಗ ನಮ್ಮ ಭಗವಾನರು ಜನಿಸಿದರೋ ಆಗ ಮಹಾಬ್ರಹ್ಮರೇ ದಿವ್ಯವಾದ ಜಾಲದಲ್ಲಿ ಮೊದಲು ಸ್ವೀಕರಿಸಿದರು ಎಂದು ಹೇಳಲಾಗಿದೆ.
ಇದನ್ನು ಆಲಿಸಿದ ಬ್ರಾಹ್ಮಣಿಯು ಹೀಗೆ ಯೋಚಿಸಿದಳು: ನನ್ನ ಮಗನ ಬಲವು, ಸಾಮಥ್ರ್ಯವು ಹೀಗೆ ಇರಬೇಕಾದರೆ, ಇನ್ನೂ ಆತನ ಗುರುವಾದ ಭಗವಾನ್ ಬುದ್ಧರ ಸಾಮಥ್ರ್ಯವೂ, ದಿವ್ಯತೆಯು ಹೇಗಿರಬೇಕು?! ಎಂದು ಇದೇರೀತಿ ಚಿಂತನೆ ಮಾಡುತ್ತಾ ಆಕೆಯ ಇಡೀ ಶರೀರವೆಲ್ಲಾ ಆನಂದ ಹಾಗು ಸುಖದಿಂದ ಆವೃತವಾಯಿತು.
ಆಗ ಸಾರಿಪುತ್ತರು ಹೀಗೆ ಯೋಚಿಸಿದರು: ಈಕೆಯಲ್ಲಿ ಈಗ ಶ್ರದ್ಧೆಯು ಉದಯವಾಗಿದೆ. ಆಕೆಯ ಇಡೀ ಶರೀರವು ಆನಂದ ಹಾಗು ಸುಖದಿಂದ ಆವೃತವಾಗಿರುವುದರಿಂದ ಈಗ ಧಮ್ಮ ಬೋಧನೆಗೆ ಸಕಾಲವಾಗಿದೆ. ನಂತರ ಅವರು ಹೀಗೆ ಕೇಳಿದರು: ಏನು ಯೋಚಿಸುತ್ತಿರುವೆ ಉಪಾಸಿಕೆ?
ನನ್ನ ಮಗನ ಶೀಲವು ಹಾಗು ಸಾಮಥ್ರ್ಯವು ಹೀಗಿರಬೇಕಾದರೆ ಇನ್ನು ಆತನ ಗುರುಗಳ ಶೀಲವು ಹಾಗು ಸಾಮಥ್ರ್ಯವು ಹೇಗಿರಬೇಕು?
ಅಮ್ಮಾ ಆಲಿಸುವಂತಾಗು, ನಮ್ಮ ಭಗವಾನರ ಜನ್ಮ ಕಾಲದಲ್ಲಿ ಅವರ ಗೃಹತ್ಯಾಗದ ಕಾಲದಲ್ಲಿ, ಅವರ ಜ್ಞಾನೋದಯ ಕಾಲದಲ್ಲಿ ಮತ್ತು ಅವರ ಧಮ್ಮಚಕ್ರ ಪ್ರವಚನ ಕಾಲದಲ್ಲಿ ಹತ್ತು ಸಹಸ್ರ ಲೋಕಧಾತುಗಳು ಕಂಪಿಸಿವೆ, ನಡುಗಿವೆ. ಭಗವಾನರ ಶೀಲದಲ್ಲಾಗಲಿ, ಅವರ ಸಮಾಧಿಯಲ್ಲಾಗಲಿ, ಅವರ ಪ್ರಜ್ಞಾಶೀಲತೆಯಲ್ಲಾಗಲಿ, ಅವರ ವಿಮುಕ್ತಿಯಲ್ಲಾಗಲಿ ಮತ್ತು ಅವರ ವಿಮುಕ್ತಿ ಜ್ಞಾನ ದರ್ಶನದಲ್ಲಾಗಲಿ ಯಾರು ಸಹಾ ಸರಿಸಮಾನರಿಲ್ಲ.... ಅವರೇ ಸರ್ವ ಜೀವಿಗಳಿಗೂ ಪರಮಶ್ರೇಷ್ಠರಾಗಿದ್ದಾರೆ. ಭಗವಾನರು ಅರಹಂತರಾಗಿದ್ದಾರೆ, ಸಮ್ಯಕ್ಸಂಬುದ್ಧರು, ವಿದ್ಯಾಚರಣಸಂಪನ್ನರು, ಸುಗತರು, ಲೋಕವಿಧರು, ಅನುತ್ತರ ಪುರುಷದಮ್ಮ ಸಾರಥಿಯು, ದೇವತೆಗಳಿಗೆ ಹಾಗು ಮಾನವರಿಗೆ ಪರಮಶಾಸ್ತರು, ಬುದ್ಧರು ಹಾಗು ಭಗವಾನರಾಗಿದ್ದಾರೆ...
ಹೀಗೆ ತ್ರಿರತ್ನಗಳ ಬಗ್ಗೆ ಧಮ್ಮ ಪ್ರವಚನ ಮಾಡಿದರು. ಅವರ ಧಮ್ಮ ಪ್ರವಚನದ ಅಂತ್ಯಕ್ಕೆ ಬರುತ್ತಿದ್ದಂತೆಯೇ ಆಕೆಯು ಸೋತಾಪತ್ತಿ ಸ್ಥಿತಿಯ ಫಲದಲ್ಲಿ ಪ್ರತಿಷ್ಠಾಪಿತಳಾದಳು. ನಂತರ ಆಕೆಯು ಮಗನನ್ನು ಹೀಗೆ ಕೇಳಿದಳು: ಮಗು, ಉಪತಿಸ್ಸ, ಏಕೆ ಹೀಗೆ ಮಾಡಿದೆ, ಇಷ್ಟು ವರ್ಷಗಳ ತನಕ ಇಂತಹ ಅನುಪಮವಾದ ಅಮರತ್ವದ ಜ್ಞಾನವನ್ನು ನನಗೆ ಏಕೆ ನೀಡಲಿಲ್ಲ?
ಅಮ್ಮ ಇಂದೇ ಇದಕ್ಕೆ ಸಕಾಲವಾಗಿತ್ತು, ಇರಲಿ, ಇನ್ನೂ ಮಾಡಬೇಕಾದ್ದು ಬಹಳವಿದೆ. ಅಮ್ಮಾ ನೀನು ಹೊರಡುವಂತಾಗು. ಆಕೆಯು ಭಕ್ತಿಯಿಂದ ವಂದಿಸಿ ನಿರ್ಗಮಿಸಿದಳು.
ಸಾರಿಪುತ್ತರಿಗೆ ತನ್ನ ಮಾತೃ ಋಣವನ್ನು ತೀರಿಸಿದಂತಹ ಸಂತೃಪ್ತಿಯಾಯಿತು.

9.7 ಧಮ್ಮಸೇನಾನಿಯ ಮಹಾಪರಿನಿಬ್ಬಾಣ

ಸಾರಿಪುತ್ತರು ಚುಂದನಿಗೆ ಈಗ ವೇಳೆ ಎಷ್ಟು? ಎಂದು ಕೇಳಿದರು.
ಭಂತೆ, ಬೆಳಗಿನ ಜಾವವು ಸಮೀಪಿಸುತ್ತಿದೆ.
ಭಿಕ್ಷು ಸಂಘದ ಸಭೆ ಸೇರಿಸು.
ಆಗಲಿ ಭಂತೆ ಎಂದು ನುಡಿದು ಚುಂದನು ಅಲ್ಲಿಂದ ಹೊರಟನು.
ಅಲ್ಲಿಯೇ ಭಿಕ್ಷುಗಳು ಸಭೆ ಸೇರಿದರು. ಅನಾರೋಗ್ಯದಿಂದಿದ್ದ ಸಾರಿಪುತ್ತರು ಚುಂದನಿಗೆ ಹೇಳಿದರು: ಚುಂದ, ನನಗೆ ಸರಿಯಾಗಿ ಕುಳ್ಳರಿಸುವಂತಾಗು. ಚುಂದ ಹಾಗೆಯೇ ಮಾಡಿದನು. ನಂತರ ಸಾರಿಪುತ್ತರು ಭಿಕ್ಷು ಸಂಘಕ್ಕೆ ಹೀಗೆ ಹೀಗೆ ಹೇಳಿದರು: ಓಹ್ ಭಿಕ್ಷು ಬಾಂಧವರೇ, ನಿಮ್ಮೊಂದಿಗೆ ನಾನು 44 ವರ್ಷ ಕಳೆದಿಹೆನು. ವಾಚಾದಲ್ಲಾಗಲಿ ಅಥವಾ ಕ್ರಿಯೆಯಿಂದಾಗಲಿ ನಿಮ್ಮೊಂದಿಗೆ ಅಪ್ರಿಯವಾಗಿ ನಡೆದುಕೊಂಡಿದ್ದರೆ ನನನ್ನು ಕ್ಷಮಿಸಿ.
ಅದನ್ನು ಆಲಿಸಿದಂತಹ ಭಿಕ್ಷುಗಳು ಹೀಗೆ ನುಡಿದರು: ಪೂಜ್ಯ ಭಂತೆಯವರೇ, ನೀವು ನಮಗೆ ಎಳ್ಳಷ್ಟು ಅಪ್ರಿಯ ವರ್ತನೆ ಮಾಡಿಲ್ಲ ಹಾಗು ನುಡಿದಿಲ್ಲ. ನಾವು ನಿಮ್ಮೊಂದಿಗೆ ನೆರಳಿನಂತೆ ಇದ್ದೆವು, ನಮ್ಮಿಂದ ಹೇರಳವಾದ ತಪ್ಪುಗಳು ನಡೆದಿರುತ್ತವೆ, ಇದಕ್ಕಾಗಿ ನೀವೇ ನಮ್ಮನ್ನು ಕ್ಷಮಿಸಬೇಕು.
ಮೌನವಾಗಿ ಸಮ್ಮತಿಸಿದ ಸಾರಿಪುತ್ತರು ಎಲ್ಲರನ್ನು ಮೈತ್ರಿಭಾವದಿಂದ ವೀಕ್ಷಿಸಿದರು. ನಂತರ ವಿಶಾಲವಾದ ಚೀವರವನ್ನು ತಮ್ಮ ಸುತ್ತಲು ಸರಿಯಾಗಿ ಧರಿಸಿಕೊಂಡರು. ಬಲಗಡೆ ಸಿಂಹಶಯ್ಯಾಸನದಲ್ಲಿ ಮಲಗಿದರು. ನಂತರ ಮುಂದೆ ಭಗವಾನರು ಮಹಾಪರಿನಿಬ್ಬಾಣವನ್ನು ಪಡೆಯುವಂತಹ ರೀತಿಯಲ್ಲೇ ಅವರು ಒಂದರ ನಂತರ ಒಂಭತ್ತು ಸಮಾಪತ್ತಿಗಳಲ್ಲಿ ಏರಿದರು. ನಂತರ ಪುನಃ ಇಳಿಕೆ ಕ್ರಮದಲ್ಲಿ ಪ್ರಥಮ ಸಮಾಧಿಗೆ ಮರಳಿದರು. ನಂತರ ಪುನಃ ಪ್ರಥಮ ಸಮಾಧಿಯಿಂದ ಚತುರ್ಥ ಸಮಾಧಿಯವರೆಗೂ ಏರಿಕೆ ಕ್ರಮದಲ್ಲಿ ಸಮಾಧಿ ಸ್ಥಿತಿಯೇರಿದರು. ಅವರು ಚತುರ್ಥ ಸಮಾಧಿಯನ್ನು ಪ್ರವೇಶಿಸಿದಾಗ ಅದೇವೇಳೆ ಸೂರ್ಯನು ಉದಯಿಸತೊಡಗಿದನು. ಅದೇ ಕ್ಷಣದಲ್ಲಿ ಸಾರಿಪುತ್ತರು ಶೇಷರಹಿತ ನಿಬ್ಬಾಣಧಾತುವಿನಲ್ಲಿ ನೆಲೆಸಿದರು. ಅವರು ಪರಿನಿಬ್ಬಾಣವನ್ನು ಹೀಗೆ ಪಡೆದರು.
(ಅದು ಕಾತರ್ಿಕ ಮಾಸದ ಹುಣ್ಣಿಮೆಯಾಗಿತ್ತು. ಆದ್ದರಿಂದ ಕಾತರ್ಿಕ ಹುಣ್ಣಿಮೆಯನ್ನು ಸಾರಿಪುತ್ತರ ನೆನಪಿನಿಂದಾಗಿ ಆಚರಿಸಲಾಗುತ್ತಿದೆ. ಅದು ಸಾಮಾನ್ಯವಾಗಿ ಅಕ್ಟೋಬರ್ ಅಥವಾ ನವೆಂಬರ್ ಮಾಸದ ಹುಣ್ಣಿಮೆಯಂದು ಬರುವುದು.)
9.8 ಪರಿನಿಬ್ಬಾಣದ ನಂತರ:
ಇತ್ತ ಬ್ರಾಹ್ಮಣ ಸ್ತ್ರೀಯು ತನ್ನ ಕೋಣೆಯಲ್ಲಿ ಹೀಗೆ ಚಿಂತನೆ ಮಾಡತೊಡಗಿದಳು: ನನ್ನ ಮಗನು ಈಗ ಹೇಗಿದ್ದಾನೆ? ನನ್ನ ಬಗ್ಗೆಯೇ ಅತನು ಏನನ್ನೂ ಹೇಳಲಿಲ್ಲ? ನಂತರ ಆಕೆಯು ಎದ್ದು ಸಾರಿಪುತ್ತರ ಕೋಣೆಯನ್ನು ಪ್ರವೇಶಿಸಿದಳು ಆಕೆಯಲ್ಲಿ ವಾತ್ಸಲ್ಯಮಿಶ್ರಿತ ಭಕ್ತಿಯು ಆವರಿಸಿತು. ಆಕೆಯು ಸಾರಿಪುತ್ತರ ಕಾಲುಗಳನ್ನು ಒತ್ತಿದಳು. ನಂತರ ಆಕೆಗೆ ಸಾರಿಪುತ್ತರು ಇನ್ನಿಲ್ಲವೆಂದು ಅರಿವಾಯಿತು. ಆ ಪಾದಗಳ ಅಡಿಯಲ್ಲೇ ಆಕೆಯು ಕುಸಿದಳು. ಗಟ್ಟಿಯಾಗಿ ಪ್ರಲಾಪಿಸಿದಳು: ಓ ಮಗನೇ, ಇದಕ್ಕೆ ಮುಂಚೆ ಕಡೇಪಕ್ಷ ನಿನ್ನ ಶೀಲದ ಬಗ್ಗೆಯು ಅರಿಯದೆ ಹೋದೆ, ಹೀಗಾಗಿಯೇ ನೂರಾರು ಭಿಕ್ಷುಗಳಿಗೆ ದಾನ ಮಾಡುವ ಹಾಗು ಹಾಗೆ ಮಾಡಿ ಮಹಾಭಾಗ್ಯ ಪಡೆಯುವ ಅವಕಾಶವನ್ನು ಕಳೆದುಕೊಂಡೆನು. ವಿಹಾರಗಳನ್ನು ಸಹಾ ಕಟ್ಟಿಸದೆ ಹೋದೆನು ಎಂದು ಕೆಲವು ಸಮಯ ಪ್ರಲಾಪಿಸಿದಳು.
ನಂತರ ಆಕೆಯು ತನ್ನ ಕರ್ತವ್ಯಗಳನ್ನು ನೆನೆದು ಮಹಾ ಅಕ್ಕಸಾಲಿಗರಿಗೆ ಕರೆಯಿಸಿದಳು. ಅವರೊಂದಿಗೆ ಆಕೆಯು ತನ್ನೆಲ್ಲ ಐಶ್ವರ್ಯ ಇದ್ದಂತಹ ನಿಧಿ ಕೋಣೆಗೆ ಹೋಗಿ ಬೃಹತ್ ಪಾತ್ರೆಗಳಲ್ಲಿದ್ದ ಚಿನ್ನವೆಲ್ಲವನ್ನು ತೂಕ ಹಾಕಿಸಿದಳು. ಹಾಗು ಶವ ಸಂಸ್ಕಾರಕ್ಕೆ ಶೀಘ್ರವಾಗಿ ಚಿನ್ನದ ಆಭರಣಗಳನ್ನು ಸಿದ್ಧಪಡಿಸಿದಳು. ಸ್ತಂಭಗಳನ್ನು ಹಾಗು ಕಮಾನುಗಳನ್ನು ನಿಲ್ಲಿಸಿದರು. ಆ ಹಳ್ಳಿಯ ಮಧ್ಯಭಾಗದಲ್ಲಿ ಭವ್ಯ ಮಂಟಪವನ್ನು ನಿಮರ್ಿಸಿದಳು. ಆ ಭವ್ಯ ಮಂಟಪದ ಮಧ್ಯದಲ್ಲಿ ಚಂದಾಯದ ಆಕೃತಿಯನ್ನು (ತ್ರಿಕೋನ) ನಿಲ್ಲಿಸಿದರು. ಅದರ ಸುತ್ತಲು ಎತ್ತರದ ಸ್ವರ್ಣದ ಸ್ತಂಭಗಳನ್ನು ಹಾಗು ಕಮಾನುಗಳನ್ನು ನಿಮರ್ಿಸಿ, ನಂತರ ಪವಿತ್ರ ಸಮಾರಂಭವನ್ನು ಆರಂಭಿಸಿದರು. ಆ ಸಮಾರಂಭದಲ್ಲಿ ಮಾನವರಷ್ಟೇ ಅಲ್ಲದೆ ದೇವೆತೆಗಳು ಸಹಾ ಸೇರಿದ್ದರು.
ಅಂತಿಮ ದರ್ಶನದ ಈ ಸಮಾವೇಶವು ಇಡೀ ವಾರದಕಾಲ ನಡೆಯಿತು. ಶ್ರೀಗಂಧವಷ್ಟೇ ಅಲ್ಲದೆ ಇನ್ನಿತರ ಸುಗಂಧಮಯ ಕಟ್ಟಿಗೆಗಳನ್ನು ಬಳಸಿ, ಸಾರಿಪುತ್ತರ ಶರೀರದ ಸುತ್ತಲು ಗಂಧ, ಶ್ರೀಗಂಧ, ರಕ್ತಚಂದನ ಇತ್ಯಾದಿ ಸುಗಂಧಿತ ಮರದ ತುಂಡುಗಳು ಹಾಗು ಸುವಾಸನೆಭರಿತ ಬೇರು ತುಂಡುಗಳನ್ನು ಇಟ್ಟು, ಅಗ್ನಿಸ್ಪರ್ಶ ಆರಂಭಿಸಿದರು. ಇಡೀರಾತ್ರಿ ಈ ಸಮಾರಂಭ ನಡೆಯಿತು. ಧಮ್ಮಪ್ರವಚನಗಳು ಸಹಾ ನಡೆದವು. ನಂತರ ಪೂಜ್ಯ ಅನುರುದ್ಧ ಥೇರರು ಸುಗಂಧಮಯ ಜಲದಿಂದ ಆ ಜ್ವಾಲೆಗಳನ್ನು ಆರಿಸಿದರು. ನಂತರ ಪೂಜ್ಯ ಚುಂದರವರು ಆ ಅವಶೇಷಗಳನ್ನು ಒಗ್ಗೂಡಿಸಿ ಶುದ್ಧಿಕರಿಸುವ ವಸ್ತ್ರದಲ್ಲಿಟ್ಟರು.
ಆಗ ಚುಂದರವರು ಹೀಗೆ ಯೋಚಿಸಿದರು: ನಾನಿನ್ನು ನಿಧಾನ ಮಾಡಲಾರೆ, ಮಹಾ ಧಮ್ಮಸೇನಾನಿಯು ಮಹಾಪರಿನಿಬ್ಬಾಣ ಹೊಂದಿದ ಸುದ್ದಿಯನ್ನು ನಾನು ಕೂಡಲೇ ಭಗವಾನರಿಗೆ ತಿಳಿಸುವೆನು ಎಂದು ನಿರ್ಧರಿಸಿ ಅವರು ಸೋಸುವ ವಸ್ತ್ರದಲ್ಲಿದ್ದ ಅವಶೇಷ ಮತ್ತು ಸಾರಿಪುತ್ತರ ಚೀವರ ಹಾಗು ಪಿಂಡಪಾತ್ರೆ ತೆಗೆದುಕೊಂಡು ಶ್ರಾವಸ್ತಿಯೆಡೆಗೆ ಹೊರಟರು. ಪ್ರತಿ ಹಂತದಲ್ಲೂ ರಾತ್ರಿ ಮಾತ್ರ ನಿದ್ದೆಗೆ ಉಳಿಯುತ್ತಿದ್ದರು, ಮಿಕ್ಕೆಲ್ಲಾ ಸಮಯ ಕೇವಲ ಪ್ರಯಾಣವೇ ಆಗಿತ್ತು.
9.9 ಚುಂದಸುತ್ತ (ಸಂಕ್ಷಿಪ್ತವಾಗಿ):
ಆಗ ಭಗವಾನರು ಶ್ರಾವಸ್ತಿಯಲ್ಲಿನ ಜೇತವನದ ಅನಾಥಪಿಂಡಿಕಾರಾಮದಲ್ಲಿದ್ದರು. ಅಲ್ಲಿಗೆ ಚುಂದನು ಸಾರಿಪುತ್ತರ ಚೀವರ, ಪಿಂಡಪಾತ್ರೆ ಹಾಗು ಅಸ್ಥಿ ಅವಶೇಷಗಳೊಂದಿಗೆ ಆವೃತವಾಗಿದ್ದ ಸೂಸುವ ವಸ್ತ್ರಗಳೊಂದಿಗೆ ಮೊದಲು ಆನಂದವರಿಗೆ ನಮಸ್ಕರಿಸಿ ಭೇಟಿಮಾಡಿ ಹೀಗೆ ನುಡಿದರು: ಭಂತೆ, ಪೂಜ್ಯ ಸಾರಿಪುತ್ತರು ಇನ್ನಿಲ್ಲ, ಅವರು ಪರಿನಿಬ್ಬಾಣ ಪಡೆದರು. ಇವು ಅವರ ಪಿಂಡಪಾತ್ರೆ ಹಾಗು ಚೀವರ.
ಆಗ ಆನಂದರವರು ಆತನನ್ನು ಭಗವಾನರೆಡೆಗೆ ಕರೆದೊಯ್ದರು. ಅಲ್ಲಿ ಅವರು ಭಗವಾನರಿಗೆ ವಿಷಯವೆಲ್ಲಾ ತಿಳಿಸಿದರು. ಭಗವಾನ್, ಈ ವಿಷಯ ಕೇಳಿ ನನ್ನ ಶರೀರವು ಬಳ್ಳಿಯಂತೆ ದುರ್ಬಲವಾಯಿತು. ನನ್ನ ಸುತ್ತಲಿನ ಎಲ್ಲವೂ ಮಂಜಾಯಿತು ಹಾಗು ವಸ್ತುಗಳು ಸ್ಪಷ್ಟವಾಗಿ ಗೋಚರಿಸದೆ ಹೋಯಿತು.
ಆಗ ಭಗವಾನರು ಆನಂದರಿಗೆ ಹೀಗೆ ಸಮಾಧಾನಿಸಿದರು: ಆನಂದ, ಎಲ್ಲವೂ ನಮ್ಮಿಂದ ವಿಯೋಗ ಹೊಂದುವಂತಹವೇ, ಇದು ಹೇಗೆ ಆನಂದ, ಸಾರಿಪುತ್ತರು ಪರಿನಿಬ್ಬಾಣದ ನಂತರ ನಿನ್ನ ಪಾಲಿನ ಶೀಲವಾಗಲಿ, ಸಮಾಧಿಯಾಗಲಿ, ಪ್ರಜ್ಞಾವಾಗಲಿ, ವಿಮುಕ್ತಿಯಾಗಲಿ ಅಥವಾ ಜ್ಞಾನವನ್ನಾಗಲಿ ತೆಗೆದುಕೊಂಡು ಹೋದರೆ?
ಇಲ್ಲ ಭಗವಾನ್, ಹಾಗೇನು ಇಲ್ಲ. ಆದರೆ ಪೂಜ್ಯ ಸಾರಿಪುತ್ತರು ನನ್ನ ಗುರುಗಳು, ಶಾಸ್ತರು, ನಿದರ್ೆಶಕರು, ಪ್ರೇರಣಶಕ್ತಿಯು, ಸ್ಫೂತರ್ಿದಾಯಕರು, ಧಮ್ಮದಾಯಕರು ಸಹ ಭಿಕ್ಷುಗಳಿಗೆ ಅಪಾರ ಸಹಾಯ ಮಾಡಿದವರು. ಅವರ ಧಮ್ಮ ಬೋಧನೆಯು ಎಷ್ಟೊಂದು ಶಕ್ತಿದಾಯಕವೂ, ಆನಂದದಾಯಕವೂ ಹಾಗು ಸಹಾಯಕವು ಎಂದು ನಾವು ಸ್ಮರಿಸುತ್ತೇವೆ.
ಆನಂದ, ನಾನು ಈಗಾಗಲೇ ಕ್ಷಣಿಕತ್ವವನ್ನು ಬೋಧಿಸಿದ್ದೇನೆ. ಎಲ್ಲಾ (ವ್ಯಕ್ತಿಗಳು, ವಸ್ತುಗಳು) ವಿಷಯಗಳು ನಮ್ಮಿಂದ ಬೇರ್ಪಡುವುದು ಸಹಜ ಹಾಗು ನಿತ್ಯಧರ್ಮವಾಗಿದೆ. ಯಾವುದೆಲ್ಲವೂ ಉದಯಿಸುವುದೋ (ಹುಟ್ಟುವುದೋ) ಅವೆಲ್ಲವೂ ಅಳಿದುಹೋಗುವುದು. ವಿಯೋಗವಾಗದಿರಲಿ ಎಂದು ಹೇಳಿದರೆ ಅವೆಲ್ಲಾ ಹೇಗೆ ಸಾಧ್ಯ! ಬೃಹತ್ ವೃಕ್ಷಗಳೇ ಮುರಿದುಹೋಗುವುವು. ಅದೇರೀತಿಯಾಗಿ ಈ ಬೃಹತ್ ಭಿಕ್ಖು ಸಮೂಹದಿಂದ ಸಾರಿಪುತ್ತರವರು ವಿಯೋಗ ಹೊಂದಿರುವರು. ನಿಜವಾಗಿಯೂ ಆನಂದ ಯಾವುದೆಲ್ಲವೂ ಜನಿಸುವುದೋ, ಅಸ್ತಿತ್ವಕ್ಕೆ ಬರುವುದೋ ಅವೆಲ್ಲವೂ ವಿಯೋಗ ಧಮ್ಮವನ್ನು ಹೊಂದಿರುತ್ತವೆ. ಅವೆಲ್ಲವನ್ನು ವಿಯೋಗವಾಗಬಾರದೆಂದರೆ ಹೇಗೆ ಸಾಧ್ಯ! ಹಾಗೆಲ್ಲಾ ಆಗುವುದು ಸಾಧ್ಯವಿಲ್ಲ.. ಆದ್ದರಿಂದ ಆನಂದ, ನಿನಗೆ ನೀನೇ ದ್ವೀಪವಾಗಿ ನಿನ್ನನ್ನೇ ಶರಣು (ಅವಲಂಬನೆ) ಮಾಡಿಕೊ. ಧಮ್ಮ(ಜ್ಞಾನ)ವನ್ನೇ ನಿನ್ನ ದ್ವೀಪವೆನ್ನಿಸಿ (ಆಶ್ರಯತಾಣ) ಬೇರ್ಯಾವ ಶರಣು  (ಆಶ್ರಯ) ಬೇಡ.

9.10 ಭಗವಾನರ ಕೊನೆಯ ಪ್ರಶಂಸೆ:

ಭಗವಾನರು ಸೂಸಿದ ವಸ್ತ್ರದಲ್ಲಿದ್ದ ಸಾರಿಪುತ್ತರ ಅಸ್ಥಿಅವಶೇಷ ತೆಗೆದುಕೊಂಡರು ಹಾಗು ಭಿಕ್ಷುಗಳೊಂದಿಗೆ ಹೀಗೆ ನುಡಿದರು:
ಓ ಭಿಕ್ಷುಗಳೇ, ಈ ಶಂಕುವಿನ ವರ್ಣದ ಅಸ್ಥಿಅವಶೇಷಗಳು, ನನ್ನಲ್ಲಿ ಪರಿನಿಬ್ಬಾಣಕ್ಕಾಗಿ ಅನುಮತಿ ಕೋರಿಕೊಂಡಂತಹ ಸಾರಿಪುತ್ತನದು. ಈ ಸಾರಿಪುತ್ತನು ಒಂದು ಅಸಂಖ್ಯೆಯ ಹಾಗು ಲಕ್ಷ ಕಲ್ಪಗಳವರೆಗೆ ಹತ್ತು ಪಾರಮಿಗಳನ್ನು ಪರಿಪೂರ್ಣಗೊಳಿಸಿದವನು. ಇದು ಅಂತಹ ಮಹಾನ್ ಭಿಕ್ಖುವಿನದು. ನನ್ನಿಂದ ಪ್ರಥಮವಾಗಿ ಚಾಲಿತವಾದ ಧಮ್ಮಚಕ್ರವನ್ನು ನಂತರ ಚಾಲನೆ ಮಾಡಿದ ಭಿಕ್ಷುವಿನದು. ಈತನು ನನ್ನ ಅನಂತರ ಅಗ್ರಪೀಠಕ್ಕೆ ಅತ್ಯಂತ ಅರ್ಹನಾದ ಮಹಾಭಿಕ್ಷುವು. ಇಡೀ ಲಕ್ಷಾಂತರ ಲೋಕಗಳಲ್ಲಿ ನನ್ನ ಹೊರತು ಯಾರೂ ಸಹಾ ಈತನ ಜ್ಞಾನಕ್ಕೆ ಸಮವಾಗಲಾರರು, ಸಾರಿಸಾಟಿಯಾಗಲಾರರು. ಅಂತಹ ಮಹೋನ್ನತ ಜ್ಞಾನ ಹೊಂದಿದ ಭಿಕ್ಖುವಾಗಿದ್ದನು. ಸಾರಿಪುತ್ತನು ಅಂತಹ ವಿಸ್ತಾರಪ್ರಾಜ್ಞತೆ, ಹೊಳಪುಳ್ಳ ಜ್ಞಾನ ಪ್ರಕಾಶತೆ, ಕ್ಷಿಪ್ರ ಪ್ರಜ್ಞಾಶೀಲತೆ, ಹರಿತವಾದ ಬುದ್ಧಮತ್ತತೆ ಹೊಂದಿದಂತಹ ಭಿಕ್ಷುವಾಗಿದ್ದರು. ಅತ್ಯಲ್ಪ ಕೋರಿಕೆಗಳನ್ನು ಉಳ್ಳಂತಹ ಸಂತೃಪ್ತವಾದಂತಹ, ಏಕಾಂತಪ್ರಿಯ. ಜೊತೆಗಳಲ್ಲಿ ಆನಂದಿಸದ, ಉತ್ಸಾಹಪೂರಿತ ಪರಿಶ್ರಮಿ. ಸಹಭಿಕ್ಷುಗಳಲ್ಲಿ ಸುಚಾಲನೆ ನೀಡುವಂತಹ, ಪಾಪಪರಿತ್ಯಜಿತ ಭಿಕ್ಖುವು ಇನ್ನೋರ್ವನಿಲ್ಲ. ಹಿಂದಿನ 500 ಜನ್ಮಗಳ ಪುಣ್ಯದಿಂದಾ, ಅಪಾರ ಐಶ್ವರ್ಯವಂತರಾಗಿದ್ದರು ಅದನ್ನೆಲ್ಲಾ ತ್ಯಜಿಸಿ ಗೃಹರಹಿತನಾದವನು (ಭಿಕ್ಖುವಾದವ). ನನ್ನ ಶಾಸನದಲ್ಲಿ ಪೃಥ್ವಿಯಂತಹ ಕ್ಷಮಾಶೀಲನು ಇದ್ದಿದ್ದರೆ ಅದು ಸಾರಿಪುತ್ತನೇ ಆಗಿದ್ದಾನೆ. ಕೊಂಬಿಲ್ಲದ ಹೋರಿಯಂತೆ ಯಾರಿಗೂ ತೊಂದರೆ ನೀಡದವನು. ಬಾಲಕನಂತೆ ಅತಿ ವಿಧೇಯನು, ವಿನಮ್ರನು ಆಗಿದ್ದಂತಹವನು.
ನೋಡಿ ಭಿಕ್ಷುಗಳೇ, ಈ ಅವಶೇಷಗಳು ಅಂತಹ ಮಹಾನ್ ಪ್ರಜ್ಞಾಶೀಲ, ವಿಶಾಲದೃಷ್ಟಿ ಹೊಂದಿರುವಂತಹವನ, ಪ್ರಕಾಶಮಾನವಾದ ಅರಿವುಳ್ಳವರನು, ಕ್ಷಿಪ್ರಮತಿಯು, ಹರಿತವಾದ ಮೇಧಾಶಕ್ತಿಯುಳ್ಳವನು ಮತ್ತು ಭೇದಕ ವಿಶ್ಲೇಷಣಾ ಪ್ರಾಜ್ಞನದು ಆಗಿದೆ. ಅತ್ಯಂತ ಅಲ್ಪ ಕೋರಿಕೆಯುಳ್ಳ, ಸಂತೃಪ್ತನ, ಏಕಾಂತದಲ್ಲೇ ಲೀನನಾದವನ, ಜೊತೆಗಳಲ್ಲಿ ಆನಂದಿಸದವನ, ಅಪಾರ ಯತ್ನಶಾಲಿಯಾದಂತಹವನ ಈ ಅವಶೇಷಗಳನ್ನು ನೋಡಿ, ಅವರು ಸದಾ ಸಹವತರ್ಿಗಳಿಗೆ ಪ್ರೇರಕನು ಹಾಗು ಪಾಪವಜ್ರ್ಯನೂ ಆಗಿದ್ದಂತಹವನು ಎಂದು ನುಡಿದ ಭಗವಾನರು ಗಾಥೆಗಳಲ್ಲಿ ಹೀಗೆ ನುಡಿದರು:
ಯಾರು 500 ಜನ್ಮಗಳಲ್ಲಿ ಗೃಹತೊರೆದು
ಅನಗಾರಿಕನಾಗಿ, ಸುಖಗಳನ್ನು ಪರಿತ್ಯಜಿಸಿ
ಭಾವೋದ್ರೇಕರಹಿತನೋ, ಇಂದ್ರಿಯ ನಿಯಂತ್ರಿತನೋ
ಅಂತಹ ನಿಬ್ಬಾಣ ಪಡೆದ ಸಾರಿಪುತ್ತನಿಗೆ ಈಗ ನಮಿಸಿ!
ಯಾರ ಕ್ಷಮೆಯು ಪೃಥ್ವಿಯಂತಹುದ್ದೋ
ಯಾರು ಚಿತ್ತವನ್ನು ಪೂರ್ಣವಾಗಿ ಪ್ರಭುತ್ವಗಳಿಸಿದ್ದವರೋ
ಅಂತಹ ಕರುಣಾಕರ, ಪ್ರಶಾಂತ, ಶೀತಲ
ಹಾಗೆಯೇ ಮಹಾಪೃಥ್ವಿಯಂತಹ ದೃಢನಾಗಿದ್ದ
ಅಂತಹ ನಿಬ್ಬಾಣ ಪಡೆದ ಸಾರಿಪುತ್ತನಿಗೆ ಈಗ ನಮಿಸಿ.
ಬಾಲಕನಂತೆ ವಿನಮ್ರನೂ, ನಗರಗಳಲ್ಲಿ
ನಿಧಾನವಾಗಿ ದೃಢವಾಗಿ ನೇರವಾಗಿ ನಡೆಯುವಂತಹವನು
ಆಹಾರಕ್ಕಾಗಿ ಮನೆಯಿಂದ ಮನೆಗೆ ನಡೆಯುವವನು
ಅಂತಹ ನಿಬ್ಬಾಣ ಪಡೆದ ಸಾರಿಪುತ್ತನಿಗೆ ಈಗ ನಮಿಸಿ.
ನಗರದಲ್ಲಿಯಾಗಲಿ, ಕಾನನದಲ್ಲಿಯಾಗಲಿ
ಯಾರಿಗೂ ನೋಯಿಸದ, ಕೊಂಬಿಲ್ಲದ ಅಹಿಂಸಕ ವೃಷಭನು
ಅಂತಹ ಸ್ವಪ್ರಭುತನೂ ಸಾರಿಪುತ್ತನು;
ನಿಬ್ಬಾಣ ಪಡೆದ ಅಂತಹ ಸಾರಿಪುತ್ತರಿಗೆ ಈಗ ನಮಿಸಿ.

Monday 11 November 2019

ಬುದ್ಧ ಭಗವಾನರ ಜೀವನದಲ್ಲಿ ಕಾತರ್ಿಕ ಹುಣ್ಣಿಮೆಯ ವೈಶಿಷ್ಟತೆಗಳು the importance of november full moon day

ಬುದ್ಧ ಭಗವಾನರ ಜೀವನದಲ್ಲಿ ಕಾತರ್ಿಕ ಹುಣ್ಣಿಮೆಯ ವೈಶಿಷ್ಟತೆಗಳು


1. ಇಂದು ಮೆತ್ತಯ್ಯ ಬೋಧಿಸತ್ವರಿಂದ ಚೀವರವನ್ನು ಪಡೆದು ಇವರು ಭವಿಷ್ಯದ ಬುದ್ದನೆಂದು ಭಗವಾನರು ಘೋಷಿಸಿದಂತಹ ದಿನವಾಗಿದೆ.

2. ಇಂದು ಮೊದಲ ಅರವತ್ತು ಅರಹಂತರಿಗೆ ಬಹುಜನ ಹಿತಕ್ಕಾಗಿ ಬಹುಜನ ಸುಖಕ್ಕಾಗಿ ದೇವತೆಗಳ ಹಾಗೂ ಮಾನವರ ಕಲ್ಯಾಣಕ್ಕಾಗಿ ಧಮ್ಮವನ್ನು ಬೋಧಿಸಲು ಅನುಮತಿ ನೀಡಿದ ದಿನವಾಗಿದೆ.

3. ಇಂದು ಭಗವಾನರ ಅಗ್ರ ಶ್ರಾವಕರಾದ ಸಾರಿಪುತ್ತರವರು ಮಹಾಪರಿನಿಬ್ಬಾಣವನ್ನು ಪಡೆದಂತಹ ದಿನವಾಗಿದೆ.

4. ಇಂದು ಜಟಿಲ ಸೋದರರು ಸಂಘಕ್ಕೆ ಸೇರಿದ ದಿನವಾಗಿದೆ


5. ಇಂದು ಶ್ರೀಲಂಕದಲ್ಲಿ ರಾಜನಾಗಿದ್ದಂತಹ ದೇವಾನಾಂಪಿಯ ತಿಸ್ಸರವರು ಮೊದಲ ದಗೊಬ ಥುಪರಮ ಚೇತಿಯ(ಅದರಲ್ಲಿ ಭಗವಾನರ ಬಲ ದವಡೆಯ ಅಸ್ತಿಯಿದೆ) ಸ್ಥಾಪಿಸಿದಂತಹ ದಿನವಾಗಿದೆ.

Tuesday 5 November 2019

ಅತಿಯಾಚನೆ ಕೂಡದು


 ಅತಿಯಾಚನೆ ಕೂಡದು


ಬಹುಕಾಲದ ಹಿಂದೆ ಬೋಧಿಸತ್ವರು ವಾರಾಣಸಿಯಲ್ಲಿ ಬ್ರಾಹ್ಮಣನ ಮನೆಯಲ್ಲಿ ಹುಟ್ಟಿದರು. ಕೆಲವರ್ಷಗಳ ನಂತರ ಅವರಿಗೆ ಒಬ್ಬ ತಮ್ಮನು ಹುಟ್ಟಿದನು. ಈ ಅಣ್ಣ-ತಮ್ಮಂದಿರು ಹಿರಿಯರಾದ ಮೇಲೆ ತಂದೆ-ತಾಯಿಯರು ಮೃತರಾಗಿದ್ದರಿಂದಲೇ ಅವರು ಪಬ್ಬಜ್ಜ ಪಡೆದು ಗಂಗಾ ತೀರದಲ್ಲಿ ಒಂದೊಂದು ದಡದಲ್ಲಿ ಪ್ರತ್ಯೇಕವಾಗಿ ವಾಸಿಸಲಾರಂಭಿಸಿದರು.
ಅವರ ತಮ್ಮ ವಾಸಿಸುತ್ತಿದ್ದ ದಡದಲ್ಲಿ ಒಮ್ಮೆ ಮಣಿಕಂಠನೆಂಬ ದಿವ್ಯ ನಾಗರಾಜನು ಬ್ರಹ್ಮಚಾರಿಯ ವೇಷದಲ್ಲಿ ಬಂದು ಅವರ ತಮ್ಮನ (ಕಿರಿಯ ತಪಸ್ವಿ) ಬಳಿಗೆ ಬಂದು ಸ್ನೇಹ ಬೆಳೆಸಿದನು. ಕಾಲನಂತರ ಸ್ನೇಹವು ಗಾಢವಾದ ಮೇಲೆ ನಾಗರಾಜ ತನ್ನ ನಿಜಸ್ಥಿತಿ ತಿಳಿಸಿ ನಾಗರೂಪವನ್ನು ತೋರಿಸಿದನು. ಅಷ್ಟೇ ಅಲ್ಲ, ಸಖ್ಯಭಾವದಿಂದ ಕಿರಿಯ ತಪಸ್ವಿಯ ದೇಹಕ್ಕೆ ಸುತ್ತಿಕೊಂಡು ವಿರಮಿಸುತ್ತಿದ್ದನು. ಕಿರಿಯ ತಪಸ್ವಿಗೆ ಮೊದಲಿನಿಂದಲೂ ನಾಗಗಳು ಕಂಡರೆ ಭಯವಿತ್ತು. ಈಗ ಮಣಿಕಂಠನು ನಾಗರೂಪದಲ್ಲಿ ಬಂದು ಈ ರೀತಿ ದೇಹ ಸುತ್ತುವುದರಿಂದ ಆತನು ಭಯದಿಂದ ಕೂಡಿಕೊಂಡನು. ಇದು ಪುನರಾವರ್ತನೆಯಾಗಿ ಅತನು ದುರ್ಬಲನಾಗಿ, ಒಣಗಿಕೊಂಡು, ರೋಗಿಯಾದನು.
ಆ ಸಮಯದಲ್ಲಿ ಅಣ್ಣನು ತಮ್ಮನ ಈ ಸ್ಥಿತಿಯನ್ನು ಕಂಡು ವಿಚಾರಿಸಿದಾಗ ವಿಷಯವೆಲ್ಲ ತಿಳಿದನು. ನಂತರ ತಮ್ಮನಿಗೆ ಹೀಗೆ ಕೇಳಿದನು: ನಾಗರಾಜನು ಆಭರಣಗಳನ್ನು ಧರಿಸಿ ಬರುವನೇ?
ಹೌದು, ಮಣಿರತ್ನ ಧರಿಸಿ ಬರುವನು.
ಈಗ ಹಿರಿಯ ತಪಸ್ವಿಗಳಾದ ಬೋಧಿಸತ್ವರು ಪ್ರಜ್ಞಾಶೀಲತೆಯಿಂದ ಯೋಚಿಸಿ ಈಗ ಪಾರಾಗಲು ಉಪಾಯವೊಂದನ್ನು ತಿಳಿಸಿದರು. ಮಾರನೆಯದಿನ ನಾಗರಾಜ ಎಂದಿನಂತೆ ಪರ್ಣಕುಟೀರಕ್ಕೆ ಬಂದು ನಿಲ್ಲುತ್ತಲೇ ಕಿರಿಯ ತಪಸ್ವಿಯು ನಾಗರಾಜನಲ್ಲಿ ಹೀಗೆ ಯಾಚಿಸಿದನು: ಓ ನಾಗರಾಜ, ನಿನ್ನ ಮಣಿರತ್ನ ನನಗೆ ಚೆನ್ನಾಗಿ ಹಿಡಿಸಿದೆ, ನನಗೆ ಅದನ್ನು ನೀಡು. ಇದನ್ನು ಆಲಿಸುತ್ತಲೇ ನಾಗರಾಜ ಅಲ್ಲಿರಲಾರದೆ ಕೆಲಸವಿದೆ ಎಂದು ಹೇಳಿ ಹೊರಟುಹೋದನು. ಮಾರನೆಯ ದಿನ ಆಶ್ರಮವನ್ನು ನಾಗರಾಜ ಇನ್ನೇನು ಪ್ರವೇಶಿಸಬೇಕು, ತಕ್ಷಣ ಕಿರಿಯ ತಪಸ್ವಿಯು ನೆನ್ನೆ ನೀವು ಆಭರಣ ನೀಡಲಿಲ್ಲ, ಇಂದಾದರೂ ಮಣಿರತ್ನವನ್ನು ನೀಡಿ ಎಂದು ಯಾಚಿಸಿದನು. ಆಗಲೂ ನಾಗರಾಜ, ಒಳಬರಲಾರದೆ ಹಾಗೆಯೇ ಹೊರಟುಹೋದನು. ಮಾರನೆಯ ದಿನ ನಾಗರಾಜನು ನೀರಿನಿಂದ ಹೊರಬರುತ್ತಿದ್ದಂತೆ ಕಿರಿಯ ತಪಸ್ವಿಯು ಆ ಮಣಿರತ್ನ ಎಂದು ಕೇಳುತ್ತಿದ್ದಂತೆ ನೀರಿನಲ್ಲಿ ನಾಗರಾಜ ಮುಳುಗುತ್ತ ಹೀಗೆ ಹೇಳಿದನು:
ಇನ್ನೊಬ್ಬರಿಗೆ ಪ್ರಿಯವಾಗಿರುವ ವಸ್ತುವನ್ನು ಎಂದಿಗೂ ಯಾಚಿಸಬಾರದು, ಅತಿಯಾಗಿ ಯಾಚಿಸುವುದರಿಂದ ಅವರು ಪ್ರಿಯರಾಗಲಾರರು. ಈ ಮಣಿಯು ನನ್ನ ಸರ್ವಸ್ವ, ನೀನು ಅತಿ ಯಾಚಕನಾಗಿರುವೆ, ಇದನ್ನು ನಾನು ನಿನಗೆ ನೀಡಲಾರೆ, ನಿನ್ನ ಬಳಿಗೂ ಬರಲಾರೆ, ಇದನ್ನೇ ಯಾಚಿಸುತ್ತ ತೊಂದರೆ ನೀಡಿ, ಹೆದರಿಸುತ್ತಿದ್ದೀಯೆ, ನಿನ್ನಲ್ಲಿಗೆ ಬರಲಾರೆ ಎಂದು ಹೇಳಿ ನಾಗರಾಜನು ಮುಳುಗಿಹೋದನು.
ಆದರೆ ನಾಗರಾಜನ ಸ್ನೇಹಹೀನತೆಯಿಂದ ಕಿರಿಯ ತಪಸ್ವಿ ಚಿಂತಿತನಾದನು. ಆದರೆ ಹಿರಿಯ ತಪಸ್ವಿಯ ಬೋಧನೆಯಿಂದ ಅವನು ಸರಿಹೋದನು. ಮುಂದೆ ಇಬ್ಬರೂ ಸಹಾ ಧ್ಯಾನ ಲಾಭ ಪಡೆದರು.


ಬೇಧಭಾವ ಮೀರಿ ಹೃದಯ ವೈಶಾಲ್ಯತೆ ಹೊಂದೊಣ

ಬೇಧಭಾವ ಮೀರಿ ಹೃದಯ ವೈಶಾಲ್ಯತೆ ಹೊಂದೊಣ

ಮಾನವನಲ್ಲಿ ಎಲ್ಲಿಯವರೆಗೆ ಮಿಥ್ಯಾದೃಷ್ಟಿ ಮತ್ತು ಸ್ವಾರ್ಥಗಳು ಇರುತ್ತವೋ ಅಲ್ಲಿಯವರೆಗೆ ಆತನಲ್ಲಿ ಬೇಧಭಾವವೂ ಇರುತ್ತವೆ. ಆಗ ಆತನು ವ್ಯಕ್ತಿಯಿಂದ ವ್ಯಕ್ತಿಗೆ ಭೇದಭಾವ ಮಾಡುತ್ತಾನೆ, ಪಕ್ಷಪಾತ ಮಾಡುತ್ತಾನೆ. ಆತನಿಗೆ "ಇವರು ನನ್ನವರು" ಎಂಬ ಮಿಥ್ಯಾದೃಷ್ಟಿ ಉದಯಿಸಿದಾಗ ಪ್ರಿಯಭಾವನೆ ಉಂಟಾಗಿ ಪಕ್ಷಪಾತದಿಂದ ಅವರಿಗೆ ಸಹಾಯ ಮಾಡುತ್ತಾನೆ. ಹಾಗೆಯೇ ಮಿಥ್ಯಾದೃಷ್ಟಿಯಿಂದ "ಇವರು ಪರರು" ಎಂಬ ಮಿಥ್ಯಾದೃಷ್ಟಿ ಉದಯಿಸಿದಾಗ ಅಪ್ರಿಯ ಭಾವನೆ ಉಂಟಾಗಿ ಪಕ್ಷಪಾತದಿಂದ ಅವರಿಗೆ ಸಹಾಯ ಮಾಡಲಾರ. ಬದಲಾಗಿ ದ್ವೇಷಿಸುತ್ತಾನೆ, ಹಾಗು ತೊಂದರೆಯನ್ನುಂಟು ಮಾಡಬಹುದು.
ಆದ್ದರಿಂದಾಗಿ ದಾನಿಯು ಮೈತ್ರಿಯ ಭಾವ ತಾಳಬೇಕು. ಎಲ್ಲರ ಒಳಿತು ಬಯಸಲಿ. ಆತನಿಂದ ಎಲ್ಲರಿಗೂ ಪ್ರಯೋಜನವಾಗಬೇಕು. ಆತನು ಮಳೆಯಂತೆ ಸರ್ವರಿಗೂ ಲಾಭ ನೀಡಬೇಕು, ಪೃಥ್ವಿಯಂತೆ ಎಲ್ಲರಿಗೂ ಆಧಾರವಾಗಬೇಕು, ನೀರಿನಂತೆ ಸರ್ವರಿಗೂ ಚೈತನ್ಯ ನೀಡಬೇಕು, ಗಾಳಿಯಂತೆ ಸರ್ವರಿಗೂ ಜೀವ ನೀಡಬೇಕು. ಅಗ್ನಿಯಂತೆ ಸರ್ವರಿಗೂ ಪ್ರಯೋಜನಕಾರಿಯಾಗಬೇಕು. ಎಲ್ಲರಿಗೂ ಒಳತನ್ನು ಮಾಡಲಿ.
ಜನಾಂಗೀಯ ಬೇಧವಿರಕೂಡದು.
ಉಚ್ಚ-ನೀಚ ಬೇಧಭಾವವಿರಕೂಡದು.
    ವರ್ಣಗಳ ಬೇಧಬಾವವಿರಕೂಡದು.
ಈ ದೇಶ - ಆ ದೇಶವೆಂದು ಬೇಧಭಾವವಿರಕೂಡದು.
ರಾಜ್ಯಗಳ ನಡುವೆ ಬೇಧಭಾವವಿರಕೂಡದು.
ಭಾಷೆಗಳ ಆಧಾರಿತ ಬೇಧಭಾವವಿರಕೂಡದು.
ಧರ್ಮಗಳ ಆಧಾರಿತ ಬೇಧಭಾವವಿರಕೂಡದು.
ಜಾತಿಗಳ ಆಧಾರಿತ ಬೇಧಭಾವವಿರಕೂಡದು.
ಬಡವ-ಶ್ರೀಮಂತ ಎಂಬ ಯಾವುದೇ ಬೇಧಭಾವವಿರಕೂಡದು.
ಪಾಪಿ-ಪುಣ್ಯಶಾಲಿಯೆಂಬ ಬೇಧಭಾವವಿರಕೂಡದು.
ಒಟ್ಟಾರೆ ಯಾವುದೇ ಬೇಧಭಾವವಿರಕೂಡದು.

ಯಾರು ಇನ್ನೂ ಭೇಧಭಾವದಲ್ಲೇ ಇರುವರೋ ಅವರ ಆಧ್ಯಾತ್ಮಿಕತೆ ಅಥವಾ ಪರಮಾರ್ಥ ಇನ್ನೂ ವಿಕಸಿತವಾಗಿಲ್ಲ ಎಂದೇ ಅರ್ಥ.


ಎಲ್ಲರಿಗೂ ಮಂಗಳವಾಗಲಿ.
ಎಲ್ಲರೂ ಸುಖಿಯಾಗಿರಲಿ.
ಎಲ್ಲರೂ ದುಃಖಗಳಿಂದ ಮುಕ್ತರಾಗಲಿ.
ಎಲ್ಲರೂ ಅಭಿವೃದ್ಧಿಯನ್ನು ಹೊಂದಲಿ.
ಎಲ್ಲರೂ ವ್ಯಕ್ತಿತ್ವ ವಿಕಾಸ ಹೊಂದಲಿ.
ಎಲ್ಲರೂ ಪರಿಪೂರ್ಣರಾಗಲಿ.
ಎಲ್ಲರೂ ಎಲ್ಲರ ಒಳಿತನ್ನು ಬಯಸಲಿ.
ಎಲ್ಲರೂ ಎಲ್ಲರ ಒಳಿತನ್ನು ಮಾಡಲಿ.

Saturday 2 November 2019

ಬುದ್ಧ ಭಗವಾನರ ಅನನ್ಯತೆ BUDDHA THE INCOMPARABLE

ಬುದ್ಧ ಭಗವಾನರ ಅನನ್ಯತೆ

ಬುದ್ಧರು ಅಸಮಾನ್ಯ ಬಲವುಳ್ಳವರು :

1. ಅವರಿಗೆ ಭೂತಕಾಲದ ತಡೆರಹಿತ ಜ್ಞಾನ(ದರ್ಶನ)ವಿತ್ತು.
2. ಅವರು ವರ್ತಮಾನ ಸರ್ವದರ ಬಗ್ಗೆಯೂ ತಡೆರಹಿತ ಜ್ಞಾನ (ದರ್ಶನ)ವಿತ್ತು.
3. ಅವರು ಭವಿಷ್ಯದ ಬಗ್ಗೆಯು ತಡೆರಹಿತ ಅನಾವರಣ ಜ್ಞಾನ (ದರ್ಶನ) ಸಾಮಥ್ರ್ಯ ಪಡೆದಿದ್ದರು.
4. ಅವರ ಎಲ್ಲಾ ಭೌತಿಕ ಕ್ರಿಯೆಗಳು ಪ್ರಜ್ಞಾದ ಮೂಲಕ ನಡೆಯುತ್ತಿತ್ತು.
5. ಅವರ ಎಲ್ಲಾ ವಾಚಿಕ ಕ್ರಿಯೆಗಳು ಪ್ರಜ್ಞಾದ ಮೂಲಕ ನಡೆಯುತ್ತಿತ್ತು.
6. ಅವರ ಎಲ್ಲಾ ಮಾನಸಿಕ ಕ್ರಿಯೆಗಳು ಪ್ರಜ್ಞಾದ ಮೂಲಕ ನಡೆಯುತ್ತಿತ್ತು.
7. ಅವರ ಇಚ್ಛೆಗೆ ವಿರುದ್ಧವಾಗಿ ಯಾರು ಹೋಗುವುದಕ್ಕೆ ಆಗುವುದಿಲ್ಲ.
8. ಯಾರಿಂದಲೂ, ಯಾವುದರಿಂದಲೇ ಆಗಲಿ ಅವರ ಏಕಾಗ್ರತೆ ಭಂಗ ಅಸಾಧ್ಯ.
9. ಅವರ ಜ್ಞಾನಕ್ಕೆ ಯಾವ ತಡೆಯಾಗಲಿ, ಆವರಣವಾಗಲಿ ಇಲ್ಲ.
10. ಅವರ ಪ್ರಯತ್ನಕ್ಕೆ ಯಾವ ತಡೆಯೂ ಇಲ್ಲ.
11. ಅವರಲ್ಲಿ ಯಾವ ಚಂಚಲತೆಯೂ ಇಲ್ಲ.
12. ಅವರ ವಿಮುಕ್ತಿಗೆ ಯಾವ ತಡೆಯೂ ಇಲ್ಲ.
13. ಅವರ ಧಮ್ಮ ಪ್ರವಚನಕ್ಕೆ ಯಾವ ಅಡ್ಡಿಯೂ ಇಲ್ಲ.
14. ಅವರು ಶಬ್ದವಾಗಲಿ, ಗಲಾಟೆಯಾಗಲಿ ಮಾಡುತ್ತಿರಲಿಲ್ಲ.
15. ಅವರಲ್ಲಿ ದೈಹಿಕ ಸಂತೋಷವಿಲ್ಲ ಮತ್ತು ಕೃತಕ ಹೊಗಳಿಕೆ ಇಲ್ಲ.
16. ಅವರಲ್ಲಿ ಆತುರತೆ ಇಲ್ಲ.
17. ಅವರು ವ್ಯರ್ಥ ಕೆಲಸಗಳನ್ನು ನಿಶ್ಚಯವೇ ಮಾಡುತ್ತಿರಲಿಲ್ಲ.
18. ಅವರು ಸದಾ ಶಾಂತಶೀಲರು, ಶಾಂತ ಚಿತ್ತರು.
19. ಅವರು ಅಜ್ಞಾನದ ಯಾವ ಕಾರ್ಯ ಮಾಡಲಿಲ್ಲ.
20. ಅವರು ಅನುಪಮ ಅನುಕಂಪವುಳ್ಳವರಾಗಿದ್ದವರು ಮತ್ತು ಇತ್ಯಾದಿ.


ಬುದ್ಧರ 10 ಅಲೌಕಿಕ ಬಲಗಳು

1. ಇರುವುದನ್ನು ಇರುವುದೆಂದು, ಇಲ್ಲದ್ದನ್ನು ಇಲ್ಲವೆಂದು ಯತಾರ್ಥವಾಗಿ ಪ್ರಜ್ಞಾಪೂರ್ವಕವಾಗಿ ಅರಿಯುತ್ತಾರೆ.
2. ಹಿಂದಿನ, ಮುಂದಿನ, ಇಂದಿನ ಕಮರ್ಾನುಷ್ಠಾನಗಳ ಫಲವನ್ನು ಸಾಧ್ಯತೆಯ ಪ್ರಕಾರ, ಕಾರಣಗಳ ಪ್ರಕಾರ ಯತಾರ್ಥವಾಗಿ ಅರಿಯುತ್ತಾರೆ.
3. ಎಲ್ಲಿಗೆ ಎಲ್ಲಾ ಮಾರ್ಗಗಳು (ಧ್ಯಾನ ಮಾರ್ಗ) ಮತ್ತು ಕರ್ಮಫಲ ಒಯ್ಯುತ್ತವೋ ಅದನ್ನು ಯತಾರ್ಥವಾಗಿ ಪ್ರಜ್ಞಾಪೂರ್ವಕವಾಗಿ ಅರಿಯುತ್ತಾರೆ.
4. ಅನೇಕ ಧಾತುಗಳು (ದೇಹದ) ಮೂಲಧಾತುಗಳು, ಇಂದ್ರೀಯ ಧಾತುಗಳು, ವಿಜ್ಞಾನ ಧಾತುಗಳು ಹಾಗು ವಿವಿಧ ಧಾತುಗಳಿಂದ ಕೂಡಿದ ಸರ್ವಲೋಕವನ್ನು ಯತಾರ್ಥವಾಗಿ ಪ್ರಜ್ಞಾಪೂರ್ವಕವಾಗಿ ಅರಿಯುತ್ತಾರೆ.
5. ಜೀವಿಗಳ ವಿವಿಧ ಒತ್ತಾಸೆಗಳನ್ನು ಯತಾರ್ಥವಾಗಿ ಪ್ರಜ್ಞಾಪೂರ್ವಕವಾಗಿ ಅರಿಯುತ್ತಾರೆ.
6. ಸರ್ವಜೀವಿಗಳ ಪ್ರವೃತ್ತಿಗಳನ್ನು, ದೌರ್ಬಲ್ಯಗಳನ್ನು, ಪ್ರತಿಭೆಯನ್ನು ಯತಾರ್ಥವಾಗಿ ಅರಿಯುತ್ತಾರೆ ಮತ್ತು ಪರಿಣಾಮಕಾರಿಯಾಗುವಂತೆ ಬೋಧಿಸುತ್ತಾರೆ.
7. ಧ್ಯಾನ, ಸಮಾಧಿ, ಸಮಾಪತ್ತಿ, ವಿಮೋಕ್ಖಗಳನ್ನು, ಅವುಗಳ ಕಲುಶತೆ, ಸ್ವಚ್ಛತೆ, ವಿಶುದ್ಧತೆ, ಮೀರಿ ಹೋಗುವಿಕೆಗಳನ್ನು ಯತಾರ್ಥವಾಗಿ, ಪ್ರಜ್ಞಾಪೂರ್ವಕವಾಗಿ ಅರಿಯುತ್ತಾರೆ.
8. ತಮ್ಮ ಮತ್ತು ಪರರ ಎಲ್ಲಾ ಪೂರ್ವ ಜನ್ಮಗಳನ್ನು ಸ್ಮರಿಸಿಕೊಳ್ಳುವರು.
9. ತಮ್ಮ ದಿವ್ಯ ಚಕ್ಷುವಿನಿಂದ ಸರ್ವಜೀವಿಗಳ ಸುಗತಿ, ದುರ್ಗತಿಗಳನ್ನು ಸರ್ವಕರ್ಮದ ಅವಸ್ಥೆಗಳನ್ನು, ಅದನ್ನು ಅನುಭವಿಸುತ್ತಿರುವ ಜೀವಿಗಳನ್ನು ಪ್ರಜ್ಞಾಪೂರ್ವಕವಾಗಿ ಯತಾರ್ಥವಾಗಿ ಅರಿಯುತ್ತಾರೆ.
10. ಅಸವರಹಿತವಾಗಿ ವಿಮುಕ್ತಿ ಪಡೆದು ನಿಬ್ಬಾಣ ಸಾಕ್ಷಾತ್ಕಾರ ಪಡೆದು ಜೀವಿಸುತ್ತಾರೆ ಮತ್ತು ಅವುಗಳ ಪ್ರತಿಹಂತ ಅರಿತು ಬೋಧಿಸುತ್ತಾರೆ. ಇವು ತಥಾಗತರ 10 ಬಲಗಳಾಗಿವೆ.


ಬುದ್ಧರ ಭಗವಾನರ ಅತೀಂದ್ರಿಯಶಕ್ತಿಗಳು

  ಬುದ್ಧ ಭಗವಾನರು ಸಮಾದಿಯಲ್ಲಿ ಅತ್ಯುನ್ನತ ಹಾಗೂ ಪರಮಾಗ್ರ ಸ್ಥಿತಿಯನ್ನು ಮುಟ್ಟಿದ್ದರು, ಅವರು ಸಮಥ ಧ್ಯಾನದಲ್ಲಿ ಪರಮಾಗ್ರ ಸ್ಥಿತಿಯನ್ನು ತಲುಪಿದ್ದರಿಂದಲೇ ಈ ಅತೀಂದ್ರೀಯ ಶಕ್ತಿಗಳನ್ನು ಪಡೆದರು. ಒಮ್ಮೆ ಅವರು ಧ್ಯಾನ ಮಾಡುತ್ತಿರುವಾಗ ಭೀಕರ ಸಿಡಿಲಿನ, ಗುಡುಗಿನ, ಮಿಂಚಿನ ಮಳೆಯು ಸುರಿಯಿತು. ಆ ಸಮಯದ ಸಿಡಿಲಿನ ಆರ್ಭಟಕ್ಕೆ ಕೆಲವು ಪ್ರಾಣಿಗಳು ಸತ್ತವು. ಇಷ್ಟೇಲ್ಲಾ ನಡೆದಿದ್ದರೂ ಸಹಾ ಬುದ್ಧರಿಗೆ ಮಾತ್ರ ಸ್ವಲ್ಪ ಶಬ್ದವೂ ತಿಳಿಯಲಿಲ.್ಲ. ಇದು ಅವರ ಏಕಾಗ್ರತೆಯ ಶಕ್ತಿ ಉದಾಹರಣೆಯಾಗಿದೆ.
1. ದಿವ್ಯ ಚಕ್ಷು : ದಿವ್ಯವಾದ ಚಕ್ಷುವನ್ನು ಪಡೆದಿದ್ದರು. ಅದರ ಮೂಲಕ ಸರ್ವರ ಉನ್ನತಿ ಅವನತಿ ಸಾವಿನ ನಂತರದ ಎಲ್ಲರ ಸ್ಥಿತಿಗತಿಗಳನ್ನು ಅರಿಯುತ್ತಿದ್ದರು. ಭೂತ, ಭವಿಷ್ಯದ ಮತ್ತು ವರ್ತಮಾನದ ಎಲ್ಲವನ್ನೂ ಅರಿಯುತ್ತಿದ್ದರು.
2. ದಿವ್ಯವಾದ ಕಿವಿ : ಅದರ ಮೂಲಕ ಸರ್ವಜೀವಿಗಳ ಸಂಭಾಷಣೆ, ಸರ್ವಲೋಕದ ಶಬ್ದಗಳನ್ನು ಕೇಳುತ್ತಿದ್ದರು. ದೂರದ, ಹತ್ತಿರದ, ಸೂಕ್ಷ್ಮ, ಅತಿಸ್ಥೂಲ ಎಲ್ಲ ಬಗೆಯ ಧ್ವನಿಯನ್ನು ಕೇಳುತ್ತಿದ್ದರು.
3. ಪರರ ಚಿತ್ತವನ್ನು ಓದುವಿಕೆ : ಇದರ ಮೂಲಕ ಸರ್ವರ ಮನಸ್ಸನ್ನು ಓದುತ್ತಿದ್ದರು ಮತ್ತು ಹಾಗೆಯೇ ಅರಿಯುತ್ತಿದ್ದರು.
4. ಹಿಂದಿನ ಜನ್ಮದ ಸ್ಮರಣೆ : ಇಲ್ಲಿ ಅವರು ಸರ್ವರ (ಎಲ್ಲರ) ಅಸಂಖ್ಯಾತ ಹಿಂದಿನ ಕಲ್ಪಗಳಷ್ಟು ಹಿಂದಿನ ಘಟನೆಗಳಲ್ಲಾ ಅರಿಯುತ್ತಿದ್ದರು. ಅಷ್ಟೇ ಅಲ್ಲ, ಮುಂದಿನ ಜನ್ಮಗಳನ್ನು ಅರಿಯುತ್ತಿದ್ದರು. ಈ ಬಲದಿಂದ ಅವರು ಎಷ್ಟೇ ಭೂತಕಾಲದ ಹಿಂದೆ ಹಾಗೆಯೇ ಎಷ್ಟೇ ಭವಿಷ್ಯತ್ತಿರಲಿ, ಅದನ್ನು ವರ್ತಮಾನದಂತೆ ಅರಿಯುತ್ತಿದ್ದರು.
5. ದೇಹದಿಂದ ವಿವಿಧರೀತಿಯ ಪವಾಡಗಳು : ಆಕಾಶದಲ್ಲಿ ನಿಲ್ಲುವಿಕೆ, ನಡೆಯುವಿಕೆ, ಮಲಗುವಿಕೆ, ವೇಗವಾಗಿ ಹಾರುವಿಕೆ, ನೀರಿನಲ್ಲಿ ನಡೆಯುವಿಕೆ, ನೆಲದಲ್ಲಿ ಮುಳುಗುವಿಕೆ, ಬಂಡೆಗಳಲ್ಲಿ ತೂರುವಿಕೆ, ಗೋಡೆಗಳಲ್ಲಿ ತೂರಿ ಹೋಗುವಿಕೆ, ಪ್ರತ್ಯಕ್ಷವಾಗುವಿಕೆ, ಮಾಯವಾಗುವಿಕೆ, ಅದೃಷ್ಯವಾಗಿ ಮಾತನಾಡುವಿಕೆ, ವಿವಿಧ ರೂಪ ಬದಲಾಯಿಸುವಿಕೆ, ಅನೇಕ ದೇಹ ಸೃಷ್ಠಿಸುವಿಕೆ, ಇಷ್ಟವಾದುದನ್ನು ಸೃಷ್ಠಿಸುವಿಕೆ (ಮಳೆ ತರಿಸುವಿಕೆ ಇತ್ಯಾದಿ) (ಪಂಚಭೂತದಿಂದಾದ ಏನನ್ನು ಬೇಕಾದರೂ ಸೃಷ್ಟಿಸುವಿಕೆ) ರೋಗಗುಣಪಡಿಸುವಿಕೆ, ಕಲ್ಪಕಾಲ ಬದುಕುವಿಕೆ, ಏಕಕಾಲದಲ್ಲಿ ವಿವಿಧರೀತಿಯ ಪವಾಡ ಮಾಡುವಿಕೆ, ದೇಹವನ್ನಾಗಲಿ, ಪಂಚಭೂತಗಳನ್ನಾಗಲಿ ಹೇಗೆ ಬೇಕೋ ಹಾಗೆ ಮಾರ್ಪಡಿಸುವಿಕೆ ಇತ್ಯಾದಿ.
6. ಪ್ರಭುತ್ವ : ಮನಸ್ಸನ್ನು ಅಗತ್ಯಕ್ಕೆ ತಕ್ಕಂತೆ ನಿಗ್ರಹ, ಶಾಂತತೆ, ಕಾರ್ಯಮಗ್ನತೆ ದೃಢತೆಯಿಂದ ಹೇಗೆ ಬೇಕೋ ಹಾಗೆ ಬಯಸಿದಷ್ಟು ಕಾಲ (ಸಮಾಧಿಯಲ್ಲಿ) ಇಟ್ಟುಕೊಳ್ಳುವುದು.
7. ಚಿತ್ತವನ್ನು ವಿಶುದ್ಧಿಗೊಳಿಸಿ ನಿಬ್ಬಾಣ ಸಾಕ್ಷಾತ್ಕರಿಸುವುದು.
8. ಪರರನ್ನು ಪರಿವತರ್ಿಸಿ ಅವರನ್ನು ದುಃಖದಿಂದ ವಿಮುಕ್ತಗೊಳಿಸುವುದು. ಲೋಕಕಲ್ಯಾಣವನ್ನುಂಟು ಮಾಡುವುದು ಮತ್ತು ಇತ್ಯಾದಿ.

Friday 1 November 2019

ಅತಿರೇಕದ ದೃಷ್ಟಿಕೋನಗಳು extreme views

ಅತಿರೇಕದ ದೃಷ್ಟಿಕೋನಗಳು:

ಒಮ್ಮೆ ಭಗವಾನರು ಶ್ರಾವಸ್ತಿಯಲ್ಲಿರುವಾಗ ಬ್ರಾಹ್ಮಣನೊಬ್ಬನು ಭಗವಾನರಲ್ಲಿಗೆ ಬಂದು ವಂದಿಸಿ, ಕುಶಲಗಳನ್ನು ವಿನಿಮಯ ಮಾಡಿಕೊಂಡ ನಂತರ ಒಂದೆಡೆ ಕುಳಿತು ಈ ರೀತಿ ಪ್ರಶ್ನಿಸುತ್ತಾನೆ:
"ಭಗವಾನ್ ಕರ್ಮ ಮಾಡುವವನೇ ಅದರ ಫಲವನ್ನು ಅನುಭವಿಸುತ್ತಾನೆಯೇ?"
"ಓ ಬ್ರಾಹ್ಮಣ, ಇದು ಒಂದು ಅತಿರೇಕವಾಗಿದೆ."
"ಹಾಗಾದರೆ ಭಗವಾನ್ ಕರ್ಮ ಮಾಡುವವನೇ ಬೇರೆ ಮತ್ತು ಅದರ ಫಲವನ್ನು ಅನುಭವಿಸುವವನು ಬೇರೆಯೇ?"
"ಓ ಬ್ರಾಹ್ಮಣ, ಇದು ಒಂದು ಅತಿರೇಕವಾಗಿದೆ."
" ಓ ಬ್ರಾಹ್ಮಣ, ತಥಾಗತರು ಅತಿರೇಕಗಳನ್ನು ಮೀರಿದ್ದಾರೆ, ಅತಿರೇಕಗಳು ಮೀರಿದ ಸತ್ಯದ ಮಧ್ಯಮ ಮಾರ್ಗವನ್ನು ಬೋಧಿಸುತ್ತೇನೆ. ನಿನಗೆ ಇದು ಪೂರ್ಣವಾಗಿ ಅರ್ಥವಾಗಬೇಕಾದರೆ ಗಮನವಿಟ್ಟು ಆಲಿಸು" ಎಂದು ಪಟಿಚ್ಚಸಮುಪ್ಪಾದ ಬೋಧಿಸಿದರು.:
"ಅಜ್ಞಾನದಿಂದ ಸಂಖಾರಗಳು (ಚಿತ್ತದ ಚಟುವಟಿಕೆಗಳು) ಉಂಟಾಗುತ್ತದೆ.
 ಸಂಖಾರಗಳಿಂದ ವಿಞ್ಞಾನ (ಅರಿವು) ಉಂಟಾಗುತ್ತದೆ. ವಿಞ್ಞಾನದಿಂದ ನಾಮರೂಪಗಳು (ಮನಸ್ಸು ಮತ್ತು ದೇಹ) ಉಂಟಾಗುತ್ತದೆ.
 ನಾಮರೂಪದಿಂದ ಆರು ಇಂದ್ರೀಯ ಆಧಾರಗಳು ಉಂಟಾಗುತ್ತದೆ.
ಆರು ಇಂದ್ರೀಯ ಆಧಾರಗಳಿಂದ ಸ್ಪರ್ಶ ಉಂಟಾಗುತ್ತದೆ,
ಸ್ಪರ್ಶದಿಂದ ವೇದನೆಗಳು ಉಂಟಾಗುತ್ತದೆ.
ವೇದನೆಗಳಿಂದ ತನ್ಹಾ ಉಂಟಾಗುತ್ತದೆ,
ತನ್ಹಾದಿಂದ ಅಂಟುವಿಕೆ ಉಂಟಾಗುತ್ತದೆ,
ಅಂಟುವಿಕೆಯಿಂದ ಭವ ಉಂಟಾಗುತ್ತದೆ.
ಭವದಿಂದ ಜನ್ಮ ಉಂಟಾಗುತ್ತದೆ.
 ಜನ್ಮದಿಂದ ದುಃಖರಾಶಿ ಉಂಟಾಗುತ್ತದೆ."

"ಆದರೆ ಅಜ್ಞಾನದ ನಿರೋಧದಿಂದ ಸಂಖಾರಗಳ ನಿರೋಧವಾಗುತ್ತದೆ,
ಸಂಖಾರಗಳ ನಿರೋಧದಿಂದ ವಿಞ್ಞಾನದ ನಿರೋಧವಾಗುತ್ತದೆ,
ವಿಞ್ಞಾನದ ನಿರೋಧದಿಂದ ನಾಮರೂಪದ ನಿರೋಧವಾಗುತ್ತದೆ.
ನಾಮರೂಪದ ನಿರೋಧದಿಂದ ಆರು ಇಂದ್ರೀಯಗಳ ಆಧಾರಗಳು ನಿರೋಧವಾಗುತ್ತದೆ,
 ಆರು ಇಂದ್ರೀಯಗಳ ನಿರೋಧದಿಂದ ಸ್ಪರ್ಶವು ನಿರೋಧವಾಗುತ್ತದೆ,
ಸ್ಪರ್ಶದ ನಿರೋಧದಿಂದ ವೇದನೆಗಳ ನಿರೋಧ ಆಗುತ್ತವೆ,
 ವೇದನೆಗಳ ನಿರೋಧದಿಂದ ತನ್ಹಾದ ನಿರೋಧವಾಗುತ್ತದೆ,
ತನ್ಹಾದ ನಿರೋಧದಿಂದ ಅಂಟುವಿಕೆಯ ನಿರೋಧವಾಗುತ್ತದೆ,
 ಅಂಟುವಿಕೆಯ ನಿರೋಧದಿಂದ ಭವದ ನಿರೋಧವಾಗುತ್ತದೆ,
ಭವದ ನಿರೋಧದಿಂದ ಜನ್ಮದ ನಿರೋಧವಾಗುತ್ತದೆ,
ಜನ್ಮದ ನಿರೋಧದಿಂದ ದುಃಖರಾಶಿಯ ನಿರೋಧವಾಗುತ್ತದೆ."

ಇದನ್ನು ಆಲಿಸಿದ ಬ್ರಾಹ್ಮಣ ಅನುಮೋದನೆ ಮಾಡಿ ತ್ರಿರತ್ನಗಳಿಗೆ ಶರಣಾದನು.


( ಅನುವಾದಕನ ವ್ಯಾಖ್ಯಾನ: ಅಂದರೆ ಮನಸ್ಸು ಒಂದೇ ಅಲ್ಲ . ಹೇಗೆ ಶರೀರವು ಹಲವಾರು ಅಂಗಗಳಿಂದ ಕೂಡಿದೆಯೋ ಹಾಗೆಯೇ ಮನಸ್ಸು ಸಹಾ ಹಲವಾರು ಅಂಗಗಳಿಂದ ಕೂಡಿದೆ. ಇಲ್ಲಿ ಕರ್ಮ ಮಾಡುವುದಕ್ಕೆ ಪ್ರೇರಣೆ ಬಾಹ್ಯದ ವಿಷಯ ಅಥವಾ ಅಂತರಿಕ ವಿಷಯವಾಗಿದೆ .ಅಂದರೆ ಆರು ಇಂದ್ರಿಯಗಳ ಸ್ಪರ್ಶದಿಂದ ವೇದನೆಗಳು ಉಂಟಾಗುತ್ತದೆ. ವೇದನೆಗಳಿಂದ ಇಚ್ಚೆ ಉಂಟಾಗುತ್ತದೆ. ಅದು ಕರ್ಮಕ್ಕೆ ಬೀಜವಿದ್ದಂತೆ ಅದೇ ಕರ್ಮದ ಆರಂಭ. ಕರ್ಮದ ಪ್ರೇರಕ . ಕರ್ಮಕ್ಕೆ ಆಜ್ಞಾಕಾರಕ. ಸಾಧಾರಣ ಭಾಷೆಯಲ್ಲಿ ಹೇಳುವುದಾದರೆ ಕರ್ಮ ಮಾಡುವವನು. ಈ ಇಚ್ಚೆಯಿಂದ ತನ್ಹಾ ಉಂಟಾಗುತ್ತದೆ........  ಇನ್ನು ಆ ಕರ್ಮಕ್ಕೆ ವಿಪಾಕ ಅಥವಾ ಫಲ ಸಿಕ್ಕಿತು ಎಂದು ಭಾವಿಸಿದರೇ ಉದಾಹರಣೆಗೆ ಆತನಿಗೆ ಮುಂದಿನ ಜನ್ಮದಲ್ಲಿ ಭಯಾನಕ ರೋಗ ಬಂದಿತು. ಕ್ಷಣ ಕ್ಷಣಕ್ಕೂ ನರಳುವಿಕೆ ಉಂಟಾಯಿತು ಎಂದು ಭಾವಿಸೋಣ. ಆಗ ಇಲ್ಲಿ ಶರೀರವಿದೆ. ಶರೀರಕ್ಕೇ ಅಪ್ರಿಯ ವೇದನೆಗಳು ಸಂಪಕರ್ಿಸುತ್ತಿದೆ. ಇಲ್ಲಿ ವೇದನೆಗಳೇ ಸಾಧಾರಣ ಭಾಷೆಯಲ್ಲಿ ಹೇಳುವ ಅನುಭವಿಸುವವನು. ಈಗ ಕರ್ಮ ಮಾಡಿದವನೇ ಅನುಭವಿಸುವವನಾದರೇ ಒಂದೇ ವ್ಯಕ್ತಿ(ಆತ್ಮ) ಅಥವಾ ಅಂಗವಿರಬೇಕಾಗಿತ್ತು. ಅದು ವಸ್ತುಸ್ತಿತಿಯ ಪ್ರಕಾರ ಸಾಧ್ಯವಿಲ್ಲ. ಹಾಗೆಯೇ ಬೇರೆ ಬೇರೆ ಎಂದು ಹೇಳಲೂ ಸಾಧ್ಯವಿಲ್ಲ. ಏಕೆಂದರೇ ಒಂದೇ ಪ್ರವಾಹವಿದೆ. ಅದರೇ ಅಲೆಗಳು ಮಾತ್ರ ಬೇರೆ ಬೇರೆ. ಹೀಗಾಗಿ ಸತ್ಯನಿಷ್ಟರು ಅವೆರಡೂ ಹೇಳಿಕೆಗಳನ್ನು ಅತಿರೇಕವೆಂದು ಅರಿಯುತ್ತಾರೆ. ಸಾಧಾರಣ ಜನರು ಪೂರ್ಣ ಸತ್ಯನಿಷ್ಟರಲ್ಲದ ಕಾರಣ " ಕರ್ಮ ಮಾಡುವವನೇ ಅದರ ಫಲವನ್ನು ಅನುಭವಿಸುತ್ತಾನೆ." ಎಂದು ಅಥವಾ "ಕರ್ಮ ಮಾಡುವವನೇ ಬೇರೆ ಮತ್ತು ಅದರ ಫಲವನ್ನು ಅನುಭವಿಸುವವನು ಬೇರೆ" ಎಂದು ನಿರ್ಧರಿಸುತ್ತಾರೆ . ಅದರೆ ಸತ್ಯವನ್ನು ಪರಮ ಸೂಕ್ಷ ಹಂತದಲ್ಲಿಯೂ ವೀಕ್ಷಿಸಿದಂತಹ ತಥಾಗತರಾಗಲಿ ಅಥವಾ ಅವರ ಶ್ರéೇಷ್ಟ ಧಮ್ಮವರಿತ ಅವರ ಶಿಷ್ಯರಾಗಲಿ ಅಂತಹ ಭ್ರಮೆಯಲ್ಲಿ ಬೀಳುವುದಿಲ್ಲ.)


Thursday 31 October 2019

"ವ್ಯಕ್ತಿಯನ್ನು ಅರಿಯುವುದು ಹೇಗೆ?" how to know the person in kannada

"ವ್ಯಕ್ತಿಯನ್ನು ಅರಿಯುವುದು ಹೇಗೆ?"



"ಭಿಕ್ಷುಗಳೇ, ಈ ನಾಲ್ಕು ಸ್ಥಿತಿಗಳಿಂದಾಗಿ ಪರರ ನಾಲ್ಕನ್ನು ಅರಿಯಬಹುದು?"
"ಭಿಕ್ಷುಗಳೇ, ಒಬ್ಬನು ಜೊತೆಯಲ್ಲಿ ಇದ್ದಾಗ, ಆತನ ಶೀಲವನ್ನು ಅರಿಯಬಹುದು. ಆಗಾಗ್ಗೆ ಭೇಟಿ ಮಾಡುವುದರಿಂದಲ್ಲ, ದೀರ್ಘಕಾಲ ಜೊತೆಯಲ್ಲಿ ಇದ್ದಾಗ, ಸಮೀಪದಿಂದ ಗಮನಹರಿಸುವುದರಿಂದ ಪ್ರಾಜ್ಞರು ಆತನ ಶೀಲವನ್ನು ಅರಿಯಬಹುದು, ಇದು ಗಮನಹರಿಸದಿದ್ದಾಗ, ಅಥವಾ ದುರ್ಬಲ ಪ್ರಾಜ್ಞರಿಗೆ ಸಾಧ್ಯವಾಗುವುದಿಲ್ಲ."

"ಹಾಗೆಯೇ ದೀರ್ಘಕಾಲ ಜೀವಿಸಿದಾಗ ಆತನ ಪಾರದರ್ಶಕತೆ, ನಿಷ್ಠೆ ಅರ್ಥ ಮಾಡಿಕೊಳ್ಳಬಹುದು.  ಆಗಾಗ್ಗೆ ಭೇಟಿ ಮಾಡುವುದರಿಂದಲ್ಲ, ದೀರ್ಘಕಾಲ ಜೊತೆಯಲ್ಲಿ ಇದ್ದಾಗ, ಸಮೀಪದಿಂದ ಗಮನಹರಿಸುವುದರಿಂದ ಪ್ರಾಜ್ಞರು ಆತನ ಪಾರದರ್ಶಕತೆ, ನಿಷ್ಠೆ ವನ್ನು ಅರಿಯಬಹುದು, ಇದು ಗಮನಹರಿಸದಿದ್ದಾಗ, ಅಥವಾ ದುರ್ಬಲ ಪ್ರಾಜ್ಞರಿಗೆ ಸಾಧ್ಯವಾಗುವುದಿಲ್ಲ".

"ಹಾಗೆಯೇ ವಿಷಮ ಪರಿಸ್ಥಿತಿಗಳು ಇದ್ದಾಗ ಆತನ ಧೈರ್ಯವನ್ನು (ಸಮಚಿತ್ತತೆಯನ್ನು) ಅರಿಯಬಹುದು. ಆಗಾಗ್ಗೆ ಭೇಟಿ ಮಾಡುವುದರಿಂದಲ್ಲ, ದೀರ್ಘಕಾಲ ಜೊತೆಯಲ್ಲಿ ಇದ್ದಾಗ, ಸಮೀಪದಿಂದ ಗಮನಹರಿಸುವುದರಿಂದ ಪ್ರಾಜ್ಞರು ಆತನ ಧೈರ್ಯವನ್ನು (ಸಮಚಿತ್ತತೆಯನ್ನು) ವನ್ನು ಅರಿಯಬಹುದು, ಇದು ಗಮನಹರಿಸದಿದ್ದಾಗ, ಅಥವಾ ದುರ್ಬಲ ಪ್ರಾಜ್ಞರಿಗೆ ಸಾಧ್ಯವಾಗುವುದಿಲ್ಲ."

  "ಹಾಗೆಯೇ ಆತನ ಜೊತೆ ಸಂಭಾಷಣೆ ಮಾಡಿದಾಗ, ಆತನ ಪ್ರಜ್ಞಾಶೀಲತೆ (ಬುದ್ಧಿವಂತಿಕೆ) ಅರಿಯಬಹುದು.
ಇವೆಲ್ಲವೂ ಒಂದೇಬಾರಿಗೆ ತಿಳಿಯುವುದಿಲ್ಲ, ದೀರ್ಘಕಾಲ, ಸಾಮೀಪ್ಯದಿಂದ ಪ್ರಜ್ಞಾವಂತನು ಗಮನಹರಿಸಿದಾಗ ಅರಿವಾಗುತ್ತದೆ ಹೊರತು, ದುರ್ಬಲ ಪ್ರಾಜ್ಞರಿಗೆ ಮತ್ತು ಗಮನಹರಿಸದೆ ಅರಿಯ ಲಾಗುವುದಿಲ್ಲ."

Tuesday 22 October 2019

4 ಉಪಾದಾನಗಳು (ಅಂಟುವಿಕೆಗಳು) 4 attachments

4 ಉಪಾದಾನಗಳು (ಅಂಟುವಿಕೆಗಳು)


ಭಿಕ್ಷುಗಳೇ ನಾಲ್ಕು ರೀತಿಯ ಉಪಾದಾನಗಳಿವೆ (ಅಂಟುವಿಕೆಗಳಿವೆ) ಅವು ಯಾವುವು?
 (1) ಇಂದ್ರೀಯ ಸುಖಗಳಿಗೆ ಅಂಟುವಿಕೆ
 (2) ಮಿಥ್ಯಾದೃಷ್ಟಿಗೆ ಅಂಟುವಿಕೆ
(3) ವಿಧಿಸಂಸ್ಕಾರ, ಮೂಢಾಚರಣೆಗೆ ಅಂಟುವಿಕೆ
 (4) ಆತ್ಮ ಸಿದ್ಧಾಂತಕ್ಕೆ ಅಂಟುವಿಕೆ.

ಕೆಲವು ಮಿಥ್ಯಾ ದಾರ್ಶನಿಕರು, ತಾವು ಎಲ್ಲಾ ಅಂಟುವಿಕೆಯನ್ನು ಅರಿತಿದ್ದೇವೆ, ಎಲ್ಲವನ್ನೂ ತ್ಯಜಿಸಿದ್ದೇವೆ ಎಂದು ಹೇಳುತ್ತಾರೆ. ಆದರೆ ಅವರು ಪೂರ್ಣ ಸತ್ಯಗಳನ್ನು ಅರಿತಿರುವುದಿಲ್ಲ ಮತ್ತು ಹಾಗೆಯೇ ತ್ಯಜಿಸಿರುವುದು ಇಲ್ಲ.

ಅಜ್ಞಾನಿ ಯಾರು? who is ignorant ?

ಅಜ್ಞಾನಿ ಯಾರು?


ಒಬ್ಬನು ಬಂದು ಭಗವಾನರಿಗೆ ಹೀಗೆ ಪ್ರಶ್ನಿಸುತ್ತಾನೆ: ಭಗವಾನ್ ಅಜ್ಞಾನವೆಂದರೇನು ಮತ್ತು ಎಲ್ಲಿಯವರೆಗೆ ಒಬ್ಬನು ಅಜ್ಞಾನಿ ಎನಿಸಿಕೊಳ್ಳುತ್ತಾನೆ?
ಗೃಹಪತಿಯೇ, ಇಲ್ಲಿ ಯಾರು ದೇಹವನ್ನು ಅರಿಯುವುದಿಲ್ಲವೋ ಅದರ ಉದಯವನ್ನು ಅರಿಯುವುದಿಲ್ಲವೋ, ಅದರ ನಿರೋಧವನ್ನು ಅರಿಯುವುದಿಲ್ಲವೋ, ಅದರ ನಿರೋಧಕ್ಕೆ ಒಯ್ಯುವ ಮಾರ್ಗ ಅರಿಯುವುದಿಲ್ಲವೋ ಹಾಗೆಯೇ ವೇದನೆಗಳನ್ನು ಅರಿಯುವುದಿಲ್ಲವೋ ಅವುಗಳ ಉದಯವನ್ನು ಅರಿಯುವುದಿಲ್ಲವೋ ಅವುಗಳ ನಿರೋಧವನ್ನು ಅರಿಯುವುದಿಲ್ಲವೋ, ಅವುಗಳ ನಿರೋಧಕ್ಕೆ ಒಯ್ಯುವ ಮಾರ್ಗ ಅರಿಯುವುದಿಲ್ಲವೋ ಹಾಗೆಯೇ ಸಞ್ಞಗಳನ್ನು (ಗ್ರಹಿಕೆ) ಅರಿಯುವುದಿಲ್ಲವೋ, ಸಂಖಾರಗಳನ್ನು (ಚಿತ್ತದ ಚಟುವಟಿಕೆ) ಅರಿಯುವುದಿಲ್ಲವೋ, ವಿಞ್ಞಾನವನ್ನು (ಅರಿವನ್ನು) ಅರಿಯುವುದಿಲ್ಲವೋ ಅವುಗಳ ಉದಯವನ್ನು ಅರಿಯುವುದಿಲ್ಲವೋ, ಅವುಗಳ ನಿರೋಧವನ್ನು ಅರಿಯುವುದಿಲ್ಲವೋ ನಿರೋಧಕ್ಕೆ ಒಯ್ಯುವ ಮಾರ್ಗವನ್ನು ಅರಿಯುವುದಿಲ್ಲವೋ ಇಲ್ಲಿಯವರೆಗೆ ಆತನು ಅಜ್ಞಾನಿಯಾಗಿರುತ್ತಾನೆ.
(ಅಂದರೆ ಒಟ್ಟಾರೆ ದೇಹ, ಮನಸ್ಸಿನ ವಿಶ್ಲೇಷಣೆ, ಕ್ರಿಯೆ, ಉದಯ ನಿರೋಧ ಮತ್ತು ನಿರೋಧ ಮಾರ್ಗ ಅರಿಯದವರು ಅಜ್ಞಾನಿ ಎನಿಸಿಕೊಳ್ಳುತ್ತಾರೆ ಅಥವಾ ಆರ್ಯಸತ್ಯಗಳನ್ನು ಅರಿಯದವರು ಅಜ್ಞಾನಿಗಳು ಎನಿಸಿಕೊಳ್ಳುತ್ತಾರೆ.) 

ಸಾಕ್ಷಾತ್ಕರಿಸಲೇ ಬೇಕಾದ ನಾಲ್ಕು

ಸಾಕ್ಷಾತ್ಕರಿಸಲೇ ಬೇಕಾದ ನಾಲ್ಕು


ಭಿಕ್ಷುಗಳೇ, ಈ ನಾಲ್ಕನ್ನು ಸಾಕ್ಷಾತ್ಕರಿಸಲೇ ಬೇಕಾಗಿದೆ, ಯಾವುವವು ನಾಲ್ಕು?
(ಚಿತ್ತ) ಕಾಯದಿಂದ ಸಾಕ್ಷಾತ್ಕರಿಸುವಂತಹುದು;
     ಸ್ಮೃತಿಯಿಂದ ಸಾಕ್ಷಾತ್ಕರಿಸು ವಂತಹುದು;
     ದಿವ್ಯದೃಷ್ಟಿಯಿಂದ ಸಾಕ್ಷಾತ್ಕರಿಸುವಂತಹುದು ;
    ಮತ್ತು ಪ್ರಜ್ಞಾದಿಂದ ಸಾಕ್ಷಾತ್ಕರಿಸುವಂತಹುದು.

ಕಾಯದಿಂದ ಸಾಕ್ಷಾತ್ಕರಿಸುವಂತಹುದು ಯಾವುದು ಭಿಕ್ಷುಗಳೇ?
ಅಷ್ಟ ವಿಮೋಕ್ಖಗಳು (ಬಿಡುಗಡೆ) ಸಾಕ್ಷಾತ್ಕರಿಸಬಹುದು.

ಸ್ಮೃತಿಯಿಂದ ಸಾಕ್ಷಾತ್ಕರಿಸುವಂತಹುದು, ಯಾವುದು ಭಿಕ್ಷುಗಳೇ?
ಪೂರ್ವ ಜನ್ಮಗಳನ್ನು ಸಾಕ್ಷಾತ್ಕರಿಸಬಹುದು.

ದಿವ್ಯದೃಷ್ಟಿಯಿಂದ ಸಾಕ್ಷಾತ್ಕರಿಸುವಂತಹುದು ಯಾವುವು ಭಿಕ್ಷುಗಳೇ?
ಮರಣ, ಪುನರ್ಜನ್ಮ ಮತ್ತು ಕರ್ಮ ನಿಯಮಗಳನ್ನು ಸಾಕ್ಷಾತ್ಕರಿಸಬಹುದು.

ಪ್ರಜ್ಞಾದಿಂದ ಸಾಕ್ಷಾತ್ಕರಿಸುವಂತಹುದು ಯಾವುದು ಭಿಕ್ಷುಗಳೇ?
ಅಸವ ಕ್ಷಯವನ್ನು ಸಾಕ್ಷಾತ್ಕರಿಸಬಹುದು.

ಚಿಂತನಾತೀತವಾದುದು ಯಾವುದು? which are the things beyond thinking ?

ಚಿಂತನಾತೀತವಾದುದು ಯಾವುದು?


ಭಿಕ್ಷುಗಳೇ ಇವು ನಾಲ್ಕು ಚಿಂತನೆಗೆ ಅತೀತವಾಗಿವೆ, ತರ್ಕಕ್ಕೆ ಅತೀತವಾಗಿವೆ, ಚಿಂತಿಸಲು ಆಗುವುದಿಲ್ಲ. ಹಾಗೇನಾದರೂ ಒಬ್ಬನು ಪ್ರಯತ್ನಿಸಿದರೆ ಆತನ ಮನಸ್ಸು ಚದುರಿ ಹೋಗುವುದು, ಕ್ಷೊಭೆಗೆ ಒಳಗಾಗುವುದು, ನಿರಾಶನಾಗುವನು, ಯಾವುವವು ನಾಲ್ಕು?
1. ಭಿಕ್ಷುಗಳೇ ಬುದ್ಧರ ಕ್ಷೇತ್ರವು ಚಿಂತನಾತೀತವಾಗಿದೆ, ತಕರ್ಾತೀತವಾಗಿದೆ. ಅದನ್ನು ಚಿಂತಿಸಲು ಆಗುವುದಿಲ್ಲ. ಹಾಗೆಯೇ
2.  ಸಮಾಧಿಯ ಕ್ಷೇತ್ರಗಳು ಚಿಂತನೆಗೆ ಸಿಗದು. ಅದು ಚಿಂತನಾತೀತವಾಗಿದೆ, ತಕರ್ಾತೀತವಾಗಿದೆ. ಹಾಗೆಯೇ
3. ಕರ್ಮಫಲಗಳ ಕ್ಷೇತ್ರವು ಚಿಂತನಾತೀತವಾಗಿದೆ. ತಕರ್ಾತೀತವಾಗಿದೆ. ಅದು ಚಿಂತನೆಗೆ ಸಿಗದು ಮತ್ತು
4.  ಲೋಕಗಳ ಚಿಂತನೆ ಅಂದರೆ ಸೃಷ್ಟಿರಹಸ್ಯ, ಅದು ಚಿಂತನೆಗೆ ಸಿಗದು, ಚಿಂತನಾತೀತವಾಗಿದೆ, ತಕರ್ಾತೀತವಾಗಿದೆ. ಇವೇ ಭಿಕ್ಷುಗಳೇ, ಆ ನಾಲ್ಕು. ಇವುಗಳನ್ನು ಅರಿಯಲು ಕೇವಲ ಚಿಂತನೆಗೆ ಅಥವಾ ತರ್ಕಕ್ಕೆ ಮೊರೆ ಹೋದರೆ ಆತನ ಮನಸ್ಸು ಚದುರಿಹೋಗುವುದು. ಕ್ಷೊಭೆಗೆ ಒಳಗಾಗುವುದು, ನಿರಾಶನಾಗುವನು.

Saturday 12 October 2019

ಅಕ್ಟೋಬರ್ ತಿಂಗಳ ಹುಣ್ಣಿಮೆಯ ಪ್ರಾಶಸ್ತ್ಯತೆ

ಅಕ್ಟೋಬರ್ ತಿಂಗಳ ಹುಣ್ಣಿಮೆಯ ಪ್ರಾಶಸ್ತ್ಯತೆ

1. ಆಷಾಡ ಮಾಸದಿಂದ ಆರಂಭವಾದ ಭಿಕ್ಖುಸಂಘದ ಮೂರು ತಿಂಗಳ ವರ್ಷವಾಸವು ಪವಾರಣಾ ದಿನದಂದು ಮುಗಿಯುವುದು. ನಂತರ ಬರುವುದೇ ಕಠಿನ ಚೀವರ ವಸ್ತ್ರದಾನದ ಹಬ್ಬ. ಇದು ಪರಂಪರಾಗತವಾಗಿ ಬಂದಿರುವ ಹಬ್ಬವಾಗಿದೆ. ಮತ್ತು ಈ ಸಂಪ್ರದಾಯವು ಕೇವಲ ಥೇರವಾದಿ ಬೌದ್ಧರಲ್ಲಿ ಮಾತ್ರ ಬರುವುದು. ಇದು ಬೌಧ್ಧರ ವಾಷರ್ಿಕ ಹಬ್ಬವಾಗಿದ್ದು ಆ ದಿನದಂದು ಸಂಘದ ಅವಶ್ಯಕತೆಗಳಾದ ಚೀವರ ವಸ್ತ್ರ, ಪಿಂಡಪಾತ ಮತ್ತಿತರ ದಾನಗಳನ್ನು ಉಪಾಸಕರು ಭಿಕ್ಖು ಸಂಘಕ್ಕೆ ನೀಡುವರು.
     
       ಈ ಕಠಿನಚೀವರದ ಐತಿಹಾಸಿಕ ಹಿನ್ನಲೆಯು ನಮಗೆ ವಿನಯ ಪಿಟಕದಲ್ಲಿ ಸಿಗುವುದು. ಆಗ ಭಗವಾನರು ಶ್ರಾವಸ್ತಿಯ ಜೇತವನದ ವಿಹಾರದಲ್ಲಿದ್ದರು. ಆಗ 30 ಭಿಕ್ಖುಗಳ ಗುಂಪೂಂದು ವಷರ್ಾವಾಸದ ನಂತರ ಭೇಟಿಯಾಗುತ್ತಾರೆ. ಆಗ ಭಗವಾನರು ಅವರಿಗೆ ಅವರ ವರ್ಷವಾಸದ ಬಗ್ಗೆ ಕೇಳುತ್ತಾರೆ. ಹಾಗೆಯೇ ಅವರ ಹರಿದ ವಸ್ತ್ರಗಳನ್ನು ನೋಡುತ್ತಾರೆ. ಆ ಕಾಲದಲ್ಲಿ ಭಿಕ್ಖುಗಳು ಪಂಸುಕೂಲವನ್ನು(ಹರಿದ ವಸ್ತ್ರ) ಧರಿಸುತ್ತಿದ್ದರು. ಆ ಹರಿದ ವಸ್ತ್ರವನ್ನು ಅವರು ಸ್ಮಶಾನಗಳಲ್ಲಿ, ಬೀದಿಗಳಲ್ಲಿ, ಕಸದ ರಾಶಿಗಳಲ್ಲಿ ಎತ್ತಿಕೊಂಡು ಅವನ್ನು ಸೂಜಿಯಿಂದ ಹೋಲಿದು ಅವನ್ನು ಧರಿಸುತ್ತಿದ್ದರು. ಇದರಿಂದ ನಿವಾರಿಸಿಕೊಳ್ಳಲು ಭಗವಾನರು ಕಠಿನ ಚೀವರ ದಾನಕೆ ಈ ದಿನದಂದೆ ಅನುಮತಿ ನೀಡಿದರು.

ಬುದ್ಧ ಭಗವಾನರು ವಿನಯ ಪಿಟಕದ ಮಹಾವಗ್ಗದಲ್ಲಿ ಹೇಳಿದ್ದಾರೆ. ಕಠಿನ ಚೀವರ ದಾನವು ಉನ್ನತ ದಾನವಾಗಿದ್ದು, ಕುಶಲ ಕಮ್ಮಗಳಲ್ಲೆ ಅತ್ಯಂತ ಪುಣ್ಯಕಾರಿ ಎಂದು ಪರಿಗಣಿಸಲ್ಪಟ್ಟಿದೆ. ಇದರ ಅಳೆಯಲಾಗದ ಪುಣ್ಯಫಲವು ನಮಗೆ ತಿಪಿಟಕದ ಅನೇಕ ಉದಾಹರಣೆಗಳಿಂದ ವ್ಯಕ್ತವಾಗುತ್ತದೆ. ಉದಾಹರಣೆಗೆ ಪೂಜ್ಯ ನಾಗಿತ ಥೇರರು ತಮ್ಮ ಹಿಂದಿನ ಜನ್ಮವೂಂದರಲ್ಲಿ ಕಠಿನಚೀವರ ದಾನವನ್ನು ಸಂಘಕ್ಕೆ ನೀಡಿದ್ದರು. ಅದರ ಫಲವಾಗಿ ಅವರು ಸ್ವಗರ್ೀಯ ಲೋಕಗಳಲ್ಲಿ ದೇವತೆಗಳ ಒಡೆಯರಾಗಿದ್ದರು. ಹಾಗೂ ಎಂದಿಗೂ ಅಸುಖಕಾರಿ ವಲಯಗಳಲ್ಲಿ ದುಃಖಿಸಲಿಲ್ಲ, ಮತ್ತು ತಮ್ಮ ಕೋನೆಯ ಜನ್ಮದಲ್ಲಿ ನಮ್ಮ ಬುದ್ಧರ ಕಾಲದಲ್ಲಿ ಅರಹಂತರಾದರು.


2. ಆಷಾಡ ಮಾಸದಿಂದ ತಮ್ಮ ತಾಯಿ ಮಹಾಮಯಾದೇವಿ ಸಹಿತ ದೇವತೆಗಳಿಗೆ ಬೋಧಿಸುತ್ತಿದ್ದಂತಹ ಅಭಿಧಮ್ಮವು ಇಂದು ಮುಕ್ತಾಯವಾಗಿದ್ದು ಈ ದಿನದಂದೆ ಅವರು ಸಂಕಸ್ಸಪುರದಲ್ಲಿ ದೇವಲೋಕದಿಂದ ಕೆಳಗೆ ಇಳಿದರು. ಅವರು ಬರುವುದನ್ನು ಮೊದಲೇ ಮಹಾ ಮೊಗ್ಗಲಾನರಿಗೆ ತಿಳಿಸಿದ್ದರು. ಹಾಗೂ ಮೊಗ್ಗಲಾನರು ಸಹಿತ ಎಲ್ಲರೂ ಏಳು ದಿನ ಮೊದಲೇ ಕಾಯುತ್ತಿದ್ದರು.

3. ಈ ದಿನದಂದೆ ಮೆತ್ತೇಯ್ಯ ಬೋಧಿಸತ್ವರು ತಮ್ಮ 500 ಹಿಂಬಾಲಕರಿಂದ ಜೊತೆಗೂಡಿ ಸಂಘವನ್ನು ಸೇರಿದರು.

4. ಈ ದಿನದಂದೆ ಸಂಘಮಿತ್ರ ಥೇರಿಯು ಶ್ರೀಲಂಕದಲ್ಲಿ ಬಂದು ಇಳಿದರು. ಇದಾದ 2 ತಿಂಗಳಲ್ಲೇ ಭಿಕ್ಖುಣಿ ಶಾಸನವು ಶ್ರೀಲಂಕದಲ್ಲಿ ಆರಂಭವಾಯಿತು. ಹೀಗೆ ಅವರೆಲ್ಲಾ ಧಮ್ಮ ಪ್ರಚಾರದಲ್ಲಿ ತಲ್ಲಿನರಾದರು.


ಈ ದಿನದಂದು ಎಲ್ಲರೂ ಪಂಚಸೀಲದಲ್ಲಿದ್ದು, ದಾನಗಳನ್ನು ಹೇರಳವಾಗಿ ಮಾಡುವರು.

ಭವತು ಸಬ್ಬ ಮಂಗಳಂ.

Saturday 5 October 2019

ಬುದ್ಧರು ಅಸಾಮಾನ್ಯ ಜ್ಞಾನವುಳ್ಳವರಾಗಿದ್ದರು

ಬುದ್ಧರು ಅಸಾಮಾನ್ಯ ಜ್ಞಾನವುಳ್ಳವರಾಗಿದ್ದರು


1. ಇಂದ್ರೀಯ ಪರೂಪರಿಯತ್ತಿ ಜ್ಞಾನ : 

ವ್ಯಕ್ತಿಯ ಯಾವ ವಿಶೇಷ, ಸಾಮಥ್ರ್ಯ (ಪ್ರತಿಭೆ) ಬಲಿಷ್ಠವಾಗಿದೆ ಅಥವಾ ದುರ್ಬಲವಾಗಿದೆ ಎಂದು ಅರಿಯುತ್ತಿದ್ದರು. ಉದಾಹರಣೆಗೆ (ಪಂಚೇಂದ್ರಿಯ : ಶ್ರದ್ಧಾ, ವೀರ್ಯ, ಸ್ಮೃತಿ, ಸಮಾಧಿ ಮತ್ತು ಪ್ರಜ್ಞಾ).

2. ಅಸಯ ಅನುಶಯ ಜ್ಞಾನ : 

ವ್ಯಕ್ತಿಯ ಗುಪ್ತ ಪ್ರವೃತ್ತಿ ಅರಿತು ಆತನಗೆ ಸಹಾಯ ಮಾಡುವ ಜ್ಞಾನ.

3. ಬುದ್ಧ ಚಕ್ಷು : 

ವ್ಯಕ್ತಿಗತವಾಗಿ ಸರ್ವ ಜೀವಿಗಳಿಗೆ ಹಿತಕಾರಿ ಉಂಟುಮಾಡುವ ಜ್ಞಾನ.

4. ಅನಾವರಣ ಜ್ಞಾನ : 

ಅಡೆತಡೆಗಳಿಲ್ಲದ ಜ್ಞಾನ.

5. ಸಬ್ಬಾನ್ನುತಾ ಜ್ಞಾನ : 

ಸಂಖಾರಗಳ ಬಗ್ಗೆ, ವಿಕಾರಗಳ ಬಗ್ಗೆ, ನಿಬ್ಬಾಣದ ಬಗ್ಗೆ, ತ್ರಿಲಕ್ಷಣಗಳ ಬಗ್ಗೆ, ಲಕ್ಷಣಗಳ ಬಗ್ಗೆ ಮತ್ತು ಪ್ರಗ್ಮಪ್ತಿ (ವ್ಯವಹಾರ ಸತ್ಯ)ಗಳ ಬಗ್ಗೆ ಸರ್ವಜ್ಞತಾ ಜ್ಞಾನ.

6. ಯಮಕ ಪತಿಯರಾಯ ಜ್ಞಾನ : 

ಏಕಕಾಲದಲ್ಲಿ ಎರಡೆರಡು ಪವಾಡ ಮಾಡುವ ಸಿದ್ಧಿಗಳು.

7. ಮಹಾ ಕರುಣಾ ಜ್ಞಾನ: 

ಸರ್ವಜೀವಿಗಳ ದುಃಖ ವಿಮುಕ್ತಿಯ ಜ್ಞಾನ

ಬುದ್ಧರು ಐದು ರೀತಿಯ ಚಕ್ಷುಧಾರಿಗಳು 5 types of eyes of Lord Buddha

ಬುದ್ಧರು ಐದು ರೀತಿಯ ಚಕ್ಷುಧಾರಿಗಳು :


1. ಭೌತಿಕ ಚಕ್ಷು : ಇದರಿಂದ ದೂರದಲ್ಲಿರುವ ಅತಿ ಚಿಕ್ಕ ಜೀವಿಯನ್ನು ನೋಡಬಹುದಿತ್ತು. 
2. ದಿವ್ಯಚಕ್ಷು : ಸರ್ವಜೀವಿಗಳ, ಸರ್ವ ಲೋಕಗಳ ಜ್ಞಾನ ಸಿಗುತ್ತಿತ್ತು.
3. ಪನ್ಯಾ ಚಕ್ಷು : ವಿಪಶ್ಶನ ಜ್ಞಾನ ಸಿಗುವಂತ ಚಕ್ಷು.
4. ಬುದ್ಧ ಚಕ್ಷು : ವ್ಯಕ್ತಿಗಳ ಸುಪ್ತ ಪ್ರವೃತ್ತಿ, ದೌರ್ಬಲ್ಯ ಮತ್ತು ವಿಶೇಷ ಪ್ರತಿಭೆಗಳನ್ನು ಗುತರ್ಿಸಿ ಅವರನ್ನು ನಿಬ್ಬಾಣಕ್ಕೆ ಕರೆದೊಯ್ಯುವ ವಿಶೇಷ ಜ್ಞಾನ ಚಕ್ಷು.
5. ಸಮಂತ ಚಕ್ಷು : ಸರ್ವಜ್ಞಾತಾ ಜ್ಞಾನ ಚಕ್ಷು.