Friday 15 August 2014

the great power of thinking in kannada

ಚಿಂತನೆಯೆಂಬ  ಮಹಾಶಕ್ತಿ -ಅನೀಶ್ ಬೋಧ್

"ನಾವು ಏನಾಗಿರುವೆವೊ ಅದೆಲ್ಲಾ ನಮ್ಮ ಯೋಚನೆಗಳ ಫಲವಾಗಿದೆ. ,ಹಿಂದಿನ ಯೋಚನೆಗಳ ಪಲಿತಾಂಶವೇ ಇಂದಿನ ನಾವು, ಈಗಿನ ಯೋಚನೆಗಳಂತೆ ಮುಂದಿನ ಭವಿಷ್ಯವಿರುವುದು. ಪ್ರದುಷ್ಟ ಯೋಚನೆಗಳಿಂದ ದುಃಖವು ಸಿಕ್ಕರೆ, ಕುಶಲ ಪ್ರಸನ್ನ ಯೋಚನೆಗಳಿಂದಲೇ ಸುಖವು ಲಭಿಸುವುದು, ಈಗಿನ ಸ್ಥಿತಿಗತಿಗಳಿಗೆ ಈ ಹಿಂದಿನ ಆಯ್ಕೆಗಳೇ ಕಾರಣವಾಗಿದ್ದವು, ನಮ್ಮ ಭವಿಷ್ಯ ಉನ್ನತವಾಗಿರಲೆಂದು  ಆಶಿಸಿದರೆ ಈಗಿನ ಯೋಚನೆ-ಯೋಜನೆ,  ನಿಧರ್ಾರ ಹಾಗು ಕಾರ್ಯಗಳು ಉತ್ತಮವಾಗಿರಬೇಕಾಗಿದೆ, ಯೋಚನೆಗಳಿಂದಲೇ ನಮ್ಮ ಉದ್ಭವ ,ಯೋಚನೆಗಳಿಂದಲೇ ನಾವು ಜಗತ್ತನ್ನು ಸಹಾ ನಿಮರ್ಿಸುತ್ತೇವೆ."                                                                               --ಬುದ್ಧ ಭಗವಾನರು.
       ಚಿಂತನೆ
ಚಿಂತನೆಯು ಮಾನಸಿಕ ಪ್ರಕ್ರಿಯೆಯಾಗಿದ್ದು, ಚಿಂತನೆಯು  ಯೋಚನೆಗಳ ಸಮೂಹದಿಂದಾಗುತ್ತವೆ, ಹಾಗೇಯೆ ಚಿಂತನೆಯು ಯೋಚನೆಗಳ ಮಹಾಸಮೂಹವನ್ನು ಉತ್ಪನ್ನುಗೊಳಿಸುತ್ತದೆ, ನಾವು ಪ್ರತಿ ಕ್ಷಣವೂ ಯಾಂತ್ರಿಕವಾಗಿ ಅಥವಾ ಐಚ್ಚಿಕವಾಗಿ  ಯೋಚಿಸುತ್ತಲೆ ಇರುತ್ತೇವೆ, ಆಳ ನಿದ್ರೆಯ ಹೊರತು ಸ್ವಪ್ನವಸ್ಥೆಯಲ್ಲಿಯೂ ಸಹಾ ನಮ್ಮ ಯೋಚನೆಗಳು ಮನಸ್ಸಿಗೆ ತಾಕುತ್ತಲೇ ಇರುವುದು. ವಿಜ್ಞಾನಿಗಳ ಪ್ರಕಾರ ನಿಮಿಷಕ್ಕೆ ಸಾವಿರಗಳ ಸಂಖ್ಯೆಯಲ್ಲಿ ಪದಗಳು ಯೋಚನೆಗಳಲ್ಲಿ ಹರಿದಾಡುತ್ತಿರುತ್ತವೆ. ಭಾವವೇಶದ ಯೋಚನೆಗಳನ್ನು ಚಿಂತನೆ ಎನ್ನಲಾಗದು, ಹಾಗೆಯೆ ನಮ್ಮ ನಿಯಂತ್ರಣವಿಲ್ಲದೆ ಉಂಟಾಗುತ್ತಿರುವ ಯೋಚನೆಗಳನ್ನು ಚಿಂತನೆ ಎನ್ನಲಾಗದು.ಇದು ಐಚ್ಚಿಕ ಪರಿಣಾಮಾತ್ಮಕ ಕ್ರಿಯೆಯಾಗಿದೆ.
ಚಿಂತನಾ ಪ್ರಕ್ರಿಯೆ
  ಮನಸ್ಸು ಹಾಗು ಮಾನಸಿಕ (ಚಿಂತನೆಯ)ವಿಷಯ ಇವಿಷ್ಟೇ ಅಲ್ಲಿ ಭಾಗವಿಸುವವು ಜೋತೆಗೆ ಅದಕ್ಕೆ ಸಂಬಂದಪಟ್ಟ ಎಲ್ಲಾ ವಿಷಯಗಳು ಅಥವಾ ದತ್ತಾಂಶಗಳು ಅಲ್ಲಿ ನೆರೆಯುತ್ತವೆ.  ಜೋತೆಗೆ ನಮ್ಮ ನೆನಪು ಇದ್ದಷ್ಟು, ಇನ್ನಷ್ಟು    ವಿಶಾಲವಾಗಿ ನಾವು ಹೆಚ್ಚು ಹೆಚ್ಚಾಗಿ ಚಿಂತನೆ ಮಾಡಬಹುದು.ಇಲ್ಲಿ ಭಾಷೆಯು ಪ್ರಮುಖ ಪಾತ್ರವಹಿಸುತ್ತದೆ,  ಚಿಂತನೆಯು ಸ್ವ-ಭಾಷಣದಂತೆ ಶಾಬ್ದಿಕವಾಗಿ,  ವಾಕ್ಯಗಳಂತೆ ೆೆ ಹಾಗೆಯೆ  ಮನೋಭಾವನೆಗಳಂತೆ , ಕಲ್ಪಿತ ಚಿತ್ರಗಳಂತೆ, ಆಕಾರಗಳಂತೆ, ನಕ್ಷೆಗಳಂತೆ,  ಅಂತರಿಕದಲ್ಲಿ  ಹರಿದಾಡುತ್ತಲೆ ಇರುವುದು ,ಹೀಗೆ ವಿಷಯಗಳ ಸಂಕಲನ, ಸಂಬಂಧಪಡದ ವಿಷಯಗಳು ಅಲ್ಲಿಂದ ನಿರ್ಗಮಿಸಿ  ತರ್ಕದ ವ್ಯವಕಲನವು ನಡೆಯುತ್ತವೆ, ವಿಷಯಗಳ ವಿಶ್ಲೇಷಣೆ ನಡೆಯುತ್ತಾ ಭಾಗಕಾರದಂತೆ ವಿಭಜಿಸುತ್ತಾ  ವಗರ್ೀಕರಣವೂ ನಡೆಯುವುದು ,ಚಿಂತನೆಗೆ ವಿಷಯ ಹಾಗು ಪ್ರಶ್ನೆಗಳೆ ಪ್ರಮುಖ ಅಧಾರವಾಗಿದೆ, ಪ್ರಶ್ನೆಗಳಿಂದ ಚಿಂತನೆಯು ಗುಣಾಕಾರದಂತೆ ಅಸಂಖ್ಯಪಟ್ಟು ವೃದ್ಧಿಯಾಗುವುದು.  ಚಿಂತನೆ ತಿಳಿದೊ ಅಥವಾ ತಿಳಿಯದೆಯೋ ತರ್ಕದ ಹಾದಿಯಲ್ಲಿ ಸಾಗುವುದು, ಈ ಪ್ರಕ್ರಿಯೆಯ   ಹಾದಿಯು ವಿಶ್ಲೇಷಣೆಯಿಂದ ಹಿಡಿದು, ಉಪಾಯ, ನಿಧರ್ಾರ, ಮನೋಭಾವ, ಜ್ಞಾನ ,ಅಥವಾ ಸಮಸ್ಯೆಯ ಪರಿಹಾರದವರೆಗೂ  ಸಾಗುವುದು.  ಇನ್ನು ಅದರಾಚೆಗೂ ಸಾಗುವುದು .ಚಿಂತನೆಗೆ ತರ್ಕವೇ ಮಾರ್ಗದರ್ಶಕ , ನಮ್ಮ ಚಿಂತನೆ ತರ್ಕಬದ್ದವಾದಷ್ಟು  ನಾವು ಇನ್ನು ಅತ್ಯುತ್ತಮವಾಗಿ ಚಿಂತನೆ ನಡೆಸಬಲ್ಲೆವು. ಪರಿಣಾಮವಶಾತ್ ಉತ್ತಮ  ಜ್ಞಾನವು ದೊರೆಯುವುದು.
 ಚಿಂತನೆಯು ಒಂದು ಕಲೆಯಾಗಿದೆ, ಯಾವುದೆ ಕಾರ್ಯದಂತೆ ವ್ವವಸ್ಥಿತವಾಗಿ ಚಿಂತನೆಮಾಡಬಹುದಾಗಿದೆ, ಚಿಂತನೆಯಿಂದಲೇ ನಿಜವಾದ ಕಲಿಕೆಯು ಆರಂಭವಾಗುವುದು, ಚಿಂತನೆಯು ನಂಬಲಾಗದಷ್ಟು ಪಲಿತಾಂಶವನ್ನು ನೀಡುವುದು, ಮಾನವನ ವಿಮುಕ್ತಿಯ ಮಾರ್ಗವು ಚಿಂತನೆಯಿಂದಲೆ ಆರಂಭವಾಗುವುದು, ಚಿಂತನೆಗೂ ಹಾಗು ನಿಧರ್ಾರಗಳಿಗೂ ಪರರನ್ನು ಅವಲಂಬಿಸುವುದು ದಾಸ್ಯತ್ವದ ಪರಮಾವಧಿಯೆ ಸರಿ. ಭಗವಾನ್ ಬುದ್ಧರು, ಸಾಕ್ರಟೀಸ್, ಜಿದ್ದು ಕೃಷ್ಣಮೂತರ್ಿ ರಂತಹ ಮಹನೀಯರು ಮಾತ್ರ ಸ್ವಯಂ ಚಿಂತನೆಮಾಡಿ ಅಭಿವೃದ್ಧಿಯಾಗಬೇಕೆಂದು ಪ್ರೇರೆಪಿಸಿದರು, ಸ್ವಯಂ ಆಗಿ ಚಿಂತಿಸುವವನೇ ಮೊದಲ ಶ್ರೇಣಿಯ ಮಾನವ ಎಂದು ಜಿದ್ದು ಕೃಷ್ಣಮೂತರ್ಿಯ ಪ್ರಧಾನ ಬೋಧನೆಯಾಗಿತ್ತು.    24 ಗಂಟೆಗಳ ನಿಂತುಕೊಂಡೇ ತಕರ್ಿಸುತ್ತ  ತನ್ನ ಪ್ರಶ್ನೆಗಳಿಗೆ ತಾನೇ ಪರಿಹಾರ ಸಿಗುವವರೆವಿಗೂ ಉತ್ತರ ಪಡೆಯುತ್ತಿದ್ದ ಸಾಕ್ರಟೀಸ್ ತುಂಬ ಖ್ಯಾತಿಗಳಿಸಿದ್ದನು. ಬುದ್ಧಭಗವಾನರು  49 ದಿನಗಳ ಕಾಲ ಸ್ವಯಂ ಆಗಿಯೆ ಯಾರ ಸಹಾಯವು ಇಲ್ಲದೆ ಸಂಯಕ್ ಸಂಬೋಧಿಯ ಶ್ರೇಷ್ಟ ಜ್ಙಾನವನ್ನು  ಗಳಿಸಿದರು ,ಪರರು ಸಹಾ ಇದೇ ರೀತಿ ಪ್ರಯತ್ನ ಪಟ್ಟರೆ ತನ್ನಂತೆ ಆಗಬಹುದು ಎಂದು ಹೇಳಿದರು..
ಚಿಂತನೆ ಏತಕ್ಕಾಗಿ
ಅವಶ್ಯಕತೆಯೆ ಚಿಂತನೆಗೆ ಮೂಲವಾಗಿದೆ. ಆ ಅವಶ್ಯಕತೆಯು  ಕುತೂಹಲವಾಗಿರಬಹುದು, ಸಮಸ್ಯೆಯಾಗಿರಬಹುದು, ಸತ್ಯಶೋಧನಾಸಕ್ತಿಯಾಗಿರಬಹುದು. ಇನ್ನೂ ಉನ್ನತ ಸುಖದ ಹುಡುಕಾಟವಾಗಿರಬಹುದು. ಅಥವಾ ಅಕಸ್ಮಿಕ ಘಟನೆಯು ಆಗಿರಬಹುದು, ಉಧಾಹರಿಸುವುದಾದರೆ  ನೂಟನ್ನನು ಆಫಲ್ ಮರದಕೆಳಗಿದ್ದಾಗ ಆಫಲ್ ಕೆಳಗೆ ಬಿದ್ದಾಗ ಆತ ನಡೆಸಿದ ಯೋಗ್ಯ ಚಿಂತನೆಯಿಂದ ಶ್ರೇಷ್ಠ ಗುರುತ್ವಾಕರ್ಷಣೆಯ ಸತ್ಯ ಹೋರಹೊಮ್ಮಲಿಲ್ಲ್ಲವೆ ? ಚಿಂತನೆಯಿಂದಲೇ ಸತ್ಯ ಹೋರಹೊಮ್ಮವುದು ಬೇರೆ ಮಾರ್ಗವೆ ಇಲ್ಲ. ಅಕರ್ಿಮಿಡಿಸ್ ನು ತೇಲುವ ತತ್ವವನ್ನು ಕಂಡುಹಿಡಿಯುವಾಗ ಸ್ನಾನದ ಕೋಠಡಿಯಿಂದ 'ಯುರೆಕಾ" ಎಂದು ಆನಂದದೋದ್ಗಾರ ಮಾಡುತ್ತಾ ಹೊರ ಬಂದಿದ್ದು  ಎಲ್ಲರಿಗೂ ಗೋತ್ತೆ ಇದೆ. ಈಗಂತು  ಉದ್ದೇಶಪೂರ್ವಕವಾಗಿಯು ಚಿಂತನೆ ನಡೆಸಿ ಅನೇಕನೇಕ ಸಂಶೋಧನೆಗಳನ್ನು ಈಗ ಹೂರಹಾಕುತಿದ್ದಾರೆ. ವೈಜ್ಞಾನಿಕ ಚಿಂತನೆಯಿಂದ ಮಹಾ ಸೇತುವೆಗಳು ನಿಮರ್ಾಣವಾದರೆ, ತಾತ್ವಿಕ ಚಿಂತನೆಯಿಂದ ಜೀವನದ ಮಾರ್ಗಗಳೇ ರೂಪಿತಗೊಂಡಿವೆ, ವೈಜ್ಞಾನಿಕ ಚಿಂತನೆಗಳಿಂದ ಬಲ್ಪುಗಳು ಅನ್ವéೇಷಿಸ್ಪಟ್ಟರೆ,  ತಾತ್ವಿಕ ಚಿಂತನೆಯಿಂದ ಜಗತ್ತಿಗೆ ಮಹಾ ಬೆಳಕು ನೀಡಲ್ಪಟ್ಟಿದೆ, ವೈಜ್ಞಾನಿಕ ಚಿಂತನೆಯಿಂದ ನ್ಯೂಕ್ಲಿಯರ್ ಪ್ಲಾಂಟ್ ಗಳು ನಿಮರ್ಾಣಗೊಂಡರೇ ತಾತ್ವಿಕ ಚಿಂತನೆಯಿಂದಾಗಿ ಜೀವಿಸಲು , ಉನ್ನತರಾಗಲು, ಮಾನಸಿಕ ಬಲಿಷ್ಟತೆ ಪಡೆಯುವಂತಾಯಿತು, ಚಿಂತನೆಗಳು ಕೇವಲ ವಿಜ್ಞಾನಿಗಳಿಗೆ  ಅಥವಾ   ತಾತ್ವಿಕರಿಗೆ ಮಾತ್ರವಲ್ಲ ,ಮಾತ್ರವಲ್ಲ  ಜನಸಮಾನ್ಯರು ಮಾಡಲೇ   ಬೇಕಾಗಿರುವಂತಹದ್ದಾಗಿದೆ. ಎಕೆಂದರೆ ಸಮಾನ್ಯ ಜೀವನದಲ್ಲು ಸಹಾ ಯೋಗ್ಯ ದೃಷ್ಟಿಕೋನಕ್ಕೆ ವಿಮಷರ್ೆಯು, ವೃತ್ತಿಯ ಅಭಿರುದ್ಧಿಗೆ ಸೃಜನಾತ್ಮಕತೆಯು, ಸಮಸ್ಯೆಗಳ ಪರಿಹಾರಕ್ಕೆ ಪರಿಣಾಮಾತ್ಮಕ ಚಿಂತನೆಯು ಅತ್ಯವಶ್ಯಕವಾಗಿದೆ. ಅಸಾಧರಣ ವ್ಯಕ್ತಿಗಳು ಸಮಸ್ಯೆಗಳ ಪರಿಹಾರಕ್ಕೆ ಚಿಂತನೆಯನ್ನೆ ಅವಲಂಬಿಸುತ್ತಾರೆ, ಹಾಗು ಅದರಲ್ಲೆ ಅಪಾರ ಶಕ್ತಿ ಪಡೆಯುತ್ತಾರೆ. ಬಲಿಷ್ಟ ವ್ಯಕ್ತಿತ್ವದ ನಿಮರ್ಾಣಕ್ಕೆ ಚಿಂತನೆ ಅತ್ಯವಶ್ಯಕವಾಗಿದೆ.
     ಕೆಲವೊಮ್ಮೆ  ದೃಶ್ಯಗಳು ಸಹಾ ಚಿಂತನೆಗೆ ಮಹಾ ಪ್ರೇರಣೆಯಾಗಬಲ್ಲದು. ಉದಾಹರಿಸುವುದಾದರೆ ಬುದ್ಧಭಗವಾನರು ರಾಜಕುಮಾರರಾಗಿದ್ದಾಗ ಅವರು ಕಂಡಂತಹ ರೋಗಿ, ವೃದ್ಧ, ಶವ ಹಾಗು ಸಂನ್ಯಾಸಿಯ ದೃಶ್ಯವು ಅವರಲ್ಲಿ ಅಪಾರ ವೈರಾಗ್ಯವನ್ನುಂಟು ಮಾಡಿ ಮುಂದೆ ಸಂಭೋದಿಪ್ರಾಪ್ತಿಗೆ ಕಾರಣವಾಯಿತು.
       "ನಿಮಿಷಮಾತ್ರದಲ್ಲಿ ಜೀವನವನ್ನು ಬಲಾಯಿಸುವುದು ಹೇಗೆ ?" ಎಂದು ಅಂಗ್ಲ ಲೇಖಕನೊಬ್ಬನು ಬರದಿದ್ದಾನೆ.ಚಿಂತನೆಯು ಜೀವನವನ್ನು ಹೇಗೆ ಮಾರ್ಪಡಿಸಬಲ್ಲದು ಎಂಬುದಕ್ಕೆ ಈ  ಪುಸ್ತಕದ ಹೆಸರು ಸಹಾ ಸ್ಪೂತರ್ಿಯಾಗಬಲ್ಲದಲ್ಲವೆ ? ಯಾವುದೇ ವ್ಯಕ್ತಿಯು ಯಾವುದೆ ರಂಗದಲ್ಲಿ ಯಶಸ್ಸು ಸಾಧಿಸಿದ್ದಾನೆ ಎಂದರೆ ಅತನ ವ್ಯಕ್ತಿತ್ವವು ಅಷ್ಟರ ಮಟ್ಟಿಗೆ ವಿಕಸಿತವಾಗಿದೆ ಎಂದೆ ಅರ್ಥವಾಗುವುದು, ಎಕೆಂದರೆ ಉನ್ನತ ಮನೋಭಾವವಿಲ್ಲದೆ ಉನ್ನತ ಶಿಖರವೇರಲು ಸಾಧ್ಯವಿಲ್ಲ, ಹಾಗೆಯೇ ಉನ್ನತ ಚಿಂತನೆಯಿಲ್ಲದೆ ಉನ್ನತ ಮನೋಭಾವವು ಸಹಾ  ಉಂಟಾಗಲಾರದು ಒಬ್ಬನು ಯೋಗ್ಯವಾಗಿ ನಿಸ್ಪಕ್ಷಪಾತವಾಗಿ ಚಿಂತನೆ ಮಾಡಿದಾಗ ಆತನಲ್ಲಿ ಸಂದೇಹ, ದಂದ್ವ ಹಾಗು ಮೌಡ್ಯತೆಗಳು ಅಳಿದು ಯೋಗ್ಯ ದೃಷ್ಟಿಕೋನ ಉಂಟಾಗುತ್ತದೆ, ನಂತರ ಯೋಗ್ಯ ದೃಷ್ಟಿಕೋನದಿಂದಾಗಿ ಆತನು ಯೋಗ್ಯ ನಿಧರ್ಾರ ತೆಗೆದುಕೊಳ್ಳುತ್ತಾನೆ, ಯೋಗ್ಯ ನಿಧರ್ಾರದಿಂದಾಗಿ ಆತನ ಕಾರ್ಯಗಳು ಹಾಗು ಮಾತುಗಳು ಸರಿಯಾಗಿರುತ್ತವೆ, ಅದರ ಪಲಿತಾಂಶವಾಗಿ ಎಲ್ಲವೂ ಒಳಿತೆ ಅಗುವುದು. ಹೀಗಾಗಿ ಯೋಗ್ಯ ಚಿಂತನೆಯು ಪರಮ ಪ್ರಾಧಾನ್ಯತೆಯನ್ನು ಪಡೆಯುತ್ತದೆ.
        ಚಿಂತನೆಯಿಂದ ನಮಗೆ ನಿಧರ್ಾರಶಕ್ತಿ ಸಿಗುತ್ತದೆ, ಕೆಲವಮ್ಮೆ ನಾವು ನಿಧರ್ಾರ ತಗೆದುಕೊಳ್ಳಲು ಆಗದೆ ಪರರಲ್ಲು ಆಶ್ರಯ ಪಡೆಯಲು ಹೋಗುತ್ತೇವೆ, ಅಲ್ಲಿ ಯೋಗ್ಯ ಸಲಹೆ ಸಿಕ್ಕರೆ ಪರವಾಗಿಲ್ಲ ಬದಲಾಗಿ ಇನ್ನಷ್ಟು ಹಾನಿಯಾಗುವಂತಹ ಮಿಥ್ಯ ಸಲಹೆ ಸಿಕ್ಕಿದಾಗ ಅನಾಹುತ ತಪ್ಪಿದ್ದಲ್ಲ, ನಮ್ಮ ಚಿಂತನೆ ತರ್ಕಬದ್ದವಾದಷ್ಟು  ನಾವು ಇನ್ನು ಅತ್ಯುತ್ತಮವಾಗಿ ಚಿಂತನೆ ನಡೆಸಬಲ್ಲೆವು. ಪರಿಣಾಮವಶಾತ್ ನಾವು ಉತ್ತಮ ನಿಧರ್ಾರ ಕೈಗೊಳ್ಳಬಹುದು, , ಅದರಿಂದಾಗಿ ಉತ್ತಮ ಜೀವನ ನಡೆಸಬಹುದಾಗಿದೆ. ಅದರೆ ಯೋಗ್ಯ ಚಿಂತನೆಯಿಂದ, ಹಾಗು ತರ್ಕಭರಿತ ಸೂತ್ರಗಳ ಆಧಾರಿತವಾಗಿ ಚಿಂತನೆ ಸಾಗಿದಾಗ ಅಗ ಖಂಡಿತವಾಗಿಯು ಯೋಗ್ಯ ನಿಧರ್ಾರದ ಉತ್ಪನ್ನವು ಸಿಕ್ಕೆಸಿಗುವುದು.
       ಪ್ರತಿ ಮಾನವನು ಕಡ್ಡಾಯವಾಗಿ ಚಿಂತನೆ ಮಾಡಬೇಕಾಗಿರುವ ವಿಷಯಗಳಿವೆ. ಅದೇಂದರೆ ತನ್ನ ಆರೋಗ್ಯದ ಬಗ್ಗೆ ,ಮಾನಸಿಕ ನೆಮ್ಮದಿಯ ಬಗ್ಗೆ ,ತನ್ನ ಕುಟುಂಬದ ಬಗ್ಗೆ ,ತನ್ನ ವೃತ್ತಿಯ ವೃದ್ಧಿಯ ಬಗ್ಗೆ, ಸಮಾಜದ ಬಗ್ಗೆ, ತನ್ನ ಬೌದ್ಧಿಕ ವಿಕಾಸದ ಬಗ್ಗೆ, ಹಾಗು ತನ್ನ ಮಾನಸಿಕ ವಿಕಾಸದ ಬಗ್ಗೆ , ತನ್ನ ನಡವಳಿಕೆಯ ಬಗ್ಗೆ, ಒಟ್ಟಾರೆ ವ್ಯಕ್ತಿತ್ವದ ವಿಕಾಸದ ಬಗ್ಗೆ ಆತನು ಚಿಂತನೆ ಮಾಡಲೇಬೇಕು ಇಲ್ಲದಿದ್ದರೆ ಆತನ ಅಭಿರುದ್ಧಿಯು ಆಗಲಾರದು.
ಚಿಂತನೆಯ ವೈವಿಧ್ಯತೆಗಳು
ಚಿಂತನೆಗಳಲ್ಲಿ ಹಲವಾರು ವೈವಿಧ್ಯತೆಗಳಿವೆ, ಅದರೆ ಇಲ್ಲಿ  ನಾನು ಕೇವಲ 3 ಬಗೆಯ ಚಿಂತನೆಗಳ ಬಗ್ಗೆ ಮಾತ್ರ ತಿಳಿಸಲು ಹೋಗಿದ್ದೇನೆ.
ಸೃಜನಾತ್ಮಕ ಚಿಂತನೆ:ಈ ಬಗೆಯ ಚಿಂತನೆಯಿಂದಲೇ ಮಾನವನು ಇಡೀ ಸೃಷ್ಟಿ ನಿಮರ್ಿಸಿದ್ದಾನೆ.ಅದು ಆಹಾರವಾಗಿರಬಹುದು, ಉಡುವ ಸುಂದರ ವಸ್ತ್ರವಾಗಿರಬಹುದು, ಇರುವ ಮನೆ,ಬಂಗಲೆಗಳಾಗಿರಬಹುದು,  ಔಷಧಿಯಾಗಿರಬಹುದು ಅಥವಾ ಇಂದ್ರೀಯಗಳನ್ನು  ತೃಪ್ತಿಗೊಳಿಸುವ ಟಿ.ವಿ., ರೇಡಿಯೊ,ಸಿನಿಮಾ,ಡಿ.ವಿ.ಡಿ., ಇತ್ಯಾದಿಗಳಾಗಿರಬಹುದು, ಯಾವುದೆ ವಾಹನವಾಗಿರಬಹುದು.ವಿಜ್ಞಾನಿಗಳಂತು ತಮ್ಮ ಸೃಜನಾತ್ಮಕ ಚಿಂತನೆಗಳಿಂದಾಗಿ  ನಿತ್ಯವೂ ನವನವೀನ ಸಂಶೋದನೆಗಳು  ಅಥವಾ ಆವéಿಷ್ಕಾರಗಳನ್ನು ಮಾಡುತ್ತಲೇ ಇದ್ದಾರೆ. ಸೃಜನಾತ್ಮಕ ಚಿಂತನೆಗಳಿಂದ ವಿಜ್ಞಾನಿಗಳಷ್ಟೇ ಅಲ್ಲದೆ ಸಾಹಿತಿಗಳು,ಕಲೆಕಾರರು, ಶಿಲ್ಪಿಗಳು ವೃತ್ತಿಪರರು,ನಿದರ್ೇಶಕರು ಇನ್ನಿತರರು ತಿಳಿದೊ ತಿಳಿಯದೆಯೊ ಹೊಸತನ್ನು ನೀಡುತ್ತಿದ್ದಾರೆ, ಈ ಬಗೆಯ ಚಿಂತನೆಗಳಿಗೆ ಅಪಾರ ಕಲ್ಪನಾಶಕ್ತಿ ಬೇಕಾಗುತ್ತದೆ ಅಥವಾ ವೃದ್ಧಿಸಬೇಕಾಗುತ್ತದೆ. ಎಡಿಸನ್ನನು ವಿಧ್ಯುತ್ ದೀಪವನ್ನು ಕಂಡು ಹಿಡಿದಿದ್ದುದು ಹೀಗೆಯೆ ಅಲ್ಲವೆ ? ಚಿಂತನೆಗಳಿಂದ ಕೇವಲ ಆವಿಷ್ಕಾರಗಳು ಹಾಗು ಸಂಶೋಧನೆಗಳಷ್ಟೆ  ಅಲ್ಲದೆ ಕಲೆ, ಸಾಹಿತ್ಯ, ಸಂಗೀತ ಇತ್ಯಾದಿ ಕ್ಷೇತ್ರಗಳು ಸಹಾ ಅಭಿವೃದ್ಧಿಗೊಂಡಿದೆ.
ಸೃಜನಾತ್ಮಕ ಆವಿಷ್ಕಾರಗಳು  ಪೂರ್ಣವಾಗಿ ನವೀನವಾಗಿರಬಹುದು, ಅಥವಾ ಹೂಸ ಬಗೆಯಲ್ಲಿ ನಿರೂಪಿಸಿರಬಹುದು. ಈ ಬಗೆಯ ಚಿಂತನೆಯಲ್ಲಿ ಹಲವಾರು ಬಗೆಯಲ್ಲಿ ಪರಿಹಾರ ಶೋಧಿಸುತ್ತಾರೆ, ಇದಕ್ಕಾಗಿ ತರ್ಕಯುತವಾಗಿ ಅಥವಾ ಅಸಂಬದ್ಧವಾದ ವಿಧದಲ್ಲಿಯು ಸಂಶೋಧನೆ ಹಾಗು ಆವಿಷ್ಕಾರ ಮಾಡಲಾಗುತ್ತದೆ. ಈ ವಿಧದ ಚಿಂತನೆಯಲ್ಲಿ ಯಾವುದೇ ನಿಯಮಗಳನ್ನು ಪಾಲಿಸದೆ ನಿಯಮತೀತರಾಗುತ್ತಾರೆ, ಈ ಬಗೆಯ ಚಿಂತನೆಯಲ್ಲಿ ಕಲ್ಪನೆಯು ಯತೇಚ್ಚವಾಗಿ ಬಳಕೆಯಾಗುತ್ತದೆ, ಕೆಲವೋಮ್ಮೆ  ಇಲ್ಲಿ  ಇರುವಂತಹ 2 ಆಥವಾ 3ರನ್ನು ಸಂಯೋಜಿಸಿ ಹೂಸತನ್ನು ಸೃಷ್ಟಿಸುತ್ತಾರೆ, ಅಥವಾ ಎರ್ರಬಿರ್ರಿಯಾಗಿ ಜೋಡಿಸಿ ಹೋಸತನ್ನು ಸೃಷ್ಟಿಸುತ್ತಾರೆ, ಅಥವಾ ಇರುವುದರಲ್ಲಿ ಕೆಲವೂಂದನ್ನು ಕತ್ತರಿಸಿ ಹೋಸತು ಸೃಷ್ಟಿಸುತ್ತಾರೆ, ಅಥವಾ ಪರ್ಯಾಯ ಚಿಂತನೆಯ ಬಳಕೆಯಿಂದಲೂ  ಹೋಸತನವನ್ನುಂಟು ಮಾಡುತ್ತಾರೆ ,ಅಥವಾ ತೀರ ವಿರುದ್ಧವಾಗಿ ಚಿಂತನೆ ಮಾಡಿ ಹೋಸತನ ಪ್ರದ್ರಶರ್ಿಸುತ್ತಾರೆ, ಅಥವಾ ವಿಸ್ತರಿಸಿ ,ವ್ಯಾಖ್ಯಾನಿಸಿ ಸೃಜನಾತ್ಮಕತೆಯನ್ನು ಪ್ರದಶರ್ೀಸುತ್ತಾರೆ.
2.ವಿಮಶರ್ಾತ್ಮಕ ಚಿಂತನೆ:  ವಿಚಾರಶೀಲರು,ಸತ್ಯಾನ್ವೇಷೀಗಳು, ಪತ್ತೇದಾರರು, ಟೀಕಕಾರರು, ವೈಜ್ಞಾನಿಕ ಮನೋಭಾವದವರು ಇನ್ನಿತರರು  ಈ ಬಗೆಯ ಚಿಂತನೆಯನ್ನು ಹೆಚ್ಚಾಗಿ ಮಾಡುವರು. ಈ ಬಗೆಯ ಚಿಂತನೆಯಿಂದಾಗಿ ಸತ್ಯ ಹೊರಹೊಮ್ಮುವುದರಿಂದಾಗಿ ಮನುಕುಲಕ್ಕೆ ಆಪಾರ ಒಳಿತಾಗುತ್ತಾ ಇದೆ. ಇಲ್ಲಿ ಸತ್ಯವನ್ನು ಮಿಥ್ಯದಿಂದ  ಬೇರ್ಪಡಿಸುತ್ತಾರೆ, ನಿಜಕ್ಕೂ ಬಹಳಷ್ಟು ಜನರು ನಿಸ್ಪಕ್ಷಪಾತಿಗಳಾಗಿರುವುದಿಲ್ಲ, ಅವರು ತಾವು ನೋಡಿದ್ದನ್ನು, ಕೇಳಿದ್ದನ್ನು, ಯೋಚಿಸಿದನ್ನು , ಹಾಗು ನಂಬಿದ್ದನ್ನೇ ನಿಜವೆಂದು ಸಾಧಿಸಲು ಹೋಗುತ್ತಾರೆ, ಅಂತಹವರು ಎಂದಿಗೂ ವಿಮಶರ್ಾತ್ಮಕ ಚಿಂತಕರಾಗಲು ಸಾಧ್ಯವಿಲ್ಲ, ಎಕೆಂದರೆ ಅವರು ತೆರೆದ ಮನಸ್ಕರಾಗಿರುವುದಿಲ್ಲ, ಅವರು ಸಹಾನುಭೂತಿಯಿಂದ ಅರ್ಥಮಾಡಿಕೊಳ್ಳಲು ಹೋಗುವುದಿಲ್ಲ, ಅಷ್ಟೇ ಏಕೆ ಪರರ ಚಿಂತನೆಗೆ ಗೌರವವೂ ನೀಡುವುದಿಲ್ಲ, ತಾವು ಕಲ್ಪಿಸಿದ್ದೇ ಅಥವಾ ನಂಬಿರುವುದೆ ಸತ್ಯ ಹೊರತು ಅನ್ಯಥಾ ಸಾಧ್ಯವಿಲ್ಲ ಎಂದು  ಭಾವಿಸುತ್ತಾರೆ, ಅದರೆ ಸತ್ಯವು ಸುಂದರವಾಗಿರಬೇಕೇಂದೇನೂ ಇಲ್ಲ, ಅದು ಕುರೂಪವೂ ಅಗಿರುತ್ತದೆ, ಸತ್ಯವೂ ಶುಭವಾಗಿರಬೇಕೆಂದೇನೂ ಇಲ್ಲ, ಅದು ಅಶುಭವೂ ಅಗಿರಬಲ್ಲದು, ಸತ್ಯವೂ ಸಿಹಿಯಾಗಿರ ಬೇಕೆಂದೇನೂ ಇಲ್ಲ, ಅದು ಕಹಿಯಾಗಿರಬಹುದು, ಹೀಗೆ ಸರಿಯಾಗಿ ಪರೀಕ್ಷೀಸಿತ್ತಾ, ಸಂಶೋಧಿಸುತ್ತಾ, ವಿಮಶರ್ಾವಾದಿಗಳು ಮಿಥ್ಯದಿಂದ ಸತ್ಯವನ್ನು ಬೇರ್ಪಡಿಸುತ್ತಾರೆ.ಹೀಗಾಗಿ ಸತ್ಯವೆಂದರೆ ತೋರಿಕೆಗೆ ಕಾಣಿಸುವದಷ್ಟೇ ಅಲ್ಲ ,ಅದರಾಚೇಗೂ ಅ(ನಾ)ವರಣ ಜ್ಞಾನವಿದೆ, ಎಂದು ವಿಮರ್ಶಕರು ಪರೀಕ್ಷೀಸಿ ,ವಗರ್ೀಕರಿಸಿ, ವಿಭಾಜಿಸಿ ಸತ್ಯವನ್ನು ನೀಡುತ್ತಾರೆ.
ವಿಮಷಾತ್ಮಕ ಚಿಂತಕರು ತೆರೆದ ಮನಸ್ಕರಾಗಿರ ಬೇಕಾಗುತ್ತದೆ, ಅವರು ಬೌದ್ಧಿಕವಾಗಿ ಸ್ವತಂತ್ರರಾಗಿರ ಬೇಕಾಗುತ್ತದೆ, ಅವರಲ್ಲಿ ಪ್ರಶ್ನಿಸುವ ಸಾಮರ್ಥವಿರಬೇಕಾಗುತ್ತದೆ, ಸಾಕ್ಷೀಯನ್ನು ಪರಿಗಣಿಸಿ ನಿರ್ಣಯಗಳನ್ನು ತಗೆದುಕೊಳ್ಳ ಬೇಕಾಗುತ್ತದೆ, ಅವರು ವಿಷಯಗಳಲ್ಲಿ ಸಂಪರ್ಕವನ್ನು ಅಥವಾ ಸಂಪರ್ಕರಹಿತತೆಯನ್ನು ಸ್ಪಷ್ಟವಾಗಿ ತಿಳಿಯ ಬೇಕಾಗುತ್ತದೆ, ಅವರು ಬಹುಷಃ ಇದೇ ಹಾಗು ನಿಖರವಾಗಿ ಇದೇ ಎಂಬಂತಹದರಲ್ಲಿ  ವ್ಯತ್ಯಾಸ ತಿಳಿಯುವ ಸಾಮಾರ್ಥವಂತರಾಗಬೇಕಾಗುತ್ತದೆ, ಅವರು ವಾಸ್ತವಗಳಿಂದ ಅಭಿಪ್ರಾಯಗಳನ್ನು ನಿದರ್ಾಕ್ಷೀಣ್ಯವಾಗಿ ತೆಗೆಯುವಂತಹವರಾಗಿರಬೇಕು, ಅವರಲ್ಲಿ ಹೇರಳವಾದ ಶಬ್ದಭಂಡಾರವಿದ್ದರೆ ಒಳಿತು, ಅವರು ವಾಗ್ಮಿಗಳಾಗಿದ್ದರೆ ಚೆನ್ನ. ಈ ಬಗೆಯ ಗುಣಗಳಿದ್ದವರು ವಿಮಷಾತ್ಮಕ ಚಿಂತಕರಾಗುತ್ತಾರೆ.
3. ಪರಿಣಾಮಾತ್ಮಕ ಚಿಂತನೆ: ಈ ಬಗೆಯ ಚಿಂತನೆಯನ್ನು  ಸಮಸ್ಯೆಗಳ ಪರಿಹರಿಸಲು ಬಳಸುತ್ತಾರೆ, ಈ ಬಗೆಯ ಚಿಂತನೆಯನ್ನು ಹೆಚ್ಚಾಗಿ ವೈದ್ಯಕೀಯದಲ್ಲಿ, ತರ್ಕನೈಪುಣ್ಯತೆಯಲ್ಲಿ,ಗಣಿತದಲ್ಲಿ,ಹಾಗು ವೈಜ್ಞಾನಿಕ ಸಂಶೋಧನೆಯಲ್ಲಿ ಬಳಸುತ್ತಾರೆ. ಈ ಚಿಂತನೆಯು ನಿಖರಿತ ತರ್ಕ ಆಧಾರಿತವಾಗಿರುತ್ತದೆ, ಉದಾಹರಿಸುವುದಾದರೆ ಚೀನಾದ ಲೆಖ್ಖಿಗನೊಬ್ಬನು ಸೂರ್ಯನಿಂದಾಗುವ ನೆರಳನ್ನು ಗಮನಿಸಿ ಆ ಆಧಾರದಿಂದಲೇ ರೇಖಗಣಿತದ ಸೂತ್ರಗಳ ಮೂಲಕವೇ ಆತನು ಸೂರ್ಯ ಹಾಗು ಭೂಮಿಯ ಅಂತರವನ್ನು ತಿಳಿಸಿದ್ದನು. ವೈದ್ಯ ವಿಜ್ಞಾನಿಗಳು ರೋಗ ಲಕ್ಷಣ, ರೋಗಕ್ಕೆ ಕಾರಣ, ಆರೋಗ್ಯ, ಹಾಗು ಔಷಧಿಗಳ ಬಗ್ಗೆ ಪ್ರಯೋಗಿಕ ಚಿಂತನೆಯನ್ನು ತರ್ಕಬದ್ಧವಾಗಿ ನಡೆಸಿ ರೋಗವನ್ನು ಪರಿಣಾಮಾತ್ಮಕವಾಗಿ ಹೋಗಲಾಡಿಸುತ್ತಿರುವರು. ಪರಿಣಾಮಾತ್ಮಕ ಚಿಂತನೆಯಲ್ಲಿ ಒಂದು ಸಮಸ್ಯೆಗೆ ಹಲವಾರು ರೀತಿಯಲ್ಲಿ ಪರಿಹಾರಗಳನ್ನು ನೀಡಿ ಅದರಲ್ಲಿ ಅತ್ಯುತ್ತಮವಾದುದ್ದನ್ನೆ ಆಯ್ಕೆ ಮಾಡುತ್ತಾರೆ. ಈ ಬಗೆಯ ಚಿಂತನೆಯಲ್ಲಿ ಸಮಸ್ಯೆಗೆ ಹಲವಾರು ಕಾರಣಗಳನ್ನು ಕಂಡುಹಿಡಿಯಬೇಕಾಗುತ್ತದೆ, ಹಾಗೆಯೆ ಸಮಸ್ಯೆಗೆ ಹಲವಾರು ವಿಧದ ಪರಿಹಾರ ಮಾರ್ಗಗಳನ್ನು ಕಂಡಿಹಿಡಿಯಬೇಕಾಗುತ್ತದೆ.
ಒಂದೇ ವಿಷಯವಸ್ತು , ಅದರೆ  ಚಿಂತನೆಯ ವೈವಿಧ್ಯತೆ ಅನೇಕ
ಒಂದೇ ಚಿಂತನೆಯ ವಿಷಯವು ವಿವಿದ ಬಗೆಯ ಚಿಂತಕರಲ್ಲಿ ವೈವಿಧ್ಯಮಯ ಚಿಂತನೆಗೆ  ದಾರಿ ಮಾಡಿಕೊಡುತ್ತದೆ, ಉದಾಹರಿಸುವುದಾದರೆ
 1. ಒಬ್ಬ ಪಾಪಿಗೆ ದೀಪವೂ ದ್ವಂಸಕಾರಿ  ಯೋಚನೆಗಳನ್ನು ತರಿಸಬಹುದು
 2. ಅದೇ ಸಮಾನ್ಯ ದೀಪವು ಎಡಿಸನ್ನನಿಗೆ ವಿದ್ಯುತ್ ದೀಪ ಕಂಡು ಹಿಡಿಯಲು ಸಹಕಾರಿಯಾದರೆ,
 3. ಐನ್ ಸ್ಟೈನ್ ನಂತಹ ವಿಜ್ಞಾನಿಗೆ ದೀಪವು ಬೆಳಕಿನ ಸ್ವರೂಪದ ಬಗ್ಗೆ ಚಿಂತಿಸಲು ಪ್ರೇರೆಪಣೆ ನೀಡಿ ಬೆಳಕು 'ಕಣ' ಮಾತ್ರವಲ್ಲ ಅದು 'ಅಲ ೆಯು' ಸಹಾ ಎಂದು ಪ್ರತಿಪಾದಿಸಿದನು
,4. ಒಬ್ಬ ಯೋಗಿಗೆ ದೀಪವು ಧ್ಯಾನದ ವಸ್ತುವಾಗಿ ಕೇವಲ ಎಕಾಗ್ರತೆಯನ್ನು ವೃದ್ಧ್ಧಿಸಿ ದಿವ್ಯ ದೃಷ್ಟಿಗೆ ಸಹಾಯಕಾರಿಯಾಯಿತು,
 5. ಮಗುವನ್ನು ಕಳೆದುಕೊಂಡತಹ  ಕಿಸಗೋತಮಿಯು ಬುದ್ದರ ಬಳಿಗೆ ಬಂದಾಗ ಬುದ್ಧರು ಆಕೆಗೆ ಸಾಸುವೆಯನ್ನು ಕೇಳಿ ಆಕೆಯ ಮನವನ್ನು ಶಾಂತಗೊಳಿಸಿದ್ದು ಎಲ್ಲರಿಗೂ ತಿಳಿದೆ ಇದೆ, ಅದರೆ ಇದೇ ಕಿಸಾಗೋತಮಿಯು ಒಮ್ಮೆ ದೀಪಗಳನ್ನು ನೋಡುತ್ತಾ ಹೀಗೆ  ಧ್ಯಾನಿಸಿದಳು "ಈ ದೀಪಗಳಂತೆ ಲೋಕದಲ್ಲಿರುವ ಜೀವಿಗಳು ಸಹಾ; ಹೇಗೆಂದರೆ ಕೇಲವೊಂದು ಪ್ರಜ್ವಲಿಸಿ ಉರಿಯುತ್ತಿರುತ್ತವೆ, ಕೆಲವು ಮಿಣಕುಮಿಣೆನ್ನುತ್ತಾ ಉರಿಯುತ್ತವೆ, ಅದರೆ ನಿಬ್ಬಾಣವನ್ನು ಸಾಧಿಸಿರುವವರು ಎಂದಿಗೂ ಕಾಣಲಾರರು. ಅಂತಹ ಅಮರತ್ವವನ್ನು ಅರಿಯುವ ಏಕ ದಿನವೂ ಪರರ ನೂರು ವರ್ಷದ ಜೀವನಕ್ಕಿಂತ ಉತ್ತಮವಾದದು..." ಎಂದು ಚಿಂತನೆ ಮಾಡುತ್ತಾ ಆಕೆಯು ಜ್ಞಾನೋದಯ ಪ್ರಾಪ್ತಿಗಳಿಸಿ ಪರಮಾರ್ಥವನ್ನು ಸಾಧಿಸಿದಳು.
6.ಮಹಾನ್ ಭವಿಷ್ಯಕಾರ ನಾಷ್ಟ್ರೋಡಮಸ್ ದೀಪವನ್ನು ವೀಕ್ಷಿಸುತ್ತಲೇ ಅಪಾರ ಭವಿಷ್ಯವಾಣಿಗಳನ್ನು ಕಂಡು ಅದನ್ನು ರಚಿಸಿ ಸುಖ್ಯಾತನಾದನು.
7.ಚಿತ್ರಕಾರನಿಗೆ ದೀಪವು ರಚಿಸುವುದಕ್ಕಾಗಿ ಉತ್ತಮ ಕಲಾಕೃತಿಯ ವಸ್ತುವಾಗಿರುತ್ತದೆ.
8.ವ್ಯಾಪಾರಿಗೆ ದೀಪವು ವಿಕ್ರಯದ ಸಾಮಾಗ್ರಿಯಾಗಿ ಕಂಡು ಅದರ ಕುರಿತು ಲಾಭ ನಷ್ಟಗಳನ್ನು ಚಿಂತಿಸಬಹುದು.
9.   ವಿಮರ್ಷಕರು ಬೆಳಕು ಅಥವಾ ಅಗ್ನಿಯನ್ನು ದೇವರಲ್ಲ ಎಂದು ಚಿಂತಿಸಬಹುದು.
10. ಸೃಜನಾತ್ಮಕ ವೈಜ್ಙಾನಿಕರು ಹೂಸ ಹೂಸ ರೀತಿಯಲ್ಲಿ ಬೆಳಕನ್ನು ಉತ್ಪಾದಿಸುವುದು ಹೇಗೆ ಎಂದು ಚಿಂತನೆ ನಡೆಸಬಹುದು. ಹೀಗೆಯೇ ಇನ್ನು ಅನೇಕ ರೀತಿಯ ಚಿಂತಕರು ತಮ್ಮ ಶೈಲಿಯಲ್ಲಿ ವೈವಿದ್ಯಮಯವಾಗಿ ಚಿಂತನೆಮಾಡಬಹುದು.
ಚಿಂತನೆ ಹೇಗೆ ?
  ಚಿಂತನೆಯನ್ನು ಸ್ವ-ಅವಲೋಕನದಿಂದ ಆರಂಭಿಸೋಣ.
ಸ್ವ-ಅವಲೋಕನ:ಅಂದರೆ ವಿಮರ್ಷತ್ಮಾಕವಾಗಿ  ಸ್ವ-ಕಾರ್ಯಗಳನ್ನು , ಸ್ವ-ವಾಚವನ್ನು ಮತ್ತು   ವಿಶೇಷವಾಗಿ  ಸ್ವ-ಯೋಚನೆಗಳನ್ನು ವೀಕ್ಷಿಸಿವುದು. ಸ್ವ-ಅವಲೋಕನವು ಸುಲಭವಾದುದು, ಅದರೆ ಅನುಷ್ಠಾನವೇ ಕಠಿಣವಾದುದು, ಇದರ ಬಗ್ಗೆ  ಬುದ್ಧ ಭಗವಾನರು ರಾಹುಲನಿಗೆ ಹೇಳಿದ ಸುತ್ತದಲ್ಲಿ ಹೀಗಿದೆ:
ಬುದ್ಧಭಗವಾನರು: ರಾಹುಲ ದರ್ಪಣವು   ಏತಕ್ಕಾಗಿ ?
ರಾಹುಲ:  ಭಗವಾನ್ ಪ್ರತಿಬಿಂಬಿಸಿವುದಕ್ಕಾಗಿ ..
ಭಗವಾನರು:   ಅದೇ ರೀತಿ ರಾಹುಲ ದೇಹದಿಂದಾಗುವ ಕಾರ್ಯಗಳ ಬಗ್ಗೆ, ಮಾತಿನ ಚಟುವಟಿಕೆಯ ಬಗ್ಗೆ, ಹಾಗು ಮನಸ್ಸಿನ ಪ್ರಕ್ರಿಯೆಯ ಬಗ್ಗೆ ಪುನರಾವತರ್ಿತವಾಗಿ ಪ್ರತಿಬಿಂಬಿಸಬೇಕು. ಹೇಗೆಂದರೇ ಯಾವುದಾದರೂ ಕಾರ್ಯ ಮಾಡುವ/ಮಾತನಾಡುವ/ಯೋಚಿಸುವ ಮುನ್ನ  ಹೀಗೆ ಯೋಚಿಸಬೇಕು: "ಈ ನನ್ನ ಶಾರೀರಿಕ ಕಾರ್ಯ ದಿಂದ/ಮಾತಿನಿಂದ /ಯೋಚನೆಯಿಂದ  ನನಗೆ ಅಹಿತವಾಗುವುದೇ ಅಥವಾ ಪರರಿಗೆ ನೋವಾಗುವುದೇ ? ಹಾಗೇನಾದರೂ ಕಂಡು ಬಂದರೆ ಆ ಕೃತ್ಯವಾಗಲಿ, ಮಾತಾಗಲಿ ಅಥವಾ ಯೋಚನೆಯಾಗಲಿ ವಜರ್ಿಸಬೇಕು...ಹಾಗಲ್ಲದೆ ಒಳಿತಾಗುತ್ತಿದ್ದರೆ ಮುಂದುವರೆಸಬಹುದು."
ಹಾಗೇಯೆ ಯಾವುದಾದರೂ  ಕಾರ್ಯ ಮಾಡುತ್ತಿರುವಾಗ/ಮಾತನಾಡುತ್ತಿರುವಾಗ/ಯೋಚಿಸುತ್ತಿರುವಾಗ ಹೀಗೆಯೆ ಯೋಚಿಸಬೇಕು: "ಈ ನನ್ನ ಶಾರೀರಿಕ ಕಾರ್ಯ ದಿಂದ/ಮಾತಿನಿಂದ /ಯೋಚನೆಯಿಂದ  ನನಗೆ ಅಹಿತವಾಗುತ್ತಿದೆಯೆ ಅಥವಾ ಪರರಿಗೆ ನೋವಾಗುತ್ತಿದೆಯೆ ?   ಹಾಗೇನಾದರೂ ಕಂಡು ಬಂದರೆ ಆ ಕೃತ್ಯವಾಗಲಿ, ಮಾತಾಗಲಿ ಅಥವಾ ಯೋಚನೆಯಾಗಲಿ ವಜರ್ಿಸಬೇಕು... ಹಾಗಲ್ಲದೆ ಒಳಿತಾಗುತ್ತಿದ್ದರೆ ಮುಂದುವರೆಸಬಹುದು."
ಹಾಗೇಯೆ ಯಾವುದಾದರೂ ಕಾರ್ಯ ಮಾಡಿದ ನಂತರ ್ನ  ಹೀಗೆ ಯೋಚಿಸಬೇಕು: "ಈ ನನ್ನ ಶಾರೀರಿಕ ಕಾರ್ಯ ದಿಂದ/ಮಾತಿನಿಂದ /ಯೋಚನೆಯಿಂದ  ನನಗೆ ಅಹಿತವಾಯಿತೆ ಅಥವಾ ಪರರಿಗೆ ನೋವಾಯಿತೆ ?   ಹಾಗೇನಾದರೂ ಕಂಡು ಬಂದರೆ ಆ ಕೃತ್ಯವಾಗಲಿ, ಮಾತಾಗಲಿ ಅಥವಾ ಯೋಚನೆಯಾಗಲಿ ವಜರ್ಿಸಬೇಕು... ಹಾಗಲ್ಲದೆ ಒಳಿತಾಗುತ್ತಿದ್ದರೆ ಮುಂದುವರೆಸಬಹುದು."
"ರಾಹುಲ ಹೀಗೆ ನೀನು ಸುಶಿಕ್ಷೀತನಾಗಿ  ಸಂಕಲ್ಪಿಸಿಕೊಳ್ಳಬೇಕು  'ನಾನು ನಿರಂತರ ಶಾರೀರಿಕವಾಗಿ , ವಾಚಿಕವಾಗಿ ಹಾಗು ಯೋಚನೆಗಳಲ್ಲು ಪುನರಾವತರ್ಿತ  ಪ್ರತಿಬಿಂಬಿಸುವಿಕೆಯಿಂದ ಪರಿಶುದ್ಧಿ ಮಾಡಿಕೋಳ್ಳುತ್ತಿರುವೆನು.' ಹೀಗೆ ನೀನು ಸುಶಿಕ್ಷಿತನಾಗಬೇಕು.".
ಅದನ್ನು ಅಲಿಸಿದಂತಹ ರಾಹುಲ ಆನಂದಯುತ ಧನ್ಯತೆಯ ಭಾವ ವ್ಯಕ್ತಪಡಿಸಿದನು.
ವ್ಯಕ್ತಿತ್ವ ವಿಕಾಸದ ಚಿಂತನೆಗಳನ್ನು ಹೀಗೂ ಮಾಡಬಹುದು:
"ಸಮಾನ್ಯವಾಗಿ ನನ್ನ ಬಗ್ಗೆ ನನಗೆ ಏನು ತಿಳಿದಿದೆ ?"
"ಯಾವುದಕ್ಕಾಗಿ ನಾನು ಪ್ರಾಧಾನ್ಯತೆ ನೀಡುತ್ತಿದ್ದೇನೆ ?ಅವು ಬೆಲೆಬಾಳುವಂತಹುದೇ ? ಮೌಲ್ಯಯುತವಾದುದೆ ಅಥವಾ ಮೌಲ್ಯರಹಿತವಾದುದುರಲ್ಲಿ   ತಲ್ಲಿನನಾಗಿರುವನೇ ?"
"ನಾನು ಎಷ್ಟರಮಟ್ಟಿಗೆ ಬುದ್ದಿವಂತ ? ನಾನು ಯಾವ ಯಾವ ರಂಗಗಳಲ್ಲಿ ಅಜ್ಞಾನಿಯಾಗಿರುವೆನು ?"
"ನನ್ನ ಸಮಸ್ಯೆಗಳಿಗೆ ಕಾರಣಗಳೇನು ?"
"ಸಮಸ್ಯೆಗಳನ್ನು  ಎಷ್ಟು ವಿಧಗಳಿಂದ ದೂರಿಕರಿಸಬಹುದು ?"
"ನನಗಿರುವ ದೌರ್ಬಲ್ಯಗಳೇನು ?"
"ನನ್ನಲ್ಲಿರುವ ಶಕ್ತಿ ಸಮಾಥ್ರ್ಯಗಳಾವುವು ?"
"ನನಗೆ ನಾನೇ ಶತ್ರುವಾಗಿರುವೇನೆ ?ಹೇಗೆ ?"
"ನನ್ನ ಅವನತಿಗೆ ಪರರಿಗಿಂತ ನಾನೇ ಹೇಗೆ ಅಡ್ಡಿ ಯಾಗಿರುವೆನು ?"
"ನನ್ನ ಬಗ್ಗೆ ನನಗೆ ಎಷ್ಟು ನಂಬಿಕೆಯಿದೆ ?"
"ನನ್ನಲ್ಲಿ  ಪ್ರಯತ್ನಶೀಲತೆಯ ಗರಿಷ್ಠತೆ ಎಷ್ಟೀದೆ ?"
"ನನ್ನಲ್ಲಿ ಅಲಕ್ಷತೆಗೆ ಮೀರಿದ ಜಾಗೂರಕತೆ ಇದೆಯೆ ?"
"ನಾನು ಯಾವ ಯಾವ ವಿಷಯಗಳಲ್ಲಿ ಎಕಾಗ್ರತೆ ಸಹಜವಾಗಿ ಹೊಂದುತ್ತೇನೆ ? ಹಾಗು ಒಂದೇ ವಿಷಯದಲ್ಲಿ ಎಷ್ಟು ಕಾಲ ಎಕಾಗ್ರತೆಯಲ್ಲಿ ಇರುತ್ತೇನೆ ?ಎಷ್ಟು ವೇಗವಾಗಿ ಏಕಾಗ್ರತೆ ಹೂಂದುತ್ತೇನೆ ?"
"ನಾನು ಎಷ್ಟು ಸರಿಯಾಗಿ ಸತ್ಯಗಳನ್ನು ಅರ್ಥಮಾಡಿಕೋಳ್ಳುತ್ತೇನೆ ? ನನ್ನಲ್ಲಿ ವಿಮಶರ್ೆಮಾಡಿಕೊಳ್ಳುವ ಮನಸ್ಥಿತಿಯು ಉತ್ತಮವಾಗಿದೆಯೆ ?"
ಹೀಗೆಯೆ ಹಲವಾರು ವಿಧಗಳಿಂದ ಚಿಂತನೆ ಮಾಡುತ್ತಾ ಚಿಂತನಾ ಶಕ್ತಿಯನ್ನು ವೃದ್ಧಿಗೋಳಿಸ ಬೇಕು. ಅದೇ ರೀತಿ ಅರೋಗ್ಯದ ಬಗ್ಗೆ, ಐಶ್ವರ್ಯದ ಬಗ ್ಗೆ , ಮನಶ್ಶಾಂತಿಯ ಬಗ್ಗೆ ,ಸಮಾಜದ ಬಗ್ಗೆಯು  ಚಿಂತಿಸ ಬೇಕು.ಹೀಗೆ ಚಿಂತಿಸಿದಾಗ , ನಮ್ಮ ಯಶಸ್ಸಿನ ಶಕ್ತಿ ಹಾಗು ಸೋಲಿಗೆ ಇರುವ ದೌರ್ಬಲ್ಯಗಳು ಗೋತ್ತಾಗುವವು. ಹಾಗೆಯೆ ನಮ್ಮ ಲಾಭ-ನಷ್ಟಗಳಿಗೇ ಕಾರಣ ಮತ್ತು ಪರಿಹಾರ ದೊರೆಯುವುದು. ಆಗ ನಿಂದಾತೀತವಾದ ಜೀವನ ಆಚರಿಸಿ ಸುಖಯುತ ಜೀವನ  ನಡೆಸುವೆವು. ವೃತ್ತಿಪರರು ತಮ್ಮ ವೃತ್ತಿಯಲ್ಲಿ  ಹಾಗು ಸಂಶೋಧನೆಯಲ್ಲಿ ಚಿಂತನೆ ತೀವ್ರಗೊಳಿಸಿದಾಗ ಬಹಳಷ್ಟು ಫಲವನ್ನು ಪಡೆಯಬಹುದು.
ಚಿಂತನೆಗೆ ಸಹಾಯ ಮಾಡುವಂತಹುವು ಯಾವುವು ?
     ಗಮನ ಹರಿಸುವಿಕೆ, ನೆನಪು, ನಿರಂತರ ಎಕಾಗ್ರತೆ, ವಿಷ್ಲೇಶಿತವಾಗಿ,ವಿಶಾಲವಾಗಿ ಹೋಗುವಿಕೆ, ಹಲವು ಬಗೆಯಲ್ಲಿ ಪ್ರಶ್ನಿಸುವಿಕೆ, ಸಂಬಂಧಪಡುವ ಪ್ರತಿ ಮಾಹಿತಿಯ ಬಗ್ಗೆ ಯೋಚಿಸುವಿಕೆ, ಹೊಸತನ, ಕಲ್ಪನಶಕ್ತಿಯ ಬಳಕೆ ಅಂದರೆ   ಚಿತ್ರಗಳ, ಚಲನಚಿತ್ರಗಳ, ರೇಖಾಚಿತ್ರಗಳ, ನಕ್ಷೇಯ  ,ವರ್ಣಗಳ ಸಮ್ಮಿಲನ ಇತ್ಯಾದಿಗಳು ಚಿಂತನೆಗೆ ಸಹಾಯ ಮಾಡುವವು.
ಪರಿಣಾಮಾತ್ಮಕ   ಚಿಂತನೆೆಯಲ್ಲಿ  ಸಮಸ್ಯೇಯ ಮೂಲಕ್ಕೆ ಹೋಗುವುದು ಹಾಗು ಕಾರಣಗಳನ್ನು ಕಂಡುಹಿಡಿದು , ಚಿಂತನೆಯಲ್ಲಿ ಹೇಗೆ ಸಮಸ್ಯೆ ಪರಿಹರಿಸಬಹುದು ಎಂದು ಅನೇಕ ರೀತಿಯಲ್ಲಿ ಯೋಚಿಸಬೇಕು ತರ್ಕಬದ್ದವಾಗಿ ಯೋಚಿಸದಂತೆಲ್ಲಾ ಹಾಗು ಪರಿಸ್ಥಿತಿಯ ಪಲಿತಾಂಶವನ್ನು ಲೆಕ್ಕಚಾರ ಹಾಕಿದಂತೆಲ್ಲಾ ಯೋಗ್ಯ ನಿಧರ್ಾರ ಸಿಗುವುದು,ಹಾಗೇಯೇ ಯಾರು ? ಯಾರಿಗೆ ? ಯಾರದ್ದು ? ಏನು ? ಏಕೆ? ಏಕಿಲ್ಲ ? ಯಾವಾಗ ?ಎಲ್ಲಿ ? ಹೇಗೆ ?ಎಷ್ಟು ? ಇತ್ಯಾದಿ ಪ್ರಶ್ನೆಗಳಿಂದ ಚಿಂತನೆಯು ವಿಕಾಸವಾಗುವುದು.ಇಡೀ ಮಾಹಿತಿ ವ್ಯವಸ್ಥಿತವಾಗಿ  ಕಲೆಹಾಕಿದಾಗ ಹಾಗು ಹೊಸ ,ಹೊಸ  ಐಡಿಯಾಗಳಿಂದಾಗಿ  ಪ್ರಕ್ರಿಯೆಯು ಇನ್ನು ಚೆನ್ನಾಗಿ ಮೂಡಿಬರುವುದು.
ಯಾವ ಯೋಚನೆಗಳನ್ನು ಮಾಡಬೇಕು ಹಾಗು ಯಾವ ಯೋಚನೆಗಳನ್ನು ಮಾಡಬಾರದು ?
ಸ್ವಾರ್ಥಯುತ, ಕೋಪದ, ಅಸೂಯೆಯ, ಕ್ರೌರ್ಯದ, ಸಂಶಯದ,ಸೋಮಾರಿತನದ,ಚಿಂತೆಯ, ಭಯದ,    ಮೌಡ್ಯಭರಿತ ,ಈ ರೀತಿಯ ಯೋಚನೆಗಳನ್ನು  ಮಾಡಲೇಬಾರದು. ಎಕೆಂದರೇ ಈ ರೀತಿಯ ಯೋಚನೆಗಳು ಮಾನಸಿಕ ಕಲ್ಮಶಗಳನ್ನು ಹೆಚ್ಚಿಸಿ ಮಾನಸಿಕ ಒತ್ತಡಕ್ಕೆ ಗುರಿ ಮಾಡುವುದಷ್ಟೇ ಅಲ್ಲದೆ, ಸಾಮಾಜಿಕವಾಗಿ ದುಃಖದ ಸನ್ನಿವೇಶವನ್ನು ತರಿಸುತ್ತದೆ, ಒಟ್ಟಾರೆ ಮಾನಸಿಕವಾಗಿಯು ದುರ್ಬಲನನ್ನಾಗಿ ಮಾಡಿ ಪರರಿಗೂ ಹಾಗು ತನಗೂ ಹಾನಿ ಮಾಡುತ್ತದೆ ಹೀಗಾಗಿ ಅವನ್ನು ಮಿಥ್ಯ ಚಿಂತನೆ ಎನ್ನುವರು.
ಈ ರೀತಿಯಲ್ಲದ, ಸಕಾರಾತ್ಮಕ ಯೋಚನೆಗಳಾದ ನಿಸ್ವಾರ್ಥಯುತ ಪರಿಶುದ್ಧ ಪ್ರೀತಿ, ಕೋಪವಿಲ್ಲದ ಸ್ನೇಹದ, ಅಭಿನಂದತ್ಮಾಕ ಪ್ರೀತಿಯ, ದಯೆಯ, ನಂಬಿಕೆಯ, ಪ್ರಯತ್ನಶೀಲತೆಗೆ ಪ್ರಚೋದಾತ್ಮಾಕ ಯೋಚನೆ, ಚಿಂತಾರಹಿತ ಶಾಂತತೆಯ ಯೋಚನೆ, ಭಯರಹಿತ ಧೈರ್ಯದ, ಜ್ಞಾನಭರಿತ ಯೋಚನೆಗಳನ್ನು ಮಾಡಿದಾಗ ಅವುಗಳಿದಾಗಿ ನಮಗೂ ಹಾಗು ಪರರಿಗೂ ಎಲ್ಲಾ  ರೀತಿಯ  ಮಂಗಳವಾಗುತ್ತದೆ.ಹೀಗಾಗಿ ಇವನ್ನು ಸಂಯಕ್ ಚಿಂತನೆ ಎನ್ನುತ್ತಾರೆ.
ಹೇಗೆ ಯೋಚಿಸುವರೊ ಹಾಗೆಯೇ ಆಗುವಿರಿ
ನಮ್ಮ ಯೋಚನೆಗಳಿಗೆ ಅದ್ಬುತವಾದ ಶಕ್ತಿಯಿದೆ, ನಮ್ಮ ಹಿಂದಿನ ಯೋಚನೆಗಳ ಪಲಿತಾಂಶವೇ ಇಂದಿನ ನಾವಿಗಿದ್ದೇವೆ, ಇಂದಿನ ಯೋಚನೆಗಳ ಪರಿಣಾಮವೇ ಮುಂದಿನ ನಾವು ಹಾಗು ನಮ್ಮ ಭವಿಷ್ಯವು ರಚಿತವಾಗುವುದು. ಅದ್ದರಿಂದ ನಮ್ಮ ಯೋಚನೆಗಳ ಬಗ್ಗೆ ಅಸಡ್ಡೆ ಬೇಡ, ಅಲಕ್ಷ ಬೇಡವೆ ಬೇಡ.ನಮ್ಮ ಯೋಚನೆಗಳಿಂದಾಗಿ ಮನೋಭಾವವು ನಿಮರ್ಾಣವಾಗುತ್ತದೆ, ಮನೋಬಾವದ ಆಧಾರದ ಮೇಲೆಯೇ ಸರ್ವ ಕಾರ್ಯವೂ ನಿಂತಿರುತ್ತದೆ. ನೀವು ಸೋಲುತ್ತಿರಿ ಎಂದು ಭಾವಿಸಿದರೆ ಖಂಡಿತವಾಗಿ ಸೋಲುವಿರಿ, ಜಯಿಸುತ್ತೇವೆ ಎಂಬ ಮನೋಭಾವವಿದ್ದರೆ ಖಂಡಿತವಾಗಿ ಜಯಕ್ಕೆ ಸಹಕಾರಿಯಾಗಬಲ್ಲದು, ಹಾಗೆಯೇ ಮನೋಬಾವದಿಂದಲೇ ಜಗತ್ತು ಸುಂದರವಾಗಿಯು ಅಥವಾ ಕುರೂಪವಾಗಿಯು ಕಾಣುವುದು, ಇಡೀ ಜಗತ್ತೇ ನಮ್ಮ ಮನಸ್ಸಿನಲ್ಲಿದೆ.ಯಾರು ಸದಾ ತನ್ನನ್ನು ಬಲಹೀನ ಎಂದು ಭಾವಿಸುತ್ತಾನೋ ಆತನು ಎಂದಿಗೂ ಬಲಿಷ್ಟನಾಗಲಾರ, ಅದರೆ ಯಾರಿಗೆ ತಾನು ಬಲಿಷ್ಟನೇಂದು ತಿಳಿದಿದೆಯೋ ಆತನು ಬಂಧನಗಳನ್ನು ಕತ್ತರಿಸಿ ಹಾಕುತ್ತಾನೆ, ಸ್ವತಂತ್ರನಾಗಿರುತ್ತಾನೆ. ಶಕ್ತಿಯೇ ಜೀವನದ ,ಭರವಸೆಯ, ಆರೋಗ್ಯದ ಹಾಗು ಬಿಡುಗಡೆಯ ಚಿನ್ಹೆಯಾಗಿದೆ, ಅದ್ದರಿಂದ ಶಕ್ತಿಯುತ ಯೋಚನೆಗಳಿಂದ ತುಂಬಿರೋಣ.ನಕಾರಾತ್ಮಕ ಯೋಚನೆಗಳನ್ನು ಉಂಟು ಮಾಡದೆ ಇರೋಣ .ನಾವು ನಮ್ಮ  ಆದರ್ಶ ವ್ಯಕ್ತಿಗಳಂತೆಯೇ ಯೋಚಿಸಿದರೆ, ಅವರಂತೆಯೇ ಮನೋಭಾವವನ್ನು ವೃದ್ಧಿಸಿದರೆ, ಅವರಂತೆಯೇ ಕಾರ್ಯ ಮಾಡಿದರೆ ಖಂಡಿತವಾಗಿ  ಅವರಂತೆಯೇೆ ಆಗುವೆವು. ಇದಕ್ಕೆ ಸಂಬಂದಿಸಿದಂತೆ ಒಂದು ಘಟನೆಯು ಹೀಗೆ ಇದೆ:
 ಶ್ರ್ರಾವಸ್ಥಿಯಲ್ಲಿ ಪಂಡಿತನೆಂಬ ಬಾಲಕನೊಬ್ಬನು ಬಿಕ್ಷುವಾಗಿದ್ದನು, ಅತನು ದೀಕ್ಷೆ ತೆಗೆದುಕೊಂಡ 8ನೇ ದಿನದಂದು ಹಿರಿಯ ಭಿಕ್ಷುಗಳೊಂದಿಗೆ ದಾರಿಯಲ್ಲಿ ಹೋಗುತ್ತಿರುವಾಗ , ದಾರಿಯಲ್ಲಿ  ಕೃಷಿಕರು ನೀರಿಗೆ ಹಾದಿಗಳನ್ನು ನಿಮರ್ಿಸುತ್ತಿದ್ದುದನ್ನು  ನೋಡಿದನು, ನಂತರ ಸ್ವಲ್ಪ ದೂರದಲ್ಲಿ ಕೆಲವು ಬಡಗಿಗಳು ಮರದತುಂಡುಗಳಿಂದ ತಮಗೆ ಬೇಕಾದ ರೀತಿಯಲ್ಲಿ  ಆಕಾರ ನೀಡಿ ರಚಿಸುತ್ತಿದ್ದುದನ್ನು  ಕಂಡನು, ಹಾಗೇಯೆ ಬಾಣ ನಿಮರ್ಿತಕಾರರು ಲೋಹದಿಂದ ಬಾಣಗಳನ್ನು ನೇರವಾಗಿ ನಿಮರ್ಿಸುತ್ತಿದ್ದುದ್ದನ್ನು ವೀಕ್ಷಿಸಿದನು. ನಂತರ ಆತನು ಈ ರೀತಿಯಾಗಿ ಚಿಂತನೆ ಮಾಡತೋಡಗಿದನು: " ಈ ನೀರನ್ನು ನಮ್ಮ ಇಚ್ಚೆಯ ದಾರಿಗೆ ಅನುಗುಣವಾಗಿ ಹಾಯಿಸಬಹುದಾಗಿದೆ, ಅದೇ ರೀತಿ ಮರದ ತುಂಡುಗಳನ್ನು ನಮ್ಮ ಇಚ್ಚೆಗೆ ಅನುಗುಣವಾಗಿ ,ಬೇಕಾದ ರೀತಿಯಲ್ಲಿ  ರಚನೆ ಮಾಡಬಹುದಾಗಿದೆ, ಹಾಗೆಯೇ ಲೋಹದಿಂದಲೂ ನಮಗೆ ಬೇಕಾದ ಆಕಾರ ಪಡೆಯಬಹುದಾಗಿದೆ, ಇವೆಲ್ಲಾ  ನಿಜರ್ೀವ ವಸ್ತುಗಳಾಗಿದ್ದರೂ ಸಹಾ ಅವನ್ನು ದಮಿಸಬಹುದಾಗಿದೆ, ಅದರೆ ಚೈತನ್ಯಮಯವಾಗಿರುವ ನನ್ನ ಮನಸ್ಸನ್ನು  ಏಕೆ ನಾನು ಇಚ್ಚಿಸಿದಂತೆ ಪಳಗಿಸಬಾರದು ?" ಎಂದು  ಆತನು ಯೋಚಿಸಲಾರಂಬಿಸಿದನು..   ಆಗ ಬುದ್ಧ ಭಗವಾನರು ಆತನ ಮನಸ್ಸನ್ನು ಅರಿತು ಹೀಗೆ ಅತನಿಗೆ ಸ್ಫೂತರ್ಿಯುತವಾಗಿ ಈ ಗಾಥೆಯನ್ನು  ನುಡಿದರು:
" ನೀರು ಹಾಯಿಸುವವರು ನೀರಿಗೆ ಮಾರ್ಗದರ್ಶನ ನೀಡುವರು,
ಬಾಣನಿಮರ್ಾತಕಾರರು  ಬಾಣಗಳನ್ನು  ನೇರ ಮಾಡುವರು,
ಬಡಗಿಗಾರರು ಮರದತುಂಡುಗಳನ್ನು ಬಾಗಿಸುವರು,
ಅದೇ ರೀತಿಯಲ್ಲಿ ಜ್ಞಾನಿಗಳು ತಮ್ಮನ್ನು ದಮಿಸಿಕೋಳ್ಳುತ್ತಾರೆ."
ಅದನ್ನು ಆಲಿಸಿದ ಬಾಲಕನಿಗೆ ಜ್ಞಾನೋದಯವಾಗಿ ಅತನು ಅಹೋ ರಾತ್ರಿ ಶ್ರಮಿಸಿ ತನ್ನ ಮನಸ್ಸನ್ನು ಗೆದ್ದನು, ಹಾಗು

ಶೋಕರಹಿತರಾಗಿರುವವರಲ್ಲಿ ಒಬ್ಬನಾದನು.
ಹೀಗೆ ಚಿಂತನೆಯಲ್ಲಿನ ಮಹಾಶಕ್ತಿಯನ್ನು ಕಂಡು  ವಿವೇಕಿಗಳು ಹೇಗೆ ವ್ಯಾಯಾಮಶಾಲೆಯಲ್ಲಿ ತಮ್ಮ ಶರೀರವನ್ನು ಬೇಕಾದ ರೀತಿಯಲ್ಲಿ ರೂಪಿಸುವರೋ ಹಾಗೆಯೇ ತಮ್ಮ ಯೋಚನೆಗಳನ್ನು  ಅಭಿವೃದ್ಧಿಯ  ಪಥದಲ್ಲಿ ಸಾಗಿಸುತ್ತಾರೆ, ತಮ್ಮ ವ್ಯಕ್ತಿತ್ವ ವನ್ನು  ಬಲಿಷ್ಠವನ್ನಾಗಿ ರೂಪಿಸಿ, ತಮ್ಮ ಬೌದ್ಧಿಕತೆಯನ್ನು ಹರಿತಗೊಳಿಸಿಕೊಳ್ಳುತ್ತಾರೆ. ತಮಗೂ ಹಾಗು ಪರರಿಗೂ ಸುಖ-ಹಿತಗಳನ್ನುಂಟು ಮಾಡಿಕೊಳ್ಳುತ್ತಾರೆ.





the enemies of giving


ದಾನಕ್ಕೆ ಶತ್ರುಗಳು


ದಾನಕ್ಕೆ ಶತ್ರುಗಳು ಯಾರು ?
ದಾನಕ್ಕೆ ಶತ್ರುಗಳೇ ?!
ದಾವು ನಮ್ಮ ಮನಸ್ಸಿನಲ್ಲಿರುವ ಒಂದು ಗುಣವಾಗಿದೆ. ಅಂದರೆ ಚೇತಸಿಕಾವಾಗಿದೆ. ಅಲೋಭ ಚೇತಸಿಕಾವನ್ನು ದಾನವಾಗಿಯು ಮತ್ತು ವಿರಾಗ (ವೈರಾಗ್ಯ)ವಾಗಿಯು ವಿಂಗಡಿಸುತ್ತಾರೆ. ಹೇಗೆ ಕಮಲದ ದಳದಲ್ಲಿ ನೀರು ನಿಲ್ಲಲಾರದೋ, ಅಂಟಲಾರದೋ ಅದೇರೀತಿಯಲ್ಲಿ ಇಂದ್ರಿಯ ವಿಷಯಗಳಲ್ಲಿ ಅಂಟದಿರುವಿಕೆಯೇ ಅಲೋಭದ ಲಕ್ಷಣವಾಗಿದೆ. ಇದರ ಕ್ರಿಯೆ ಏನೆಂದರೆ ಇಂದ್ರಿಯ ವಿಷಯದಲ್ಲಿ ಅಂಟದಿರುವಿಕೆ. ಇದು ಅಂಟದೆ ಇರುವುದರಿಂದಾಗಿ ವ್ಯಕ್ತವಾಗುತ್ತದೆ. ಆದರೆ ಅಲೋಭವನ್ನು ನಾವು ಕೇವಲ ಲೋಭ ಅಭಾವ (ರಾಹಿತ್ಯತೆ) ಎಂದಷ್ಟೇ ಅರ್ಥಮಾಡಿಕೊಳ್ಳಬಾರದು. ಅದು ದಾನವಾಗಿಯೂ ಪರಿವತರ್ಿತವಾಗುತ್ತದೆ. ಹಾಗು ವಿರಾಗವಾಗಿಯು ವಿಕಾಸಿಸುತ್ತದೆ. ಆದರೆ ದಾನದ ಲಕ್ಷಣವೇನೆಂದರೆ ತ್ಯಾಗ ಮಾಡುವಿಕೆ. ದಾನದ ಕ್ರಿಯೆಯೇನೆಂದರೆ ಲೋಭವನ್ನು ದೂರೀಕರಿಸುವುದು. ಇದು ವಿರಾಗದಿಂದ (ಅಂಟದೆ ಇರುವುದರಿಂದಾಗಿ) ಸ್ಥಾಪನೆಯಾಗುತ್ತದೆ. ಇದರ ತತ್ಕ್ಷಣದ ಕಾರಣವೇನೆಂದರೆ ವಸ್ತುಗಳ ಇರುವಿಕೆ ಮತ್ತು ಅಂತಹ ಸನ್ನಿವೇಶ. ಆದರೆ ಮೂಲಕಾರಣ ಕರುಣೆಯಾಗಿದೆ. ದಾನ ಅಥವಾ ಅಲೋಭವು ಮೂರು ಕುಶಲ ಮೂಲಗಳಲ್ಲಿ ಒಂದಾಗಿದೆ. ಈ ದಾನಕ್ಕೆ ಶತ್ರುಗಳೆಂದರೆ : ಲೋಭ, ದ್ವೇಷ, ಭಯ, ಮಿಥ್ಯದಿಟ್ಟಿ ಮತ್ತು ಮೋಹವಾಗಿದೆ.
ಲೋಭ: ಲೋಭವು ಅಕುಶಲ ಮೂಲಗಳಲ್ಲಿ ಒಂದಾಗಿದೆ. ಇದು ಎಲ್ಲಾ ಸ್ವಾರ್ಥ ಬಯಕೆಗಳ, ತೀವ್ರ ಲಾಲಸೆಗಳ, ಅಂಟುವಿಕೆಗಳ, ಅಹಂಕಾರಗಳ ಮೂಲವಾಗಿದೆ. ಇಂದ್ರಿಯ ವಿಷಯಗಳಲ್ಲಿ ಅಂಟುವಿಕೆಯೇ ಇದರ ಲಕ್ಷಣವಾಗಿದೆ. ಇದರ ಕ್ರಿಯೆ ಏನೆಂದರೆ ಪ್ರಬಲವಾಗಿ ಅಂಟುವಿಕೆಯಾಗಿದೆ. ಅಂಟಿರುವುದನ್ನು ತೊರೆಯದಿರುವಿಕೆಯಿಂದ ಇದು ವ್ಯಕ್ತವಾಗುತ್ತದೆ. ಇವುಗಳ ತತ್ಕ್ಷಣದ ಕಾರಣವೇನೆಂದರೆ ಇಂದ್ರಿಯ ವಿಷಯಗಳ ಸಾಮೀಪ್ಯವಾಗಿದೆ. ಮೂಲಕಾರಣ ಅಜ್ಞಾನವಾಗಿದೆ.
ಲೋಭವು ಮಿಥ್ಯಾದೃಷ್ಟಿಯಿಂದ ಕೂಡಿದಾಗ ಅಹಂಕಾರವು ಜನಿಸುವುದು. ಅಹಂಕಾರದಿಂದಾಗಿ ಮಿಥ್ಯಾ ಸ್ವಪ್ರತಿಷ್ಠೆ ಸ್ಥಾಪಿತವಾಗುತ್ತದೆ. ಆಗ ತನ್ನ ಹೊರತು ಪರರ ಬಗ್ಗೆ ಮನಸ್ಸು ಚಿಂತಿಸಲಾರದು. ಇದರಿಂದಾಗಿ ಸ್ವಾರ್ಥವು ಉಂಟಾಗುತ್ತದೆ. ಮನಸ್ಸು ತನ್ನದು ಎಂಬ ವಿಕಾರದಿಂದ ಉದ್ರೇಕಗೊಳ್ಳುತ್ತದೆ. ಹೀಗಾಗಿ ತಾನು ತನ್ನದನ್ನು ಪರರಲ್ಲಿ ಹಂಚಲು ಮನಸ್ಸು ಸಿದ್ಧವಾಗದು. ಹೀಗಾಗಿ ಹಂಚುವುದರಿಂದ ಮನಸ್ಸು ವಿಮುಖವಾಗುವುದು. ನಂತರ ಕೇವಲ ತನ್ನ ಹಾಗು ತನ್ನದರ (ನನ್ನದು) ಹೊರತಾಗಿ ಪರರ ಬಗ್ಗೆ ಯೋಚಿಸದು.
ಈ ರೀತಿಯಾಗಿ ಅಹಂಕಾರಿಯು ಕೇವಲ ತನ್ನ ಬಗ್ಗೆ ಯೋಚಿಸುತ್ತಾನೆ, ಪರರ ಬಗ್ಗೆಯಲ್ಲ. ಅದೇರೀತಿಯಲ್ಲಿ ಸ್ವಾಥರ್ಿಯು ತನ್ನದರ ಬಗ್ಗೆ ಮಾತ್ರ ಯೋಚಿಸುತ್ತಾನೆ. ಪರರ ಬಗ್ಗೆಯಲ್ಲ, ಅನಿತ್ಯದ ಚಿಂತನೆಯ ಅಭಾವದಿಂದಾಗಿ ಪಂಚಖಂದಗಳಲ್ಲಿ ದೇಹ ಮತ್ತು ಮನಸ್ಸು ಒಂದನ್ನು ಅಥವಾ ಎಲ್ಲವನ್ನೂ ತಾನು (ನಾನು) ಎಂದು ಭಾವಿಸುತ್ತಾನೆ. ಹಾಗೆಯೇ ಪಂಚಖಂದಗಳನ್ನು ತನ್ನದು ಎಂದು ಭಾವಿಸುತ್ತಾನೆ. ಅಷ್ಟೇ ಅಲ್ಲ, ಇಂದ್ರಿಯ ಗೋಚರ ಜಗತ್ತಿನ ಸರ್ವವನ್ನು ತನ್ನದು ಎಂದು ಭ್ರಮಿಸುತ್ತಾನೆ. ನನ್ನ ಪತ್ನಿ, ನನ್ನ ಮಕ್ಕಳು, ನನ್ನ ಐಶ್ವರ್ಯ, ನನ್ನ ರಾಜ್ಯ, ನನ್ನ ಭಾಷೆ, ನನ್ನ ಜನಾಂಗ, ನನ್ನ ಧರ್ಮ, ನನ್ನ ದೇಶ, ಇತ್ಯಾದಿ ಎಂದೆಲ್ಲಾ ಭ್ರಮಿಸಿ ಅಂಟುತ್ತಲೇ ಹೋಗುತ್ತಾನೆ. ಈ ರೀತಿಯಲ್ಲಿ ತಾನು ಮತ್ತು ತನ್ನದು ಎಂಬ ಸೀಮಿತ ಬುದ್ಧಿಯಲ್ಲಿ ಸಿಲುಕಿ ಆತನು ಅಲೋಭದ ಬಗ್ಗೆಯಾಗಲಿ, ವಿರಾಗದ ಬಗ್ಗೆಯಾಗಲಿ ಅಥವಾ ದಾನದ ಬಗ್ಗೆಯಾಗಲಿ ಚಿಂತಿಸಲಾರ. ಪರರ ಬಗ್ಗೆ ಕಾಳಜಿ ಹೊಂದಲಾರನು. ಈ ರೀತಿಯಲ್ಲಿ ಅಹಂಕಾರ (ನಾನು) ಮತ್ತು ಸ್ವಾರ್ಥ (ನನ್ನದು) ಇವೆರಡು ಲೋಭದ ಕೂಸುಗಳಾಗಿವೆ. ಹಾಗು ದಾನಕ್ಕೆ ಶತ್ರುಗಳಾಗಿವೆ. ಇವು ಇರುವವರೆಗೂ ಮನಸ್ಸು ತ್ಯಾಗದ ಬಗ್ಗೆ ಯೋಚಿಸಲಾರದು, ಅಂಟದೆ ಹೋಗದು, ವಿರಾಗ ಸ್ಥಾಪನೆಯಾಗದು, ಕರುಣೆಗೆ ಬೆಲೆಯು ಇರದು.
ದ್ವೇಷ : ಅದೇರೀತಿಯಲ್ಲಿ ದ್ವೇಷವೂ ಸಹಾ ದಾನದ ಶತ್ರುವಾಗಿದೆ. ಹೇಗೆಂದರೆ  ದ್ವೇಷವು ಅಕುಶಲ ಮೂಲಗಳಲ್ಲಿ ಒಂದಾಗಿದೆ. ಇದರಿಂದಲೇ ಎಲ್ಲಾಬಗೆಯ ಕೋಪ, ಕ್ರೋಧ, ಅಸಹನೆ, ಬೇಸರ, ಅಸಹ್ಯತೆ, ಕ್ರೂರತೆ, ಅಸೂಯೆ, ಸೇಡು ಇತ್ಯಾದಿಗಳು ಜನಿಸುವುವು. ದ್ವೇಷದ ಲಕ್ಷಣವೇನೆಂದರೆ ಕ್ರೂರತೆ, ಇದರ ಕ್ರಿಯೆ ಏನೆಂದರೆ ಆಧಾರವಾಗಿರುವುದನ್ನು ಸಹಾ ಸುಡುತ್ತಾ ಹೋಗುವುದು. ಅಂದರೆ ದೇಹ ಮನಸ್ಸಿನ ಸ್ವಸ್ತಿಯನ್ನೇ ಹಾಳುಮಾಡುವುದು. ಹಿಂಸಿಸುವುದರಿಂದಾಗಿ ಇದು ವ್ಯಕ್ತವಾಗುವುದು. ಇದಕ್ಕೆ ತತ್ಕ್ಷಣದ ಕಾರಣವೇನೆಂದರೆ ಅಸಹನೀಯ ಸನ್ನಿವೇಶ ಅಥವಾ ವ್ಯಕ್ತಿಗಳು. ಮೂಲಕಾರಣ ಅಜ್ಞಾನವಾಗಿದೆ. ಹೀಗಾಗಿ ಯಾವ ಮನಸ್ಸು ಪರರನ್ನು ದ್ವೇಷಿಸುವುದೋ ಅದು ಅವರ ಕಲ್ಯಾಣವನ್ನು ಬಯಸದು. ಅವರಿಗಾಗಿ ತ್ಯಾಗ ಮಾಡಲು ಸಿದ್ಧವಾಗದು. ಹೀಗಾಗಿ ದ್ವೇಷವು ದಾನದ ಶತ್ರುವಾಗಿದೆ.
ಭಯ : ಪರರಿಗೆ ಹಿತಮಾಡುವಾಗ, ಅನ್ಯ ವ್ಯಕ್ತಿಗಳು ಏನೆಂದು ಭಾವಿಸುವರೋ, ಏನೆಂದು ಹೇಳುವರೋ ಅಥವಾ ತನಗೆ ಅಡ್ಡಿ ಎಲ್ಲಿ ಮಾಡಿಬಿಡುವರೋ ಎಂಬ ಭಯದಿಂದ ದಾನಿಯು ಪರರಿಗೆ ದಾನ ಅಥವಾ ಸಹಾಯ ಮಾಡದೆ ಹೋಗುತ್ತಾನೆ. ಅಥವಾ ಪರರಿಗೆ ದಾನ ಮಾಡುವಾಗ ತನ್ನದೆನ್ನುವ ಐಶ್ವರ್ಯ ಎಲ್ಲಿ ಕ್ಷೀಣಿಸಿಹೋಗುವುದೋ ಅಥವಾ ತನ್ನವರು ತನ್ನಿಂದ ಎಲ್ಲಿ ದೂರ ಹೋಗಿಬಿಡುವರೋ ಅಥವಾ ತನ್ನ ದೇಹಕ್ಕೆ ಎಲ್ಲಿ ಅಪಾಯವಾಗಿ ಹೋಗುವುದೋ ಎಂದು ಭೀತಿಪಟ್ಟು ದಾನಿಯು ಪೂರ್ಣವಾಗಿ ವಿಕಸಿತನಾಗದೆ ದಾನ ಅಥವಾ ಸಹಾಯದಿಂದಾಗಿ ಹಿಂಜರಿಯುತ್ತಾನೆ. ಅದಕ್ಕೆ ಕಾರಣ ಸಂಕೋಚ ಮತ್ತು ಭಯವೇ ಆಗಿದೆ.
ಮಿಥ್ಯಾದೃಷ್ಟಿ: ದಾನಕ್ಕೆ ಅತ್ಯಂತ ದೊಡ್ಡ ಶತ್ರುವೆಂದರೆ ಮಿಥ್ಯಾದೃಷ್ಟಿಗಳೇ ಆಗಿದೆ. ಆ ಮಿಥ್ಯಾದೃಷ್ಟಿಗಾವುವು ಎಂದರೆ:
1. ಕರ್ಮಫಲವೇ ಇಲ್ಲ, ಆದ್ದರಿಂದಾಗಿ ದಾನಕ್ಕಾಗಲಿ ಅಥವಾ ಪಾಪಕ್ಕಾಗಲಿ ಫಲವೇ ಇಲ್ಲ ಎನ್ನುವ ಅಕ್ರಿಯಾ ಮಿಥ್ಯಾದೃಷ್ಟಿ.
2. ಸುಖ-ದುಃಖಗಳಿಗಾಗಲಿ ಅಥವಾ ಜೀವಿಗಳ ಹುಟ್ಟುಸಾವುಗಳಿಗಾಗಲಿ ಅಥವಾ ಪರಿಶುದ್ಧತೆ-ಕಲುಶತೆಗಾಗಲಿ ಅಥವಾ ಉನ್ನತಿ ಅವನತಿಗಾಗಲಿ ಕಾರಣಗಳೇ ಇಲ್ಲ ಎನ್ನುವ ಅಹೇತು ಮಿಥ್ಯಾದೃಷ್ಟಿ.
3. ಪಾಪ ಪುಣ್ಯಗಳಿಗೆ ಫಲವೇ ಇಲ್ಲ. ಪರಲೋಕವೂ ಇಲ್ಲ, ಪೂರ್ವಜನ್ಮವಿಲ್ಲ, ಹಾಗೆಯೇ ಪುನರ್ಜನ್ಮವಿಲ್ಲ, ಸಾವೇ ಮಾನವನ ಮೋಕ್ಷ ಎನ್ನುವ ನಾಸ್ತಿಕ ಮಿಥ್ಯಾದೃಷ್ಟಿ.
4. ದೇವರೇ ಎಲ್ಲದಕ್ಕೂ ಕಾರಣ. ಆತನ ಪೂಜೆಯೇ ಪರಿಹಾರ ಮಾರ್ಗ ಎಂಬ ಇಸ್ಸರ ನಿಮರ್ಾಣ ಹೇತು ಮಿಥ್ಯಾದೃಷ್ಟಿ.
5. ಹಿಂದಿನ ಜನ್ಮದಿಂದಲೇ ಸುಖ-ದುಃಖ ಪ್ರಾಪ್ತಿ ಆದ್ದರಿಂದಾಗಿ ಈಗಿನ ದಾನದಿಂದ ಪ್ರಯೋಜನವಿಲ್ಲ ಎಂಬ ಪುಟ್ಟಕಥಾ ಹೇತು ಮಿಥ್ಯಾದೃಷ್ಟಿ.
6. ಆತ್ಮವು ಸ್ವಯಂ ಪರಿಶುದ್ಧ ಹಾಗು ಪರಿಪೂರ್ಣವಾಗಿರುವುದರಿಂದ ದಾನದ ಅಗತ್ಯವಿಲ್ಲ ಎಂಬ ಶಾಶ್ವತ ಮಿಥ್ಯಾದೃಷ್ಟಿ.
7. ಸಾವೇ ಜೀವನದ ಕೊನೆ, ಆದ್ದರಿಂದ ದಾನದಿಂದ ಪ್ರಯೋಜನವಿಲ್ಲ. ಆದ್ದರಿಂದ ಇರುವಷ್ಟು ದಿನ ಸಾಲ ಮಾಡಿಯಾದರೂ ಸುಖವಾಗಿರಬೇಕು ಎಂಬ ಉಚ್ಛೇದ ಮಿಥ್ಯಾದೃಷ್ಟಿ.
ಈ ಎಲ್ಲಾ ಮಿಥ್ಯಾದೃಷ್ಟಿಯಿಂದ ಯಾರೂ ದಾನಿಗಳಾಗುವುದಿಲ್ಲ. ಬದಲಾಗಿ ಸ್ವಾಥರ್ಿಗಳಾಗುತ್ತಾರೆ. ಹಾಗು ಸೇವೆಗೆ ಅಲಕ್ಷಿಸುತ್ತಾರೆ.
ಮೋಹ : ಮೋಹವು ಸಹಾ ಅಕುಶಲ ಮೂಲಗಳಲ್ಲಿ ಒಂದಾಗಿದೆ. ಮೋಹವು ಅವಿದ್ಯೆ ಅಥವಾ ಅಜ್ಞಾನದ ಸಮಾನಾರ್ಥಕ ಪದವಾಗಿದೆ. ಇದರ ಲಕ್ಷಣವೇನೆಂದರೆ ಮನಸ್ಸನ್ನೇ ಅಂಧನನ್ನಾಗಿಸುವುದು ಅಥವಾ ಜ್ಞಾನವನ್ನು ಅರಿಯದಿರುವುದು. ವಿಷಯಗಳ ನೈಜ್ಯತೆಯನ್ನು ಕುಶಾಗ್ರತೆಯ ಬುದ್ಧಿಯಿಂದ ಅರಿಯಲಾರನು. ವಿಮೋಚನೆರಹಿತ ನಾಗಿರುತ್ತಾನೆ. ಇದು ಸಮ್ಯಕ್ ದೃಷ್ಟಿಕೋನದ ಅಭಾವದಿಂದ ವ್ಯಕ್ತವಾಗುತ್ತದೆ ಅಥವಾ ಮಾನಸಿಕ ಅಂಧಕಾರದಿಂದ ವ್ಯಕ್ತವಾಗುತ್ತದೆ. ಈ ಮೋಹವು ಅಯೋಗ್ಯ ಗಮನಿಸುವಿಕೆಯಿಂದಾಗಿ ಆರಂಭವಾಗುತ್ತದೆ. ಹಾಗು ಇದೇ ಎಲ್ಲಾ ಅಕುಶಲ ಮೂಲಗಳ ಮೂಲ ಬೇರಾಗಿದೆ.
8.2 ಮೂರ್ಖರು ದಾನದಲ್ಲಿ ಆನಂದಿಸಲಾರರು
ಒಮ್ಮೆ ಮಹಾರಾಜ ಪಸೇನದಿಯು ಬುದ್ಧ ಭಗವಾನರಿಗೆ ಮತ್ತು ಭಿಕ್ಷು ಸಂಘಕ್ಕೆ ವಿಜೃಂಭಣೆಯಿಂದ ದಾನ ಮಾಡಿದನು. ಆದರೆ ಅದಕ್ಕೆ ಪ್ರತಿದ್ವಂದಿ ಸ್ಪಧರ್ಿ ಎಂಬಂತೆ ರಾಜನ ಅಧೀನದಲ್ಲಿರುವವನೊಬ್ಬ ಅದಕ್ಕಿಂತಲೂ ಚೆನ್ನಾಗಿ ದಾನವನ್ನು ಏರ್ಪಡಿಸಿದನು. ಇದರಿಂದಾಗಿ ರಾಜನಿಗೆ ಪಶ್ಚಾತ್ತಾಪವುಂಟಾಯಿತು. ಆದರೆ ರಾಣಿ ಮಲ್ಲಿಕಾಳು ಇದಕ್ಕಾಗಿ ಉಪಾಯವೊಂದನ್ನು ರಾಜನಿಗೆ ಹೇಳಿದಳು. ಅದರಂತೆಯೇ ರಾಜನು ಈ ಬಾರಿ ಸರಿಸಾಟಿಯಿಲ್ಲದ ದಾನಕ್ಕೆ ಏಪರ್ಾಟು ಮಾಡಿದನು. ಅದಕ್ಕಾಗಿ ಬೃಹತ್ತಾದ ಗುಡಾರವನ್ನು ಹಾಕಿಸಿದನು. ನಂತರ ಅಲ್ಲಿಗೆ ಬರುವ ಭಿಕ್ಷುಗಳಿಗೆ ಗೌರವ ಸೂಚಿಸಲು 500 ಆನೆಗಳು 500 ಶ್ವೇತ ಛತ್ರಿಗಳನ್ನು ಹಿಡಿದಿದ್ದವು. ಗುಡಾರದ ಮಧ್ಯೆ ಹತ್ತು ದೋಣಿಗಳು ಇದ್ದವು. ಅವುಗಳ ತುಂಬಾ ಸುಗಂಧ ದ್ರವ್ಯಗಳನ್ನು ತುಂಬಿಸಲಾಗಿತ್ತು. ಅಲ್ಲಿ ಬಡಿಸಲು ರಾಜಕುಮಾರಿಯರ ಗುಂಪೇ ಬರುತ್ತಿತ್ತು. ಎಲ್ಲಾ ಸಿದ್ಧತೆಗಳಾದ ಮೇಲೆ ಆಹಾರವನ್ನು ಬಡಿಸಲಾಯಿತು. ನಂತರ ರಾಜ ಉಳಿದ ರೀತಿಯಲ್ಲೂ ದಾನ ಮಾಡಿದನು. ಈ ರೀತಿ ರಾಜನು ಒಂದೇ ದಿನದಲ್ಲಿ 14 ದಶಲಕ್ಷ ಖಚರ್ು ಮಾಡಿ ಮಹಾನ್ ದಾನವನ್ನು ಏಪರ್ಾಟು ಮಾಡಿದ್ದನು.
ರಾಜನ ಬಳಿಯಲ್ಲಿ ಆಗ ಇಬ್ಬರು ಮಂತ್ರಿಗಳು ಸಹಾ ಇದ್ದರು. ಅವರೇ ಜನ್ಹ ಮತ್ತು ಕಾಲ. ಜನ್ಹನು ಈ ದಾನದಿಂದ ಅತ್ಯಂತ ಸಂಭ್ರಮಪಟ್ಟನು ಮತ್ತು ಆನಂದವೂ ಪಟ್ಟನು. ಆತನು ರಾಜನಿಗೆ ಇದು ಸರಿಸಾಟಿಯಿಲ್ಲದ ದಾನವಾಗಿದೆ ಮಹಾರಾಜ, ಯೋಗ್ಯ ದಾನವಾಗಿದೆ ಎಂದು ಪ್ರಶಂಸಿಸಿದನು. ಆದರೆ ಮಂತ್ರಿ ಕಾಲನಿಗೆ ಇದರಿಂದ ಸಂತೋಷವಾಗಲಿಲ್ಲ, ಆನಂದವೂ ಆಗಲಿಲ್ಲ. ಆತನು ಹೀಗೆ ಯೋಚಿಸಿದನು: ಈ ರಾಜನು ವ್ಯರ್ಥವಾಗಿ ಹಣವನ್ನು ಪೋಲು ಮಾಡುತ್ತಿದ್ದಾನೆ, ಈ ಭಿಕ್ಷುಗಳಿಗೇನು ತಿನ್ನುತ್ತಾರೆ ನಂತರ ವಿಹಾರಕ್ಕೆ ಹೋಗಿ ಮಲಗಿಬಿಡಬಹುದು.
ಭಗವಾನರು ಆಹಾರ ದಾನದ ನಂತರ ಅನುಮೋದನೆಯನ್ನು ಮಾಡಿ ಕಿರಿದಾದ ಧಮ್ಮೋಪದೇಶವನ್ನು ಮಾಡಿ ಅಲ್ಲಿಂದ ವಿಹಾರಕ್ಕೆ ಮರಳಿದರು.
ರಾಜನಿಗೆ ಆಶ್ಚರ್ಯವಾಯಿತು. ಇಂತಹ ಸರಿಸಾರಿಯಿಲ್ಲದ ದಾನವನ್ನು ಏಪರ್ಾಟು ಮಾಡಿದ್ದರೂ ಸಹಾ ಭಗವಾನರು ಕಿರಿದಾದ ಧಮ್ಮ ಬೋಧನೆಯನ್ನು ಏಕೆ ಮಾಡಿದರು? ನನ್ನಿಂದ ಏನಾದರೂ ಅಪಚಾರವು ಆಗಿಹೋಯಿತೆ? ಎಂದು ಚಿಂತಿಸುತ್ತಾ ಆತನು ವಿಹಾರಕ್ಕೆ ಪ್ರವೇಶಿಸಿ ಭಗವಾನರನ್ನು ಸಂದಶರ್ಿಸಿದನು. ಆಗ ಭಗವಾನರು ಆತನಿಗೆ ಹೀಗೆ ಹೇಳಿದರು:
ಓ ಮಹಾರಾಜ, ಸರಿಸಾಟಿಯಿಲ್ಲದ ದಾನವನ್ನು (ಅಸದಿನದಾನ) ಮಾಡಿದ್ದರೂ ಸಹಾ ಏಕೆ ತುಸು ಮಂಕಾಗಿರುವಿರಿ. ಈ ಮಹತ್ತರ ದಾನಕ್ಕಾಗಿ ನೀವು ಅಪಾರ ಆನಂದಪಡಬೇಕಿತ್ತು. ಈ ಬಗೆಯ ದಾನವು ಪ್ರತಿ ಬುದ್ಧರ ಆಗಮನದಲ್ಲಿ ಒಮ್ಮೆ ಮಾತ್ರ ಸಂಭವಿಸುತ್ತದೆ. ನಾನು ಕಿರು ಧಮ್ಮೋಪದೇಶ ನೀಡಿದ್ದಕ್ಕೆ ಕಾರಣವಿದೆ ಮಹಾರಾಜ, ನಿನ್ನ ಮಂತ್ರಿಗಳಲ್ಲಿ ಒಬ್ಬನು ದಾನವನ್ನೇ ವ್ಯರ್ಥವಾದುದು ಮತ್ತು ನಷ್ಟಕಾರಿ ಎಂದು ಭಾವಿಸುತ್ತಾನೆ. ಅದರಿಂದ ನನ್ನ ಬೋಧನೆ ಆಲಿಸುತ್ತಿದ್ದಂತೆ ಅವನಲ್ಲಿ ದ್ವೇಷವು ಹೆಚ್ಚಾಗುತ್ತಿತ್ತು. ಆ ದ್ವೇಷವು ಇನ್ನಷ್ಟು ಹೆಚ್ಚಾದರೆ, ಆ ಕುಕಮ್ಮ ಫಲದಂತೆ ಆತನಿಗೆ ಮುಂದೆ ಅಪಾರ ದುಃಖದ ಸ್ಥಿತಿಯು ಸಿಗುತ್ತಿತ್ತು. ಆದ್ದರಿಂದಾಗಿ ನಾನು ಬೋಧನೆಯನ್ನು ಅಲ್ಪವಾಗಿ ಬೋಧಿಸಿದೆನು. ನಂತರ ಹೀಗೆ ಮುಂದುವರೆಸಿದರು: ಓ ಮಹಾರಾಜ! ಮೂರ್ಖರು ದಾನದಲ್ಲಿ ಆನಂದಿಸುವುದಿಲ್ಲ, ಹೀಗಾಗಿ ದುರ್ಗತಿಗೆ ಹೋಗುವರು. ಆದರೆ ಜ್ಞಾನಿಗಳು ದಾನದಲ್ಲೇ ಆನಂದಿಸುವವರಾಗಿ ಸುಗತಿ ತಲುಪುವರು ಎಂದು ಹೇಳಿ ಈ ಗಾಥೆಯನ್ನು ನುಡಿದರು:
ಜಿಪುಣರು ದೇವಲೋಕವನ್ನು ತಲುಪಲಾರರು
ಮೂರ್ಖರು ದಾನವನ್ನು ಪ್ರಶಂಸಿಸಲಾರರು,
ಧೀರರಾದ ಜ್ಞಾನಿಗಳು ಮಾತ್ರ ದಾನದಲ್ಲಿ ಆನಂದಿತರಾಗಿ
ಪರಲೋಕದಲ್ಲಿ ಸುಖಿಸುವರು. (177)
8.3 ಜಿಪುಣತನದ ಮುಂದಿನ ಗತಿ (ಪುನರ್ಜನ್ಮದ ಕಥೆ)
ಶ್ರಾವಸ್ತಿಯಲ್ಲಿ ಆನಂದನೆಂಬ ಜಿಪುಣಾಗ್ರೇಸರನಿದ್ದನು. ಆತನು ಬಹಳ ಶ್ರೀಮಂತನಾದರೂ ದಾನಿಯಾಗಿರಲಿಲ್ಲ. ಆತನ ಮಗನಾದ ಮೂಲಸಿರಿಗೆ ಆತನು ಆಗಾಗ್ಗೆ ಈ ರೀತಿ ಹೇಳುತ್ತಿದ್ದನು. ನಾವು ಶ್ರೀಮಂತರೆಂದು ಯೋಚಿಸಲೇಬಾರದು, ನಾವು ಖಚರ್ು ಮಾಡಬಾರದು, ನಾವು ಸದಾ ಐಶ್ವರ್ಯವನ್ನು ಸಂಗ್ರಹ ಮಾಡುತ್ತಿರಬೇಕು, ಇಲ್ಲದೆ ಹೋದರೆ ನಮ್ಮ ಐಶ್ವರ್ಯವೇ ಕ್ಷಯಿಸಿಹೋಗುತ್ತದೆ. ಈ ಶ್ರೀಮಂತ ಆನಂದನು 5 ಬಿಂದಿಗೆಗಳಷ್ಟು ಚಿನ್ನವನ್ನು ತನ್ನ ಮನೆಯಲ್ಲಿ ಹೂತಿಟ್ಟು ಅದನ್ನು ಯಾರಿಗೂ ತಿಳಿಸದೆ ಸತ್ತುಹೋದನು.
ನಂತರ ಆತನು ಶ್ರಾವಸ್ತಿಯ ಸಮೀಪದ ಹಳ್ಳಿಯಲ್ಲಿ ಭಿಕ್ಷುಕರ ಮನೆಯಲ್ಲಿ ಹುಟ್ಟಿದನು. ಆತನು ತಾಯಿಯ ಗರ್ಭದಲ್ಲಿರುವಾಗ ಭಿಕ್ಷುಕರ ಆದಾಯವೇ ಕ್ಷೀಣಿಸಿತು. ಆಗ ಅವರಿಗೆ ತಮ್ಮಲ್ಲಿ ಯಾರು ದುರಾದೃಷ್ಟವಂತರಿದ್ದಾರೆ ಎನಿಸಿತು. ಅವರು ತಮ್ಮಲ್ಲೇ ವಿಭಾಗಿಸುತ್ತ ಪರೀಕ್ಷಿಸಿದಾಗ ಗಭರ್ಿಣಿ ಸ್ತ್ರೀಯ ದುರಾದೃಷ್ಟವಂತೆ ಎಂದು ಲೆಕ್ಕಾಚಾರ ಹಾಕಿದನು. ಹೀಗಾಗಿ ಆಕೆಯನ್ನು ಹಳ್ಳಿಯಿಂದ ದೂರ ಅಟ್ಟಿದರು. ಕೊನೆಗೆ ಆಕೆ ಕುರೂಪಿ ಅಸಹ್ಯಕರ ಮಗನನ್ನು ಹೆತ್ತಳು. ಆಕೆ ಒಂಟಿಯಾಗಿ ಆಹಾರಕ್ಕಾಗಿ ಭಿಕ್ಷೆಗೆ ಹೋದರೆ ಆಕೆಗೆ ಮೊದಲಿನಷ್ಟೇ ಸಿಗುತ್ತಿತ್ತು. ಒಂದುವೇಳೆ ಆತನನ್ನು ಕರೆದುಕೊಂಡು ಭಿಕ್ಷೆಗೆ ಹೋದರೆ ಆಕೆಗೆ ಏನೂ ಸಿಗುತ್ತಿರಲಿಲ್ಲ. ಹೀಗಾಗಿ ಆ ಹುಡುಗ ಸ್ವಲ್ಪ ದೊಡ್ಡವನಾದ ಮೇಲೆ ಆತನನ್ನು ಒಂಟಿಯಾಗಿಯೇ ಭಿಕ್ಷೆಗೆ ಕಳುಹಿಸುತ್ತಿದ್ದಳು. ಹೀಗಿರಲು ಆತನು ಸುತ್ತಾಡುತ್ತಾ ಒಂದುದಿನ ಶ್ರಾವಸ್ತಿಯ ಹಳೆಯ ಮನೆಗೆ ಬಂದನು. ತನ್ನ ಹಳೆಯ ನೆನಪಿನಿಂದ ಆತನು ಮನೆಯೊಳಗೆ ಪ್ರವೇಶಿಸಿದನು. ಆಗ ಮೂಲಸಿರಿಯ ಮಕ್ಕಳು ಆತನನ್ನು ಕಂಡು ಹೆದರಿ ಸೇವಕರಿಂದ ಆಚೆಗೆ ದಬ್ಬಿಸಿದರು.
ಅದೇವೇಳೆಯಲ್ಲಿ ಭಗವಾನರು ಈ ಘಟನೆ ನೋಡಿದನು. ಅವರು ಮೂಲಸಿರಿಯನ್ನು ಕರೆಯಿಸಿದರು. ನಂತರ ಆತನಿಗೆ ಆ ಭಿಕ್ಷುಕ ಅವರ ಸ್ವತಃ ತಂದೆ ಬೇರಾರು ಅಲ್ಲ ಎಂದು ಹೇಳಿದರು. ಆದರೆ ಆತನು ನಂಬಲಿಲ್ಲ. ನಂತರ ಭಗವಾನರು ಭಿಕ್ಷುಕನಿಗೆ ಕರೆಸಿ ಆತನು ಹಿಂದಿನ ಜನ್ಮದಲ್ಲಿ ಎಲ್ಲೆಲ್ಲಿ ನಿಧಿ ಅಡಗಿಸಿರುವನು ತೋರಿಸು ಎಂದಾಗ ಆತನು ತೋರಿಸಿದ ಕಡೆ ಚಿನ್ನವು ದೊರೆಯಿತು. ಆಗ ಮೂಲಸಿರಿಯು ಭಿಕ್ಷುಕನನ್ನು ತನ್ನ ತಂದೆ ಎಂದು ಒಪ್ಪಿದನು. ನಂತರ ಅವರು ಭಗವಾನರ ಉಪಾಸಕರಾದರು. ಆ ವೇಳೆಯಲ್ಲಿ ಭಗವಾನರು ಈ ಗಾಥೆಯನ್ನು ನುಡಿದರು:
ನನಗೆ ಪುತ್ರರಿರುವರು, ನನ್ನಲ್ಲಿ ಧನವು ಇರುವುದು ಎಂದು ಮೂರ್ಖರು ಚಿಂತೆಪಡುವರು. ತಾನೇ ತನ್ನವಲ್ಲ ಎಂದಮೇಲೆ ಎಲ್ಲಿಯ ಪುತ್ರರು, ಎಲ್ಲಿಯ ಧನ.
8.4 ಕೋಸಿಯಾ ಕೃಪಣನ ಕಸಿವಿಸಿ
ರಾಜಗೃಹದ ಸಮೀಪ ಸಕ್ಕಾರವೆಂಬ ಹಳ್ಳಿಯಿತ್ತು. ಅಲ್ಲಿ ಕೋಸಿಯನೆಂಬ ಶ್ರೀಮಂತ ಕೃಪಣನಿದ್ದನು. ಆತನು ಯಾರಿಗೂ ಏನನ್ನೂ ಸ್ವಲ್ಪವೂ ದಾನ ನೀಡುತ್ತಿರಲಿಲ್ಲ. ಒಂದುದಿನ ಆತನಿಗೆ ಒಬ್ಬಟ್ಟಿನಂತಹ ತಿಂಡಿ ತಿನ್ನುವ ಬಯಕೆಯಾಯಿತು. ಆದರೆ ಪರರಲ್ಲಿ ಹಂಚಿ ತಿನ್ನುವ ಪ್ರವೃತ್ತಿ ಆತನಲ್ಲಿ ಇಲ್ಲದ ಕಾರಣ ಆತನು ತನ್ನ ಪತ್ನಿಯೊಂದಿಗೆ ಮಹಡಿಯ ಎತ್ತರದ ಅಂತಸ್ತಿನಲ್ಲಿ ಕುಳಿತು ಅಲ್ಲಿ ಯಾರೂ ಕಾಣಲಾರರು ಎಂಬ ನಿರಾಳ ಹೊಂದಿ ಇಬ್ಬರೂ ಒಬ್ಬಟ್ಟು ತಯಾರಿಸಲಾರಂಭಿಸಿದರು.
ಅಂದು ಮುಂಜಾನೆಯೇ ಭಗವಾನರು ತಮ್ಮ ದಿವ್ಯದೃಷ್ಟಿಯಿಂದಾಗಿ ಈ ಇಬ್ಬರು ದಂಪತಿಗಳು ಸೋತಪನ್ನರಾಗುತ್ತಾರೆ ಎಂದು ತಿಳಿಸಿದರು. ಆದ್ದರಿಂದ ಅವರು ಋದ್ದಿಶಕ್ತಿ ಪ್ರವೀಣ ಮಹಾ ಮೊಗ್ಗಲಾನರನ್ನು ಕರೆಸಿ ಆ ಶ್ರೀಮಂತ ದಂಪತಿಯನ್ನು ಮಧ್ಯಾಹ್ನದ ಹೊತ್ತಿಗೆ ಕರೆತರಬೇಕೆಂದು ತಿಳಿಸಿದರು. ಇದ್ದಿಬಲಗಳನ್ನು ಹೊಂದಿದ್ದ ಮೊಗ್ಗಲಾನರು ತಕ್ಷಣ ಅಲ್ಲಿಂದ ಮರೆಯಾಗಿ ಕೋಸಿಯನ ಉಪ್ಪರಿಗೆಯ ಕಿಟಕಿ ಬಳಿ ನಿಂತರು.
ಕೋಸಿಯ ಮೊಗ್ಗಲಾನರನ್ನು ನೋಡಿದ. ಅಲ್ಲಿಂದ ಹೊರಹೋಗುವಂತೆ ಕೂಗಾಡಿದ. ಆದರೆ ಮೊಗ್ಗಲಾನರು ಏನನ್ನು ನುಡಿಯದೆ ನಿಶ್ಶಬ್ದದಿಂದಿದ್ದರು. ಕೊನೆಗೆ ಕೋಸಿಯನೆ ಸೋತು ಹೆಂಡತಿಯೊಡನೆ ಹೀಗೆ ಹೇಳಿದನು ಚೂರು ಒಬ್ಬಟ್ಟು ಮಾಡಿ ಆ ಭಿಕ್ಷುವಿಗೆ ನೀಡು ಆಕೆ ಅದರಂತೆ ಮಾಡಿದಳು. ಆದರೆ ಆಶ್ಚರ್ಯ! ಅದು ಇಡೀ ಬಾಣಲಿಯನ್ನೇ ತುಂಬಿಸಿತು. ಕೋಸಿಯನಿಗೆ ಹೆಂಡತಿ ಹೆಚ್ಚು ಹಾಕಿರಬಹುದೆಂದು ಆಕೆಯನ್ನು ಬಯ್ದು ತಾನೇ ಚೂರು ಒಬ್ಬಟ್ಟನ್ನು ಬಾಣಲಿಗೆ ಹಾಕಿದ. ಅದೂ ಸಹ ಇಡೀ ಬಾಣಲಿಯನ್ನು ತುಂಬಿಸಿತು. ಆತ ಎಷ್ಟೇ ಚಿಕ್ಕ ಚೂರು ಬಾಣಲಿಗೆ ಹಾಕಿದರೂ ಅದು ಇಡೀ ಬಾಣಲಿಯಷ್ಟು ದಪ್ಪವಾಗಿ ಉಬ್ಬುತ್ತಿತ್ತು. ಕೊನೆಗೆ ಕೋಸಿಯನು ಹೆಂಡತಿಗೆ ಒಂದು ಒಬ್ಬಟ್ಟನ್ನು ಮೊಗ್ಗಲಾನರಿಗೆ ಕೊಟ್ಟು ಕಳುಹಿಸು ಎಂದನು. ಆಕೆ ಹಾಗೇ ಮಾಡಲು ಹೋದಾಗ ಎಲ್ಲಾ ಒಬ್ಬಟ್ಟುಗಳು ಅಂಟಿಕೊಂಡಿದ್ದವು. ಆಕೆಗೆ ಒಂದನ್ನು ಪ್ರತ್ಯೇಕಿಸಲು ಆಗಲಿಲ್ಲ. ಕೊನೆಗೆ ಕೋಸಿಯನೇ ಬೇರ್ಪಡಿಸಲು ಪ್ರಯತ್ನಿಸಿದನು. ಆದರೆ ಅದು ಸಾಧ್ಯವಾಗದೆ ನಿರಾಶೆಯಾಗಿ ಆತನ ಅಭಿಲಾಶೆ ಮತ್ತು ಹಸಿವು ಕಳೆದುಕೊಂಡನು. ಎಲ್ಲವನ್ನೂ ಈ ಭಿಕ್ಷುವಿಗೆ ನೀಡು ಎಂದನು. ಅದನ್ನು ಸ್ವೀಕರಿಸಿದ ಮೊಗ್ಗಲಾನರು ದಾನದ ಬಗ್ಗೆ ಪ್ರವಚನವೊಂದನ್ನು ನುಡಿದರು. ನಂತರ ಅವರಿಗೆ ಅವರಿಗಾಗಿ ಬುದ್ಧರು ಮತ್ತು ಸಂಘವು ಕಾಯುತ್ತಿದೆ ಎಂದು ಹೇಳಿದರು. ಶ್ರಾವಸ್ತಿಯ ಜೇತವನವು ಅಲ್ಲಿ 45 ಯೋಜನ ದೂರವಿತ್ತು. ಆದರೆ ಮಹಾ ಮೊಗ್ಗಲಾನರವರ ತಮ್ಮ ಅತೀಂದ್ರೀಯ ಶಕ್ತಿಯಿಂದಾಗಿ ಕೋಸಿಯ, ಆತನ ಪತ್ನಿ ಮತ್ತು ಒಬ್ಬಟ್ಟುಗಳ ಬುಟ್ಟಿಯ ಸಮೇತ ಬುದ್ಧರ ಮುಂದೆ ಪ್ರತ್ಯಕ್ಷರಾದರು. ಆ ಒಬ್ಬಟ್ಟುಗಳನ್ನು 500 ಭಿಕ್ಷುಗಳಿಗೆ ದಾನ ನೀಡಿದರು. ಆ ಒಬ್ಬಟ್ಟಿನ ಬುಟ್ಟಿಯು ಸರಿಯಾಗಿ 500 ಭಿಕ್ಷುಗಳಿಗೆ ಸರಿಹೋಯಿತು. ನಂತರ ಭಗವಾನರು ನೀಡಿದ ಉಪದೇಶದಿಂದ ಅವರು ಸೋತಪತ್ತಿಫಲ ಪಡೆದರು.
ಸಂಜೆ ಭಿಕ್ಷುಗಳು ಮಹಾಮೊಗ್ಗಲಾನರ ಪ್ರತಾಪವನ್ನು ಮೆಚ್ಚಿ ಆ ವಿಷಯವನ್ನು ಚಚರ್ಿಸುವಾಗ ಭಗವಾನರು ಅಲ್ಲಿ ಬಂದರು ಮತ್ತು ಹೀಗೆ ಹೇಳಿದರು ಭಿಕ್ಷುಗಳೇ, ನೀವು ಸಹಾ ಮೊಗ್ಗಲಾನರ ತರಹ ಜೀವಿಸಬೇಕು. ಗ್ರಾಮದವರಿಂದ ಆಹಾರ ಪಡೆಯುವಾಗ ಅವರ ಶ್ರದ್ಧೆಗೆ ಮತ್ತು ಐಶ್ವರ್ಯಕ್ಕೆ ಯಾವುದೇ ಹಾನಿಯಾಗದಂತೆ ಸಂಚರಿಸಬೇಕು ಎಂದರು. ಆಗ ಭಗವಾನರು ಈ ಗಾಥೆಯನ್ನು ನುಡಿದರು:
ಹೇಗೆ ಭ್ರಮರವು ಪುಷ್ಪಕ್ಕೆ ಅಥವಾ ಅದರ ವರ್ಣಕ್ಕೆ ಅಥವಾ ಗಂಧಕ್ಕೆ ಹಾನಿಮಾಡದೆ ಕೇವಲ ರಸವನ್ನು ತೆಗೆದುಕೊಳ್ಳವ ಹಾಗೆ ಮುನಿಗಳು ಗ್ರಾಮಗಳಲ್ಲಿ ಚಲಿಸುತ್ತಾರೆ.
8.5 ಅವನತಿಗೆ ಕಾರಣ
ಯಾರು ಶ್ರೀಮಂತರಾಗಿದ್ದರೂ ಸಹಾ ವೃದ್ಧಾವಸ್ಥೆಯಲ್ಲಿರುವ ತಮ್ಮ ತಂದೆ-ತಾಯಿಗಳನ್ನು ಸಲುಹುವುದಿಲ್ಲವೋ ಅದು ನಿಜಕ್ಕೂ ಆತನ ಅವನತಿಗೆ ಕಾರಣವಾಗಿದೆ.(8)
ಯಾರು ಅಪಾರ ಸಿರಿಯನ್ನು ಹೊಂದಿದ್ದರೂ, ಚಿನ್ನದಿಂದ ಮತ್ತು ಅಪಾರ ಆಹಾರದಿಂದ ತುಂಬಿ ಹೋಗಿದ್ದರೂ ಸಹಾ ಒಂಟಿಯಾಗಿಯೇ ಅವನ್ನೆಲ್ಲಾ ಭೋಗಿಸಲು ಸಿದ್ಧನಾಗಿರುವನೋ ಅದು ನಿಜಕ್ಕೂ ಆತನ ಅವನತಿಗೆ ಕಾರಣವಾಗಿದೆ. (12)
ಯಾರು ತನ್ನ ಜನ್ಮದ ಕಾರಣದಿಂದಾಗಿ, ಅಥವಾ ಐಶ್ವರ್ಯದ ಕಾರಣದಿಂದಾಗಿ ಅಥವಾ ವಂಶದ ಕಾರಣದಿಂದಾಗಿ ಅಹಂಕಾರಪಡುತ್ತಿರುವನೋ ಮತ್ತು ತನ್ನ ಬಂಧು ಬಾಂಧವರನ್ನು ಕೀಳಾಗಿ ಕಾಣುವನೋ ಅದು ನಿಜಕ್ಕೂ ಆತನ ಅವನತಿಗೆ ಕಾರಣವಾಗಿದೆ (14) - ಪರಾಭವ ಸುತ