Wednesday 11 December 2019

ಡಿಸೆಂಬರ್ ತಿಂಗಳ ಹುಣ್ಣಿಮೆಯ ವಿಶೇಷ

ಡಿಸೆಂಬರ್ ತಿಂಗಳ ಹುಣ್ಣಿಮೆಯ ವಿಶೇಷ



  ಇದು ಈ ವರ್ಷದಲ್ಲಿ(2019) 11 &12  ದಿನಾಂಕದಲ್ಲಿ ಬರುತ್ತದೆ ಈ ದಿನದಂದು ಬೇರೆ ದೇಶಗಳ ಬೌದ್ಧರಿಗಿಂತ ಶ್ರೀಲಂಕದ ಬೌದ್ಧರಿಗೆ ಅತ್ಯಂತ ಪ್ರಾಶಸ್ತ್ಯವಾದುದು. ಏಕೆಂದರೆ ಈ ದಿನದಂದು ಸುಮಾರು 2562 ವರ್ಷಗಳ ಹಿಂದೆ ಪವಿತ್ರವಾದ ಜಯಸಿರಿ ಮಹಾಬೋಧಿ ವೃಕ್ಷದ ಗಿಡವನ್ನು ಬೋಧ್ ಗಯಾದಿಂದ ಶ್ರೀಲಂಕದ ಅನುರಾಧಪುರಕ್ಕೆ ತರಲಾಯಿತು. ಆಗ ಅಲ್ಲಿ ದೇವನಾಂಪಿಯ ತಿಸ್ಸರವರು ಆಳ್ವಿಕೆಯನ್ನು ಮಾಡುತ್ತಿದ್ದರು.(ಕಿ.ಪೂ. 250-210)..

ಸಾಮ್ರಾಟ್ ಅಶೋಕರ ಪುತ್ರರಾದ ಮಹಿಂದರವರು(ಮಹೇಂದ್ರ) ಆ ಸಮಯದಲ್ಲಿ ಶ್ರೀಲಂಕಕ್ಕೆ ಬುಧ್ಧಧಮ್ಮವನ್ನು ತಂದರು. ಹಾಗೇಯೆ ಅವರ ತಂಗಿಯಾದ ಸಂಘಮಿತ್ರೆಯು ತನ್ನ 18ನೇ ವಯಸ್ಸಿನಲ್ಲಿಯೇ ಭಿಕ್ಖುಣಿಯಾಗಿದ್ದಳು. ಆಕೆಯು ಬೋಧಿ ವೃಕ್ಷವನ್ನು ಹೊತ್ತುಕೊಂಡು ಶ್ರೀಲಂಕದ ಅನುರಾಧಪುರದಲ್ಲಿ ಬಂದಿಳಿದ ದಿನವು ಇಂದೇ ಆಗಿತ್ತು. ಶ್ರೀಲಂಕದ ಭಿಕ್ಖುಣಿ ಶಾಸನದ ಸ್ಥಾಪನಕರ್ತೆ ಆಕೆಯೇ ಆಗಿದ್ಧಳು.

ಈ ಆಣ್ಣ.ಹಾಗೂ ತಂಗಿಯು ಶ್ರೀಲಂಕ ಬುಧ್ಧಧಮ್ಮಕ್ಕೆ ಸ್ಥಾಪನಾಕರ್ತರೂ ಅಷ್ಟೇ  ಅಲ್ಲದೆ ಅಲ್ಲಿನ ಸಾಮಾಜಿಕ, ಸಾಂಸ್ಕೃತಿಕ, ಆರ್ಥಿಕ, ಧಾರ್ಮಿಕ ಇತ್ಯಾದಿಗಳ ಕ್ರಾಂತಿಗೂ ಅವರೇ ಕಾರಣಕರ್ತರಾಗಿದ್ದಾರೆ. ಅವರಿಗೆ ಸಿಂಹಳಿಯರೂ ಸದಾ ಚಿರಋಣಿ ಎಂದು ಭಾವಿಸುತ್ತಾರೆ.

ಮಹಾನ್ ತೇಜಸ್ವಿಯು ಪರಮ ಸಾಧ್ವಿಯು ಆಗಿದ್ದಂತಹ ಪರಮಪೂಜ್ಯ ಸಂಘಮಿತ್ರೆಗೆ ಪಾಟಲಿಪುತ್ರಕ್ಕೆ ಆಗಮಿಸಿದ್ದಂತಹ ದೇವನಾಂಪಿಯ ತಿಸ್ಸರು ಸಂಘಮಿತ್ರೆಗೆ ಶ್ರೀಲಂಕಕ್ಕೆ ಬರಲು ಆಹ್ವಾನ ನೀಡಿದರು. ಏಕೆಂದರೇ ಮಹಾರಾಣಿಯಾಗಿದ್ದಂತಹ ಅನುಲ ಹಾಗೂ ಆಕೆಯ ಸಖಿಯರು ಭಿಕ್ಖುಣಿಯಾಗಲು ಬಯಸಿದ್ದರು. ಹೀಗಾಗಿ ಸಿಂಹಳ ರಾಜನಾದ ದೇವಾಂಪಿಯ ತಿಸ್ಸರು ಆಕೆಯನ್ನು ಕರೆ ತರಲು ವಿದೇಶಾಂಗ ಮಂತ್ರಿಯಾದ ಅರಿಟ್ಟರವರನ್ನು ಕಳುಹಿಸಿದ್ದನು.

  ಪಾಟಲಿಪುತ್ರದಿಂದ ಸಿಂಹಳಕ್ಕೆ ಸಮುದ್ರ ಯಾನದಲ್ಲಿ ಬರಲು 7 ದಿನಗಳು ಹಿಡಿಯಿತು‌. ಆಕೆಯೊಂದಿಗೆ 11 ಭಿಕ್ಖುಣಿಯರು ಆಕೆಯ ಜೋತೆಗೆ ಇದ್ದರು.ಆಕೆಯು ಶ್ರೀಲಂಕದ ಉತ್ತರದಲ್ಲಿರುವ ಜಂಬುಕೊಳೆ ಬಂದರಿನಲ್ಲಿ ಇಳಿದಳು. ಆಕೆಯು ಅಲ್ಲಿಗೆ ತಂದಂತಹ ಮಹಾ ಉಡೂಗೊರೆ ಎಂದರೇ ಮಹಾಬೋಧಿ ವೃಕ್ಷದ ಸಸಿಯಾಗಿತ್ತು. ಅಲ್ಲಿ ಅವರು ಅದನ್ನು ಜಯಸಿರಿ ಮಹಾಬೋಧಿ ಎಂದು ಕರೆಯುತ್ತಾರೆ. ಅಲ್ಲಿನ ರಾಜನಾದ ತಿಸ್ಸರೂ ಅತಿ ಗೌರವ ಭಕ್ತಿಯಿಂದ ಅದನ್ನು ನೆಟ್ಟರು. ಅಂದಿನಿಂದ ಇಂದಿನವರೆವಿಗೂ ಅದನ್ನು ಜೀವಂತ ಭಗವಾನ್ ಬುಧ್ಧರಿಗೆ ಗೌರವಿಸುವಂತೆ ಗೌರವಿಸುತ್ತಾರೆ ಹಾಗೂ ಪೂಜಿಸುತ್ತಾರೆ.

ನಂತರ ಮೂದಲು ಅಲ್ಲಿ ಮಹಾರಾಣಿ ಅನುಲರವರು ಭಿಕ್ಖುಣಿಯಾಗುತ್ತಾರೆ. ನಂತರ ಸಾವಿರಾರು ಸ್ತ್ರೀಯರು ಸಂಘವನ್ನು ಪ್ರವೇಶಿಸಿದರು.

   ಹೀಗಾಗಿ ಸಿಂಹಳಿಯರಿಗೆ ಈ ಹುಣ್ಣಿಮೆಯು ಪರಮ ಪವಿತ್ರವಾದುದು.ಈ ದಿನದಂದು ಸಿಃಹಳಿಯರು ಪಂಚಶೀಲ, ಅಷ್ಟಾಂಗ ಶೀಲ, ದಾನ, ಧ್ಯಾನ, ತಿರತನ ಪೂಜೆ ಇತ್ಯಾದಿಗಳ ಆಚರಣೆ ಇರುತ್ತದೆ.ಹಾಗೂ ವಿಶೇಷವಾಗಿ ಬೋಧಿವೃಕ್ಷದ ಪೂಜೆಯು ಇರುತ್ತದೆ.

ಹಾಗೇಯೆ ಸಿಂಹಳ ದೇವನಾದ ಸುಮನ ಸಮನರ ಕೋರಿಕೆಯಂತೆ ಬುಧ್ಧಭಗವಾನರು ಶ್ರೀಲಂಕಕ್ಕೆ ಭೇಟಿ ನೀಡಿದ್ದರು ಹಾಗೂ ಅವರ ಪಾದದ ಚಿನ್ಹೆಯನ್ನು ನಾವು ಶ್ರೀಲಂಕದ ಸಿರಿಪಾದ ಪರ್ವತದಲ್ಲಿ ಕಾಣಬಹುದು.

Monday 2 December 2019

ಪುಣ್ಯದ ಎಂಟು ಇಳುವರಿಗಳು


 ಪುಣ್ಯದ ಎಂಟು ಇಳುವರಿಗಳು



ಭಿಕ್ಷುಗಳೇ, ಇವು ಪುಣ್ಯದ ಮತ್ತು ಸುಖದ ಎಂಟು ಇಳುವರಿಗಳಾಗಿವೆ. ಸುಖಕ್ಕೆ ಆಹಾರವಾಗಿದೆ, ದಿವ್ಯವಾದುದ್ದು, ಸುಖದ ಪರಿಣಾಮವಾಗಿರುವಂತಹುದು, ಸ್ವರ್ಗಗಾಮಿಯಾಗಿರುವಂತಹುದು, ಸುಖಕಾರಿಯಾಗಿರುವಂತಹುದು, ಪ್ರಿಯವಾದುದು, ಅತ್ಯಮೂಲ್ಯವಾದುದು, ಹಿತಕಾರಿಯಾಗಿರುವುದಾಗಿದೆ, ಯಾವುದವು ಎಂಟು?

1. ಭಿಕ್ಷುಗಳೇ, ಇಲ್ಲಿ ಆರ್ಯರ ಶಿಷ್ಯನು ಬುದ್ಧರಲ್ಲಿ ಶರಣುಹೋಗುತ್ತಾನೆ. ಭಿಕ್ಷುಗಳೇ, ಇದು ಪುಣ್ಯಕ್ಕೆ ಮತ್ತು ಒಳಿತಿಗೆ, ಸುಖಕ್ಕೆ ಪ್ರಥಮ ಇಳುವರಿಯಾಗಿದೆ...

2. ಮತ್ತೆ ಭಿಕ್ಷುಗಳೇ, ಇಲ್ಲಿ ಆರ್ಯರ ಶಿಷ್ಯನು ಧಮ್ಮಕ್ಕೆ ಶರಣು ಹೋಗುತ್ತಾನೆ. ಭಿಕ್ಷುಗಳೇ, ಇದು ಪುಣ್ಯಕ್ಕೆ, ಒಳಿತಿಗೆ ಮತ್ತು ಸುಖಕ್ಕೆ ದ್ವತೀಯ ಇಳುವರಿಯಾಗಿದೆ...

3. ಮತ್ತೆ ಭಿಕ್ಷುಗಳೇ, ಇಲ್ಲಿ ಆರ್ಯರ ಶಿಷ್ಯನು ಸಂಘಕ್ಕೆ ಶರಣು ಹೋಗುತ್ತಾನೆ. ಭಿಕ್ಷುಗಳೇ, ಇದು ಪುಣ್ಯಕ್ಕೆ, ಒಳಿತಿಗೆ ಮತ್ತು ಸುಖಕ್ಕೆ ತೃತೀಯ ಇಳುವರಿಯಾಗಿದೆ...

 ಭಿಕ್ಷುಗಳೇ, ಐದು ದಾನಗಳಿವೆ. ಅವು ಮಹತ್ತರ ಲಾಭವನ್ನುಂಟು ಮಾಡುತ್ತದೆ. ಸನಾತನ ಕಾಲದಿಂದಲೂ, ಸಂಪ್ರದಾಯದಿಂದಲೂ ಸ್ವೀಕೃತವಾಗಿವೆ. ಗೊಂದಲಾತೀತವಾಗಿದೆ, ಅವು ಯಾರಿಂದಲೂ ತಿರಸ್ಕೃತವಾಗಿಲ್ಲ. ಅವು ಯಾವುದು?

4.ಇಲ್ಲಿ ಭಿಕ್ಷುಗಳೇ, ಆರ್ಯ ಶಿಷ್ಯನು, ಜೀವಹತ್ಯೆಯಿಂದ ವಿರತನಾಗುತ್ತಾನೆ. ಹೀಗೆ ಅಂತಹುದರಿಂದ ದೂರಾಗಿ, ಆತನು ಅಸಂಖ್ಯಾತ ಜೀವಿಗಳಿಗೆ ಅಭಯವನ್ನು ನೀಡಿದ್ದಾನೆ. ದ್ವೇಷರಹಿತತೆ ನೀಡಿದ್ದಾನೆ, ವೈರರಹಿತತೆ ನೀಡಿದ್ದಾನೆ. ಹೀಗೆ ಆತನು ನಿಂದಾತೀತವಾದ ಅಭಯ ದಾನವನ್ನೇ ಮಾಡಿದ್ದಾನೆ. ಮೈತ್ರಿಯಿಂದ, ದಯೆಯಿಂದ, ಕೂಡಿದವನಾಗಿದ್ದಾನೆ. ಇದೇ ಭಿಕ್ಷುಗಳೇ, ಮೊದಲ ದಾನವಾಗಿದೆ. ಇದು ಎಲ್ಲರಿಂದ ಪ್ರಶಂಸಿತವಾಗಿದ್ದು, ಯಾರಿಂದಲೂ ತಿರಸ್ಕೃತವಾಗಿಲ್ಲ, ಗೊಂದಲಾತೀತವಾಗಿದೆ.

5. ಮತ್ತೆ ಭಿಕ್ಷುಗಳೇ, ಇದೇರೀತಿಯಲ್ಲಿ ಆರ್ಯಶಿಷ್ಯನು ಕಳ್ಳತನದಿಂದಾಗಿ ದೂರವಿರುತ್ತಾನೆ. 

6. ಅನೈತಿಕ ಕಾಮುಕತೆಯಿಂದ ದೂರವಿರುತ್ತಾನೆ.
7. ಸುಳ್ಳಿನಿಂದ ದೂರವಿರುತ್ತಾನೆ. 
8.ಎಲ್ಲಾ ಬಗೆಯ ಮಾದಕ ವಸ್ತುಗಳು, ಮದ್ಯಪಾನಗಳಿಂದ ದೂರವಾಗುತ್ತಾನೆ. 

ಹೀಗಿದ್ದೂ ಆತನು ಅಸಂಖ್ಯಾತ ಜೀವಿಗಳಿಗೆ ಅಭಯವನ್ನು ನೀಡುತ್ತಿದ್ದಾನೆ. ದ್ವೇಷರಹಿತತೆಯನ್ನು ನೀಡುತ್ತಿದ್ದಾನೆ, ವೈರರಹಿತತೆಯನ್ನು ನೀಡುತ್ತಿದ್ದಾನೆ. ಹೀಗಿದ್ದೂ ಸೀಮಾತೀತವಾದ ಅಭಯ ದಾನಕ್ಕೆ ಭಾಗಿಯಾಗುತ್ತಾನೆ. ಮೈತ್ರಿಯ ಮತ್ತು ಕರುಣೆಯ ನೆಲೆಸುವಿಕೆಗೆ ಕಾರಣವಾಗುತ್ತಾನೆ. ಭಿಕ್ಷುಗಳೇ, ಇವೇ ಆ ಐದು ಮಹಾದಾನಗಳಾಗಿದ್ದು, ಇದು ಪುರಾತನ ಕಾಲದಿಂದಲೂ ಪ್ರಶಂಸಿತವಾಗಿದ್ದು, ಯಾರಿಂದಲು ತಿರಸ್ಕೃತವಾಗಿಲ್ಲ. ಇವೇ ಭಿಕ್ಷುಗಳೇ, ಪುಣ್ಯಗಳ ಇಳುವರಿಗೆ ಸಹಾಯಕವಾದ ಎಂಟು ಅಂಗಗಳಾಗಿವೆ. ಅದರಿಂದಾಗಿ ಆತನು ಒಳಿತನ್ನು, ಸುಖವನ್ನು, ಸ್ವರ್ಗಗಾಮಿತ್ವವನ್ನು, ಆನಂದವನ್ನು, ಲಾಭವನ್ನು ಪಡೆಯುತ್ತಾನೆ.