Saturday 21 April 2018

ಬೋಧನೆಯ ವಿಮಶರ್ೆ (ಟೀಕೆ) ಸ್ವೀಕರಿಸುವಿಕೆ

ಬೋಧನೆಯ ವಿಮಶರ್ೆ (ಟೀಕೆ) ಸ್ವೀಕರಿಸುವಿಕೆ 

(ಬೋಧನೆಯ ಬಗ್ಗೆ ವಿಮಶರ್ೆ ಮತ್ತು ಸ್ವೀಕಾರ)
ಪ್ರಜ್ಞಾಪ್ರದೀಪ ಬುದ್ಧರು ತಮ್ಮ ಶಿಷ್ಯರಿಗೆ ಹೇಗೆ ಬಾಹ್ಯದವರ ಅಭಿಪ್ರಾಯಗಳೊಡನೆ ಸ್ತುತಿ, ಟೀಕೆಗಳೊಡನೆ ವತರ್ಿಸಬೇಕೆಂದು ಹೇಳಿದ್ದಾರೆ.
ಒಂದುದಿನ ಕೆಲವು ಭಿಕ್ಷುಗಳು ತಾವು ಕಂಡ ಒಬ್ಬ ಗುರು ಮತ್ತು ಆತನ ಶಿಷ್ಯನ ವಾದವಿವಾದಗಳ ವಿಷಯ ನಡೆಯುತ್ತಿತ್ತು. ಆಗ ಭಗವಾನರು ಅಲ್ಲಿ ಪ್ರವೇಶ ಮಾಡಿದರು. ಒಂದು (ಕ್ಷೇಮ) ಕುಶಲ ವಿಚಾರಣೆಯ ನಂತರ ಯಾವ ಚಚರ್ೆ ನಡೆಯುತ್ತಿತ್ತು ಎಂದು ಕೇಳಿದರು. ಭಂತೆ (ಪೂಜ್ಯರೇ) ಎಂದು ಮತ್ತೆ ಉತ್ತರಿಸಿದನು ಕಳೆದ ದಿನದ ಸಂಜೆ ನಾವು ಒಂದು (ಪಂಗಡದ) ಗುರುವಿನ ಹಾಗು ಆತನ ಶಿಷ್ಯ ಬ್ರಹ್ಮದತ್ತನ ಬಗ್ಗೆ ಕೆಲವು ಮಾತುಗಳು ಕೇಳಿದೆವು. ಆಗ ಬ್ರಹ್ಮದತ್ತನು ಬುದ್ಧರನ್ನು, ಧಮ್ಮವನ್ನು ಮತ್ತು ಸಂಘವನ್ನು ಸ್ತುತಿಸುತ್ತಿದ್ದನು.  ಆದರೆ ಆತನ ಗುರುವು ತ್ರಿರತ್ನಗಳನ್ನು (ಬುದ್ಧ, ಧಮ್ಮ, ಸಂಘ) ನಿಂದಿಸುತ್ತಿದ್ದನು. ಈ ವಿಷಯವೇ ಚಚರ್ಿಸುತ್ತಿದ್ದೆವು ತಮ್ಮ ಆಗಮನವಾಯಿತು ಎಂದರು.
ಆಗ ಲೋಕಾಕಾರುಣಿಕ ಪೂರ್ಣವಾಗಿ ನಿಸ್ವಾಥರ್ಿಗಳಾಗಿದಂತಹ ಬುದ್ಧ ಭಗವಾನರು ಹೀಗೆ ನುಡಿದರು ಓ ಭಿಕ್ಷುಗಳೇ, ಪರರು ನನ್ನ ವಿರುದ್ಧ, ನನ್ನ ಬೋಧನೆಯ (ಧಮ್ಮ) ವಿರುದ್ಧ ಅಥವಾ ನನ್ನ ಸಂಘದ ವಿರುದ್ಧ (ನಿಂದಿಸುವಿಕೆ) ಮಾತನಾಡಿದರೆ, ನೀವು ಕೋಪಿಸಿಕೊಳ್ಳಬಾರದು. ಅದನ್ನೇ ಹಿಡಿದಿಟ್ಟುಕೊಳ್ಳಬಾರದು, ಅದರಿಂದ ನಿಮಗೆ ಹಾನಿಯಾಗುತ್ತದೆ. ಈಗ ನೀವು ಕೋಪಗೊಂಡರೆ ನಿಮಗೆ ಅವರು ಹೇಳುತ್ತಿರುವುದು ನಿಜವೋ ಅಥವಾ ಸುಳ್ಳೋ ಅರಿಯಲಾಗುವುದಿಲ್ಲ ಮತ್ತು ಹಾಗೆಯೇ ಪರರು ನನ್ನನ್ನು ಸ್ತುತಿಸಬಹುದು, ನನ್ನ ಬೋಧನೆಯನ್ನು ಸ್ತುತಿಸಬಹುದು ಅಥವಾ ಸಂಘವನ್ನು ಸ್ತುತಿಸಬಹುದು. ಆದರೆ ಆಗಲೂ ಸಹಾ ನೀವು ಆನಂದಗೊಳ್ಳಬಾರದು ಅಥವಾ ಉಬ್ಬಿ ಹೆಮ್ಮೆಪಡಬಾರದು. ಏಕೆಂದರೆ ನೀವು ಅತಿಯಾಗಿ ಆನಂದದಿಂದ ಉಬ್ಬಿ ಹೆಮ್ಮೆಪಡುತ್ತಿರುವಾಗ ಅವರು ಹೇಳುತ್ತಿರುವುದರ ಬಗ್ಗೆ ಸರಿಯಾಗಿ ಅರಿಯಲಾಗುವುದಿಲ್ಲ. ಆದ್ದರಿಂದ ಪರರು ತ್ರಿರತ್ನವನ್ನು (ಬುದ್ಧರನ್ನು, ಧಮ್ಮವನ್ನು, ಸಂಘವನ್ನು) ಸ್ತುತಿಸಲಿ ಅಥವಾ ಟೀಕಿಸಲಿ ನೀವು ಹೆಮ್ಮೆಯು (ಆನಂದ) ಪಡಬೇಡಿ ಅಥವಾ ಕೋಪವೂ ಪಡಬೇಡಿ. ನೀವು ನಿಷ್ಪಕ್ಷಪಾತಿಗಳಾಗಿ ಸಮ್ಮ ದೃಷ್ಠಿಯಿಂದ ಶಾಂತವಾಗಿ ಅವರು ಹೇಳುತ್ತಿರುವುದು ಸರಿಯೇ ಅಥವಾ ತಪ್ಪೆ ಎಂದು ಅರಿತು ಅವರು ಸರಿ ಹೇಳುತ್ತಿದ್ದರೆ ಸರಿಯೆಂದು, ಅವರು ತಪ್ಪು ಹೇಳುತ್ತಿದ್ದರೆ ಎಲ್ಲಿ ತಪ್ಪು ಹೇಳುತ್ತಿದ್ದಾರೆ ಎಂದು ವಿವರಿಸಬೇಕು. ಮತ್ತೇ ಕೋಪವೇ ಆಗಲಿ, ಅಥವಾ ಹೆಮ್ಮಯೇ ಆಗಲಿ ನಿಮ್ಮ ಮಾನಸಿಕ ಬೆಳವಣಿಗೆಗೆ (ಸಹಕಾರಿಯಲ್ಲ) ವಿರುದ್ಧವಾಗುತ್ತದೆ ಎಂದು ವಿದ್ಯಾಚರಣ ಸಂಪನ್ನರು ಹೇಳಿದರು.

ಮೈತ್ರಿಯು (ಕರುಣಾಯುತ ಪ್ರೀತಿಯು) ಸರ್ವರಿಗಾಗಿ

ನಮ್ಮಲ್ಲಿ ಬಹಳಷ್ಟು ಮಂದಿ ದೀರ್ಘ ಅಂತರದಿಂದ ಮೈತ್ರಿ ಹಾಗು ಕರುಣೆಯನ್ನು ಪ್ರಸರಿಸುತ್ತಾ ಬಂದಿದ್ದೇವೆ. ಹೇಗೆ ಬುದ್ಧರು ಪ್ರಸರಿಸುತ್ತಿದ್ದರೂ ಹಾಗೆ ಆಗದಿದ್ದರೂ ನಾವು ಈ ಹಿಂದೆಯು ಅಧ್ಯಾಯದಲ್ಲಿ ಹಾಗು ಕೆಲವು ಘಟನೆಗಳಲ್ಲಿ ನಾವು ಬಹಳಷ್ಟು ಕಲಿತಿದ್ದೇವೆ ಮತ್ತು ನಾವು ಈ ಶ್ರೇಷ್ಠ ದಿವ್ಯ ಸ್ಥಿತಿಗಳನ್ನು ಅಭಿವೃದ್ಧಿಗೊಳಿಸಿದರೆ ನಾವು ದುಃಖದಿಂದ ಮುಕ್ತರಾಗಿ ಪರರಿಗೂ ಸರ್ವರಿಗೂ ಸಹಾಯ ಮಾಡಬಹುದು. ನೀವು ಮೈತ್ರಿಯನ್ನು ಎಷ್ಟು ಅಗಾಧವಾಗಿ, ಆಳವಾಗಿ, ಶುದ್ಧವಾಗಿ ಮತ್ತು ಪೂರ್ಣವಾಗಿ ಅಭ್ಯಸಿಸುವರೋ ಹಾಗೆ ಸಾಧನೆ ಮಾಡುವಿರೋ ನೀವು ಬುದ್ಧಭಗವಾನರ ತರಹವೇ ಆಗುವಿರಿ. (ಏಕೆಂದರೆ ಬುದ್ಧರು ಮೈತ್ರಿಯ ಹಾಗು ಜ್ಞಾನದ ಸಂಗಮವಾಗಿದ್ದಾರೆ)
ಮೈತ್ರಿಯು ಅಭಿವೃದ್ಧಿಗೊಳಿಸುವುದಕ್ಕೆ ಒಂದು ನಿಶ್ಶಬ್ಧವಾದ ಪ್ರದೇಶದ ಆಯ್ಕೆ ಉತ್ತಮವಾದುದ್ದು. ಎಲ್ಲಿ ನೀವು ನಿಮ್ಮ ಎಲ್ಲಾ ಉದ್ರೇಕ, ಚಿಂತೆ, ಆವೇಶ ಮುಂತಾದವುಗಳಿಂದ ಅಡಚಣೆಯಾಗಬಾರದು, ಗುಂಪು, ಗದ್ದಲ ಹಾಗು ಗೊಂದಲಗಳಿಂದ ಮುಕ್ತವಾದ ಯಾವುದಾದರೂ ಸ್ಥಳವನ್ನು ಹುಡುಕಿಕೊಳ್ಳಬೇಕು. ಆ ಸ್ಥಳವು ನಿಮ್ಮ ಕೋಣೆಯಾಗಿರಬಹುದು, ಉದ್ಯಾನವನ ಅಥವಾ ನಿಮ್ಮ ಮಲಗುವ ಕೋಣೆ, ಯಾವುದಾದರೂ ಸ್ಥಳ ಅದು ನಿಮಗೆ ಹಿತಕರವಾಗಿರಬೇಕು. ಒಮ್ಮೆ ಸ್ಥಳದ ಆಯ್ಕೆಯ ನಂತರ ಅದಕ್ಕೆ ಹೊಂದಿಕೊಂಡು ಇದ್ದುಬಿಡಿ ಮತ್ತು ಅತ್ಯುತ್ತಮ ಫಲಿತಾಂಶಕ್ಕಾಗಿ ಒಂದು ನಿಗದಿತ ವೇಳೆಯನ್ನು ಸಹಾ ಆಯ್ಕೆ ಮಾಡಿ ಮತ್ತು ಅದಕ್ಕೆ ಹೊಂದಿಕೊಂಡು ಸ್ಥಿರವಾಗಿ ಇದ್ದುಬಿಡಿ. ನಿಮಗೆ ಸಾಧ್ಯವಾದರೆ ಪದ್ಮಾಸನದಲ್ಲಿ ಕುಳಿತುಬಿಡಿ ಅಥವಾ ಬೆನ್ನು ನೇರ ಹಾಗು ಹಿತವಾಗಿ ಇರುವಂತಹ ಯಾವುದಾದರು ಆಸನದಲ್ಲಿ ಕುಳಿತುಕೊಳ್ಳಿ. ಮತ್ತು ಕಣ್ಣುಗಳನ್ನು ಮುಚ್ಚಿಕೊಳ್ಳಿ. ನೀವು ಸಾಧ್ಯವಾದರೆ ದಿನಕ್ಕೆ ಎರಡುಬಾರಿ ಅಭ್ಯಸಿಸಿ. ಮುಂಜಾನೆ ಅಥವಾ ಸಂಜೆ (ಸಾಧ್ಯವಾಗದಿದ್ದಿರೆ ರಾತ್ರಿ) ಕನಿಷ್ಟಪಕ್ಷ 15 ನಿಮಿಷಗಳಾದರೂ ಮಾಡಿ.

No comments:

Post a Comment