Saturday 21 April 2018

ಮಹಾದುಗ್ಗಟ

ಮಹಾದುಗ್ಗಟ

ಬುದ್ಧಭಗವಾನರು ತಮ್ಮ ಕರುಣೆಯನ್ನು ಸಾಮಾನ್ಯ ಘಟನೆಯಲ್ಲೂ ಹಾಗೆಯೇ ತೋರುತ್ತಿದ್ದರು. ಇಲ್ಲಿಯ ಘಟನೆ ದಾನದ ಬಗ್ಗೆ ಇದೆ. ಮಹಾದುಗ್ಗಟನು ಬನಾರಸ್ನಲ್ಲಿ ಆತ ಬಡವನಾಗಿದ್ದನು. ಬನಾರಸ್ನಲ್ಲಿ ಅಲ್ಲಿಯ ನಾಗರಿಕರು ಬುದ್ಧರನ್ನು ಮತ್ತು ಭಿಕ್ಷುಗಳನ್ನು ಆಹ್ವಾನಿಸಿದರು ಮತ್ತು ಅಲ್ಲಿಯ ಜನರನ್ನು ಪೂಜ್ಯರನ್ನು ಸರಿಯಾಗಿ ನೋಡಿಕೊಳ್ಳುವಂತೆ ಏಪರ್ಾಟು ಮಾಡಿದನು. ಮಹಾ ದುಗ್ಗಟನು ಅತಿ ಬಡವನಾದರೂ ಅವನು ಮತ್ತು ಆತನ ಪತ್ನಿಯು ಒಬ್ಬ ಭಿಕ್ಷುವನ್ನು ನೋಡಿಕೊಳ್ಳುವಂತೆ ನಿರ್ಧರಿಸಿದರು. ಅವರಿಬ್ಬರು ಅತಿ ಕಷ್ಟ-ಶ್ರಮಗಳಿಂದ ಹಣವನ್ನು ಸಂಪಾದಿಸಿ ಸರಳ ಊಟವನ್ನು ತಯಾರಿಸಿದರು. ಅವರು ಮಧ್ಯಾಹ್ನ ಸಮಯದಲ್ಲಿ ಊಟಕ್ಕೆ ಆಹ್ವಾನಿಸಲು ನೋಡಿದಾಗ ಎಲ್ಲಾ ಭಿಕ್ಷುಗಳು ಅವರಿವರ ಮನೆಗಳಿಗೆ ಅತಿಥಿಗಳಾಗಿ ಸೇರಿದ್ದರು. ಮಹಾದುಗ್ಗಟನ ಮನೆಯನ್ನು ಅಲಕ್ಷಿಸಲಾಗಿತ್ತು.  ಆ ಬಡಪಾಯಿಯು ಕೈಗಳನ್ನು ಹಿಂಡಿಕೊಳ್ಳುತ್ತಾ ಆಶ್ರುಗಳನ್ನು ಸುರಿಸುತ್ತಿದ್ದನು.
ಆಗ ಯಾರೋ ಒಬ್ಬರು ಆತನಿಗೆ ಹೇಳಿದರು ಬುದ್ಧರಿಗೆ ಇನ್ನೂ ಯಾರೂ ಸಹಾ ಆತಿಥ್ಯಕ್ಕೆ ಕರೆದಿಲ್ಲ. ಆತನು ಆಗಲೇ ಅಲ್ಲಿಂದ ವಿಹಾರಕ್ಕೆ ಹೊರಟು ಲೋಕ ಕಾರುಣಿಕರನ್ನು (ಬುದ್ಧ) ಆತಿಥ್ಯಕ್ಕೆ ಕೇಳಿಕೊಂಡನು, ಬುದ್ಧಭಗವಾನರು ಒಪ್ಪಿಕೊಂಡರು. ಹೊರಗೆ ಅದೇ ಸಮಯದಲ್ಲಿ ರಾಜಕುಮಾರರು ಮತ್ತು ಗಣ್ಯರು ತಮ್ಮಲ್ಲಿಗೆ ಭಗವಾನರನ್ನು ಕರೆದೊಯ್ಯಲು ಕಾಯುತ್ತಿದ್ದರು.  ಆದರೆ ಬುದ್ಧಭಗವಾನರ ಮಹದುಗ್ಗಟನಿಂದ ಮಾಡಲ್ಪಟ್ಟ ಆಹಾರವನ್ನು ತಿಂದರು ಹಾಗು ಕೃತಜ್ಞತೆ ಅಪರ್ಿಸಿದರು.
ಅದಾದ ನಂತರ ಮಹಾದುಗ್ಗಟನ ಅದೃಷ್ಟವು ಪುಸಲಾಯಿಸಿತು.  ಮತ್ತು ಆತನು ಶ್ರೀಮಂತನಾದನು. ರಾಜನಿಗೆ ಈ ವಿಷಯ ತಿಳಿದು ಆತನನ್ನು ಖಜಾನೆದಾರನನ್ನಾಗಿ ಮಾಡಿದನು. ಮಹಾದುಗ್ಗಟನು ಹೊಸ ಮನೆಯನ್ನು ಕಟ್ಟಲು ತೊಡಗುವಾಗ ಅಲ್ಲಿಯ ನೆಲದಲ್ಲಿ ಅನೇಕ ನಿಧಿ ನಿಕ್ಷೇಪಗಳು ದೊರೆತವು.  ಹೀಗೆ ಇನ್ನೂ ಶ್ರೀಮಂತನಾದನು. ಆತ ಮತ್ತೆ ಬುದ್ಧಭಗವಾನರನ್ನು ಮತ್ತು ಭಿಕ್ಷುಗಳನ್ನು ಏಳು ದಿನಗಳವರೆಗೆ ಆತಿಥ್ಯಕ್ಕೆ ಕರೆದರು. ಈ ರೀತಿಯ ನಿಸ್ವಾರ್ಥ ಸೇವೆಗಳಿಂದ ಆತನು ಮರಣದ ನಂತರ ಶ್ರೇಷ್ಠ ಸ್ಥಿತಿಯನ್ನು ಪಡೆದನು.

No comments:

Post a Comment