Sunday 14 January 2018

THE DANGERS OF GAMBLING ಜೂಜಾಡುವಿಕೆ - ಅನಾಥಪಿಂಡಿಕನ ಪುತ್ರನ ವೃತ್ತಾಂತ

              ಜೂಜಾಡುವಿಕೆ - ಅನಾಥಪಿಂಡಿಕನ ಪುತ್ರನ ವೃತ್ತಾಂತ


ಒಮ್ಮೆ ಭಗವಾನರು ಜೇತವನ ಆರಾಮದಲ್ಲಿ ತಂಗಿದ್ದರು. ಶ್ರಾವಸ್ತಿಯಲ್ಲಿ ವಾಸಿಸುತ್ತಿದ್ದ ಅನಾಥಪಿಂಡಿಕನ ಮಗನು ಅತಿಯಾಗಿ ಜೂಜಾಡುವಿಕೆ ಹಾಗು ಮದ್ಯಪಾನ ಸೇವಿಸುವಿಕೆಗೆ ವಶವಾಗಿದ್ದನು. ಆತನಿಗೆ ತಂದೆಯಿಂದ ಅಪಾರ ಹಣವು ಆತನ ಆಥರ್ಿಕ ಅಭಿವೃದ್ಧಿಗೆ ನೀಡಲಾಗುತ್ತಿತ್ತು. ಆದರೆ ಆತನು ತನ್ನ ಅಭಿವೃದ್ಧಿ ಹಾಗು ಕ್ಷೇಮಕ್ಕೆ ಬಳಸದೆ ಆತನು ಕೆಟ್ಟ ಸಂಗಾತಿಗಳ ಜೊತೆಗೆ ಬಿದ್ದು, ಜೂಜಾಡುವಿಕೆಗೆ ಬಳಸಿ ತನ್ನ ಸಂಪತ್ತು ಸರ್ವನಾಶ ಮಾಡಿಕೊಂಡನು. ಅನಂತರ ಆತನಿಗೆ ಆಶ್ಚರ್ಯವಾಗುವ ರೀತಿ ಆತನ ಐಶ್ವರ್ಯವು ಆತನ ದಿನಬಳಕೆಯ ಅಗತ್ಯತೆಗೂ ಇಲ್ಲದಂತಾಗಿ ಕಾಣಲು ಆತನು ತನ್ನ ತಂದೆಯನ್ನು ಕಾಣಲು ಹೊರಟನು. ತಂದೆಯ ಬಳಿ ಈ ಬಾರಿ ಚೆನ್ನಾಗಿ ನಡೆದುಕೊಂಡು ಬಾಳುವೆ ಎಂದು ಹೇಳಿಕೊಂಡನು. ಅನಾಥಪಿಂಡಿಕನು ತನ್ನ ಪುತ್ರನಿಗೆ ಚೆನ್ನಾಗಿ ಬುದ್ಧಿವಾದ ಹೇಳಿದನು. ಆತನಿಗೆ ಜೂಜಿನ ದುಷ್ಪರಿಣಾಮಗಳನ್ನು ತಿಳಿಸಿ, 500 ಚಿನ್ನದ ನಾಣ್ಯಗಳನ್ನು ಕೊಟ್ಟು ಅದನ್ನು ವ್ಯಾಪಾರದಲ್ಲಿ ತೊಡಗಿಸುವಂತೆ ಹೇಳಿದನು. ಆದರೆ ಆ ಮೂರ್ಖ ಯುವಕನು ಈ ಬಾರಿಯೂ ಸಹಾ ಜೂಜಿನಲ್ಲಿ ಕಳೆದುಕೊಂಡು ಮತ್ತೆ ತಂದೆಯ ಬಳಿ ಬಂದನು. ಬಂದು ಹಿಂದಿನಂತೆಯೇ ವತರ್ಿಸಿದನು. ತಂದೆಯು ಆತನಿಗೆ ಮತ್ತೆ ಹಣ ಕೊಟ್ಟು ಈ ಬಾರಿ ಸರಿಯಾಗಿ ಜೀವಿಸುವಂತೆ ಬುದ್ಧಿವಾದ ಹೇಳಿ ನಂತರ ಬುದ್ಧ ಭಗವಾನರ ಬಳಿ ಬಂದು ತನ್ನ ಮಗನ ವೃತ್ತಾಂತ ಹೇಳಿಕೊಂಡನು. ಅನಾಥಪಿಂಡಿಕನ ಮಾತು ಕೇಳಿ ಬುದ್ಧ ಭಗವಾನರು ಹೀಗೆ ಹೇಳಿದರು: ಈತನು ಈಗ ಮಾತ್ರವಲ್ಲ, ಹಿಂದಿನ ಜನ್ಮದಲ್ಲೂ ಹೀಗೆಯೇ ವತರ್ಿಸಿದ್ದಾನೆ ಎಂದು ಆ ಸನ್ನಿವೇಶ ತಿಳಿಸಿದರು.
ಬಹುಕಾಲದ ಹಿಂದೆ ಬ್ರಹ್ಮದತ್ತನು ರಾಜನಾಗಿರುವಾಗ ಅದೇ ಬನಾರಸ್ನಲ್ಲಿ ಬೋಧಿಸತ್ತರು ಶ್ರೀಮಂತ ವ್ಯಾಪಾರಿಯಾಗಿ ಹುಟ್ದಿದ್ದರು. ಅವರು ಅನೇಕ ದಾನ ಕ್ರಿಯೆಗಳನ್ನು ಮಾಡುತ್ತಿದ್ದರು. ಅವರಲ್ಲಿ ಅನ್ನದಾನವು ಒಂದಾಗಿತ್ತು. ಅವರು ಬಡವರಿಗೆ ದೊಡ್ಡದಾದ ವಾಸ ಮಂದಿರವನ್ನು ಕಟ್ಟಿಸಿದ್ದರು. ನಾನಾರೀತಿಯ ಸೇವಾಕಾರ್ಯಗಳನ್ನು ಮಾಡುತ್ತಿದ್ದರು. ಅವರಿಗೆ ಜೀವನ ಕಾಲ ಮುಗಿಯುತ್ತಾ ಬಂತು. ಆಗ ಅವನು ಪುತ್ರನನ್ನು ಕರೆದು ದಾನ ಮಂದಿರದಲ್ಲಿ ದಾನವನ್ನು ನಿರಂತರ ನೀಡುವಂತೆ ಕೇಳಿಕೊಂಡರು. ನಂತರ ಬೋಧಿಸತ್ತರು ಮರಣದ ನಂತರ ಪುಣ್ಯ ಫಲವಾಗಿ ಸಕ್ಕದೇವ ಇಂದ್ರರಾಗಿ ಜನಿಸಿದರು. ಮತ್ತು ತಮ್ಮ ಪುತ್ರನು ಹೇಗೆ ಜೀವಿಸುತ್ತಿದ್ದಾನೆ ಎಂದು ಅರಿಯಲು ಇಷ್ಟಪಟ್ಟರು. ಅವರು ಗಮನಿಸಿದಾಗ ಅವರ ಪುತ್ರನ ಅವಸ್ಥೆಯು ಅತ್ಯಂತ ದಾರುಣವಾಗಿತ್ತು, ಯಾತನಾಮಯವಾಗಿತ್ತು. ಆಗ ಅವರು ತಮ್ಮ ಬುದ್ಧಿಯಿಲ್ಲದ ಮಗನ ಮೇಲೆ ಕರುಣೆ ತಾಳಿ ಮಗನ ಮುಂದೆ ಪ್ರತ್ಯಕ್ಷವಾದರು ಹಾಗು ಆತನಿಗೆ ಸರ್ವ ಇಚ್ಛೆ ಪ್ರಸಾದಕ ಮಡಿಕೆ ನೀಡಿದರು. ಅದು ಇರುವವರೆಗೆ ಆತನು ಬೇಡಿದ್ದನ್ನು ನೀಡುವುದೆಂದು ಹೇಳಿ, ಜೋಪಾನವಾಗಿ ಇಟ್ಟುಕೋ ಎಂದು ಹೇಳಿ ಹೊರಟರು. ಆದರೆ ಈ ಪುತ್ರನು ಆ ಮಡಿಕೆಯಿಂದ ಸಿಗುವ ಸರ್ವ ಐಶ್ವರ್ಯವನ್ನು ಜೂಜಿಗಾಗಿ ಹಾಗು ಮದ್ಯಕ್ಕಾಗಿ ವಿನಿಯೋಗಿಸುತ್ತಿದ್ದನು.
ಒಂದುದಿನ ಆತನು ಅಮಲಿನಲ್ಲಿ ಇದ್ದಾಗ ಮಡಿಕೆಯನ್ನು ಮೇಲಕ್ಕೆಸೆದು ಹಿಡಿಯುವ ಆಟ ಆಡುತ್ತಿದ್ದನು. ಆಗ ಅದು ಕೈಜಾರಿ ಕೆಳಗೆ ಬಿದ್ದು ಪುಡಿಯಾಯಿತು. ಇದಾದನಂತರ ಆತನ ಐಶ್ವರ್ಯವು ಕ್ಷಯವಾಗಿ ಆತನು ಮತ್ತೆ ದುಃಖಾವಸ್ಥೆಗೆ ಬಿದ್ದನು. ಹೀಗೆ ಆತನಿಗೆ ಉತ್ಕೃಷ್ಟವಾದುದು ಸಕ್ಕರಿಂದ ಸಿಕ್ಕಿದರೂ ಅದನ್ನು ಉಳಿಸಿಕೊಂಡು, ಬಳಸಿಕೊಂಡು ಹೋಗುವ ಪ್ರಜ್ಞೆಯಿಲ್ಲದೆ, ಇದ್ದ ಅಮೂಲ್ಯ ಐಶ್ವರ್ಯ ಹಾನಿ ಮಾಡಿಕೊಂಡನು.
ಈ ರೀತಿಯಾಗಿ ಯಾರು ಜೂಜು ಹಾಗು ಮದ್ಯಪಾನದ ಚಟವನ್ನು ಹಿಡಿದಿರುವರೋ ಅವರು ಐಶ್ವರ್ಯ ಹೀನರಾಗಿ ಈ ಲೋಕದಲ್ಲಿ ದುಃಖಿತರಾಗಿ ಮತ್ತೆ ಪರಲೋಕದಲ್ಲಿಯೂ ಸಹಾ ದುರ್ಗತಿಗೆ ಬೀಳುವರು ಮತ್ತು ಜನರಿಂದ ಅವರಿಗೆ ಗೌರವವು ಸಹಾ ದೊರೆಯುವುದಿಲ್ಲ.
- ಪರಾಭವ ಸುತ್ತ ಅರ್ಥ ವರ್ಣನೆ

No comments:

Post a Comment