Friday 15 May 2015

upajjhatthaana sutta in kannada ಉಪಜ್ಝತ್ಥಾನ ಸುತ್ತ: ಚಿಂತನೆಗೆ ಪರಮಯೋಗ್ಯ ವಿಷಯಗಳು {ಸಂಕ್ಷೀಪ್ತ}

ಉಪಜ್ಝತ್ಥಾನ ಸುತ್ತ: ಚಿಂತನೆಗೆ ಪರಮಯೋಗ್ಯ ವಿಷಯಗಳು {ಸಂಕ್ಷೀಪ್ತ}

" 5 ಬಗೆಯ ವಾಸ್ತವಗಳನ್ನು ಒಬ್ಬನು ಪುರುಷನಾಗಲಿ ಅಥವಾ ಸ್ತ್ರೀಯಾಗಲಿ, ಉಪಾಸಕನಾಗಲಿ ಅಥವಾ ಭಿಕ್ಖುವಾಗಲಿ ಅಗ್ಗಾಗ್ಗೆ ಚಿಂತನೆಮಾಡುತ್ತಲೇ ಇರಬೇಕು. ಯಾವುವವು ಐದು?

1.ನಾನು ಜರಾವಿಗೆ[ಮುಪ್ಪಿಗೆ] ಈಡಾಗುತ್ತೇನೆ. ಜರಾಗೆ ಅತೀತವಾಗಲು ಸಾಧ್ಯವಿಲ್ಲ.
2.ನಾನು ವ್ಯಾಧಿಗೆ ಗುರಿಯಾಗುತ್ತೇನೆ, ವ್ಯಾಧಿಗೆ ಅತೀತನಾಗಲು ಸಾಧ್ಯವಿಲ್ಲ.
3.ನಾನು ಖಂಡಿತವಾಗಿ ಮರಣವಪ್ಪುವೆನು ,ಮರಣವನ್ನು ತಡೆಯಲು ಸಾಧ್ಯವಾಗುವುದಿಲ್ಲ.
4.ಯಾರೆಲ್ಲಾ ನನಗೆ ಪ್ರೀಯರಾಗಿರುವರೋ ಹಾಗು ಯಾವುದೆಲ್ಲವೂ ಚಿತ್ತಾಕರ್ಷವಾಗಿವೆಯೋ ಅವೆಲ್ಲದರಿಂದಲೂ ನಾನು ವಿಯೋಗ ಹೊಂದುವೆನು.
5.ನನ್ನ ಕಮ್ಮಗಳಿಗೆ ನಾನೇ ಹೋಣೆಗಾರ[ಯಜಮಾನ}, ನನ್ನ ಕಮ್ಮಗಳಿಂದಾಗಿ ಜನಿಸಿದ ಹಾಗು ನನ್ನ ಕಮ್ಮಗಳಿಗೆ ಸಂಬಂದಿಸಿದ ನನ್ನ ಕಮ್ಮಗಳಿಗೆ ನಾನೇ ಹಕ್ಕುದಾರ, ನನ್ನ ನಿರ್ಣಯಗಳಿಂದಲೇ ಕಮ್ಮವು ಆಗಿದೆ.ಯಾವುದೆಲ್ಲಾ ಕುಶಲ ಅಥವಾ ಪಾಪ ನಾನು ಮಾಡಿದರೆ ಅದಕ್ಕೆ ನಾನೇ ಉತ್ತರಾಧಿಕಾರಿಯಾಗುವೆನು.

5 ಬಗೆಯ ವಾಸ್ತವಗಳನ್ನು ಒಬ್ಬನು ಪುರುಷನಾಗಲಿ ಅಥವಾ ಸ್ತ್ರೀಯಾಗಲಿ, ಉಪಾಸಕನಾಗಲಿ ಅಥವಾ ಭಿಕ್ಖುವಾಗಲಿ ಅಗ್ಗಾಗ್ಗೆ ಚಿಂತನೆಮಾಡುತ್ತಲೇ ಇರಬೇಕು.
 ಯಾವಾಗ ಒಬ್ಬನು ಜರಾಧಮ್ಮವನ್ನು ಈ ಬಗೆಯಲ್ಲಿ ಚಿಂತನೆ ನಡೆಸುತ್ತಾನೋ ಆತನಲ್ಲಿ ಯವ್ವನದ ಮದದ ಅಮಲು ಅಳಿದು ಹೋಗುವುದು, ಯಾರು ಹೀಗೆ ಚಿಂತನೆ ಮಾಡುವುದಿಲ್ಲವೋ ಅವರು ಯವ್ವನ ಮದದಿಂದಾಗಿ ಯವ್ವನವು ನಿತ್ಯವೆಂಬ ಭ್ರಮೆಯಲ್ಲಿ ಶರೀರದಿಂದ, ಮಾತಿನಿಂದ, ಹಾಗು ಮನಸ್ಸಿನಿಂದ ನಾನ ಬಗೆಯ ಪಾಪಗಳನ್ನು ಮಾಡಿತ್ತಾರೆ, ಪರಿಣಾಮವಾಗಿ ಅವುಗಳ ಕಮ್ಮವಿಪಾಕವನ್ನು ಪಡೆಯುವರು. ಪಂಡಿತರು ಈ ಬಗೆಯ ಚಿಂತನೆಯಿಂದಾಗಿ ಆ ಬಗೆಯ ಮದದಿಂದಾಗಿ ಪೂರ್ಣವಾಗಿ ಮುಕ್ತನಾಗುವನು ಅಥವಾ ಆ ಮದವನ್ನು ದುರ್ಬಲಗೊಳಿಸುವರು.
ಅದೇ ರೀತಿಯಾಗಿ ಒಬ್ಬನು ವ್ಯಾದಿ ಧಮ್ಮವನ್ನು ಈ ಬಗೆಯಲ್ಲಿ ಚಿಂತನೆ ನಡೆಸುತ್ತಾನೋ ಆತನಲ್ಲಿ ಆರೋಗ್ಯದ ಮದದ ಅಮಲು ಅಳಿದು ಹೋಗುವುದು, ಯಾರು ಹೀಗೆ ಚಿಂತನೆ ಮಾಡುವುದಿಲ್ಲವೋ ಅವರು ಅರೋಗ್ಯದ ಮದದಿಂದಾಗಿ ಅರೋಗ್ಯವು ನಿತ್ಯವೆಂಬ ಭ್ರಮೆಯಲ್ಲಿ ಶರೀರದಿಂದ, ಮಾತಿನಿಂದ, ಹಾಗು ಮನಸ್ಸಿನಿಂದ ನಾನ ಬಗೆಯ ಪಾಪಗಳನ್ನು ಮಾಡಿತ್ತಾರೆ, ಪರಿಣಾಮವಾಗಿ ಅವುಗಳ ಕಮ್ಮವಿಪಾಕವನ್ನು ಪಡೆಯುವರು. ಪಂಡಿತರು ಈ ಬಗೆಯ ಚಿಂತನೆಯಿಂದಾಗಿ ಆ ಬಗೆಯ ಮದದಿಂದಾಗಿ ಪೂರ್ಣವಾಗಿ ಮುಕ್ತನಾಗುವನು ಅಥವಾ ಆ ಮದವನ್ನು ದುರ್ಬಲಗೊಳಿಸುವರು.

ಅದೇ ರೀತಿಯಾಗಿ ಒಬ್ಬನು ಮರಣ ಧಮ್ಮವನ್ನು ಈ ಬಗೆಯಲ್ಲಿ ಚಿಂತನೆ ನಡೆಸುತ್ತಾನೋ ಆತನಲ್ಲಿ ಜೀವನದ ಮದದ ಅಮಲು ಅಳಿದು ಹೋಗುವುದು, ಯಾರು ಹೀಗೆ ಚಿಂತನೆ ಮಾಡುವುದಿಲ್ಲವೋ ಅವರು ಜೀವನದ ಮದದಿಂದಾಗಿ ಜೀವನವು ನಿತ್ಯವೆಂಬ ಭ್ರಮೆಯಲ್ಲಿ ಶರೀರದಿಂದ, ಮಾತಿನಿಂದ, ಹಾಗು ಮನಸ್ಸಿನಿಂದ ನಾನ ಬಗೆಯ ಪಾಪಗಳನ್ನು ಮಾಡಿತ್ತಾರೆ, ಪರಿಣಾಮವಾಗಿ ಅವುಗಳ ಕಮ್ಮವಿಪಾಕವನ್ನು ಪಡೆಯುವರು. ಪಂಡಿತರು ಈ ಬಗೆಯ ಚಿಂತನೆಯಿಂದಾಗಿ ಆ ಬಗೆಯ ಮದದಿಂದಾಗಿ ಪೂರ್ಣವಾಗಿ ಮುಕ್ತನಾಗುವನು ಅಥವಾ ಆ ಮದವನ್ನು ದುರ್ಬಲಗೊಳಿಸುವರು.
  ಹಾಗು ಯೋಗ್ಯಚಿಂತನೆಯಿಂದಾಗಿ ಒಬ್ಬನು ತನಗೆ ಪ್ರಿಯವಾದ ಪ್ರತಿಯೊಂದು ಹಾಗು ಪ್ರತಿಯೊಬ್ಬರು ವಿಯೋಗಹೊಂದುವರು ಎಂದು ಆಗಾಗ್ಗೆ ನೆನೆಸಿಕೊಳ್ಳುತ್ತಿರುವಾಗ ಒಬ್ಬನ ವಿಷಯಗಳ ಮೇಲಿನ ಹಾಗು ವ್ಯಕ್ತಿಗಳ ಮೇಲಿನ ಭಾವೋದ್ರೇಕಗಳು ಪೂರ್ಣವಾಗಿ ಅಳಿದು ಹೋಗುವವು ಅಥವಾ ದುರ್ಬಲವಾಗುವವು. ಹಾಗು ಆತನು ಪರರಂತೆ ಭಾವಾವೇಶದಿಂದಾಗಿ ಶರೀರದಿಂದ, ಮಾತಿನಿಂದ,ಮನಸ್ಸಿನಿಂದ ಪಾಪಗಳನ್ನು  ಮಾಡಲಾರ.
 ಅದೇ ರೀತಿಯಲ್ಲಿಯೇ ಜ್ಞಾನಿಯು ಹೀಗೆ ಚಿಂತನೆ ಮಾಡುತ್ತಾನೆ ".ನನ್ನ ಕಮ್ಮಗಳಿಗೆ ನಾನೇ ಹೋಣೆಗಾರ[ಯಜಮಾನ}, ನನ್ನ ಕಮ್ಮಗಳಿಂದಾಗಿ ಜನಿಸಿದ ಹಾಗು ನನ್ನ ಕಮ್ಮಗಳಿಗೆ ಸಂಬಂದಿಸಿದ ನನ್ನ ಕಮ್ಮಗಳಿಗೆ ನಾನೇ ಹಕ್ಕುದಾರ, ನನ್ನ ನಿರ್ಣಯಗಳಿಂದಲೇ ಕಮ್ಮವು ಆಗಿದೆ.ಯಾವುದೆಲ್ಲಾ ಕುಶಲ ಅಥವಾ ಪಾಪ ನಾನು ಮಾಡಿದರೆ ಅದಕ್ಕೆ ನಾನೇ ಉತ್ತರಾಧಿಕಾರಿಯಾಗುವೆನು." ಯಾವ ಜೀವಿಗಳು ಈ ಹಿಂದೆ ತ್ರಿಕರಣಪೂರ್ವಕವಾಗಿ ಪಾಪ ಮಾಡುತ್ತಿದ್ದರೊ, ನಂತರ  ಈ ಬಗೆಯ ಚಿಂತನೆಯಿಂದಾಗಿ ಆ ಬಗೆಯ ಪಾಪದಿಂದಾಗಿ ಪೂರ್ಣವಾಗಿ ಮುಕ್ತನಾಗುವನು ಅಥವಾ ಆ ಪಾಪವನ್ನು ದುರ್ಬಲಗೊಳಿಸುವರು.
 ನಂತರ ಆರ್ಯರ ಶಿಷ್ಯನು ಹೀಗೆ ಅಲೋಚಿಸುತ್ತಾನೆ "ನಾನು ಒಬ್ಬನೇ ಜರಾಧಮ್ಮಕ್ಕೆ ಗುರಿಯಾಗಿಲ್ಲ, ಯಾರೂ ಜರಾವಿಗೆ ಅತೀತವಾಗಿ ಹೋಗಿಲ್ಲ, ಭೂತಕಾಲದಲ್ಲಿ ಆಗಲಿ ಅಥವಾ
ಭವಿಷ್ಯದಲ್ಲಿಯಾಗಲಿ ಸತ್ತನಂತರ ಮರು ಉಗಮಿಸುವ ಸರ್ವಜೀವಿಗಳು ಮುಪ್ಪಿಗೆ ಅತೀತವಾಗಿ ಹೋಗಲು ಸಾಧ್ಯವಿಲ್ಲ." ಈ ರೀತಿಯಾಗಿ ಚಿಂತನೆ ಮಾಡುತ್ತಿರುವಾಗ ಆತನಲ್ಲಿ ಮಾರ್ಗವು ಉದಯಿಸುತ್ತದೆ, ಆಗ ಆತನು ಆ ಮಾರ್ಗದಲ್ಲಿಯೇ ನೆಲೆಸುತ್ತಾನೆ, ಅದನ್ನೇ ವೃದ್ಧಿಗೊಳಿಸುತ್ತಾನೆ, ಆಗ ಅತನಲ್ಲಿ ಬಂಧನಗಳು ಕಳಚಿಬೀಳುವವು, ಆತನ ದಾಹ ಹಾಗು ಮೋಹವು ಕ್ಷಯಿಸಿಹೋಗುವುದು.
ನಂತರ ಅದೇ ರೀತಿಯಾಗಿ ಆರ್ಯರ ಶಿಷ್ಯನು ಹೀಗೆ ಅಲೋಚಿಸುತ್ತಾನೆ "ನಾನು ಒಬ್ಬನೇ ರೋಗಧಮ್ಮಕ್ಕೆ ಗುರಿಯಾಗಿಲ್ಲ, ಯಾರೂ ರೋಗಕ್ಕೆ ಅತೀತವಾಗಿ ಹೋಗಿಲ್ಲ, ಭೂತಕಾಲದಲ್ಲಿ ಆಗಲಿ ಅಥವಾ ಭವಿಷ್ಯದಲ್ಲಿಯಾಗಲಿ ಸತ್ತನಂತರ ಮರು ಉಗಮಿಸುವ ಸರ್ವಜೀವಿಗಳು ರೋಗಕ್ಕೆ ಅತೀತವಾಗಿ ಹೋಗಲು ಸಾಧ್ಯವಿಲ್ಲ." ಈ ರೀತಿಯಾಗಿ ಚಿಂತನೆ ಮಾಡುತ್ತಿರುವಾಗ ಆತನಲ್ಲಿ ಮಾರ್ಗವು ಉದಯಿಸುತ್ತದೆ, ಆಗ ಆತನು ಆ ಮಾರ್ಗದಲ್ಲಿಯೇ ನೆಲೆಸುತ್ತಾನೆ, ಅದನ್ನೇ ವೃದ್ಧಿಗೊಳಿಸುತ್ತಾನೆ, ಆಗ ಅತನಲ್ಲಿ ಬಂಧನಗಳು ಕಳಚಿಬೀಳುವವು, ಆತನ ದಾಹ ಹಾಗು ಮೋಹವು ಕ್ಷಯಿಸಿಹೋಗುವುದು.
ನಂತರ ಅದೇ ರೀತಿಯಾಗಿ ಆರ್ಯರ ಶಿಷ್ಯನು ಹೀಗೆ ಅಲೋಚಿಸುತ್ತಾನೆ "ನಾನು ಒಬ್ಬನೇ ಮರಣಧಮ್ಮಕ್ಕೆ ಗುರಿಯಾಗಿಲ್ಲ, ಯಾರೂ ಮರಣಕ್ಕೆ ಅತೀತವಾಗಿ ಹೋಗಿಲ್ಲ, ಭೂತಕಾಲದಲ್ಲಿ ಆಗಲಿ ಅಥವಾ ಭವಿಷ್ಯದಲ್ಲಿಯಾಗಲಿ ಸತ್ತನಂತರ ಮರು ಉಗಮಿಸುವ ಸರ್ವಜೀವಿಗಳು ಮರಣಕ್ಕೆ ಅತೀತವಾಗಿ ಹೋಗಲು ಸಾಧ್ಯವಿಲ್ಲ." ಈ ರೀತಿಯಾಗಿ ಚಿಂತನೆ ಮಾಡುತ್ತಿರುವಾಗ ಆತನಲ್ಲಿ ಮಾರ್ಗವು ಉದಯಿಸುತ್ತದೆ, ಆಗ ಆತನು ಆ ಮಾರ್ಗದಲ್ಲಿಯೇ ನೆಲೆಸುತ್ತಾನೆ, ಅದನ್ನೇ ವೃದ್ಧಿಗೊಳಿಸುತ್ತಾನೆ, ಆಗ ಅತನಲ್ಲಿ ಬಂಧನಗಳು ಕಳಚಿಬೀಳುವವು, ಆತನ ದಾಹ ಹಾಗು ಮೋಹವು ಕ್ಷಯಿಸಿಹೋಗುವುದು.
ನಂತರ ಅದೇ ರೀತಿಯಾಗಿ ಆರ್ಯರ ಶಿಷ್ಯನು ಹೀಗೆ ಅಲೋಚಿಸುತ್ತಾನೆ "ನಾನು ಒಬ್ಬನೇ ಪ್ರೀಯವಿಯೋಗ ಧಮ್ಮಕ್ಕೆಗುರಿಯಾಗಿಲ್ಲ, ಯಾರೂ ಪ್ರಿಯವಿಯೋಗಧಮ್ಮಕ್ಕೆ ಅತೀತವಾಗಿ ಹೋಗಿಲ್ಲ, ಭೂತಕಾಲದಲ್ಲಿ ಆಗಲಿ ಅಥವಾ ಭವಿಷ್ಯದಲ್ಲಿಯಾಗಲಿ ಸತ್ತನಂತರ ಮರು ಉಗಮಿಸುವ ಸರ್ವಜೀವಿಗಳು ಪ್ರಿಯವಿಯೋಗಕ್ಕೆ ಅತೀತವಾಗಿ ಹೋಗಲು ಸಾಧ್ಯವಿಲ್ಲ." ಈ ರೀತಿಯಾಗಿ ಚಿಂತನೆ ಮಾಡುತ್ತಿರುವಾಗ ಆತನಲ್ಲಿ ಮಾರ್ಗವು ಉದಯಿಸುತ್ತದೆ, ಆಗ ಆತನು ಆ ಮಾರ್ಗದಲ್ಲಿಯೇ ನೆಲೆಸುತ್ತಾನೆ, ಅದನ್ನೇ ವೃದ್ಧಿಗೊಳಿಸುತ್ತಾನೆ, ಆಗ ಅತನಲ್ಲಿ ಬಂಧನಗಳು ಕಳಚಿಬೀಳುವವು, ಆತನ ದಾಹ ಹಾಗು ಮೋಹವು ಕ್ಷಯಿಸಿಹೋಗುವುದು.
ನಂತರ ಅದೇ ರೀತಿಯಾಗಿ ಆರ್ಯರ ಶಿಷ್ಯನು ಹೀಗೆ ಅಲೋಚಿಸುತ್ತಾನೆ ".ನನ್ನ ಕಮ್ಮಗಳಿಗೆ ನಾನೇ ಹೋಣೆಗಾರ[ಯಜಮಾನ},ಹಾಗೇಯೇ ಪರರು ಸಹಾ ತಮ್ಮಕಮ್ಮಗಳಿಗೆ ಓಡೆಯರು ಆಗಿದ್ದಾರೆ, ನನ್ನ ಕಮ್ಮಗಳಿಂದಾಗಿ ಜನಿಸಿದ ಹಾಗು ನನ್ನ ಕಮ್ಮಗಳಿಗೆ ಸಂಬಂದಿಸಿದ ನನ್ನ ಕಮ್ಮಗಳಿಗೆ ನಾನೇ ಹಕ್ಕುದಾರ ಹಾಗೇಯೇ ಎಲ್ಲಾ ಜನರು ತಮ್ಮ ಕಮ್ಮಗಳಿಗೆ ಅವುಗಳ ಪರಿಣಾಮಗಳಿಗೆ ಭಾದ್ಯಸ್ಥರಾಗಿದ್ದಾರೆ, ನನ್ನ ನಿರ್ಣಯಗಳಿಂದಲೇ ಕಮ್ಮವು ಆಗಿದೆ ಹಾಗೆಯೇ ಅವರ ನಿರ್ಣಯಗಳಿಂದಲೇ ಕಮ್ಮವುಆಗುತ್ತಿದ್ದೆ. ಯಾವುದೆಲ್ಲಾ ಕುಶಲ ಅಥವಾ ಪಾಪ ನಾನು ಮಾಡಿದರೆ ಅದಕ್ಕೆ ನಾನೇ ಉತ್ತರಾಧಿಕಾರಿಯಾಗುವೆನು ಹಾಗೇಯೇ ಪರರು ಸಹಾ ತಮ್ಮ ಕಮ್ಮಗಳಿಗೆ ಉತ್ತರಾದಿಕಾರಿಯಾಗುವರು." ಈ ರೀತಿಯಾಗಿ ಚಿಂತನೆ ಮಾಡುತ್ತಿರುವಾಗ ಆತನಲ್ಲಿ ಮಾರ್ಗವು ಉದಯಿಸುತ್ತದೆ, ಆಗ ಆತನು ಆ ಮಾರ್ಗದಲ್ಲಿಯೇ ನೆಲೆಸುತ್ತಾನೆ, ಅದನ್ನೇ ವೃದ್ಧಿಗೊಳಿಸುತ್ತಾನೆ, ಆಗ ಅತನಲ್ಲಿ ಬಂಧನಗಳು ಕಳಚಿಬೀಳುವವು, ಆತನ ದಾಹ ಹಾಗು ಮೋಹವು ಕ್ಷಯಿಸಿಹೋಗುವುದು.







No comments:

Post a Comment