Tuesday 5 May 2015

sakkaya ditti wrong views on self

                          ಸಕ್ಕಾಯ ದಿಟ್ಠಿ


ಶ್ರಾವಸ್ಥಿಯಲ್ಲಿ ಭಗವಾನರು ಹೀಗೆ ಬೋಧಿಸಿದರು.
"ಸಮಣ ಬ್ರಾಹ್ಮಣರು ಅನೇಕ ವಿಧದಲ್ಲಿ ಆತ್ಮವನ್ನು ಅಥವಾ ವ್ಯಕ್ತಿತ್ವವನ್ನು ಅಂಟಿದ್ದಾರೆ. ಪಂಚಖಂಧಗಳಿಗೆ ಅಂಟಿರುವರು. ಈ ಕೆಳಕಂಡ ದೃಷ್ಟಿಗಳಲ್ಲಿ ಒಂದಕ್ಕೆ ಅಂಟಿರುತ್ತಾರೆ. ಯಾರು ಆರ್ಯರಲ್ಲವೋ, ಸುಶಿಕ್ಷಿತರಲ್ಲವೋ ಅವರು ದೇಹವನ್ನೇ ಆತ್ಮ ಎನ್ನುತ್ತಾರೆ ಅಥವಾ ಆತ್ಮವು ದೇಹವನ್ನು ಹೊಂದಿದೆ ಅಥವಾ ದೇಹವು ಆತ್ಮವನ್ನು ಹೊಂದಿದೆ, ದೇಹದಲ್ಲಿ ಆತ್ಮವಿದೆ ಅಥವಾ ಆತ್ಮದಲ್ಲಿ ದೇಹವಿದೆ ಎಂದು ಭಾವಿಸುತ್ತಾರೆ.
ಹಾಗೆಯೇ ವೇದನೆಯೇ ಆತ್ಮವೆಂದು ಹೇಳುತ್ತಾರೆ. ಉದಾಹರಣೆಗೆ ಆನಂದವೇ ಆತ್ಮ ಅಥವಾ ವೇದನೆಯು ಆತ್ಮವನ್ನು ಹೊಂದಿದೆ ಅಥವಾ ಆತ್ಮವು ವೇದನೆಯನ್ನು ಹೊಂದಿದೆ, ವೇದನೆಯಲ್ಲಿ ಆತ್ಮವಿದೆ, ಆತ್ಮದಲ್ಲಿ ವೇದನೆಗಳಿವೆ.
ಹಾಗೆಯೇ ಸಞ್ಞ (ಗ್ರಹಿಕೆ)ವೇ ಆತ್ಮ ಎನ್ನುತ್ತಾರೆ. ಗ್ರಹಿಕೆಯು ಆತ್ಮವನ್ನು ಹೊಂದಿದೆ ಅಥವಾ ಆತ್ಮವು ಗ್ರಹಿಕೆಯನ್ನು ಹೊಂದಿದೆ. ಆತ್ಮದಲ್ಲಿ ಗ್ರಹಿಕೆಯಿದೆ. ಅಥವಾ ಗ್ರಹಿಕೆಯಲ್ಲಿ ಆತ್ಮವಿದೆ. ಉದಾಹಣೆಗೆ ಬುದ್ಧಿಯಲ್ಲಿ ಆತ್ಮವಿದೆ ಎಂದು ಹೇಳುತ್ತಾರೆ.
ಹಾಗೆಯೇ ಸಂಖಾರಗಳೇ (ಚಿತ್ತದ ಚಟುವಟಿಕೆಗಳು) ಆತ್ಮವೆನ್ನುತ್ತಾರೆ. (ಉದಾಹರಣೆಗೆ ಪ್ರಜ್ಞಾ ಅಥವಾ ಕರುಣಾ) ಅಥವಾ ಆತ್ಮವು ಸಂಖಾರಗಳನ್ನು ಹೊಂದಿವೆ. ಅಥವಾ ಸಂಖಾರಗಳು ಆತ್ಮವನ್ನು ಹೊಂದಿದೆ. ಆತ್ಮದಲ್ಲಿ ಸಂಖಾರಗಳಿವೆ ಅಥವಾ ಹಾಗೆಯೇ ವಿಞ್ಞನವೇ (ಅರಿಯುವಿಕೆ) ಆತ್ಮವೆನ್ನುತ್ತಾರೆ. ಅಥವಾ ಆತ್ಮವು ವಿಞ್ಞಾನವನ್ನು ಹೊಂದಿದೆ. ಅಥವಾ ವಿಞ್ಞನವು ಆತ್ಮವನ್ನು ಹೊಂದಿದೆ. ಆತ್ಮದಲ್ಲಿ ವಿಞ್ಞಾನವಿದೆ ಅಥವಾ ವಿಞ್ಞಾನದಲ್ಲಿ ಆತ್ಮವಿದೆ ಎನ್ನುತ್ತಾರೆ. (ಹೀಗೆ ಪಂಚಖಂಧಗಳಲ್ಲಿ ಒಂದು ಆತ್ಮವೆಂದು, ಉಳಿದವನ್ನು ಅದರ ಅಧೀನವೆನ್ನುತ್ತಾರೆ ಅಥವಾ ಪಂಚಖಂಧಗಳಿಗೆ ಅತೀತವಾಗಿ ಆತ್ಮವಿದೆ ಎಂದು ಹೇಳಿ ಅದಕ್ಕೆ ಇವೆಲ್ಲವೂ ಅಧೀನ ಎನ್ನುತ್ತಾರೆ). 'ಇದೇ ನಾನು' ಎಂದು ಹೇಳಿ ಅದಕ್ಕೆ ಇವೆಲ್ಲವೂ ಅಧೀನ ಎನ್ನುತ್ತಾರೆ). 'ಇದೇ ನಾನು' ಎಂದು ದೃಷ್ಟಿಸುತ್ತಾನೆ. ಆತನಲ್ಲಿ ನಾನಾಬಗೆಯ ದೃಷ್ಟಿಕೋನಗಳು ಉಂಟಾಗುತ್ತದೆ. ಆತ್ಮವೇ ಎಲ್ಲವನ್ನು ನೋಡುತ್ತಿದೆ, ಕೇಳುತ್ತಿದೆ, ಅಘ್ರಾಣಿಸುತ್ತಿದೆ, ಸ್ವಾದಿಸುತ್ತಿದೆ, ಸ್ಪಶರ್ಿಸುತ್ತಿದೆ, ಯೋಚಿಸುತ್ತಿದೆ ಎಂದು ಭಾವಿಸುತ್ತಾನೆ. ಹೀಗೆ ದೃಷ್ಟಿ ಜಾಲದಲ್ಲಿ ಬೀಳುತ್ತಾನೆ. 'ಇದೇ ನಾನು' ಅಥವಾ 'ವಿಷಯಗಳು ಅಶರೀರ' ಎನ್ನುತ್ತಾನೆ. 'ವಿಷಯಗಳು ಶರೀರ ಹೊಂದಿವೆ' ಎನ್ನುತ್ತಾನೆ, 'ವಿಷಯಗಳು ಅರಿವನ್ನು ಹೊಂದಿದೆ ಅಥವಾ ವಿಷಯಗಳು ಅರಿವನ್ನು ಹೊಂದಿಲ್ಲ' ಅಥವಾ 'ವಿಷಯಗಳು ಅರಿವನ್ನು ಹೊಂದಿಲ್ಲ, ಹೊಂದದೆಯೂ ಇಲ್ಲ' ಎಂದು ಭಾವಿಸುತ್ತಾನೆ.
ಆದರೆ ಆರ್ಯಶ್ರಾವಕನು ಯಾವಾಗ ಅಜ್ಞಾನವನ್ನು ದೂರೀಕರಿಸುತ್ತಾನೆ ಮತ್ತು ಆತನಲ್ಲಿ ಜ್ಞಾನವು ಉದಯಿಸುತ್ತದೆ, ಅಜ್ಞಾನದ ನಾಶದೊಂದಿಗೆ ಆತನಲ್ಲಿ 'ಅಹಂ', 'ನಾನು', 'ಇದೇ ನಾನು', 'ಆತ್ಮವಿದೆ', 'ಆತ್ಮವಿಲ್ಲ', 'ಆತ್ಮಕ್ಕೆ ದೇಹವಿದೆ', 'ಆತ್ಮಕ್ಕೆ ದೇಹವಿಲ್ಲ', 'ಆತ್ಮಕ್ಕೆ ಅರಿವಿದೆ', 'ಆತ್ಮಕ್ಕೆ ಅರಿವಿಲ್ಲ'. ಆತ್ಮಕ್ಕೆ ಅರಿವಿಲ್ಲ, ಇಲ್ಲದೆಯೂ ಇಲ್ಲ' ಎಂದೆಲ್ಲಾ ಮಿಥ್ಯಾದೃಷ್ಟಿಗಳು ನಾಶವಾಗುತ್ತದೆ.
ನಿಮ್ಮದೆಲ್ಲವನ್ನು ಬಿಟ್ಟುಬಿಡಿ
ಭಗವಾನರು ಶ್ರಾವಸ್ತಿಯಲ್ಲಿದ್ದಾಗ ಹೀಗೆ ಹೇಳಿದ್ದರು:
"ಭಿಕ್ಷುಗಳೇ, ನಿಮ್ಮದೆಲ್ಲವನ್ನು ಬಿಟ್ಟುಬಿಡಿ, ಹಾಗೆ ಬಿಟ್ಟಾಗ ನೀವು ಲಾಭವನ್ನು ಮತ್ತು ಕ್ಷೇಮವನ್ನು ಪಡೆಯುವಿರಿ."
"ಭಿಕ್ಷುಗಳೇ, ನಿಮ್ಮದಲ್ಲದ್ದು ಯಾವುದು?"
ಈ ದೇಹ ನಿಮ್ಮದಲ್ಲ... ಈ ವೇದನೆಗಳು... ಈ ಗ್ರಹಿಕೆಗಳು... ಈ ಚಿತ್ತದ ಚಟುವಟಿಕೆಗಳು... ಈ ಅರಿವು ನಿಮ್ಮದಲ್ಲ. ಇವುಗಳನ್ನು ಬಿಟ್ಟುಬಿಡಿ, ಅಂಟದಿರಿ, ಇವನ್ನು ಬಿಟ್ಟಾಗ ನೀವು ಲಾಭವನ್ನು ಮತ್ತು ಕ್ಷೇಮವನ್ನು ಪಡೆಯುವಿರಿ. ಹೇಗೆಂದರೆ ಕೆಲವರು ಹುಲ್ಲನ್ನು ಮತ್ತು ಕಟ್ಟಿಗೆಗಳನ್ನು ಸುಡುತ್ತಿದ್ದರೆ ಅದು ನಿಮ್ಮನ್ನು ಸುಡುವಂತೆ ಆಗುವುದೇ?"
"ಇಲ್ಲ ಭಂತೆ."
"ಏಕೆ?"
"ಏಕೆಂದರೆ ಅದು ನಮ್ಮದಲ್ಲ, ನಾವು ಅಲ್ಲ, ನಮ್ಮ ಆತ್ಮವೂ ಅಲ್ಲ."
"ಅದೇರೀತಿಯಾಗಿ ಭಿಕ್ಷುಗೇ, ಈ ಶರೀರ ಮತ್ತು ಮನಸ್ಸನ್ನು (ವೇದನೆ) ಗ್ರಹಿಕೆ, ಚಟುವಟಿಕೆ, ಅರಿವು) ಬಿಟ್ಟಿಬಿಡಿ. ಅದು ನಿಮ್ಮದಲ್ಲ, ಇವನ್ನು ನೀವು ಬಿಟ್ಟಾಗ ಮತ್ತೆ ಅಂಟದಿದ್ದಾಗ ನೀವು ಸುಖವನ್ನು ಮತ್ತು ಕ್ಷೇಮವನ್ನು ಪಡೆಯುವಿರಿ."
ಆತ್ಮವು ಸರ್ವಶಕ್ತವೇ? ಪರಿಶುದ್ಧವೇ? ನಿತ್ಯವೇ?
ಒಮ್ಮೆ ಸಚ್ಚಕ ಎಂಬ ಮಹಾ ವಾಗ್ಮಿಯು ಭಗವಾನರನ್ನು ವಾದದಲ್ಲಿ ಸೋಲಿಸಲು  ಬಂದನು. ಆತನ ಪ್ರಕಾರ ಪಂಚಖಂಧಗಳು (ದೇಹ ಮತ್ತು ಮನಸ್ಸು) ಆತ್ಮವಾಗಿತ್ತು. ಆದರೆ ಭಗವಾನರು ಯಾವುದನ್ನು ಆತ್ಮವೆಂದು ಒಪ್ಪುತ್ತಿರಲಿಲ್ಲ.
ಸಚ್ಚಕ : "ದೇಹ ಮತ್ತು ಮನಸ್ಸನ್ನು ಅವಲಂಬಿಸಿಯೇ ಪಾಪ ಪುಣ್ಯಗಳು ಉಂಟಾಗುತ್ತದೆ."
ಭಗವಾನರು : "ಅಗ್ಗಿವೇಸನ, ನೀನು ಹೇಳುತ್ತಿರುವುದು ಈ ರೀತಿಯಾಗಿರಬಹುದೇ, ದೇಹವೇ ನನ್ನ ಆತ್ಮ, ಮನಸ್ಸೇ (ವೇದನೆ, ಸಞ್ಞ, ಸಂಖಾರ, ವಿಞ್ಞಾನ) ನನ್ನ ಆತ್ಮ."
ಸಚ್ಚಕ : "ಹೌದು."
ಭಗವಾನರು : "ಒಬ್ಬ ರಾಜನಿಗೆ ಅಪರಾಧಿಗಳಿಗೆ ಗಡಿಪಾರು ಮಾಡುವ ಅಥವಾ ಮರಣದಂಡನೆ ನೀಡುವ ಅಧಿಕಾರವಿರುತ್ತದೆ. ಏಕೆಂದರೆ ಆತನು ಅಭಿಶಕ್ತ ಸರ್ವ ಅಧಿಕಾರವನ್ನು ಹೊಂದಿರುತ್ತಾನೆ, ಅದೇರೀತಿಯಲ್ಲಿ ಆತ್ಮಕ್ಕೂ ಸಹಾ ಅಂತಹ ಶಕ್ತಿ ಇರಲೇಬೇಕು. ಈಗ ನೀನು ದೇಹವೇ ನನ್ನ ಆತ್ಮ ಎನ್ನುವುದಾದರೆ 'ನನ್ನ ದೇಹ ಬದಲಾಗದಿರಲಿ, ಬಲಿಷ್ಠವಾಗಿರಲಿ, ರೋಗಕ್ಕೆ ಈಡಾಗದಿರಲಿ, ವೃದ್ಧಾಪ್ಯ ಹೊಂದದಿರಲಿ, ಮರಣಕ್ಕೆ ಈಡಾಗದಿರಲಿ' ಎಂದರೆ ಹಾಗೆ ಆಗುತ್ತದೆಯೇ?"
ಆಗ ಸಚ್ಚಕ ನಿರುತ್ತರನಾದನು. ನಂತರ ಇಲ್ಲವೆಂದು ಒಪ್ಪಿದನು.
ಭಗವಾನರು : "ವೇದನೆಯು ನನ್ನ ಆತ್ಮ ಎನ್ನುವುದಾದರೆ ನನ್ನ ವೇದನೆಯು ಹೀಗಿರಲಿ (ಸದಾ ಸುಖಿಯಾಗಿರಲಿ), ನನ್ನ ವೇದನೆ ಹೀಗಿರದಿರಲಿ (ಎಂದು ದುಃಖಿತವಾಗದಿರಲಿ) ಎಂದರೆ ಹಾಗಾಗುವುದೇ?"
ಸಚ್ಚಕ : "ಇಲ್ಲ ಭಂತೆ."
ಭಗವಾನರು : "ಸಞ್ಞೆಯು ನನ್ನ ಆತ್ಮ ಎನ್ನುವುದಾದರೆ ಇಂತಹ ಗ್ರಹಿಕೆಯೇ ಇರಲಿ, ಇಂತಹ ಗ್ರಹಿಕೆ ಇಲ್ಲದಿರಲಿ ಎಂದರೆ ಹಾಗಾಗುವುದೇ?"
ಸಚ್ಚಕ : "ಇಲ್ಲ ಭಂತೆ."
ಭಗವಾನರು : "ಸಂಖಾರಗಳು ನನ್ನ ಆತ್ಮ ಎನ್ನುವುದಾದರೆ ನನ್ನ ಸಂಖಾರಗಳು ಹೀಗಿರಲಿ (ಮೈತ್ರಿ, ಪ್ರಜ್ಞೆ) ನನ್ನ ಸಂಖಾರಗಳು ಹೀಗಿರದಿರಲಿ (ಲೋಭ, ದ್ವೇಷ, ಮೋಹ) ಎಂದರೆ ಹಾಗಾಗುವುದೇ?"
ಸಚ್ಚಕ : "ಇಲ್ಲ ಭಗವಾನ್."
ಭಗವಾನರು : "ವಿಞ್ಞಾನವು ನನ್ನ ಆತ್ಮ ಎನ್ನುವುದಾದರೆ ನನ್ನ ಅರಿಯುವಿಕೆ ಹೀಗಿರಲಿ, ನನ್ನ ಅರಿಯುವಿಕೆ ಹೀಗಿರದಿರಲಿ ಎಂದರೆ ಹಾಗಾಗುವುದೇ?"
ಸಚ್ಚಕ : "ಇಲ್ಲ ಭಂತೆ."
ಭಗವಾನರು : "ದೇಹ ಮತ್ತು ಮನಸ್ಸುಗಳು ನಿತ್ಯವೋ ಅನಿತ್ಯವೋ?"
ಸಚ್ಚಕ : "ಅನಿತ್ಯ ಭಂತೆ."
ಭಗವಾನರು : "ಯಾವುದು ಅನಿತ್ಯವೋ ಅದು ಸುಖವೋ ಅಥವಾ ದುಃಖವೋ?"
ಸಚ್ಚಕ : "ದುಃಖ ಭಂತೆ."
ಭಗವಾನರು : "ಯಾವುದು ಅನಿತ್ಯವೋ, ದುಃಖಕರವೋ ಅದನ್ನು ಇದು ನಾನು, ಇದು ನನ್ನದು ಮತ್ತು ಇದೇ ನನ್ನ ಆತ್ಮವೆಂದು ಹೇಳಬಹುದೇ?"
ಸಚ್ಚಕ : "ಇಲ್ಲ ಭಂತೆ."
ಭಗವಾನರು : "ಅಗ್ಗಿವೇಸನ, ಇದರ ಬಗ್ಗೆ ನೀನು ಹೇಗೆ ಯೋಚಿಸುತ್ತೀಯೆ, ಯಾವಾಗ ಒಬ್ಬನು ದುಃಖವನ್ನು ಒಪ್ಪಿ, ಅವಲಂಬಿಸಿದರೆ, ದುಃಖವನ್ನೇ ನಾನು ಎಂದು ಭಾವಿಸಿ, ದುಃಖವನ್ನು ನನ್ನದು ಎಂದು ಭಾವಿಸಿ, ದುಃಖವನ್ನೇ ನನ್ನ ಆತ್ಮ ಎಂದು ಪರಿಗಣಿಸಿದರೆ ಆತನು ಎಂದಾದರೂ ಪೂರ್ಣವಾಗಿ ದುಃಖದಿಂದ ಮುಕ್ತನಾಗಲು ಸಾಧ್ಯವೇ?"
ಸಚ್ಚಕ : "ಇಲ್ಲ ಭಂತೆ."
ಭಗವಾನ್ : "ಇಲ್ಲಿ ಯಾವ ಭಿಕ್ಷುವು ಪಂಚಖಂಧಗಳನ್ನು (ದೇಹ ಮತ್ತು ಮನಸ್ಸು) ದುಃಖವೆಂದು ಸಮ್ಮಾಪ್ರಜ್ಞೆಯಿಂದ ಕಂಡು ಯಾವ ಬಂಧನಕ್ಕೂ ಅಂಟದೆ ಮುಕ್ತನಾಗುತ್ತಾನೆ. ಈ ರೀತಿಯಾಗಿ ಅರಹಂತನಾಗುತ್ತಾನೆ."
ಆಗ ಸಚ್ಚಕನು ಭಗವಾನರಲ್ಲಿ ಕ್ಷಮೆ ಯಾಚಿಸಿ, ಆಹಾರಕ್ಕೆ ಆಹ್ವಾನಿಸುತ್ತಾನೆ.
ಆತ್ಮರಹಿತ ಸ್ಪಷ್ಟವಾದ ಅರಿವು
ಭಗವಾನರು ಶ್ರಾವಸ್ತಿಯಲ್ಲಿ ಇದ್ದರು. ಆಗ ಅವರು ನಾಲ್ಕುರೀತಿಯ ಆಹಾರಗಳಾದ ಭೌತಿಕ ಆಹಾರ, ಸ್ಪರ್ಶ, ಇಚ್ಛೆ ಮತ್ತು ವಿಞ್ಞಾನ (ಅರಿವು) ಇವುಗಳ ಬಗ್ಗೆ ಬೋಧಿಸುತ್ತಿದ್ದರು. ಆಗ ಪೂಜ್ಯ ಮೋರಿಯ ಫಾಲ್ಗುಣರು ಈ ರೀತಿ ಪ್ರಶ್ನಿಸಿದರು: "ಭಗವಾನ್ ಯಾರು ವಿಞ್ಞಾನದ ಆಹಾರವನ್ನು ಸೇವಿಸುತ್ತಿರುವುದು?"
ಭಗವಾನರು : "ಇದು ಪ್ರಶ್ನಿಸಬೇಕಾದ ರೀತಿಯಲ್ಲ, ನಾನು ಯಾರೋ ಆಹಾರವನ್ನು ಸೇವಿಸುತ್ತಿರುವನು ಎಂದು ಬೋಧಿಸುತ್ತಿಲ್ಲ. ನಾನು ಆ ಅರ್ಥದಲ್ಲಿ ಬೋಧಿಸುತ್ತಿಲ್ಲ. ಪ್ರಶ್ನೆಯನ್ನು ಈ ರೀತಿಯಲ್ಲಿ ಕೇಳಬೇಕು: 'ವಿಞ್ಞಾನವು ಪೋಷಿತವಾದ ನಂತರ ಏನಾಗುವುದು? ಮತ್ತು ಅದಕ್ಕೆ ತಕ್ಕ ಉತ್ತರವೆಂದರೆ ವಿಞ್ಞಾನವು ಪೋಷಿತವಾದಾಗ ಭವವು ಉಂಟಾಗುತ್ತದೆ, ಭವದಿಂದ ಜನ್ಮವು ಉಂಟಾಗುತ್ತದೆ. ಜನ್ಮದಲ್ಲಿ ಆರು ಇಂದ್ರೀಯ ಆಧಾರಗಳು ಉಂಟಾಗುತ್ತದೆ. ಆರು ಇಂದ್ರೀಯ ಆಧಾರಗಳಿಂದ ಸ್ಪರ್ಶವು ಉಂಟಾಗುತ್ತದೆ."
ಆಗ ಫಾಲ್ಗುಣನು ಮತ್ತೆ ಈ ರೀತಿ ಪ್ರಶ್ನಿಸುತ್ತಾನೆ: "ಭಗವಾನ್, ಯಾರು ಸ್ಪರ್ಶವನ್ನು ಪಡೆಯುತ್ತಿರುವುದು?"
ಭಗವಾನರು: "ಓ ಫಾಲ್ಗುಣ ಇದು ಪ್ರಶ್ನಿಸಬೇಕಾದ ರೀತಿಯಲ್ಲ, ನಾನು ಯಾರೋ ಸ್ಪರ್ಶವನ್ನು ಪಡೆಯುತ್ತಿರುವನು ಎಂದು ಬೋಧಿಸುತ್ತಿಲ್ಲ. ನಾನು ಹಾಗೆ ಹೇಳುತ್ತಿದ್ದರೆ ಈ ಪ್ರಶ್ನೆಯು ಸರಿಯಾಗುತ್ತಿತ್ತು. ನೀನು ಹೀಗೆ ಪ್ರಶ್ನೆ ಕೇಳಬೇಕಿತ್ತು 'ಸ್ಪರ್ಶದ ಪರಿಣಾಮವೇನಾಗುವುದು' ಮತ್ತು ಅದಕ್ಕೆ ತಕ್ಕ ಉತ್ತರ ಏನೆಂದರೆ ಸ್ಪರ್ಶದಿಂದಾಗಿಯೇ ವೇದನೆಗಳು ಉಂಟಾಗುತ್ತವೆ."
ಆಗ ಫಾಲ್ಗುಣ ಮತ್ತೆ ಈ ರೀತಿ ಪ್ರಶ್ನಿಸಿದನು: "ಭಗವಾನ್ ಯಾರು ವೇದನೆಗಳನ್ನು ಅನುಭವಿಸುತ್ತಿರುವುದು?"
ಭಗವಾನ್: "ಓ ಫಾಲ್ಗುಣ, ಇದು ಪ್ರಶ್ನಿಸಬೇಕಾದ ರೀತಿಯಲ್ಲ, ನಾನು ಯಾರೋ ವೇದನೆಗಳನ್ನು ಅನುಭವಿಸುತ್ತಿದ್ದಾನೆ ಎಂದು ಬೋಧಿಸುತ್ತಿಲ್ಲ, ಹಾಗೆ ಹೇಳಿದ್ದರೆ ಈ ಪ್ರಶ್ನೆ ಉಚಿತ ಆಗಿರುತ್ತಿತ್ತು. ಮತ್ತು ನಾನು ಹಾಗೆ ಬೋಧಿಸಿಲ್ಲದುದರಿಂದಾಗಿ ನೀನು ಹೀಗೆ ಪ್ರಶ್ನೆ ಕೇಳಬೇಕಿತ್ತು: 'ವೇದನೆಗಳ ಪರಿಣಾಮವು ಏನಾಗುತ್ತದೆ, ಭಗವಾನ್?' ಮತ್ತು ಅದಕ್ಕೆ ಯೋಗ್ಯ ಉತ್ತರವೆಂದರೆ ವೇದನೆಗಳಿಂದಾಗಿ ತನ್ಹಾ (ತೀವ್ರ ಬಯಕೆ) ಉಂಟಾಗುತ್ತದೆ."
ಫಾಲ್ಗುಣ: "ಭಗವಾನ್ ಯಾರು ತನ್ಹಾ (ತೀವ್ರ ಬಯಕೆ) ಪಡುತ್ತಿರುವುದು?"
ಭಗವಾನ್: "ಓ ಪಾಲ್ಗುಣ, ಇದು ಪ್ರಶ್ನಿಸಬೇಕಾದ ರೀತಿಯಲ್ಲ, ನಾನು ಯಾರೋ ತೀವ್ರ ಬಯಕೆ (ತನ್ಹಾ) ಪಡುತ್ತಿದ್ದಾನೆ ಎಂದು ಬೋಧಿಸುತ್ತಿಲ್ಲ. ಹಾಗೆ ಬೋಧಿಸಿದ್ದರೆ, ನೀನು ಹೀಗೆ ಕೇಳುವುದು ಉಚಿತವಾಗುತ್ತಿತ್ತು. ನಾನು ಆ ರೀತಿ ಬೋಧಿಸದ ಕಾರಣ, ನೀನು ಹೀಗೆ ಪ್ರಶ್ನಿಸಬೇಕು: 'ತನ್ಹಾದ ಪರಿಣಾಮವೇನಾಗುವುದು ಭಗವಾನ್'. ಆಗ ಅದಕ್ಕೆ ತಕ್ಕ ಉತ್ತರವೇನೆಂದರೆ ತನ್ಹಾದಿಂದ ಅಂಟುವಿಕೆಯು ಉಂಟಾಗುತ್ತದೆ."
ಫಾಲ್ಗುಣ: "ಭಗವಾನ್ ಯಾರು ಅಂಟುವಿಕೆಯನ್ನು ವ್ಯಕ್ತಿಪಡಿಸುತ್ತಿರುವುದು?"
ಭಗವಾನ್: "ಇದು ಪ್ರಶ್ನಿಸಬೇಕಾದ ರೀತಿಯಲ್ಲ, ನಾನು ಯಾರೋ ಅಂಟುತ್ತಿರುವನು ಎಂದು ಬೋಧಿಸುತ್ತಿಲ್ಲ, ಹಾಗೆ ಬೋಧಿಸಿದ್ದರೆ, ನೀನು ಹೀಗೆ ಕೇಳುವುದು ಉಚಿತವಾಗಿರುತ್ತಿತ್ತು. ನಾನು ಹಾಗೆ ಬೋಧಿಸದ ಕಾರಣ ನೀನು ಹೀಗೆ ಪ್ರಶ್ನಿಸಬೇಕು: 'ಅಂಟುವಿಕೆಯ ಪರಿಣಾಮ ಏನಾಗುತ್ತದೆ?' ಆಗ ಅದಕ್ಕೆ ತಕ್ಕ ಉತ್ತರ ಏನೆಂದರೆ ಅಂಟುವಿಕೆಯಿಂದ ಭವ ಉಂಟಾಗುತ್ತದೆ, ಭವದಿಂದ ಜನ್ಮ, ಜನ್ಮದಿಂದ ಮುಪ್ಪು, ರೋಗ, ಮರಣ, ಶೋಕ, ಪ್ರಲಾಪ, ದುಃಖ, ನಿರಾಶೆ ಮುಂತಾದ ದುಃಖರಾಶಿಯೇ ಉಂಟಾಗುತ್ತದೆ."
"ಆದರೆ ಫಾಲ್ಗುಣ ಆರು ಇಂದ್ರೀಯಗಳ ನಿರೋಧದಿಂದ ಸ್ಪರ್ಶದ ನಿರೋಧ ಉಂಟಾಗುತ್ತದೆ. ಸ್ಪರ್ಶದ ನಿರೋಧದಿಂದ ವೇದನೆಗಳ ನಿರೋಧವಾಗುತ್ತದೆ, ವೇದನೆಗಳ ನಿರೋಧದಿಂದ ತನ್ಹಾದ ನಿರೋಧವಾಗುತ್ತದೆ, ತನ್ಹಾದ ನಿರೋಧದಿಂದ ಅಂಟುವಿಕೆಯ ನಿರೋಧವಾಗುತ್ತದೆ, ಅಂಟುವಿಕೆಯ ನಿರೋಧದಿಂದ, ಭವದ ನಿರೋಧವಾಗುತ್ತದೆ, ಭವದ ನಿರೋಧದಿಂದ, ಜನ್ಮದ ನಿರೋಧವು, ಜನ್ಮದ ನಿರೋಧದಿಂದ ಇಡೀ ದುಃಖರಾಶಿಯ ನಿರೋಧವಾಗುತ್ತದೆ.
ಆತ್ಮದ ಬಗ್ಗೆ ಚಚರ್ೆ
ಒಮ್ಮೆ ಭಗವಾನರು ಶ್ರಾವಸ್ತಿಯ ಜೇತವನದಲ್ಲಿದ್ದರು. ಅಲ್ಲಿ ಪೂಟ್ಟಪಾದ ಎಂಬ ಸಮಣನೊಂದಿಗೆ ನಡೆದ ಚಚರ್ೆಯಿದು. ಭಗವಾನರು ಅಲ್ಲಿ ಆತನಿಗೆ ಧಮ್ಮ ಬೋಧಿಸುತ್ತಾರೆ. ಆಗ ಆತನಿಗೆ ಈ ಪ್ರಶ್ನೆ ಉಂಟಾಗುತ್ತದೆ. "ಭಂತೆ ಸಞ್ಞ (ಗ್ರಹಿಕೆಯು)ವು ಮೊದಲು ಉದಯಿಸಿ, ನಂತರ ಜ್ಞಾನವು ಉದಯಿಸುವುದೋ ಅಥವಾ ಜ್ಞಾನವು ಮೊದಲು ಉದಯಿಸಿ ನಂತರ ಸಞ್ಞ (ಗ್ರಹಿಕೆ) ಉಂಟಾಗುವುದೋ ಅಥವಾ ಎರಡೂ ಒಟ್ಟಿಗೆ ಉದಯಿಸುವುದೋ ಅಥವಾ ಎರಡೂ ಮೊದಲು ಹಾಗು ನಂತರ ಉಂಟಾಗುವುದಿಲ್ಲವೋ?"
"ಓ ಪೊಟ್ಟಪಾದ ಮೊದಲು ಸಞ್ಞ (ಗ್ರಹಿಕೆ) ಉಂಟಾಗಿ ನಂತರ ಜ್ಞಾನವು ಉಂಟಾಗುತ್ತದೆ ಮತ್ತು ಜ್ಞಾನವು ಗ್ರಹಿಕೆಗೆ (ಸಞ್ಞ) ಅವಲಂಬಿಸಿರುತ್ತದೆ. ಇದರಿಂದಾಗಿ ಗೊತ್ತಾಗುವುದು ಏನೆಂದರೆ ಜ್ಞಾನವು ಉಂಟಾಗುವುದಕ್ಕೂ ಕಾರಣವಿದೆ."
"ಹಾಗಾದರೆ ಭಂತೆ, ಸಞ್ಞ (ಗ್ರಹಿಕೆ)ಯು ಮತ್ತು ಆತ್ಮವು ಒಂದೆಯೇ ಅಥವಾ ಸಞ್ಞವೇ ಬೇರೆ ಮತ್ತು ಆತ್ಮವು ಬೇರೆಯೇ?"
"ಓ ಪೊಟ್ಟಿಪಾದ, ಮತ್ತೆ ನೀನು ಆತ್ಮದ ಹಿಂದೆ ಬಿದ್ದೆಯಾ?"
"ಭಂತೆ ಅಂದರೆ ಭೌತಿಕ ಆತ್ಮ ಅದಕ್ಕೆ ಆಕಾರವಿದ್ದು (ಸೂಕ್ಷ್ಮ ಶರೀರ) ನಾಲ್ಕು ಮಹಾಭೂತಗಳಿಂದ ರಚಿತವಾಗಿರುವಂತಹುದು ಮತ್ತು ಘನ ಆಹಾರದಿಂದ ಪೋಷಿತವಾಗುವಂತಹುದು."
"ಓ ಪೊಟ್ಟಿಪಾದ, ಅಂತಹ ಆತ್ಮವು ಇದ್ದಿದ್ದರೆ ನಿನ್ನ ಸಞ್ಞವೇ ಬೇರೆ ಮತ್ತು ಆತ್ಮವು ಬೇರೆಯಾಗುತ್ತಿತ್ತು..."
"ಹಾಗಾದರೆ ಭಂತೆ, ನಾನು ಆತ್ಮವು ಮನೋಮಯವೆಂದು (ಮನಸ್ಸಿನಿಂದ ನಿಮರ್ಾಣ) ಭಾವಿಸುತ್ತೇನೆ. ಅದರ ಎಲ್ಲಾ ಪ್ರಧಾನ ಮತ್ತು ಅಪ್ರಧಾನ ಅಂಗಗಳು ಪೂರ್ಣವಾಗಿರುತ್ತದೆ, ಯಾವುದೇ ಕೊರತೆಯಿಂದ ಕೂಡಿರುವುದಿಲ್ಲ."
"ಆಗಲೂ ಪೊಟ್ಟಿಪಾದ, ನಿನಗೆ ಇಂತಹ ಆತ್ಮವಿದ್ದರೆ, ಅದೇ ಚಚರ್ೆಯು ಅನ್ವಯವಾಗುವುದು."
"ಹಾಗಾದರೆ ಭಂತೆ, ನಾನು ಆಕಾರವಿಲ್ಲದ (ಅರೂಪಿ), ಸಞ್ಞಮಯ (ಗ್ರಹಿಕೆಯಿಂದಲೇ ಕೂಡಿದ) ಆತ್ಮವಿದೆ ಎನ್ನುತ್ತೇನೆ."
"ಆಗಲೂ ಪೊಟ್ಟಿಪಾದ, ನಿನಗೆ ಇಂತಹ ಆತ್ಮವಿದ್ದರೆ, ಅದೇ ಚಚರ್ೆಯು ಅನ್ವಯವಾಗುವುದು."
"ಆದರೆ ಭಂತೆ, ನನಗೆ ಇದು ಅರ್ಥವಾಗುತ್ತದೆಯೇ? ಸಞ್ಞವೇ ಆತ್ಮವಾಗಿದೆಯೇ ಅಥವಾ ಎರಡೂ ಬೇರೆ ಬೇರೆಯೇ?"
"ಓ ಪೊಟ್ಟಿಪಾದ, ವಿಭಿನ್ನ ದೃಷ್ಟಿಕೋನಗಳನ್ನು ಹೊಂದಿರುವ, ವಿಭಿನ್ನ ಉದ್ದೇಶವನ್ನು ಹೊಂದಿರುವ, ವಿಭಿನ್ನವಾಗಿ ಶಿಕ್ಷಣ ಪಡೆದಿರುವ, ವಿಭಿನ್ನ ಸಿದ್ಧಾಂತಗಳನ್ನು ಹೊಂದಿರುವ ನೀನು ಸತ್ಯವನ್ನು ಅದರ ಯಥಾಭೂತ ಸ್ಥಿತಿಯಲ್ಲಿ ಅರಿಯಲಾರೆ."
"ಹಾಗಾದರೆ ಭಂತೆ ನನಗೆ ತಿಳಿಸಿ: 'ಈ ಲೋಕ ಶಾಶ್ವತವೆ ಅಥವಾ ಅಶಾಶ್ವತವೇ? ಅಥವಾ ಅನಂತವೇ ಅಥವಾ ಅಂತ್ಯವುಳ್ಳದ್ದೇ ಅಥವಾ ದೇಹ ಮತ್ತು ಆತ್ಮ ಒಂದೆಯೇ ಅಥವಾ ದೇಹ ಮತ್ತು ಆತ್ಮ ಬೇರೆ ಬೇರೆಯೇ? ಅಥವಾ ತಥಾಗತರು ಸಾವಿನನಂತರ ಇರುವರೇ, ಇರುವುದಿಲ್ಲವೇ? ಎರಡೂ ಸತ್ಯವೇ, ಅಥವಾ ಯಾವುದೂ ಇಲ್ಲವೇ?"
"ಓ ಪೊಟ್ಟಿಪಾದ, ಇದಕ್ಕೂ ಸಹಾ ನಾನು ಯಾವ ಅಭಿಪ್ರಾಯಗಳನ್ನು ವ್ಯಕ್ತಪಡಿಸಲಾರೆ!"
"ಭಗವಾನ್, ತಾವು ಏತಕ್ಕೆ ಅಂತಹ ಅಭಿಪ್ರಾಯಗಳನ್ನು ಹೊಂದಿಲ್ಲ?"
"ಏಕೆಂದರೆ ಈ ಪ್ರಶ್ನೆಗಳು ಅನರ್ಥಕಾರಿಯಾದವು. ಧಮ್ಮಕ್ಕೆ ಸಂಬಂಧಪಟ್ಟಿದ್ದಲ್ಲ. ಬ್ರಹ್ಮಚರ್ಯೆ ಜೀವನಕ್ಕೆ, ವಿಶುದ್ಧಿಗೆ, ಪರಮಶಾಂತತೆಗೆ, ವಿರಾಗಕ್ಕೆ, ನಿರೋಧಕ್ಕೆ ಮತ್ತು ನಿಬ್ಬಾಣಕ್ಕೆ ಸಹಕಾರಿಯಲ್ಲ. ಆದ್ದರಿಂದ ನಾನು ಅಂತಹ ಅಭಿಪ್ರಾಯಗಳನ್ನು ಹೊಂದಿಲ್ಲ."
"ಹಾಗಾದರೆ ಭಗವಾನರು ಯಾವುದನ್ನು ಬೋಧಿಸುತ್ತಾರೆ?"
"ನಾನು ನಾಲ್ಕು ಆರ್ಯಸತ್ಯಗಳನ್ನು ಬೋಧಿಸುತ್ತೇನೆ..."
"ಓ ಪೊಟ್ಟಿಪಾದ, ಕೆಲವು ಸಮಣ ಬ್ರಾಹ್ಮಣರಿದ್ದಾರೆ, ಅವರು ಈ ರೀತಿಯ ಸಿದ್ಧಾಂತ ಹೊಂದಿದ್ದರು: 'ಆತ್ಮವು ಆನಂದಮಯ ಮತ್ತು ಸಾವಿನ ನಂತರ ಸ್ವಸ್ತಿಯಾಗಿರುತ್ತದೆ.' ನಾನು ಅವರ ಬಳಿಗೆ ಹೋಗಿ ಹೀಗೆ ಕೇಳಿದೆನು: 'ಆತ್ಮವು ಆನಂದಮಯವೇ ಆಗಿದ್ದರೆ, ಲೋಕದ ಜನರೆಲ್ಲಾ ಸುಖಿಗಳಾಗಿ, ಆನಂದಭರಿತರಾಗಿ ಇರಬೇಕಿತ್ತು, ಅವರೆಲ್ಲಾ ಹಾಗಿದ್ದಾರೆಯೇ."
"ಇಲ್ಲ ಭಂತೆ."
"ಹೋಗಲಿ, ನೀವು ಇಡೀ ರಾತ್ರಿ ಅಥವಾ ಇಡೀ ಹಗಲು ಆನಂದದಿಂದ ಕೂಡಿರುವಿರಾ?"
"ಇಲ್ಲ ಭಂತೆ."
"ಹೋಗಲಿ, ನಿಮಗೆ ಆನಂದದಿಂದ ಕೂಡಿರುವಂತಹ ಮಾರ್ಗ ತಿಳಿದಿದೆಯೇ?"
"ಇಲ್ಲ ಭಂತೆ."
"ಅಥವಾ ನಿಮಗೆ ಯಾವುದಾದರೂ ದೇವತೆ ಬಂದು ಈ ರೀತಿ ಜೀವಿಸಿದರೆ ಆನಂದಮಯವಾಗಿ ಸಾವಿನ ನಂತರ ಇರಬಹುದು, ನಾವು ಹೀಗೆ ಜೀವಿಸಿ ಹೀಗಾಗಿರುವೆವು ಎಂದು ಹೇಳಿದೆಯೇ?"
"ಇಲ್ಲ ಭಂತೆ" ಎಂದು ಅವರು ಹೇಳಿದರು.
"ನಿನಗೆ ಏನು ಅನಿಸುತ್ತದೆ? ಈ ಸಮಣ ಬ್ರಾಹ್ಮಣರು ಉತ್ತಮ ನೆಲೆಯಲ್ಲಿದ್ದು ಮಾತನಾಡುತ್ತಿರುವರೇ?"
"ಇಲ್ಲ ಭಂತೆ."
"ಮೂರು ರೀತಿಯಲ್ಲಿ ಆತ್ಮವನ್ನು ವಿವರಿಸುತ್ತಾರೆ. ಅದೆಂದರೆ: ಭೌತಿಕ, ಮನೋಮಯಿ ಮತ್ತು ಅರೂಪಿ (ಅಶರೀರ). ಮೊದಲನೆಯದು ನಾಲ್ಕು ಮಹಾಭೂತಗಳಿಂದಾದ, ಆಹಾರದಿಂದ ಪೋಷಿತವಾದ ಶರೀರ, ಎರಡನೆಯದು ಮನೋಮಯ ಮನಸ್ಸಿನಿಂದಲೇ ನಿಮರ್ಾಣವಾಗಿರುವಂತಹ, ಮನೋ ಕಾರ್ಯಗಳನ್ನು ಮಾಡುವಂತಹುದು, ಎಲ್ಲಾ ಪ್ರಧಾನ ಮತ್ತು ಅಪ್ರಧಾನ ಅಂಗಗಳನ್ನು ಹೊಂದಿರುವಂತಹ ಸೂಕ್ಷ್ಮ ಶರೀರಿಯಾಗಿದೆ ಮತ್ತು ಮೂರನೆಯದು ಅರೂಪಿ (ಅಶರೀರ) ಶರೀರವೇ ಇಲ್ಲದ ಕೇವಲ ಸಞ್ಞವನ್ನು ಹೊಂದಿರುವಂತಹುದು."
ಆಗ ಅಲ್ಲಿಯೇ ಇದ್ದ ಚಿತ್ತನೆಂಬುವವನು ಈ ರೀತಿ ಪ್ರಶ್ನಿಸಿದನು: "ಭಗವಾನ್, ಈ ಮೂರು ರೀತಿಯ ಆತ್ಮಗಳಲ್ಲಿ ಒಮ್ಮೆ ಒಂದನ್ನು ಮಾತ್ರ ಹೊಂದಲು ಸಾಧ್ಯ. ಹಾಗಾದಾಗ ಮಿಕ್ಕ ಎರಡು ಅಸತ್ಯವೇ? ಒಂದು ಮಾತ್ರ ಸತ್ಯವೇ?"
"ಓ ಚಿತ್ತ, ಈ ಮೂರರಲ್ಲಿ ಒಂದು ಮಾತ್ರ ಒಂದು ಸಮಯದಲ್ಲಿ ಇರುವುದು, ಮಿಕ್ಕವು ಇರುವುದಿಲ್ಲ, ಇದು ಕೇವಲ ನಾಮಮಾತ್ರವಾಗಿದೆ. ಪ್ರಕ್ರಿಯೆ ನಡೆಯುತ್ತಲೇ ಇರುತ್ತದೆ."
"ಚಿತ್ತ, ನಿನಗೆ ಯಾರಾದರೂ ಹೀಗೆ ಕೇಳುತ್ತಾರೆ: 'ನೀನು ಹಿಂದೆ ಇದ್ದೆಯೋ ಅಥವಾ ಇಲ್ಲವೋ; ನೀನು ಮುಂದೆ ಇರುವೆಯೋ ಅಥವಾ ಇಲ್ಲವೋ? ನೀನು ಈಗ ಇದ್ದೀಯೋ ಅಥವಾ ಇಲ್ಲವೋ?' ಆಗ ನೀನು ಹೇಗೆ ಉತ್ತರಿಸುವೆ?"
"ನಾನು ಹೀಗೆ ಉತ್ತರಿಸುವೆ, ನಾನು ಹಿಂದೆ ಇದ್ದೆನು, ಇಲ್ಲದೆ ಇರಲಿಲ್ಲ. ಹಾಗೆಯೇ ಮುಂದೆಯೂ ಇರುವೆನು, ಇಲ್ಲದೆ ಇರುವುದಿಲ್ಲ. ಮತ್ತು ನಾನು ಈಗ ಇರುವೆನು, ಇಲ್ಲದೆ ಇಲ್ಲ."
"ಆಗ ಅವರು ಹೀಗೆ ಹೇಳುತ್ತಾರೆ 'ಹಾಗದರೆ ಹಿಂದೆ ಇದ್ದ ಆತ್ಮ ಮಾತ್ರ ಸತ್ಯವೇ; ಮುಂದೆ ಬರುವ ಮತ್ತು ಈಗಿರುವ ಆತ್ಮ ಮಿಥ್ಯವೇ? ಅಥವಾ ಭವಿಷ್ಯದ ಆತ್ಮ ಮಾತ್ರ ಸತ್ಯವೇ; ಹಿಂದಿನ ಮತ್ತು ಈಗಿರುವ ಆತ್ಮ ಮಿಥ್ಯವೇ ಅಥವಾ ಈಗಿನ ಆತ್ಮ (ವ್ಯಕ್ತಿತ್ವ) ಮಾತ್ರ ಸತ್ಯ; ಹಿಂದಿನ ಮತ್ತು ಮುಂದಿನ ಆತ್ಮ ಮಿಥ್ಯವೇ?" ಆಗ ನೀನು ಏನೆಂದು ಉತ್ತರಿಸುವೆ?"
"ಆಗ ನಾನು ಹೀಗೆ ಉತ್ತರಿಸುವೆ: 'ಅತೀತಕಾಲ (ಭೂತಕಾಲ)ದಲ್ಲಿ ಆ ಆತ್ಮವೇ ನನಗೆ ಸತ್ಯವಾಗಿತ್ತು, ಉಳಿದಿದ್ದು ಮಿಥ್ಯವಾಗಿತ್ತು; ಮತ್ತು ಅದೇರೀತಿ ಈಗಿನ ಆತ್ಮವೇ ನನಗೆ ಸತ್ಯವಾಗಿದೆ, ಉಳಿದಿದ್ದು ಮಿಥ್ಯವಾಗಿತ್ತು. ಹಾಗೆಯೇ ಭವಿಷ್ಯದಲ್ಲಿ ಆ ಆತ್ಮವೇ ಸತ್ಯವಾಗುತ್ತದೆ, ಉಳಿದಿದ್ದು ಮಿಥ್ಯವಾಗುತ್ತದೆ."
"ಚೆನ್ನಾಗಿ ಹೇಳಿದೆ ಚಿತ್ತ, ಯಾವಾಗ ಒಂದು ಆತ್ಮ (ವ್ಯಕ್ತಿತ್ವ) ಸಾಗುತ್ತಿರುವುದೋ ಆಗ ಅದು ಉಳಿದ ವಿಭಾಗಕ್ಕೆ ಬರುವುದಿಲ್ಲ. ಹೇಗೆಂದರೆ ಚಿತ್ತ ಹಸು ಹಾಲು ನೀಡುತ್ತದೆ ಮತ್ತು ಹಾಲಿನಿಂದ ಮೊಸರಾಗುತ್ತದೆ. ಮೊಸರಿನಿಂದ ಬೆಣ್ಣೆ, ಬೆಣ್ಣೆಯಿಂದ ತುಪ್ಪ, ತುಪ್ಪದಿಂದ ತಿಂಡಿಗಳು ಸಿದ್ಧವಾಗುತ್ತವೆ. ಆದರೆ ಯಾವಾಗ ಹಾಲಿರುತ್ತದೋ ಆಗ ಅದನ್ನು ಮೊಸರೆಂದಾಗಲಿ ಅಥವಾ ಬೆಣ್ಣೆಯೆಂದಾಗಲಿ ಅಥವಾ ತುಪ್ಪವೆಂದಾಗಲಿ ಅಥವಾ ತಿಂಡಿಯೆಂದಾಗಲಿ ಕರೆಯುವುದಿಲ್ಲ. ಮತ್ತು ಯಾವಾಗ ಅದು ಮೊಸರಾಗಿರುತ್ತದೋ ಆಗ ಅದನ್ನು ಬೇರೆ ಅವಸ್ಥೆಗಳ ಹೆಸರಿನಿಂದ ಕರೆಯುವುದಿಲ್ಲ, ಹಾಗೆಯೇ ಬೆಣ್ಣೆಯಾಗಿರುವಾಗ.... ಅದೇರೀತಿಯಲ್ಲಿ ಚಿತ್ತ, ಯಾವಾಗ ಮೂರು ರೀತಿಗಳ ಮನಸ್ಸು ಒಂದು ಅವಸ್ಥೆಯಲ್ಲಿ ಸಾಗುತ್ತಿರುವುದೋ ಆಗ ಅದಕ್ಕೆ ಬೇರೆ ಹೆಸರಿನಿಂದಾಗಲಿ ಕರೆಯಲಾಗುವುದಿಲ್ಲ. ಏಕೆಂದರೆ ಹೆಸರುಗಳು, ವ್ಯಕ್ತಿತ್ವಗಳು, ಸಂಭಾಷಣೆಯಾಗುತ್ತದೆ, ಜಗತ್ತಿನಲ್ಲಿ ಅಂಕಿತವು ಸಾಧಾರಣ ಸಂಗತಿಯಾಗಿದೆ ಮತ್ತು ತಥಾಗತರು ಮಾತ್ರ ಅದರ ಯೋಗ್ಯ ಬಳಕೆ ಮಾಡುತ್ತಾರೆ. ಅದರಿಂದ ಜನರು ಹಾದಿ ತಪ್ಪುವುದಿಲ್ಲ."
ಆಗ ಪೊಟ್ಟಿಪಾದನು ಭಗವಾನರಿಗೆ ನಾನಾರೀತಿಯಲ್ಲಿ ಹೊಗಳಿದನು. ನಂತರ ತ್ರಿರತ್ನಗಳಿಗೆ ಶರಣು ಹೋದನು. ಆದರೆ ಚಿತ್ತ, ಸಂಘಕ್ಕೆ ಸೇರಲು ಅನುಮತಿ ಪಡೆದನು. ಮುಂದೆ ಆತನು ಅರಹಂತನು ಆಗುತ್ತಾನ 

No comments:

Post a Comment