Sunday 14 January 2018

THE CONSEQUENCES OF LAZYNESS ಸೋಮಾರಿತನ - ಚುಲಕಾಲನ ಘಟನೆ

                           ಸೋಮಾರಿತನ - ಚುಲಕಾಲನ ಘಟನೆ


ಸೇತಾವವೆಂಬ ಪಟ್ಟಣದಲ್ಲಿ ಮಹಾಕಾಲ, ಮಜ್ಜಿಮಕಾಲ ಮತ್ತು ಚುಲಕಾಲರೆಂಬ ಮೂವರು ಸೋದರರಿದ್ದರು. ಮೊದಲ ಇಬ್ಬರು ವೃತ್ತಿಯಲ್ಲಿ ವ್ಯಾಪಾರ ಮಾಡುತ್ತಿದ್ದರು.  ಕೊನೆಯವನಿಗೆ ಯಾವುದೇ ಹೇಳುವಂತಹ ವೃತ್ತಿಯಿರಲಿಲ್ಲ.
ಮಹಾಕಾಲ ಮತ್ತು ಚುಲಕಾಲರು ಬಂಡಿಗಳಲ್ಲಿ ಸರಕುಗಳನ್ನು ಹಾಕಿಕೊಂಡು ಒಮ್ಮೆ ಶ್ರಾವಸ್ತಿಗೆ ಹೋಗಿದ್ದಾಗ ಅವರು ಜೇತವನ ವಿಹಾರದ ಹತ್ತಿರ ಬಿಡಾರ ಹಾಕಿದ್ದರು. ಸಂಜೆಯಾದಾಗ ಅವರು ದೃಶ್ಯವನ್ನು ಗಮನಿಸಿದರು. ಏನೆಂದರೆ: ಜನರು ಗುಂಪಾಗಿ ವಿಹಾರಕ್ಕೆ ಪುಷ್ಪಗಳನ್ನು, ಗಂಧವನ್ನು ತೆಗೆದುಕೊಂಡು ಹೋಗುವುದು ಅವರಿಗೆ ಕಾಣಿಸಿತು. ಮಹಾಕಾಲನು ಕುತೂಹಲ ತಡೆಯಲಾರದೆ ಬಂಡಿಗಳನ್ನು ತಮ್ಮನಿಗೆ ಒಪ್ಪಿಸಿ, ತಾನು ವಿಹಾರದಲ್ಲಿ ಕುಳಿತು ಧಮ್ಮಶ್ರವಣ ಮಾಡಲು ಹೋದನು. ಬುದ್ಧ ಭಗವಾನರು ಮಹಾಕಾಲನ ಧಾತುಗಳಿಗೆ ಸರಿಹೊಂದುವಂತೆ ಧಮ್ಮಪ್ರವಚನ ಮಾಡಿದರು. ಅದರ ಪರಿಣಾಮವಾಗಿ ಆತನಿಗೆ ಭಿಕ್ಷುವಾಗುವ ಬಯಕೆ ಉಂಟಾಯಿತು. ಆತನಲ್ಲಿ ವೈರಾಗ್ಯ ಪ್ರಬಲವಾಗಿ ಬುದ್ಧ ಭಗವಾನರಿಗೆ ಅದನ್ನು ಹೇಳಿದನು. ನಂತರ ಹಿಂತಿರುಗಿ ಬಂದು ತಮ್ಮನಿಗೂ ಸಹಾ ಅದನ್ನು ಹೇಳಿದನು. ಆದರೆ ತಮ್ಮನು ಅದನ್ನು ಬಲವಾಗಿ ವಿರೋಧಿಸಲಿಲ್ಲ. ನಂತರ ಮಹಾಕಾಲನು ಭಿಕ್ಷು ಸಂಘಕ್ಕೆ ಸೇರಿದನು ಮತ್ತು ಕೆಲವು ಸಮಯದಲ್ಲೇ ಆತನ ತಮ್ಮನು ಸಹಾ ಹಾಗೇ ಮಾಡಿದನು.
ಮಹಾಕಾಲನು ತನ್ನ ಮನಸ್ಸನ್ನು ಸಮಾದಿಯಲ್ಲೇ ತಲ್ಲೀನಗೊಳಿಸಿದನು. ಮತ್ತು ಮನಸ್ಸಿನ ಭಾವೋದ್ರೇಕಗಳನ್ನು ದೂರೀಕರಿಸಲು ದೃಢ ಶ್ರಮವನ್ನು ಪಟ್ಟನು. ಆದರೆ ಚುಲಕಾಲನು ಪ್ರಯತ್ನಹೀನನಾಗಿ ಆತನ ಇಂದ್ರಿಯಗಳನ್ನು ಸಡಿಲವಾಗಿ ಬಿಟ್ಟನು. ಆತನು ಸಂಜೆಯೇ ಮಲಗಿ ಸೂರ್ಯ ಹುಟ್ಟಿದ ಎಷ್ಟೋ ಕಾಲಕ್ಕೆ ಏಳುತ್ತಿದ್ದನು. ಆತನು ಶೀಲ ಪಾಲಿಸುವಿಕೆಯಲ್ಲಿಯೂ ಸಹಾ ಆಲಸ್ಯ ತೋರಿಸುತ್ತಿದ್ದನು. ಆತನು ಭಿಕ್ಷುವಾಗಿಯೂ ಸಹಾ ಭಿಕ್ಷುವಿನ ರೀತಿ ಜೀವಿಸುತ್ತಿರಲಿಲ್ಲ. ಆತನು ಬೆಳಿಗ್ಗೆ ಎದ್ದಮೇಲೆ ಪ್ರಾಪಂಚಿಕತೆಯನ್ನು ಚಿಂತಿಸುತ್ತಿದ್ದನು. ಆತನು ತನ್ನ ಅಣ್ಣನ ನಿರಂತರ ಕಠಿಣ ಶ್ರಮ ಭಿಕ್ಷು ಜೀವನದಲ್ಲಿ ಪಾಲಿಸುವುದು ಕಂಡರೂ ಸಹಾ ಆತನಂತು ಸೋಮಾರಿಯಾಗಿಯೇ ಇದ್ದನು. ನಂತರದ ಸ್ವಲ್ಪ ಕಾಲದಲ್ಲಿಯೇ ಮಹಾಕಾಲನು ಅರಹಂತನಾದನು. ಆತನು ಶ್ರಮಣ ಜೀವನದ ಮಹತ್ವವನ್ನು ಅರಿತನು. ಯಾವುದನ್ನು ಪ್ರಾಪ್ತಿ ಮಾಡಲು ಭಿಕ್ಷುವಾದನೋ ಅದನ್ನು ಆತನು ಪ್ರಾಪ್ತಿಮಾಡಿದನು. ಬುದ್ಧ ಭಗವಾನರು ಬೋಧನೆ ನೀಡುತ್ತಾ ಹಳ್ಳಿಯಿಂದ ಹಳ್ಳಿಗೆ ಹೋಗುತ್ತಿದ್ದರು. ಈ ಬಾರಿ ಸೇತೌವ ಪಟ್ಟಣಕ್ಕೆ ಭಿಕ್ಷುಗಳ ಸಮೇತ ಬಂದಿದ್ದರು. ಅದು ಮಹಾಕಾಲ ಹಾಗು ಚೂಲಕಾಲನ ಊರಾಗಿತ್ತು. ಅವರ ಬಂಧುಗಳಿಗೆ ಇವರಿಬ್ಬರನ್ನು ಗೃಹಸ್ಥರನ್ನಾಗಿ ಮಾಡಬೇಕೆಂದು ಬಯಕೆಯಾಯಿತು. ಅವರು ಬುದ್ಧರನ್ನು ಹಾಗು ಭಿಕ್ಷು ಸಂಘವನ್ನು ಆಹಾರಕ್ಕಾಗಿ ಆಹ್ವಾನಿಸಿದರು. ಪೀಠಗಳನ್ನು ಸಕಾಲಕ್ಕೆ ಸಿದ್ಧಪಸಿಸಿದಾಗ ಮಹಾಕಾಲನು ತನ್ನ ತಮ್ಮನಿಗೆ ಮೊದಲು ಹೋಗೆಂದು ಹೇಳಿದನು. ಆಹಾರ ಬಡಿಸುವ ವೇಳೆ ಈ ರೀತಿ ಪೀಠಗಳನ್ನು ಜೋಡಿಸುವುದು ಸಮಾನ್ಯವಾಗಿತ್ತು. ಹೇಗೆಂದರೆ ಬುದ್ಧ ಭಗವಾನರ ಪೀಠವನ್ನು ಮಧ್ಯದಲ್ಲಿ, ಅವರ ಬಲ ಪಕ್ಕದಲ್ಲಿ ಸಾರಿಪುತ್ತ ಥೇರರು ಮತ್ತು ಎಡಪಕ್ಕದಲ್ಲಿ ಮೊಗ್ಗಲ್ಲಾನ ಥೇರರನ್ನು ಹಾಕುತ್ತಿದ್ದರು. ಚುಲಕಾಲನು ತನ್ನ ಮನೆಗೆ ಹೋದಾಗ ಆತನ ಮನೆಯವರು ಆತನೊಂದಿಗೆ ಅಪಹಾಸ್ಯ ಮಾಡಿದರು. ಆತನು ಎತ್ತರದ ಪೀಠಗಳನ್ನು ಮುಂದೆ ಹಾಕುವಂತೆ ಹೇಳಿದಾಗ ಅವರು ಅದಕ್ಕೆ ವಿರುದ್ಧವಾಗಿ ಹಿಂದೆ ಹಾಕಿದರು. ಮತ್ತು ಆತನಿಗೆ ಕೆಲವು ಪ್ರಶ್ನೆಗಳನ್ನು ಹಾಕಿ ಮೂರ್ಖನೊಂದಿಗೆ ವತರ್ಿಸುವಂತೆ ವತರ್ಿಸಿದರು. ಅವು ಯಾವುವೆಂದರೆ, ಯಾರ ಅಪ್ಪಣೆ ಪಡೆದು ನೀನು ಭಿಕ್ಷುವಾದೆ, ನೀನು ಇಲ್ಲಿಗೆ ಏಕೆ ಬಂದೆ? ನಮಗೆ ಅಪ್ಪಣೆ ಮಾಡಲು ನೀನು ಯಾರು? ಅಲ್ಲಿದ್ದು ನೀನು ಕಲಿತಿರುವುದು ಏನನ್ನು? ನೀನೇ ಏತಕ್ಕೆ ಪೀಠವನ್ನು ಜೋಡಿಸಬಾರದು? ಕೊನೆಗೆ ಆತನಿಗೆ ಕಾಷಾಯ ವಸ್ತ್ರ ಕಿತ್ತುಹಾಕಿ, ಆತನನ್ನು ಗೃಹಸ್ಥನ ಬಿಳಿವಸ್ತ್ರ ತೊಡಿಸಿದರು. ಆತನಿಗೆ ನಾನಾಬಣ್ಣದ ಹೂವುಗಳ ಕಿರೀಟವನ್ನು ತೊಡಿಸಿದರು. ಹಾಗು ಅತನಿಗೆ ಭಿಕ್ಷು ಜೀವನದ ನಿಯಮಗಳು, ಅರ್ಥಗಳು ಆಳವಾಗಿ ಅರಿತಿಲ್ಲದ್ದರಿಂದ ಆತನಿಗೆ ಅವರು ಮಾಡುವ ಅವಮಾನವು ಸಹಾ ಅವಮಾನದ ರೀತಿ ಕಾಣಲಿಲ್ಲ. ಅವರು ಹೇಳಿದಂತೆಯೇ ಆತನು ಬುದ್ಧ ಭಗವಾನರನ್ನು ಸ್ವಾಗತಿಸಿದನು. ಮಾರನೆಯ ದಿನವೂ ಸಹಾ ಚುಲಕಾಲನ ಮನೆಯವರು ತಥಾಗತರಿಗೆ ವಂದಿಸಿ ಆತಿಥ್ಯವನ್ನು ನೀಡಿದರು. ಮತ್ತು ಮತ್ತೊಬ್ಬ ಥೇರರು ಅವರ ಗೃಹಸ್ಥ ಜೀವನದ ಮನೆಗೆ ಹೋಗಿ ಭಿಕ್ಷುಗಳಿಗೆ ಪೀಠಗಳನ್ನು ಏಪರ್ಾಟು ಮಾಡಲು ಹೋದರು. ಅಲ್ಲಿ ಭೋಜನದ ನಂತರ ಧರ್ಮಬೋಧನೆ ಮಾಡಲು ಮಹಾಕಾಲನಿಗೆ ಪ್ರತಿನಿಧಿಸಿದರು ಮತ್ತು ಭಗವಾನರು ಹಾಗು ಉಳಿದ ಭಿಕ್ಷುಗಳು ವಿಹಾರಕ್ಕೆ ಮರಳಿದರು.
ಕೆಲವು ಭಿಕ್ಷುಗಳಿಗೆ ಮಹಾಕಾಲನಿಗೆ ಆಯ್ಕೆ ಮಾಡಿದ್ದು ಇಷ್ಟವಾಗಲಿಲ್ಲ. ಏಕೆಂದರೆ ಹಿಂದಿನದಿನ ಚುಲಕಾಲನಿಗೆ ಆದ ಅವಮಾನ ಅವರಿಗೆ ಮರೆಯಲಾಗಲಿಲ್ಲ. ಭಿಕ್ಷುಗಳೆಲ್ಲರೂ ಸ್ವಲ್ಪದೂರ ಹೋದ ನಂತರ ಸ್ವಲ್ಪ ಕಾಲದ ನಂತರ ಮಹಾಕಾಲ ಅರಹಂತರಿಗೆ ಮಹಾಕಾಲನ ಪತ್ನಿ ಹಾಗು ಉಳಿದ ಬಂಧುಗಳು ಸುತ್ತವರೆದರು. ಚುಲಕಾನಿಗೆ ಪ್ರಶ್ನಿಸಿದ ರೀತಿಯಲ್ಲಿ ಆತನಿಗೂ ಸಹಾ ಪ್ರಶ್ನಿಸತೊಡಗಿದರು. ಅರಹಂತ ಮಹಾಕಾಲನಿಗೆ ಅವರ ಮೂರ್ಖತನ ಅರಿವಾಯಿತು. ಇವರೆಲ್ಲಾ ಬೋಧನೆಗೆ ಅರ್ಹರಲ್ಲ ಎಂದು ಅರಿತು ಮುಂದಾಗುವ ಅಪ್ರಿಯ ಸನ್ನಿವೇಶಕ್ಕೆ ಪ್ರತಿಯಾಗಿ ಅವರು ತಮ್ಮ ಋದ್ದಿಶಕ್ತಿಯಿಂದ (ಪವಾಡಶಕ್ತಿ) ಮನೆಯ ಮೇಲ್ಭಾಗಕ್ಕೆ ಹಾರಾಡಿದರು. ಹಾಗೆಯೇ ಗಾಳಿಯಲ್ಲಿ ಹಾರುತ್ತಾ ಭಗವಾನರು ಇದ್ದಕಡೆ ಬಂದು ಭಗವಾನರು ಇದ್ದಕಡೆ ಬಂದು ಭಗವಾನರಿಗೆ ಭಕ್ತಿಯುತ ಶ್ರದ್ಧಾಂಜಲಿಯನ್ನು ಸುಗತರ ಪಾದದ ಮೇಲೆ ತಲೆಯಿಟ್ಟು ಗೌರವ ಅಪರ್ಿಸಿದರು.
ಆಗ ಭಗವಾನರು ಭಿಕ್ಷುಗಳಿಗೆ ಮಹಾಕಾಲ ಹಾಗು ಚುಲಕಾಲರ ಶೀಲದ ವ್ಯತ್ಯಾಸ ತಿಳಿಸಿದರು. ಚುಲಕಾಲನು ಪ್ರಯತ್ನಹೀನತೆಯಿಂದ ಸೋಮಾರಿತನದಿಂದ ತನ್ನ ಇಂದ್ರಿಯಗಳನ್ನು ಧಮಿಸಲಾರದವನು ಹಾಗು ಅತನಿಗೆ ಹೇಗೆ ನಿಲ್ಲಬೇಕು, ನಡೆಯಬೇಕು, ಕುಳಿತುಕೊಳ್ಳಬೇಕು ಮತ್ತು ಹೇಗೆ ಸರಿಯಾಗಿ ಮಲಗಬೇಕು ಎಂಬುದು ಅರಿಯದಾದನು. ಆತನ ಸೋಮಾರಿತನದ ವ್ಯಕ್ತಿತ್ವದಿಂದ ಆತನು ಗೃಹಸ್ಥನಾಗಿ ಶ್ರೀಮಂತನಾಗಲು ಅನರ್ಹನಾದನು. ತನ್ನ ಹೀನ ವೀರ್ಯದಿಂದ ಆತನ ಭಾವಾವೇಶಗಳನ್ನು ಧಮಿಸಿ ತನ್ನ ಅಣ್ಣನಂತೆ ಅರಹಂತನು ಸಹಾ ಆಗಲಿಲ್ಲ.
ಕೆಲವರು ಸೋಮಾರಿತನಕ್ಕೆ ವಶವಾಗಿ ಆಳವಾದ ದುಃಖಕ್ಕೆ ಈಡಾಗಬೇಕಾಗುತ್ತದೆ. ಪಾಪಿಗಳು ವಿಮುಕ್ತಿಯ ಹಾದಿಯನ್ನು ಕ್ರಮಿಸಲು ವಿಫಲರಾಗುತ್ತಾರೆ.
- ಧಮ್ಮಪದ ಅಟ್ಠಕಥ 

THE EVIL FRIENDS ಕೆಟ್ಟ ಸಂಗಾತಿಗಳು - ದೇವದತ್ತನ ವೃತ್ತಾಂತ

                     ಕೆಟ್ಟ ಸಂಗಾತಿಗಳು - ದೇವದತ್ತನ ವೃತ್ತಾಂತ


ಬುದ್ಧ ಭಗವಾನರು ಮಲ್ಲರ ಪ್ರಾಂತ್ಯವಾದ ಅನುಪಿಯದಲ್ಲಿ ಮಾವಿನ ತೋಪಿನಲ್ಲಿ ತಂಗಿದ್ದಾಗ, ಶಾಕ್ಯಕುಲದ ಆರು ರಾಜಕುಮಾರರು ಸಂಘಕ್ಕೆ ಸೇರಲು ಬಂದರು. ಅವರು ಯಾರೆಂದರೆ: ಭದ್ದಿಯ, ಆನಂದ, ಅನುರುದ್ದ, ಭಗು, ಕಿಂಬಿಲ ಮತ್ತು ದೇವದತ್ತ. ಅವರು ಭಗವಾನರಿಂದ ಸಂಘ ಸೇರಿದರು. ದೇವದತ್ತನ ಹೊರತಾಗಿ ಬೇರೆಯವರು ಚಿತ್ತ ಪರಿಶುದ್ಧತೆಗೆ ಒತ್ತುಕೊಟ್ಟು ಸಂತರಾಗುವ ಹಾದಿಯಲ್ಲಿದ್ದರೆ ದೇವದತ್ತನು ಮಂತ್ರಗಳನ್ನು ಆಶ್ರಯಿಸಿ ಪವಾಡಗಳನ್ನು ಸಾಧಿಸಲು ನಿರತನಾಗುತ್ತಿದ್ದನು. ಕೆಲವು ಪವಾಡಗಳನ್ನು ಸಿದ್ಧಿಸಿದನು.
ಅದೇ ವೇಳೆಯಲ್ಲಿ ವಿಹಾರದಲ್ಲಿ ಬುದ್ಧ ಭಗವಾನರಿಗೆ ಹಾಗು ಅವರ ಶಿಷ್ಯರನೇಕರಿಗೆ ನಾನಾರೀತಿಯ ಗೌರವ, ಸತ್ಕಾರ, ಪೂಜೆ ನಡೆಯುತ್ತಿದ್ದನ್ನು ಕಂಡ ದೇವದತ್ತನಿಗೆ ಮತ್ಸರ ಹಾಗು ಚಿಂತೆ ಉತ್ಪತ್ತಿಯಾಯಿತು. ತನ್ನ ಹೆಸರು ಯಾರಿಗೂ ತಿಳಿದಿಲ್ಲವಲ್ಲ, ತನಗೆ ಸತ್ಕಾರವಿಲ್ಲವಲ್ಲ ಎಂದು ಕೊರಗಿದನು. ಆತನಿಗೆ ಉಪಾಯ ಹೊಳೆದು ರಾಜಕುಮಾರ ಅಜಾತಶತ್ರುವನ್ನು ಬಲೆಗೆ ಹಾಕಿಕೊಳ್ಳಲು ನಿರ್ಧರಿಸಿದನು. ಅಜಾತಶತ್ರುವು ರಾಜ ಬಿಂಬಿಸಾರನ ಮಗನಾಗಿದ್ದನು. ಒಮ್ಮೆ ದೇವದತ್ತನು ಸರ್ಪಗಳಿಂದ ಅಲಂಕೃತನಾಗಿ ಶಿಶುವಿನ ರೂಪತಾಳಿ ಗಾಳಿಯಲ್ಲಿ ಹಾರಿ ಅಜಾತಶತ್ರುವಿನ ಮಡಿಲಲ್ಲಿ ಕುಳಿತನು. ಇದರಿಂದ ಅತ್ಯಂತ ಭಯಭೀತನಾದ ಅಜಾತಶತ್ರು ನೀನು ಯಾರು? ಎಂದು ಕೇಳಿದಾಗ ನಾನು ದೇವದತ್ತ ಎಂದು ಉತ್ತರಿಸಿ ಮತ್ತೆ ತನ್ನ ಭಿಕ್ಷು ರೂಪದಲ್ಲಿ ಕಾಣಿಸಿದನು. ಆಗ ಅಜಾತಶತ್ರುವಿಗೆ ದೇವದತ್ತನ ಮೇಲೆ ಅತೀವ ಭಯಭಕ್ತಿ ಉಂಟಾಯಿತು. ಅವನು ದೇವದತ್ತನಿಗೆ ಅನೇಕ ಸತ್ಕಾರ ಮಾಡಿದನು. ಆಗ ದೇವದತ್ತನಿಗೆ ಭಿಕ್ಷುಗಳ ನಾಯಕತ್ವ ವಹಿಸಬೇಕೆಂದು ಇಚ್ಛೆಯಾಯಿತು. ಯಾವಾಗ ಆತನಿಗೆ ಈ ಪಾಪ ಇಚ್ಛೆ ಉಂಟಾಯಿತೋ ಆಗ ಆತನು ಪವಾಡಶಕ್ತಿಯನ್ನು ಕಳೆದುಕೊಂಡನು.
ಒಮ್ಮೆ ಬುದ್ಧ ಭಗವಾನರು ವಿಶಾಲ ಜನರಿಗೆ ಧಮರ್ೊಪದೇಶ ಮಾಡುತ್ತಿದ್ದರು. ಅವರಲ್ಲಿ ರಾಜರು, ರಾಜಕುಮಾರರು ಮತ್ತು ಇತರ ಜನರಿದ್ದರು. ದೇವದತ್ತನು ಬುದ್ಧ ಭಗವಾನರ ಬಳಿಗೆ ಬಂದು ಮೊಣಕಾಲು ಬಾಗಿಸಿ ಕುಳಿತು, ಕೈಜೋಡಿಸಿ ಈ ರೀತಿ ಕೇಳಿಕೊಂಡನು: ಭಗವಾನ್, ತಮಗೆ ಈಗ ವೃದ್ಧಾಪ್ಯ ಬರುತ್ತಿದೆ, ನೀವು ಹೆಚ್ಚು ತೊಂದರೆ ತೆಗೆದುಕೊಳ್ಳಬೇಕಾಗಿಲ್ಲ. ನಾನು ಭಿಕ್ಷು ಸಂಘವನ್ನು ನೋಡಿಕೊಳ್ಳುತ್ತೇನೆ. ಆದ್ದರಿಂದ ನೀವು ನನಗೆ ಭಿಕ್ಷುಗಳನ್ನು ವಹಿಸಬೇಕು. ಆದರೆ ಅದಕ್ಕೆ ಸಂಪೂರ್ಣ ಅನರ್ಹನಾಗಿದ್ದ ದೇವದತ್ತನ ಸಲಹೆ ಭಗವಾನರು ನಿರಾಕರಿಸಿದರು. ಇದರಿಂದ ದೇವದತ್ತನು ಅತಿಯಾಗಿ ಕೆರಳಿದನು, ಬಾಧೆಗೊಳಗಾದನು. ನಂತರ ಅಲ್ಲಿಂದ ಹೊರಟುಬಿಟ್ಟನು. ಬುದ್ಧ ಭಗವಾನರು ದೇವದತ್ತನ ಕ್ರಿಯೆಗೆ ತಾವಾಗಲಿ ಅಥವಾ ಸಂಘವಾಗಲಿ ಹೊಣೆಯಲ್ಲ ಎಂದು ತಿಳಿಸಿದರು.
ಇದರಿಂದ ದೇವದತ್ತನಿಗೆ ಬುದ್ಧ ಭಗವಾನರ ಮೇಲೆ ಅತೀವ ಸೇಡು ಭಾವನೆ ತುಂಬಿಕೊಂಡನು. ಆತನು ಅಜಾತಶತ್ರುವಿನ ಬಳಿ ಹೋಗಿ ತನ್ನ ತಂದೆಯಾದ ಬಿಂಬಿಸಾರನನ್ನು ರಾಜ್ಯಕ್ಕಾಗಿ ಕೊಲ್ಲಲು ಪ್ರೇರೇಪಿಸಿ, ತಾನು ಬುದ್ಧರನ್ನು ಕೊಲ್ಲಿಸಲು ನಿರ್ಧರಿಸಿದನು. ದೇವದತ್ತನು ಇದರ ಫಲಿತಾಂಶ ಹೀಗೆ ಹೇಳಿದರು. ಅಜಾತಶತ್ರುವು ತಂದೆಯನ್ನು ಕೊಂದು ತಾನೇ ರಾಜನಾಗುವುದು ಹಾಗು ದೇವದತ್ತನು ಬುದ್ಧರನ್ನು ಕೊಲ್ಲಿಸಿ ತಾನೇ ಭಿಕ್ಷು ಸಂಘದ ನಾಯಕನಾಗುವುದಾಗಿ ಹೇಳಿದನು. ಆ ಮೂರ್ಖ ಅಜಾತಶತ್ರು ಹಾಗೆಯೇ ತಂದೆಯನ್ನು ಕೊಲ್ಲಿಸಿ ರಾಜನಾದನು. ಹಾಗು ದೇವದತ್ತ ಬುದ್ಧರನ್ನು ಕೊಲ್ಲಲು ಕೊಲೆಗಡುಕರ ಗುಂಪನ್ನು ಕಳುಹಿಸಿದನು. ಆ ಕೊಲೆಗಡುಕರು ಪ್ರತ್ಯೇಕವಾಗಿ ಬುದ್ಧರನ್ನು ಕೊಲ್ಲಲು ಬಂದು ಅವರ ಉಪದೇಶ ಕೇಳಿ ಸೋತಪತ್ತಿ ಫಲ (ಶೀಲವಂತರಾಗಿ, ಮುಕ್ತಿಗೆ ಅರ್ಹ ವ್ಯಕ್ತಿಗಳಾಗಿ) ಪಡೆದು ತಮ್ಮ ಮನೆಗಳಿಗೆ ಹೊರಟರು. ಆಗ ದೇವದತ್ತನು ತಾನೇ ಕೊಲ್ಲಲು ನಿರ್ಧರಿಸಿದನು. ಅದರಂತೆಯೇ ಆತನು ಗಿಜ್ಝಕೂಟ ಪರ್ವತದ ಮೇಲೆ ಹತ್ತಿ ಅಲ್ಲಿಂದ ದೊಡ್ಡ ಬಂಡೆಯೊಂದನ್ನು ಭಗವಾನರು ಕುಳಿತಿರುವ ಸ್ಥಳದಲ್ಲಿ ಅವರ ಮೇಲೆ ಬೀಳುವಂತೆ ತಳ್ಳಿದನು. ಆದರೆ ಅದು ಬುದ್ಧ ಬಲದಿಂದ ಪಕ್ಕಕ್ಕೆ ಬಿದ್ದಿತು. ಕೇವಲ ಒಂದು ಚೂರು ಸಿಡಿದು ಅದು ಬುದ್ಧರ ಕಾಲಿಗೆ ಚುಚ್ಚಿತು. ಈ ರೀತಿಯಾಗಿ ಅಸಫಲನಾದ ಮೇಲೆ ದೇವದತ್ತನು ಮತ್ತೊಂದು ಉಪಾಯ ಮಾಡಿದನು. ರಾಜನ ಪ್ರಧಾನ ಆನೆಯನ್ನು (ನಾಲಾಗಿರಿ) ಅತಿಯಾಗಿ ಮದ್ಯಪಾನ ಮಾಡಿಸಿ, ಅದನ್ನು ಹಾಗೆ ಸ್ವೇಚ್ಛೆಯಾಗಿ ಬುದ್ಧರು ಇರುವ ಕಡೆ ಬಿಟ್ಟನು. ಆ ಆನೆಯು ಅತ್ಯಂತ ಭೀಷಣವಾಗಿ ರೌದ್ರಾವತಾರ ತಾಳಿ ನುಗ್ಗಿಬಂದುದನ್ನು ಕಂಡು ಗಾಬರಿಯಾದ ಆನಂದ ಥೇರರಂತು ಬುದ್ಧರ ಮುಂದೆ ರಕ್ಷಣಾಯುತವಾಗಿ ನಿಂತರು. ಆದರೆ ಅರಹಂತರಾದ ಶಾಂತ ಸ್ವರೂಪರಾದ ಭಗವಾನರು ಅಣುಮಾತ್ರವೂ ವಿಚಲಿತರಾಗದೆ ಅಪಾರ ಮೈತ್ರಿಯಿಂದ ಮಗುವನ್ನು ಸ್ಪಶರ್ಿಸುವ ಹಾಗೆ ಆನೆಯ ಸೊಂಡಿಲನ್ನು ಸ್ಪಶರ್ಿಸಿ ಅದನ್ನು ಪರಿಪೂರ್ಣವಾಗಿ ನಿಯಂತ್ರಿಸಿದರು. ನಂತರ ವಿಹಾರಕ್ಕೆ ಹೊರಟರು.
ಇಲ್ಲಿಯತನಕ ಜನರಿಗೆ ದೇವದತ್ತನ ದುಷ್ಕೃತ್ಯಗಳ ಅರಿವು ಇರಲಿಲ್ಲ. ಆದರೆ ಈಗ ಜನರು ಸ್ಪಷ್ಟವಾಗಿ ಅರಿತರು. ದೇವದತ್ತನಿಂದಲೇ ಅಜಾತಶತ್ರುವು ತಂದೆಯನ್ನು ಕೊಂದಿದ್ದು, ತಥಾಗತರನ್ನು ಕೊಲೆಗಡುಕರಿಂದ ಕೊಲ್ಲಲು ಪ್ರಯತ್ನಿಸಿದ್ದು, ದೇವದತ್ತ ಸ್ವತಃ ಬಂಡೆ ದೂಡಿ ಹತ್ಯೆಗೆ ಪ್ರಯತ್ನಿಸಿದ್ದು, ಈಗ ಪಟ್ಟದ ಆನೆ ನಾಲಾಗಿರಿಯನ್ನು ಬಿಟ್ಟು ಭಗವಾನರ ಹತ್ಯೆಗೆ ಪ್ರಯತ್ನಿಸಿದ್ದು ಜನರಿಗೆ ಸ್ಪಷ್ಟವಾಗಿ ಅರಿವಾಯಿತು. ಹಾಗು ಜನರಲ್ಲಿ ಅಪಾರ ಗಾಬರಿ ಉಂಟಾಯಿತು. ಜನರ ತಿಳುವಳಿಕೆಯನ್ನು ಅರಿತ ಅಜಾತಶತ್ರುವು ಮುಂದೆ ದೇವದತ್ತನಿಗೆ ಸಹಾಯ ಮಾಡುವುದನ್ನು ನಿಲ್ಲಿಸಿದನು. ನಾಗರಿಕರು ಸಹಾ ಆತನಿಗೆ ಭಿಕ್ಷಾಟನೆಗೆ ಬಂದಾಗ ಆಹಾರ ನೀಡಲು ನಿರಾಕರಿಸಿದರು.
ಆನಂತರ ದೇವದತ್ತನು ಸಂಘಬೇಧ ಮಾಡಲು ನಿರ್ಧರಿಸಿದನು. ಆತನು 500 ಭಿಕ್ಷುಗಳಿಗೆ ಮತಿಗೆಡಿಸಿ ತನ್ನೊಂದಿಗೆ ಗಯಾಸಿಸಗೆ ಕರೆದೊಯ್ಯದನು. ಕೆಲವು ಸಮಯದ ನಂತರ ಆ ಎಲ್ಲರೂ ಮತ್ತೆ ಹಿಂದಿರುಗಿ ಭಗವಾನರಲ್ಲಿ ಕ್ಷಮೆಯಾಚಿಸಿ ಮತ್ತೆ ಸಂಘವನ್ನು ಸೇರಿದರು. ಆದರೆ ಕೋಕಾಲಿಕ ಒಬ್ಬನು ಮಾತ್ರ ಸೇರಲಿಲ್ಲ, ಅವನು ದೇವದತ್ತನ ಮಿತ್ರನಾಗಿದ್ದನು. ಅವನು ದೇವದತ್ತನಿಗೆ ಕೋಪದಿಂದ ಒಮ್ಮೆ ತನ್ನ ಮೊಣಕಾಲಿನಿಂದ ದೇವದತ್ತನ ಎದೆಗೆ ಬಲವಾಗಿ ಹೊಡೆದನು. ಅದರ ಪರಿಣಾಮವಾಗಿ ದೇವದತ್ತನು ಒಂಬತ್ತು ತಿಂಗಳಕಾಲ ಕಾಯಿಲೆ ಬಿದ್ದನು.
ನಂತರ ಆತನಿಗೆ ಆತನ ಕೃತ್ಯಗಳ ಬಗ್ಗೆ ತೀವ್ರ ಪಶ್ಚಾತ್ತಾಪ ಉಂಟಾಯಿತು. ಆತನು ಬುದ್ಧ ಭಗವಾನರನ್ನು ನೋಡಲು ತೀವ್ರವಾಗಿ ಬಯಸಿದನು. ದೇವದತ್ತನು ಹೀಗೆಲ್ಲಾ ಹೇಳಿಕೊಳ್ಳುತ್ತಿದ್ದನು: ಆ ಮಹಾ ಕರುಣಾಮಯಿಗಳು ಎಂದಿಗೂ ಕ್ಷಣಮಾತ್ರಕ್ಕೂ ದ್ವೇಷಿಸಲಿಲ್ಲ, ಆದರೆ ಪರಮನೀಚನಾದ ನಾನೇ ಅವರಿಗೆ ಮಾಡಬಾರದ್ದನ್ನೆಲ್ಲಾ ಮಾಡಿದೆ.
ದೇವದತ್ತನಿಗೆ ಪಲ್ಲಕ್ಕಿಯಲ್ಲಿರಿಸಿಕೊಂಡು ಬುದ್ಧರನ್ನು ಕಾಣಲು ಕರೆದುಕೊಂಡು ಹೋದರು. ಆದರೆ ಮಾರ್ಗ ಮಧ್ಯದಲ್ಲೇ ಆತನು ಮರಣ ಹೊಂದಿದನು. ಆತನ ಶವದ ಪಲ್ಲಕ್ಕಿ ಕೆಳಗೆ ಇಳಿಸಿದಾಗ ಭೂಮಿಯೇ ತೆರೆದುಕೊಂಡು ಆತನನ್ನು ಅಗ್ನಿಸಮೇತ ಅವೀಚಿ ನರಕಕ್ಕೆ ಕರೆದೊಯ್ಯಿತು.
ರಾಜಕುಮಾರ ಅಜಾತಶತ್ರುವು ನಂತರ ಭಗವಾನರ ಅತಿ ಶ್ರದ್ಧಾಳು ಪರಮ ಭಕ್ತನಾದನು. ಧಮ್ಮಕ್ಕೆ, ಸಂಘಕ್ಕೆ ಮಹಾ ಸಹಾಯಕನಾದನು. ಆದರೂ ಸಹಾ ಕೆಟ್ಟ ಗೆಳೆತನದಿಂದ ತನ್ನ ತಂದೆಯ ಹತ್ಯೆಯ ಪ್ರತಿಫಲವಾಗಿ ಆತನು ಸಹಾ ತನ್ನ ಮಗನಿಂದ ಕೊಲ್ಲಲ್ಪಟ್ಟು, ಮರಣದ ನಂತರ ಅವೀಚಿ ನರಕದಲ್ಲಿ ಹುಟ್ಟಿದನು.
- ಧಮ್ಮಪದ ಅಟ್ಠಕಥಾ

THE DANGERS OF GAMBLING ಜೂಜಾಡುವಿಕೆ - ಅನಾಥಪಿಂಡಿಕನ ಪುತ್ರನ ವೃತ್ತಾಂತ

              ಜೂಜಾಡುವಿಕೆ - ಅನಾಥಪಿಂಡಿಕನ ಪುತ್ರನ ವೃತ್ತಾಂತ


ಒಮ್ಮೆ ಭಗವಾನರು ಜೇತವನ ಆರಾಮದಲ್ಲಿ ತಂಗಿದ್ದರು. ಶ್ರಾವಸ್ತಿಯಲ್ಲಿ ವಾಸಿಸುತ್ತಿದ್ದ ಅನಾಥಪಿಂಡಿಕನ ಮಗನು ಅತಿಯಾಗಿ ಜೂಜಾಡುವಿಕೆ ಹಾಗು ಮದ್ಯಪಾನ ಸೇವಿಸುವಿಕೆಗೆ ವಶವಾಗಿದ್ದನು. ಆತನಿಗೆ ತಂದೆಯಿಂದ ಅಪಾರ ಹಣವು ಆತನ ಆಥರ್ಿಕ ಅಭಿವೃದ್ಧಿಗೆ ನೀಡಲಾಗುತ್ತಿತ್ತು. ಆದರೆ ಆತನು ತನ್ನ ಅಭಿವೃದ್ಧಿ ಹಾಗು ಕ್ಷೇಮಕ್ಕೆ ಬಳಸದೆ ಆತನು ಕೆಟ್ಟ ಸಂಗಾತಿಗಳ ಜೊತೆಗೆ ಬಿದ್ದು, ಜೂಜಾಡುವಿಕೆಗೆ ಬಳಸಿ ತನ್ನ ಸಂಪತ್ತು ಸರ್ವನಾಶ ಮಾಡಿಕೊಂಡನು. ಅನಂತರ ಆತನಿಗೆ ಆಶ್ಚರ್ಯವಾಗುವ ರೀತಿ ಆತನ ಐಶ್ವರ್ಯವು ಆತನ ದಿನಬಳಕೆಯ ಅಗತ್ಯತೆಗೂ ಇಲ್ಲದಂತಾಗಿ ಕಾಣಲು ಆತನು ತನ್ನ ತಂದೆಯನ್ನು ಕಾಣಲು ಹೊರಟನು. ತಂದೆಯ ಬಳಿ ಈ ಬಾರಿ ಚೆನ್ನಾಗಿ ನಡೆದುಕೊಂಡು ಬಾಳುವೆ ಎಂದು ಹೇಳಿಕೊಂಡನು. ಅನಾಥಪಿಂಡಿಕನು ತನ್ನ ಪುತ್ರನಿಗೆ ಚೆನ್ನಾಗಿ ಬುದ್ಧಿವಾದ ಹೇಳಿದನು. ಆತನಿಗೆ ಜೂಜಿನ ದುಷ್ಪರಿಣಾಮಗಳನ್ನು ತಿಳಿಸಿ, 500 ಚಿನ್ನದ ನಾಣ್ಯಗಳನ್ನು ಕೊಟ್ಟು ಅದನ್ನು ವ್ಯಾಪಾರದಲ್ಲಿ ತೊಡಗಿಸುವಂತೆ ಹೇಳಿದನು. ಆದರೆ ಆ ಮೂರ್ಖ ಯುವಕನು ಈ ಬಾರಿಯೂ ಸಹಾ ಜೂಜಿನಲ್ಲಿ ಕಳೆದುಕೊಂಡು ಮತ್ತೆ ತಂದೆಯ ಬಳಿ ಬಂದನು. ಬಂದು ಹಿಂದಿನಂತೆಯೇ ವತರ್ಿಸಿದನು. ತಂದೆಯು ಆತನಿಗೆ ಮತ್ತೆ ಹಣ ಕೊಟ್ಟು ಈ ಬಾರಿ ಸರಿಯಾಗಿ ಜೀವಿಸುವಂತೆ ಬುದ್ಧಿವಾದ ಹೇಳಿ ನಂತರ ಬುದ್ಧ ಭಗವಾನರ ಬಳಿ ಬಂದು ತನ್ನ ಮಗನ ವೃತ್ತಾಂತ ಹೇಳಿಕೊಂಡನು. ಅನಾಥಪಿಂಡಿಕನ ಮಾತು ಕೇಳಿ ಬುದ್ಧ ಭಗವಾನರು ಹೀಗೆ ಹೇಳಿದರು: ಈತನು ಈಗ ಮಾತ್ರವಲ್ಲ, ಹಿಂದಿನ ಜನ್ಮದಲ್ಲೂ ಹೀಗೆಯೇ ವತರ್ಿಸಿದ್ದಾನೆ ಎಂದು ಆ ಸನ್ನಿವೇಶ ತಿಳಿಸಿದರು.
ಬಹುಕಾಲದ ಹಿಂದೆ ಬ್ರಹ್ಮದತ್ತನು ರಾಜನಾಗಿರುವಾಗ ಅದೇ ಬನಾರಸ್ನಲ್ಲಿ ಬೋಧಿಸತ್ತರು ಶ್ರೀಮಂತ ವ್ಯಾಪಾರಿಯಾಗಿ ಹುಟ್ದಿದ್ದರು. ಅವರು ಅನೇಕ ದಾನ ಕ್ರಿಯೆಗಳನ್ನು ಮಾಡುತ್ತಿದ್ದರು. ಅವರಲ್ಲಿ ಅನ್ನದಾನವು ಒಂದಾಗಿತ್ತು. ಅವರು ಬಡವರಿಗೆ ದೊಡ್ಡದಾದ ವಾಸ ಮಂದಿರವನ್ನು ಕಟ್ಟಿಸಿದ್ದರು. ನಾನಾರೀತಿಯ ಸೇವಾಕಾರ್ಯಗಳನ್ನು ಮಾಡುತ್ತಿದ್ದರು. ಅವರಿಗೆ ಜೀವನ ಕಾಲ ಮುಗಿಯುತ್ತಾ ಬಂತು. ಆಗ ಅವನು ಪುತ್ರನನ್ನು ಕರೆದು ದಾನ ಮಂದಿರದಲ್ಲಿ ದಾನವನ್ನು ನಿರಂತರ ನೀಡುವಂತೆ ಕೇಳಿಕೊಂಡರು. ನಂತರ ಬೋಧಿಸತ್ತರು ಮರಣದ ನಂತರ ಪುಣ್ಯ ಫಲವಾಗಿ ಸಕ್ಕದೇವ ಇಂದ್ರರಾಗಿ ಜನಿಸಿದರು. ಮತ್ತು ತಮ್ಮ ಪುತ್ರನು ಹೇಗೆ ಜೀವಿಸುತ್ತಿದ್ದಾನೆ ಎಂದು ಅರಿಯಲು ಇಷ್ಟಪಟ್ಟರು. ಅವರು ಗಮನಿಸಿದಾಗ ಅವರ ಪುತ್ರನ ಅವಸ್ಥೆಯು ಅತ್ಯಂತ ದಾರುಣವಾಗಿತ್ತು, ಯಾತನಾಮಯವಾಗಿತ್ತು. ಆಗ ಅವರು ತಮ್ಮ ಬುದ್ಧಿಯಿಲ್ಲದ ಮಗನ ಮೇಲೆ ಕರುಣೆ ತಾಳಿ ಮಗನ ಮುಂದೆ ಪ್ರತ್ಯಕ್ಷವಾದರು ಹಾಗು ಆತನಿಗೆ ಸರ್ವ ಇಚ್ಛೆ ಪ್ರಸಾದಕ ಮಡಿಕೆ ನೀಡಿದರು. ಅದು ಇರುವವರೆಗೆ ಆತನು ಬೇಡಿದ್ದನ್ನು ನೀಡುವುದೆಂದು ಹೇಳಿ, ಜೋಪಾನವಾಗಿ ಇಟ್ಟುಕೋ ಎಂದು ಹೇಳಿ ಹೊರಟರು. ಆದರೆ ಈ ಪುತ್ರನು ಆ ಮಡಿಕೆಯಿಂದ ಸಿಗುವ ಸರ್ವ ಐಶ್ವರ್ಯವನ್ನು ಜೂಜಿಗಾಗಿ ಹಾಗು ಮದ್ಯಕ್ಕಾಗಿ ವಿನಿಯೋಗಿಸುತ್ತಿದ್ದನು.
ಒಂದುದಿನ ಆತನು ಅಮಲಿನಲ್ಲಿ ಇದ್ದಾಗ ಮಡಿಕೆಯನ್ನು ಮೇಲಕ್ಕೆಸೆದು ಹಿಡಿಯುವ ಆಟ ಆಡುತ್ತಿದ್ದನು. ಆಗ ಅದು ಕೈಜಾರಿ ಕೆಳಗೆ ಬಿದ್ದು ಪುಡಿಯಾಯಿತು. ಇದಾದನಂತರ ಆತನ ಐಶ್ವರ್ಯವು ಕ್ಷಯವಾಗಿ ಆತನು ಮತ್ತೆ ದುಃಖಾವಸ್ಥೆಗೆ ಬಿದ್ದನು. ಹೀಗೆ ಆತನಿಗೆ ಉತ್ಕೃಷ್ಟವಾದುದು ಸಕ್ಕರಿಂದ ಸಿಕ್ಕಿದರೂ ಅದನ್ನು ಉಳಿಸಿಕೊಂಡು, ಬಳಸಿಕೊಂಡು ಹೋಗುವ ಪ್ರಜ್ಞೆಯಿಲ್ಲದೆ, ಇದ್ದ ಅಮೂಲ್ಯ ಐಶ್ವರ್ಯ ಹಾನಿ ಮಾಡಿಕೊಂಡನು.
ಈ ರೀತಿಯಾಗಿ ಯಾರು ಜೂಜು ಹಾಗು ಮದ್ಯಪಾನದ ಚಟವನ್ನು ಹಿಡಿದಿರುವರೋ ಅವರು ಐಶ್ವರ್ಯ ಹೀನರಾಗಿ ಈ ಲೋಕದಲ್ಲಿ ದುಃಖಿತರಾಗಿ ಮತ್ತೆ ಪರಲೋಕದಲ್ಲಿಯೂ ಸಹಾ ದುರ್ಗತಿಗೆ ಬೀಳುವರು ಮತ್ತು ಜನರಿಂದ ಅವರಿಗೆ ಗೌರವವು ಸಹಾ ದೊರೆಯುವುದಿಲ್ಲ.
- ಪರಾಭವ ಸುತ್ತ ಅರ್ಥ ವರ್ಣನೆ

THE CONSEQUENCES OF DANCING ನೃತ್ಯ - ಶ್ರೀಮಂತ ಕುಮಾರನ ಕಥೆ

                           ನೃತ್ಯ - ಶ್ರೀಮಂತ ಕುಮಾರನ ಕಥೆ :


ಬನಾರಸ್ನಲ್ಲಿ ಒಬ್ಬ ಕುಮಾರನು 80 ದಶಲಕ್ಷಗಳಷ್ಟು ಚಿನ್ನದ ನಾಣ್ಯಗಳ ಕುಟುಂಬದಲ್ಲಿ ಹುಟ್ಟಿದನು. ಆತನ ತಂದೆ-ತಾಯಿಗಳು ಈ ಐಶ್ವರ್ಯವೇ ಸಾಕು, ತಮ್ಮ ಕುಮಾರನಿಗೆ ಸಹಾಯ ನೀಡುತ್ತದೆ ಎಂದು ಭಾವಿಸಿ ಆತನಿಗೆ ಯಾವುದೇ ವೃತ್ತಿಶಿಕ್ಷಣ ನೀಡಲಿಲ್ಲ. ಕೇವಲ ಆತನಿಗೆ ನೃತ್ಯ ಹಾಗು ಸಂಗೀತ ಕಲಿಸಿದರು. ಅದೇ ನಗರದಲ್ಲಿ 80 ದಶಲಕ್ಷ ಚಿನ್ನದ ನಾಣ್ಯವುಳ್ಳ ಕುಟುಂಬದಲ್ಲಿ ಕುಮಾರಿಯು ಇದ್ದಳು. ಆಕೆಗೂ ಸಹಾ ನೃತ್ಯ, ಸಂಗೀತವನ್ನೇ ಕಲಿಸಿದ್ದರು. ಅವರಿಬ್ಬರಿಗೆ ಯೌವ್ವನದಲ್ಲಿ ವಿವಾಹ ಮಾಡಿದರು. ಇಬ್ಬರ ತಂದೆ-ತಾಯಿಗಳು ತೀರಿಹೋದಾಗ ಈ ಎಲ್ಲಾ ಐಶ್ವರ್ಯವು ಕುಮಾರನ ಕೈಗೆ ಬಂದಿತು.
ಕುಮಾರನಿಗೆ ರಾಜನಿಂದ ದಿನಕ್ಕೆ ಮೂರುಬಾರಿ ಕರೆ ಬರುತ್ತಿತ್ತು. ಆ ನಗರದಲ್ಲಿ ಕೆಲವು ಕುಡುಕರು ಕುಮಾರನಿಗೆ ಮದ್ಯಪಾನ ಕಲಿಸಲು ನಿರ್ಧರಿಸಿದರು. ಕುಮಾರನು ರಾಜನಲ್ಲಿಗೆ ಹೋಗಿ ಮತ್ತೆ ಹಿಂದಿರುಗಿ ಬರುವುದು ಅವರಿಗೆ ಗೊತ್ತಿತ್ತು. ಆದ್ದರಿಂದ ಅವರು ಆತನು ಹಿಂದಿರುಗಿ ಬರುವ ಸ್ಥಳದಲ್ಲಿ ಮದ್ಯಪಾನ ಮಾಡಿ, ಸುಟ್ಟಿದ್ದ ಮಾಂಸವನ್ನು ತಿನ್ನುತ್ತಾ ಈತನನ್ನು ಕಂಡು ಈ ರೀತಿ ಉದ್ಗಾರ ತೆಗೆಯುತ್ತಿದ್ದರು:
ಓಹ್, ಕುಮಾರನು ದೀಘರ್ಾಯುವಾಗಲಿ, ಆತನಿಂದಾಗಿಯೇ ನಾವು ಈ ರೀತಿ ಆನಂದದಿಂದ ಇದ್ದೇವೆ. ಅವರನ್ನು ಕಂಡು ಕುಮಾರನು ಅವರಿಗೆ ಏನನ್ನು ಕುಡಿಯುತ್ತಿರುವಿರಿ ಎಂದು ಪ್ರಶ್ನಿಸಿದಾಗ ಅವರು ಹೀಗೆ ಪ್ರತಿಯಾಗಿ ಉತ್ತರಿಸಿದರು: ಈ ಪಾನೀಯವು ಜಗತ್ತಿನ ಪಾನಿಯಗಳಲ್ಲೇ ಸರ್ವ ಉತ್ಕೃಷ್ಟ ಎಂದರು. ಆಗ ಕುಮಾರನು ಅದನ್ನು ಸ್ವಲ್ಪ ತರಿಸಿ ಪ್ರತ್ಯೇಕವಾಗಿ ಕುಡಿದನು. ಆ ಕುಡುಕರು ಜೊತೆಗೂಡಿದರು. ನಂತರ ಕುಡುಕ ಹಿಂಬಾಲಕರ ಸಂಖ್ಯೆ ಹೆಚ್ಚಾಯಿತು. ಈಗ ಕುಮಾರನು ಪಾನೀಯಕ್ಕೆ 200 ಅಥವಾ 300 ವರಹ ಒಂದು ಸಮಯಕ್ಕೆ ನೀಡುತ್ತಿದ್ದನು. ಆ ಅಮಲಿನಲ್ಲಿ ಆತನು ಸಂಗೀತಗಾರರನ್ನು ಆಮಂತ್ರಿಸಿ ಒಂದು ಸಮಯಕ್ಕೆ ಸಾವಿರ ವರಹ ನೀಡುತ್ತಿದ್ದನು. ಕೆಲವೇ ವರ್ಷಗಳಲ್ಲಿ ಕುಮಾರನ ಸರ್ವ ಐಶ್ವರ್ಯವೂ ನಾಶವಾಯಿತು. ಈಗ ಉಳಿದ ಪತ್ನಿಯ ಐಶ್ವರ್ಯ ಬಳಸಿದನು. ಕೆಲವು ವರ್ಷಗಳ ನಂತರ ಆಕೆಯ ಸರ್ವ ಐಶ್ವರ್ಯ ಖಚರ್ು ಮಾಡಿದನು. ನಂತರ ಆತನು ಮನೆ, ಸಾಮಗ್ರಿ, ಉದ್ಯಾನಗಳು ಹಾಗು ಗದ್ದೆಗಳು ಇತ್ಯಾದಿಯನ್ನು ಮಾರಿದನು. ಅದೆಲ್ಲವನ್ನು ಕುಡಿತಕ್ಕೆ, ಸಂಗೀತಕ್ಕೆ, ನೃತ್ಯಕ್ಕೆ ಬಳಸಿದನು. ಕೆಲವು ಕಾಲದ ನಂತರ ಅವರ ಮನೆಯು ಸಹಾ ಬೇರೊಬ್ಬನ ಸ್ವತ್ತಾಯಿತು. ಅವರು ಮನೆಯಿಲ್ಲದವರಾದರು.
ಅವರಿಗೆ ಇರಲು ಪ್ರದೇಶವಿಲ್ಲದೆ ಒಂದು ಮುರಿದ ಮನೆಯ ಗೋಡೆಯ ಆಶ್ರಯ ಪಡೆದರು ಹಾಗು ಭಿಕ್ಷೆ ಬೇಡುತ್ತಿದ್ದರು. ಹೀಗೆಯೇ ಇದ್ದಾಗ ಭಿಕ್ಷುಗಳಿಗೆ ಆಹಾರ ನೀಡುತ್ತಿದ್ದ ಸ್ಥಳದಲ್ಲಿ ಬಂದರು. ಅಲ್ಲಿ ಬಿಸಾಡಿದ ಆಹಾರ ತೆಗೆದುಕೊಂಡರು. ಇದನ್ನು ಕಂಡ ಭಗವಾನರು ಅವರ ಭವಿಷ್ಯ ಅರಿತು ಮುಗುಳುನಗೆ ಬೀರಿದರು. ಅವರ ಹಿಂಬಾಲಕ ಆನಂದ ಥೇರರು ಭಗವಾನರ ಮುಗುಳುನಗೆಗೆ ಕಾರಣ ಏನೆಂದು ಪ್ರಶ್ನಿಸಿದಾಗ, ಸರ್ವಜ್ಞ ಬುದ್ಧರು ಉತ್ತರಿಸಿದರು: ನೋಡು ಆನಂದ, ಆ ಕುಮಾರನನ್ನು ನೋಡು. ಆತನಿಗೆ 160 ದಶಲಕ್ಷ ಚಿನ್ನದ ಐಶ್ವರ್ಯ ಇತ್ತು. ಈಗ ಭಿಕ್ಷುಕನಾಗಿದ್ದಾನೆ. ಆದರೆ ಆತನು ಮುಂದೆ ಉತ್ತಮ ಜೀವನ ಜೀವಿಸಿ ಅರಹಂತ (ಮುಕ್ತ) ನಾಗುತ್ತಾನೆ. ಹಾಗು ಆತನು ಪತ್ನಿಯು ಸೋತಪನ್ನಳಾಗುತ್ತಾಳೆ. ಅವರು ಯುವಕರಾಗಿದ್ದಾಗ ಅತಿ ಉತ್ಕೃಷ್ಟ ನಾಗರಿಕರಾಗಿದ್ದರು. ಆದರೆ ಈಗ ಇಂತಹ ಅಪಮಾನ ಪರಿಸ್ಥಿತಿಗೆ ಬಂದಿರುವರು. ಈಗ ಆತನ ಸ್ಥಿತಿಯು ಒಣಗಿದ ಕೆಸರಿಗೆ ಸಿಕ್ಕ ಗಿಡುಗನಂತೆ ಆಗಿದೆ. ಇತ್ತು ಮೀನು ಸಿಗುವ ಹಾಗಿಲ್ಲದ ಹಾಗೆ ಆಗಿದೆ. ಇದನ್ನು ವಿವೇಕಿ ಮನುಷ್ಯನು ಕಂಡು ಜೀವನ ಅರ್ಥಮಾಡಿಕೊಳ್ಳಲಿ. ನೃತ್ಯ, ಗೀತೆ ಹಾಗು ಕುಡಿತಕ್ಕೆ ಸಿಲುಕಿ ಮುಂದೆ ಅಪಾರ ದುಃಖವನ್ನು ಅನುಭವಿಸಬೇಕಾಗುವುದೆಂದು ಅರಿತು ಮೊದಲೇ ಅವೆಲ್ಲದರಿಂದ ಸಂಯಮದಿಂದಿರು.
-ಪರಾಭವ ಸುತ್ತ ಅರ್ಥ ವಿವರಣೆ

DON"T WANDER UNTIMELY ಅವೇಳೆಯಲ್ಲಿ ಅಡ್ಡಾಡುವಿಕೆ - ಕಂಠಹಾರ ಕದ್ದ ಘಟನೆ

                ಅವೇಳೆಯಲ್ಲಿ ಅಡ್ಡಾಡುವಿಕೆ - ಕಂಠಹಾರ ಕದ್ದ ಘಟನೆ


ಒಮ್ಮೆ ಓರ್ವ ರಾಜನು ಬನಾರಸನ್ನು ಆಳುತ್ತಿದ್ದನು. ರಾಜನು ಹಾಗು ಆತನ ಮಕ್ಕಳು ಸ್ನಾನಕ್ಕಾಗಿ ನದಿಗೆ ಹೋದರು. ಅವರಿಗಾಗಿ ಒಂದು ಪ್ರದೇಶ ನಿದರ್ಿಷ್ಟವಾಗಿತ್ತು. ಅವರೆಲ್ಲರೂ ತಮ್ಮ ವಸ್ತ್ರಾಭರಣ ಕಳಚಿ ಅದನ್ನು ದಡದಲ್ಲಿರಿಸಿ ಅವರು ನದಿಗೆ ಇಳಿದರು. ಕಾವಲುಗಾರನು ಸಹಾ ಅವರ ವಸ್ತ್ರಾಭರಣಗಳಿಗೆ ಕಾವಲು ಕಾಯುತ್ತಾ ಈ ಕಡೆ ಆ ಕಡೆ ತಿರುಗಾಡುತ್ತಿದ್ದನು. ಹಾಗೆಯೇ ರಾಜ ಪರಿವಾರದ ಆಟವನ್ನು ವೀಕ್ಷಿಸುತ್ತಿದ್ದನು. ಆ ಸಮಯದಲ್ಲಿ ಕೆಲವು ಪಾದಚಾರಿಗಳು ಆ ಕಡೆ ಬಂದರು.
ಅಲ್ಲಿ ವಾಸಿಸುತ್ತಿದ್ದ ಒಂದು ಕೋತಿಯು ಆ ವಸ್ತ್ರಾಭರಣಗಳಲ್ಲಿ ಹೊಳೆಯುತ್ತಿದ್ದ ಕಂಠಹಾರವನ್ನು ಗಮನಿಸಿತು. ಅದು ಮರದಿಂದ ಮೆಲ್ಲನೆ ಇಳಿಯಿತು. ಹಾಗೆಯೇ ಕಾವಲುಗಾರನಿಗೆ ಗೊತ್ತಾಗದ ಹಾಗೆ ಚಿನ್ನದ ಕಂಠಹಾರ ಅಪಹರಿಸಿ ಓಡಿಹೋಯಿತು.
ರಾಜ ಪರಿವಾರವು ಸ್ನಾನದ ನಂತರ ವಸ್ತ್ರಗಳನ್ನು ಧರಿಸಿದರು. ಅವರಿಗೆ ಚಿನ್ನದ ಕಂಠಹಾರವು ಮಾಯವಾಗಿರುವುದು ಕಂಡುಬಂದಿತು. ಅವರು ಹಾಗೆಯೇ ಕಾವಲುಗಾರನಿಗೆ ಪ್ರಶ್ನಿಸಿದರು. ಆತನಿಗೆ ಚಿಂತೆಯು ಆಳವಾಗಿ ಮುಟ್ಟಿತು. ಆತನು ಹಾದುಹೋದ ಪಾದಚಾರಿಗಳ ಬಗ್ಗೆ ಸಂಶಯಿಸಿದನು. ಹಾಗೆಯೇ ಆತನು ಒಬ್ಬನ ಬಗ್ಗೆ ಸಂಶಯಿಸಿ ಆತನೇ ಮಾಡಿರಬಹುದು ಎಂದು ಹೇಳಿದನು. ರಾಜಭಟರು ಆ ವ್ಯಕ್ತಿಯನ್ನು ಹಿಡಿದರು, ಆತನು ನಿರಪರಾಧಿಯಾಗಿದ್ದರೂ ಸಹಾ ರಾಜನ ಮುಂದೆ ಹಾಗು ಕಾವಲುಗಾರನ ಸಂಶಯದ ಮುಂದೆ ಭಯಪಟ್ಟು ತಾನು ನಗರದ ಸಿತಾವನಿಗೆ ನೀಡಿದೆ ಎಂದನು. ಸಿತಾನನಿಗೆ ಪ್ರಶ್ನಿಸಿದಾಗ ಆತನು ಭಯಪಟ್ಟು ಪಂಡಿತನಿಗೆ ನೀಡಿದೆ ಎಂದುಬಿಟ್ಟನು. ಪಂಡಿತನಿಗೆ ಪ್ರಶ್ನಿಸಿದಾಗ ಆತನು ತಿಂಗಳಲ್ಲಿ ಹಿಂದಿರುಗಿಸುವೆ ಎಂದನು.
ನಂತರ ಪಂಡಿತನು ಸಿತಾನನ್ನು ಹಾಗು ಪಾದಚಾರಿಯನ್ನು ಪ್ರಶ್ನಿಸಿದನು. ಆತನು ಅವರಲ್ಲಿ ನಿಷ್ಕಪಟತೆ ಕಂಡು ಬೇರೆ ರೀತಿಯಲ್ಲಿ ಚಿಂತಿಸಿದನು. ನಂತರ ಪಂಡಿತನು ಅವರಲ್ಲಿ ಈ ಪ್ರಶ್ನೆ ಕೇಳಿದನು. ಏನೆಂದರೆ ದಡದ ಬಳಿ ಯಾವ ಯಾವ ಪ್ರಾಣಿಗಳು ಬರುತ್ತದೆ ಎಂದು ಪ್ರಶ್ನಿಸಿದನು. ಅವರು ಕೆಲವು ಕೋತಿಗಳು ಬರುತ್ತವೆ ಎಂದರು. ನಂತರ ಪಂಡಿತನು ಉಪಾಯವೊಂದನ್ನು ಹೂಡಿದನು, ಕೆಲವು ಕೋತಿಗಳನ್ನು ಹಿಡಿಸಿದನು. ಪ್ರತಿ ಕೋತಿಗೂ ಒಂದೊಂದು ಹೂವಿನ ಹಾರವನ್ನು ಹಾಕಿಸಿ, ಅವುಗಳನ್ನು ನದಿ ದಡದಲ್ಲಿ ಬಿಟ್ಟನು.
ಹೂಹಾರ ಹಾಕಿದ ಕೋತಿಗಳನ್ನು ಕಂಡು ಕಂಠಹಾರ ಕದ್ದ ಕೋತಿಯು ತಾನು ಏನೂ ಕಡಿಮೆ ಎಂದು ಕಂಠಹಾರ ಹಾಕಿಕೊಂಡು ಆ ಗುಂಪಿನಲ್ಲಿ ಸೇರಿತು. ಇದನ್ನು ಕಾಡುತ್ತಿದ್ದ ಪಂಡಿತನು ಆ ಕೋತಿಯನ್ನು ಹಿಡಿಸಿದನು. ಹಾಗು ರಾಜನ ಮುಂದೆ ಸರ್ವವನ್ನು ವಿಷದಪಡಿಸಿದನು. ರಾಜನಿಗೆ ಇದನ್ನು ಕೇಳಿ ಆನಂದವಾಯಿತು. ಆತನು ಪಂಡಿತನಿಗೆ ಕೃತಜ್ಞತೆ ಅಪರ್ಿಸಿದನು. ಏಕೆಂದರೆ ಮೂರು ನಿರಪರಾದಿಗಳು ಶಿಕ್ಷೆಗೆ ಒಳಗಾಗುತ್ತಿದ್ದರು. ಆದ್ದರಿಂದಲೇ ಅವೇಳೆಯಲ್ಲಿ ನಿರಾಕರಿಸಲ್ಪಟ್ಟ ಪ್ರದೇಶಗಳಿಗೆ ಹೋಗುವುದು ಅಪಾಯಕರ ಎಂದು ತಿಳಿಯುತ್ತದೆ. ಅದು ಸಂಶಯವನ್ನು ಉತ್ಪತ್ತಿ ಮಾಡುತ್ತದೆ. ಅಪರಾಧಗಳು ತಲೆಗೆ ಬರುತ್ತದೆ. ತೊಂದರೆಗಳಿಗೆ ಸಿಕ್ಕಿಕೊಳ್ಳಬೇಕಾಗುತ್ತದೆ. ಆದರೆ ಪಂಡಿತರಾದವರು ಹೀಗೆ ಸಂಶಯದಿಂದ, ತೊಂದರೆಯಿಂದ ಮುಕ್ತರಾಗುತ್ತಾರೆ.

THE CONSEQUENCES OF DRINKING ಕುಡಿತ - ವಿಶಾಖಳಿಗೆ ನೀಡಿದ ಬೋಧನೆ

                      ಕುಡಿತ - ವಿಶಾಖಳಿಗೆ ನೀಡಿದ ಬೋಧನೆ:


ಒಮ್ಮೆ ಭಗವಾನರು ಜೇತವನ ವಿಹಾರದಲ್ಲಿ ತಂಗಿದ್ದರು. ಆ ಸಮಯದಲ್ಲಿ ಮದ್ಯಪಾನ ಮಾಡುವ ಹಬ್ಬವು ಇತ್ತು. ಅದನ್ನು ಡಂಗೂರ ಸಾರಿಸಿ ಜನರು ಮಾದಕ ಪಾನೀಯಗಳಲ್ಲಿ ನಿರತರಾಗುವಂತೆ ಮಾಡುತ್ತಿದ್ದರು. ಸುಮಾರು 500 ಸ್ತ್ರೀ ಬಂಧುಗಳು ವಿಶಾಖಳಿಗೆ ಮದ್ಯಪಾನದ ಹಬ್ಬಕ್ಕೆ ಆಹ್ವಾನಿಸಿದರು. ಆದರೆ ಆಕೆ ಅದನ್ನು ನಿರಾಕರಿಸಿದಳು ಹಾಗು ಮದ್ಯಪಾನದ ದುಷ್ಪರಿಣಾಮಗಳನ್ನು ಹೇಳಿದಳು. ಆಗ ಅವರು ಆಕೆಗೆ ಬುದ್ಧರಲ್ಲಿಗೆ ಹೋಗಿ ಅವರಿಗೆ ದಾನ ನೀಡಿ ಅವರಿಂದ ಧಮರ್ೊಪದೇಶ ಕೇಳುವಂತೆ ಹೇಳಿ ತಮ್ಮ ಮನರಂಜನೆಯ ಕಡೆ ಹೊರಟರು. ವಿಶಾಖಳು ಪರಮಶ್ರೇಷ್ಠ ಸ್ತ್ರೀ ಉಪಾಸಕಿಯಾಗಿದ್ದಳು. ಆಕೆ ವಿಹಾರಗಳಿಗೆ ಭಿಕ್ಷುಗಳ ಪಾಲನೆಗೆ, ಧರ್ಮದ ಕ್ಷೇಮಾಭಿವೃದ್ಧಿಗಳಿಗೆ ಅಪಾರ ಹಣವನ್ನು ಬಳಸಿದ್ದಳು. ಆಕೆ ಬುದ್ಧರಿಗೆ ದಾನವನ್ನು ಹಗಲಿನಲ್ಲಿ ನೀಡುತ್ತಿದ್ದಳು. ಹಾಗು ಸಂಜೆ ವಿಹಾರಕ್ಕೆ ಹೂ ಹಾಗು ಶುದ್ಧ ಗಂಧಗಳಿಂದ ಹೋಗಿ ಪ್ರವಚನ ಕೇಳುತ್ತಿದ್ದಳು.
ಆಕೆ ತಥಾಗತರಲ್ಲಿ ಹೋದ ಕೆಲವು ಸಮಯದ ನಂತರ ಆಕೆಯ ಐನೂರು ಸ್ತ್ರೀ ಬಂಧುಗಳು ಮತ್ತೆ ಹಿಂತಿರುಗಿ ಬಂದರು. ವಿಶಾಖಳು ಬುದ್ಧರಿಗೆ ಗಂಧ ಹಾಗು ಸುಪುಷ್ಪಗಳನ್ನು ಅಪರ್ಿಸಿದ ನಂತರ ಆಕೆಯೊಂದಿಗೆ ಅವರು ಸೇರಿದರು. ಆಗ ವಿಶಾಖಳು ಅವರಿಗೆ ಧರ್ಮ ಬೋಧನೆ ಕೇಳುವಂತೆ ಸ್ಫೂತರ್ಿ ನೀಡಿದಳು. ಹಾಗೆಯೇ ಅವರು ಹೋದ ನಂತರ ಆ ಐನೂರರಲ್ಲಿ ಕೆಲವರು ಕುಡಿತದ ಪರಿಣಾಮದಿಂದ ಬುದ್ಧರ ಎದುರಿನಲ್ಲೇ ಹಾಡುಗಳನ್ನು ಹಾಡುವುದು ಹಾಗು ಕುಣಿಯುವುದು ಪ್ರಾರಂಭ ಮಾಡಿದರು. ಮತ್ತೆ ಕೆಲವರು ತಮ್ಮಲ್ಲೇ ಜಗಳವಾಡಲು ಪ್ರಾರಂಭಿಸಿದರು. ಆಗ ದಯಮಯ ಬುದ್ಧ ಭಗವಾನರು ತಮ್ಮ ಶರೀರದಿಂದ ಪ್ರಕಾಶಮಯ ಕಿರಣಗಳನ್ನು ಪ್ರಕಾಶಿಸಿದರು. ಅದರಿಂದ ಅವರು ಹೆದರುವಂತಾಯಿತು. ಹಾಗೆಯೇ ಆ ಕಿರಣಗಳು ಇಡೀ ಪ್ರದೇಶವನ್ನು ಕತ್ತಲೆಯನ್ನಾಗಿ ಪರಿವರ್ತನೆ ಮಾಡಿದವು. ಆ ಪ್ರದೇಶವೆಲ್ಲಾ ಲೋಕಂತರಿಯ ನರಕದಲ್ಲಿ ಇರುವಂತೆ ಗಾಢ ಕತ್ತಲೆಯಿಂದ ಆವರಿಸಿತು. ಈ ಭಯಾನಕ ಕತ್ತಲೆಯಿಂದ ಅವರಲ್ಲಿ ಭೀತಿ ಆವರಿಸಿ ಅಳುವುದಕ್ಕೆ ಪ್ರಾರಂಭಿಸಿದರು.
ಅದೇ ಸಮಯದಲ್ಲಿ ಬುದ್ಧ ಭಗವಾನರು ತಮ್ಮ ಪೀಠದಿಂದ ಮಾಯವಾದರು. ಹಾಗು ಸಮೀಪದ ಬೆಟ್ಟದ ಉನ್ನತದಲ್ಲಿ ಪ್ರತ್ಯಕ್ಷರಾಗಿ ಅಲ್ಲಿಂದ ಪರಮ ತೇಜಸ್ಸಿನಿಂದ ಇಡೀ ಲೋಕವೇ ಬೆಳಕಾಗುವಂತೆ, ಸೂರ್ಯನನ್ನು ಮೀರಿದ ವರ್ಣದ, ಆನಂದದಿಂದ ಕೂಡಿದ ಹೊಳಪಿನಿಂದ ಪ್ರಕಾಶಿಸಿದರು. ಆಗಲೇ ಮತ್ತು ಇಳಿದ ಆ ಸ್ತ್ರೀಯರಿಗೆ ಈ ಗಾಥೆ ಹೇಳಿದರು:
ಈ ನಗು ಏತಕ್ಕಾಗಿ (ಯಾವ ಮಟ್ಟದ್ದು) ಇಡೀ ಜಗತ್ತೇ ನಿರಂತರ ಸುಡುತ್ತಿರುವಾಗ? ಅಂಧಕಾರದಲ್ಲಿ ಆವೃತವಾಗಿರುವ ನೀವು ಮಹಾ (ಅಮರತ್ವದ) ಬೆಳಕನ್ನು ಹುಡುಕುವುದಿಲ್ಲವೆ?
ನಂತರ... ಹೀಗೆಯೇ ಬೋಧಿಸಿದರು. ಆ ಸುತ್ತದ ಅಂತಿಮ ಹಂತದಲ್ಲಿ ಅವರೆಲ್ಲರೂ ಸೋತಾಪತ್ತಿಯ ಫಲವನ್ನು ಪಡೆದರು. ನಂತರ ಭಗವಾನರು ತಮ್ಮ ಸ್ಥಾನಕ್ಕೆ ಹಿಂದಿರುಗಿದರು. ಆಗ ವಿಶಾಖಳು ಭಗವಾನರಿಗೆ ಅತಿ ಪೂಜ್ಯನಿಯವಾಗಿ ವಂದಿಸಿ, ಈ ರೀತಿ ಕೇಳಿದಳು: ಭಗವಾನ್, ಜನರಿಗೆ ಪಾಪಲಜ್ಜೆ ಹಾಗು ಪಾಪಭಯದಿಂದ ದೂರ ಮಾಡುವ ಈ ಸುರ ಹಾಗು ವರುಣ (ಮಾದಕ ಪಾನೀಯ) ಗಳ ಉದ್ಭವ ಹೇಗಾಯಿತು, ಭಗವಾನರು ನಮಗೆ ಹೇಳಬೇಕು, ನಾನು ಹೀಗೆ ಪ್ರಾಥರ್ಿಸಿಕೊಳ್ಳುತ್ತೇನೆ ಎಂದು ಕೇಳಿದಾಗಿ ಭಗವಾನರು ಹೀಗೆ ನುಡಿದರು:
ಅತಿ ಹಿಂದೆ ಬ್ರಹ್ಮದತ್ತ ರಾಜನು ಬನಾರಸ್ನ್ನು ಆಳುತ್ತಿದ್ದಾಗ, ಸುರನೆಂಬ ಬೇಟೆಗಾರನಿದ್ದ. ಅವನು ಯುವಕನಾಗಿದ್ದ. ಅವನು ಹೊಸ ಆಟ ಹುಡುಕಲು ಹಿಮಾಲಯ ಪರ್ವತಗಳ ಪ್ರಾಂತ್ಯಕ್ಕೆ ಹೋದನು. ಅಲ್ಲಿ ಅರಣ್ಯದಲ್ಲಿ ಮೂರು ಜನಗಳ ಎತ್ತರದ ವಿಶಾಲ ಮರವಿತ್ತು. ಅಲ್ಲಿ ಮುಗುವು ಕವಲೊಡೆದು ಅದರಿಂದ ಮೂರು ಶಾಖೆಗಳು ಹರಡಿದ್ದವು ಮತ್ತು ಆ ಕವಲೊಡೆದ ಶಾಖೆಯಲ್ಲಿ ಒಂದು ಹಳ್ಳವಿತ್ತು. ಅಲ್ಲಿ ಮಳೆ ಬಿದ್ದಾಗ ಆ ಹಳ್ಳ ತುಂಬಿಕೊಳ್ಳುತ್ತಿತ್ತು. ಅಲ್ಲಿ ಆ ಮರವೇ ಅಲ್ಲದೆ ಅಳಲೆಕಾಯಿ, ನೆಲ್ಲಿಕಾಯಿಯ ಮರಗಳು ಮತ್ತು ಮೆಣಸಿನ ಬಳ್ಳಿಗಳು ಆ ಮರವನ್ನು ಸುತ್ತಿರುತ್ತಿತ್ತು. ಕೆಲವೊಮ್ಮೆ ಈ ಕಾಯಿಗಳು ಸಣ್ಣದಾಗಿ ಆ ಫಲಗಳು ಉದುರಿ ಈ ಹಳ್ಳಕ್ಕೆ ಬೀಳುತ್ತಿತ್ತು. ಸಮೀಪದಲ್ಲೇ ಪ್ರಾಂತ್ಯದವರು ಭತ್ತವನ್ನು ಬೆಳೆಯುತ್ತಿದ್ದರು. ಅಲ್ಲಿ ವಾಸವಾಗಿದ್ದ ಗಿಣಿಗಳು ಆ ಭತ್ತದ ಗೊಂಚಲನ್ನು ಕತ್ತಿ ಸೀಳಾಗಿರುವ ಮರದ ಮೇಲೆ ಕುಳಿತು ತಿನ್ನುತ್ತಿದ್ದವು. ಹಾಗೆ ತಿನ್ನುವಾಗ ಕೆಲವೊಮ್ಮೆ ಭತ್ತದ ಗೊಂಚಲುಗಳೇ ಹಳ್ಳದಲ್ಲಿ ಬೀಳುತ್ತಿತ್ತು. ಹಾಗೆಯೇ ಅವು ಕೆಲವು ಕಾಳುಗಳು, ಬೇಳೆಗಳು, ಧಾನ್ಯಗಳನ್ನು ತಿನ್ನುವಾಗ ಅವು ಸಹಾ ಹಳ್ಳದಲ್ಲಿ ಬೀಳುತ್ತಿತ್ತು. ಹಾಗೆಯೇ ಸೂರ್ಯನ ಕಿರಣಗಳಿಂದ ಆ ನೀರು ಬಿಸಿಯಾಗುತ್ತಿತ್ತು. ನಂತರ ಆ ಹಳ್ಳವು ನೀರು ಮೂಲದ ರಕ್ತದ ಹಾಗೆ ಕೆಂಪಾಗಿ ಕಾಣುತ್ತಿತ್ತು.
ಬೇಸಿಗೆಯ ಕಾಲದಲ್ಲಿ ಗಿಳಿಗಳು, ಗುಬ್ಬಚ್ಚಿಗಳು, ಪಾರಿವಾಳಗಳು, ಮೈನಾಹಕ್ಕಿಗಳು ಬಾಯಾರಿಕೆಯಾದಾಗ ಆ ಹಳ್ಳದಲ್ಲಿ ನೀರು ಕುಡಿದು ಮತ್ತೇರಿ ಆ ಮರದ ಬುಡದಲ್ಲಿ ಬೀಳುತ್ತಿತ್ತು. ಅಮಲು ಇಳಿದ ನಂತರ ಪುನಃ ಹಾರಿಹೋಗುತ್ತಿತ್ತು. ಕೋತಿಗಳು ಸಹಾ ನೀರು ಕುಡಿದು ಅವು ಸಹಾ ಮತ್ತೇರಿ ಬಿದ್ದು ಅಮಲಿಳಿದ ನಂತರ ಅವು ಹೊರಟು ಹೋಗುತ್ತಿದ್ದವು. ಈ ದೃಶ್ಯವು ಬೇರೆಗಾರ ಸುರನ ಗಮನ ಸೆಳೆಯಿತು. ಆಗ ಆತ ಹೀಗೆ ಚಿಂತಿಸಿದನು: ಒಂದುವೇಳೆ ಇದು ವಿಷವೇ ಆಗಿದ್ದರೆ ಇವೆಲ್ಲಾ ಪುನಃ ಪುನಃ ಜೀವಂತ ಆಗುತ್ತಿರಲಿಲ್ಲ. ಆದರೆ ಇವುಗಳ ಪ್ರಜ್ಞೆ ಮಾತ್ರ ಕೆಲವುಕಾಲ ತಪ್ಪಿಸುತ್ತದೆ. ಆದರೆ ಪುನಃ ಎದ್ದಾಗ ಉತ್ಸಾಹದಿಂದ ಹಾರಿ ಹೋಗುತ್ತವೆ ಆದ್ದರಿಂದ ಇವು ವಿಷವಲ್ಲವೆಂದು ನಿರ್ಧರಿಸಿದನು. ಆತನು ಸಹಾ ಅದನ್ನು ಕುಡಿದನು. ಅಮಲೇರಿದಾಗ ಮಾಂಸ ತಿನ್ನುವ ಬಯಕೆಯಾಯಿತು. ಹಾಗೆಯೇ ಆತನು ಮರದ ಬಳಿ ಬೆಂಕಿ ಹಚ್ಚಿದನು ಮತ್ತು ಆತನು ಪಕ್ಷಿಗಳನ್ನು, ಪ್ರಾಣಿಗಳನ್ನು ಹಿಡಿದು ಅದನ್ನು ಬೆಂಕಿಯಿಂದ ಸುಟ್ಟು ತಿನ್ನುತ್ತಿದ್ದನು. ಆತನು ಒಂದು ಕೈಯಲ್ಲಿ ಹಿಡಿದು ತಿನ್ನುತ್ತಾ, ಮತ್ತೊಂದು ಕೈಯನ್ನು ತಲೆಯ ಬಳಿ ಆಡಿಸುತ್ತಿದ್ದನು. ಆಗ ಆ ತುಚ್ಚ ಆನಂದ ಅನುಭವಿಸುತ್ತಿದ್ದನು. ಹೀಗೆಯೇ ತಿನ್ನುತ್ತಾ, ಕುಡಿಯುತ್ತಾ ಮೂರು ದಿನಗಳನ್ನು ಆ ಬುಡದಲ್ಲಿ ಕಳೆದನು. ಈ ಮರದ ಸ್ವಲ್ಪ ದೂರದಲ್ಲೇ ವರುಣನೆಂಬ ಕಪಟ ಸನ್ಯಾಸಿಯಿದ್ದನು. ಆತನಿಗೆ ಸುರನು ಮಧ್ಯವನ್ನು ಹಾಗು ಮಾಂಸವನ್ನು ತೆಗೆದುಕೊಂಡು ಅದರ ವರ್ಣನೆ ಮಾಡಿ ನೀಡಿದನು. ಇಬ್ಬರೂ ಅದರಿಂದ ಆನಂದಿಸಿದರು. ಇದನ್ನು ಮೊದಲು ಸುರನು ಗಮನಿಸಿದ್ದರಿಂದ ಹಾಗು ವರುಣನಿಂದ ಮೊದಲು ನೋಡಲ್ಪಟ್ಟಿದ್ದರಿಂದ ಇದರ ಹೆಸರು ಸುರ ಹಾಗು ವರುಣನೆಂದು ಈ ಮಾದಕ ಪಾನಿಯಗಳು ಪ್ರಸಿದ್ಧಿಯಾಯಿತು.
ಈ ಇಬ್ಬರು ಸ್ನೇಹಿತರು ಆ ಮರದ ಬಳಿ ಕೆಲವುಕಾಲ ಕಳೆದನಂತರ ಹಳ್ಳಿಗೆ ಹೋಗಲು ಇಚ್ಛಿಸಿದರು. ಹಾಗೆ ಜೊತೆಗೆ ಈ ಪಾನೀಯಗಳನ್ನು ತೆಗೆದುಕೊಂಡು ಹೋಗಲು ಇಚ್ಛಿಸಿದರು. ಅದಕ್ಕಾಗಿ ಅವರು ಬಿದಿರುಗಳಲ್ಲಿ ಅದನ್ನು ತುಂಬಿಸಿ, ಹಳ್ಳಿಗಳನ್ನು ದಾಟಿ ನಗರಕ್ಕೆ ಬಂದರು ಹಾಗು ರಾಜನಿಗೆ ತಾವು ಸ್ವಾದಿಷ್ಟ ಪೇಯವನ್ನು ತಂದಿರುವುದಾಗಿ ಹೇಳಿ ಕಳುಹಿಸಿದರು.
ಆಗ ರಾಜನು ಅವರಿಗೆ ಪ್ರವೇಶ ನೀಡಲು ಆಜ್ಞಾಪಿಸಿದನು. ಆಗ ಅವರು ರಾಜನಿಗೆ ತಾವು ತಂದಿದ್ದನ್ನು ತೋರಿಸಿದರು. ಆಗ ರಾಜನು ಅವರಿಂದ ಮಾದಕ ಪಾನೀಯ ತೆಗೆದುಕೊಂಡು ಕುಡಿದು ಮೂರುದಿನ ಅಮಲಿನಲ್ಲಿದ್ದನು, ಪ್ರಜ್ಞೆ ತಪ್ಪಿದ್ದನು. ನಂತರ ರಾಜನು ಅವರಿಗೆ ಹೆಚ್ಚು ಮದ್ಯ ತರಲು ಹೇಳಿದನು. ಆಗ ಅವರು ರಾಜನಿಗೆ ಅದು ಹಿಮಾಲಯದ ಅರಣ್ಯದಲ್ಲಿ ದೊರೆಯುವಂತಹುದು ಎಂದು ಹೇಳಿದರು. ಆಗಲೂ ರಾಜನು ಅವರಿಗೆ ಹೆಚ್ಚು ತರಲು ಆಜ್ಞಾಪಿಸಿದನು. ಅವರು ಅದರಂತೆ ಸಾಗಾಣಿಕೆ ಮಾಡತೊಡಗಿದರು. ಅವರು ಮೂರುಬಾರಿ ಹಾಗೆ ಸಾಗಾಣಿಕೆ ಮಾಡಿ ಮುಂದೆ ಹಾಗೆ ಮಾಡುವುದು ಅತ್ಯಂತ ಕಷ್ಟಕರ ಎಂದು ಹೇಳಿದರು. ಆದರೆ ತಾವು ಹೇಳುವ ಸರಕು ಕೊಟ್ಟರೆ ನಗರದಲ್ಲೇ ಅದನ್ನು ತಯಾರು ಮಾಡುತ್ತೇವೆ ಎಂದು ಹೇಳಿದರು. ಆಗ ರಾಜನು ಹಾಗೆಯೇ ಅವರು ಹೇಳಿದ್ದೆಲ್ಲಾ ಕೊಡಿಸಿದನು. ಆನಂತರ ಕೆಲವು ಸೇವಕರೊಂದಿಗೆ ಮರದ ಹಳ್ಳದಲ್ಲಿ ದೊರೆಯುವಂತಹ ಎಲ್ಲಾ ಸಾಮಗ್ರಿಯನ್ನು ಏಪರ್ಾಟು ಮಾಡಿದನು.  ಅಳಲೇಕಾಯಿ, ನೆಲ್ಲಿಕಾಯಿ, ಭತ್ತ, ಧಾಯ, ಮರದ ಕಾಂಡ ಇತ್ಯಾದಿಗಳನ್ನು ದೊಡ್ಡ ಪಾತ್ರೆಗೆ ತುಂಬಿದರು. ನಂತರ ಮೊದಲಬಾರಿಗೆ ನಗರದಲ್ಲೇ ಅದನ್ನು ತಯಾರಿಸಿದರು. ಆ ದಿನ ನಗರದಲ್ಲಿ ಸರ್ವರೂ ಅದನ್ನು ಸೇವಿಸಿ ಮತ್ತರಾದರು.
ಕೆಲವು ಕಾಲದ ನಂತರ ಅವರು ಕುಡಿತವನ್ನೇ ಅವಲಂಬಿಸಿ ತಮ್ಮ ದೈನಂದಿನ ಕಾರ್ಯ ಮಾಡುವುದನ್ನು ಬಿಟ್ಟರು. ಹೀಗೆಯೇ ಅವರು ಸೋಮಾರಿಗಳಾಗಿ ದರಿದ್ರರಾದರು. ಅವರ ಆರೋಗ್ಯ ಕೆಟ್ಟು ರೋಗಿಗಳಾದರು ಮತ್ತು ಕುರೂಪಿಗಳಾದರು. ನಂತರ ಆ ನಗರ ಕೆಲವೇ ಕಾಲದಲ್ಲಿ ಪ್ರೇತಗಳ ನಗರಗಳ ಹಾಗೆ ಅಂತ್ಯಗೊಂಡಿತು.
ನಂತರ ಸುರ ಬೇಟೆಗಾರ ಹಾಗು ವರುಣ ಸನ್ಯಾಸಿಯು ಆ ನಗರವನ್ನು ತೊರೆದು, ಬನಾರಸ್ಗೆ ಹೊರಟರು. ಆಗ ರಾಜನಿಗೆ ಇಬ್ಬರು ವರ್ತಕರು ಬಂದಿರುವುದಾಗಿ, ಹಾಗು ಹಿಂದೆಂದೂ ಕಾಣದ, ಕೇಳದ ಸ್ವಾದಿಷ್ಟ ಪಾನೀಯ ತಂದಿರುವುದಾಗಿ ಹೇಳಿ ಕಳುಹಿಸಿದರು. ಆಗ ರಾಜನು ಭೇಟಿಯಾಗಿ ಅವರಿಗೆ ಅವನು ಹೇಳಿದ ಸಾಮಗ್ರಿ ಒದಗಿಸಿದನು. ಆಗ ರಾಜನು ಮತ್ತು ಪ್ರಜೆಗಳು ಅದನ್ನು ಸ್ವಾದಮಾಡಿ ಅದಕ್ಕೆ ಅಂಟಿಕೊಂಡರು. ಪ್ರಜೆಗಳು ಮತ್ತೆ ಮತ್ತೆ ಮದ್ಯ ಸೇವಿಸಿ ತೃಪ್ತರಾಗದೆ, ಅದಕ್ಕೆ ಬದ್ಧರಾಗಿ ತಮ್ಮ ಕೆಲಸ ಕಾರ್ಯ ಬಿಟ್ಟರು. ಹೀಗೆ ಸೋಮಾರಿಗಳಾಗಿ ದರಿದ್ರರಾದರು ಮತ್ತು ನಾಗರಿಕರು ರೋಗಿಷ್ಟರಾಗಿ ಆ ನಗರವು ಭ್ರಷ್ಟವಾಯಿತು, ನಾಶವಾಯಿತು.
ನಂತರ ಆ ಇಬ್ಬರು ವರ್ತಕರು ಬನಾರಸನ್ನು ವಜರ್ಿಸಿ ಸಾಕೇತು ನಗರಕ್ಕೆ ಬಂದರು. ಅಲ್ಲಿಯೂ ಹಾಗೆಯೇ ಮದ್ಯಪಾನ ಪರಿಚಯಿಸಿ ಆ ನಗರವನ್ನು ಹಾಳು ಮಾಡಿದರು.
ಆ ನಗರವನ್ನು ಬಿಟ್ಟು ಶ್ರಾವತ್ತಿ ನಗರಕ್ಕೆ ಬಂದರು. ಅಲ್ಲಿ ಸಬ್ಬಮಿತ್ತ (ಸರ್ವಮಿತ್ರ) ರಾಜ್ಯವಾಳುತ್ತಿದ್ದನು. ಸುರ ಮತ್ತು ವರುಣರಿಗೆ ಏನೇನು ಬೇಕೋ ಅದೆಲ್ಲವನ್ನು ನೀಡಿದರು. ರಾಜನಿಂದ ನೆಲ್ಲಿಕಾಯಿ, ಅಳಲೆಕಾಯಿ, ಭತ್ತ ಹಾಗು ಇನ್ನಿತರ ಸಾಮಗ್ರಿ ತರಿಸಿಕೊಂಡು ಐನೂರು ದೊಡ್ಡ ಮಡಿಕೆಗಳಷ್ಟು ಮದ್ಯ ತಯಾರಿಸಿದರು. ಪ್ರತಿಯೊಂದು ಮಡಿಕೆಯ ಹತ್ತಿರ ಒಂದು ಬೆಕ್ಕನ್ನು ಕಟ್ಟಿಹಾಕಿದರು. ನಂತರ ಆ ಮಡಿಕೆಗಳು ಉಕ್ಕಿ ನೊರೆಗೂಡಿ ಚೆಲಲ್ಪಟ್ಟವು. ಆಗ ಹತ್ತಿರದಲ್ಲಿದ್ದ ಬೆಕ್ಕುಗಳು ಆ ದ್ರವವನ್ನು ನೆಕ್ಕಿ ಕುಡಿದು ಮತ್ತೇರಿ ಪ್ರಜ್ಞೆ ತಪ್ಪಿದವು. ಅವು ಆ ಸ್ಥಿತಿಯಲ್ಲಿದ್ದಾಗ ಇಲಿಗಳು ಬಂದು ಆ ಬೆಕ್ಕುಗಳಿಗೆ ಕಿವಿ ಹಾಗು ಮೂಗನ್ನು ಕಡಿದವು, ಕೂದಲನ್ನು ಕಿತ್ತವು, ಹೊಪ್ಪಳವನ್ನು ಹರಿದವು. ಇದನ್ನು ಗಮನಿಸಿದ ಸೇವಕರು ಆ ಕ್ಷಣವೇ ರಾಜನಿಗೆ ಸಂದೇಶ ಕಳುಹಿಸಿದರು. ಆಗ ರಾಜನಿಗೆ ಈ ವರ್ತಕರು ತಯಾರಿಸಿರುವುದು ವಿಷವೇ ಎಂದು ನಿಧರ್ಾರಿತವಾಯಿತು. ಆಗ ಅವರಿಬ್ಬರಿಗೆ ಗಲ್ಲಿಗೇರಿಸಲು ಆಜ್ಞಾಪಿಸಿದನು. ಅವರಿಗೆ ಗಲ್ಲಿಗೇರಿಸುವ ಮುಂಚೆ ಅವರು ಆ ಮಾದಕ ಪಾನೀಯಗಳಿಗೆ ತೀವ್ರ ಆಕ್ಷೇಪಪಟ್ಟರು. ನಂತರ ರಾಜನು ಆ 500 ಮಡಿಕೆಗಳನ್ನು ಒಡೆಯಲು ಆಜ್ಞಾಪಿಸಿದನು. ಅದನ್ನು ಸೇವಕರು ಮಾಡುತ್ತಿದ್ದಾಗ ಆ ಬೆಕ್ಕುಗಳು ಮತ್ತೆ ಎಚ್ಚರಗೊಂಡವು. ಅಮಲಿನಿಂದ ಎದ್ದು ಅವನ್ನು ಕಂಡು ಆಶ್ಚರ್ಯಗೊಂಡ ಸೇವಕರು ಮತ್ತೆ ರಾಜರಿಗ ಇದನ್ನು ತಿಳಿಸಿದರು. ಆಗ ರಾಜನಿಗೆ ಹೀಗೆ ಅನಿಸಿತು. ಇದು ವಿಷವೇ ಆಗಿದ್ದರೆ ಬೆಕ್ಕುಗಳು ಮರಣ ಪಡೆಯಬೇಕಾಗಿತ್ತು. ಆದರೆ ಇವು ಮತ್ತೆ ಜಾಗೃತಗೊಂಡಿರುವುದು ಖಂಡಿತವಾಗಿಯೂ ಇದು ಸ್ವಾದಿಷ್ಟ ಪೇಯವೆಂದು ಆಲೋಚಿಸಿದನು. ಆಗ ಆತನು ಇದನ್ನು ಸೇವಿಸಲು, ಪಡೆಯಲು ನಿರ್ಧರಿಸಿದನು. ನಂತರ ರಾಜನು ಇಡೀ ನಗರವನ್ನು ಶೃಂಗಾರಗೊಳಿಸುವಂತೆ ಆಜ್ಞಾಪಿಸಿದನು. ನಂತರ ವಿಶೇಷ ಸಭಾಂಗಣದಲ್ಲಿ ಎಲ್ಲಾ ಮಂತ್ರಿಗಳನ್ನು, ನಾಗರಿಕರನ್ನು ಆಹ್ವಾನಿಸಿದನು. ತಾನು ಸಹ ಎತ್ತರವಾದ ಪೀಠದಲ್ಲಿ ಕುಳಿತನು. ನಂತರ ಎಲ್ಲರಿಗೂ ಹೊಸದಾದ ಪೇಯ ಸೃಷ್ಟಿಯಾಗಿದೆ, ಇದು ಎಲ್ಲರೂ ಸೇವಿಸಿ ಎಂದು ಹೇಳಿದನು.
ಅದೇಕಾಲಕ್ಕೆ ತಾವತಿಂಸ ಲೋಕದ ಅಧಿಪತಿ ಸಕ್ಕದೇವ ಪೃಥ್ವಿಯ ಕಡೆಗೆ ವೀಕ್ಷಿಸುತ್ತಿದ್ದನು. ಯಾರು ತನ್ನ ತಂದೆ-ತಾಯಿಗಳನ್ನು, ಸೋದರ-ಸೋದರಿಯರನ್ನು, ಬಂಧುಬಳಗವನ್ನು ಸಲಹುತ್ತಿದ್ದಾರೆ ಎಂದು ಗಮನಿಸುತ್ತಿದ್ದನು. ಹಾಗು ಯಾರು ಕರುಣಾಮಯಿಗಳು ಹಾಗು ಸಂತತ್ವದ ರೀತಿ ಇದ್ದಾರೆ, ಯಾರು ಕಾಯ, ವಾಚಾ, ಹೃದಯದಿಂದ ಶೀಲವನ್ನು ಪಾಲಿಸುತ್ತಿದ್ದಾರೆ, ಅಲ್ಲದೆ ಯಾರು ದಾನವನ್ನು ಅಭಿವೃದ್ಧಿಗೊಳಿಸುತ್ತಿದ್ದಾರೆ, ಇದನ್ನು ಆತನು ಸಹಸ್ರ ರೀತಿಯಿಂದ ಕಾಣುತ್ತಿದ್ದನು. ಆಗ ಆತನಿಗೆ ಸರ್ವಮಿತ್ರ ರಾಜನು ಕಾಣಿಸಿದನು ಹಾಗು ಆತನು ಮದ್ಯಪಾನವನ್ನು ಸೇವಿಸಲು ಸಿದ್ಧನಾಗಿರುವುದು ಕಂಡನು. ಆಗ ಆತನಿಗೆ ಈ ರೀತಿಯ ಅರಿವಾಯಿತು. ಏನೆಂದರೆ ಸರ್ವಮಿತ್ರ ಪಾನೀಯವನ್ನು ಸೇವಿಸಿದರೆ ಇದರಿಂದ ಇಡೀ ಜಂಭುದ್ವೀಪವೇ (ಭಾರತ) ಹಾಳಾಗುತ್ತದೆ ಎಂದು ಅರಿವಾಯಿತು. ನಂತರ ಆತನು ಆ ಪಾನಿಯಗಳ ನಿರೋಧ ಮಾಡಲು ಬ್ರಾಹ್ಮಣ ವೇಷಧರಿಸಿ ರಾಜನ ಮುಂದೆ ಶೂನ್ಯ ಆಕಾಶದಲ್ಲಿ ನಿಂತನು. ಆತನ ಕೈಯಲ್ಲಿ ಹೆಂಡದ ಕುಡಿಕೆಯಿತ್ತು. ನಂತರ ರಾಜನಿಗೆ ಹೀಗೆ ಹೇಳಿದನು: ನೋಡಿಲ್ಲಿ, ನನ್ನ ಅಂಗೈಯಲ್ಲಿರುವ ಪಾತ್ರೆ ಮಾರಾಟಕ್ಕಿದೆ.
ರಾಜನು ಬ್ರಾಹ್ಮಣ ವೇಷಧಾರಿ ಸಕ್ಕನನ್ನು ನೋಡಿದನು. ನಂತರ ಹೀಗೆ ವಿಚಾರಿಸಿದನು. ಬ್ರಾಹ್ಮಣರೆ, ನೀವು ಎಲ್ಲಿಂದ ಬಂದಿರುವಿರಿ, ಓ ಬ್ರಾಹ್ಮಣ ನೀವು ಆಕಾಶದಲ್ಲಿ ಪೂರ್ಣ ಚಂದಿರನಿಗಿಂತಲೂ ಚೆನ್ನಾಗಿ ಪ್ರಕಾಶಿಸುತ್ತಿದ್ದೀರಿ, ನಿಮ್ಮ ಶರೀರದಿಂದ ಕಿರಣಗಳು ಮಿಂಚಿಗಿಂತಲೂ ಚೆನ್ನಾಗಿ ಪ್ರತಿಫಲಿಸುತ್ತಿವೆ, ನೀವೇನಾದರೂ ತಾವತಿಂಸ ಸುಗತಿಯಿಂದ ಬಂದಿರುವ ದೇವತೆಯೇ? ಇದನ್ನು ನೀವು ಮರೆಮಾಚದೆ ಹೇಳಿ, ನೀವು ಗಾಳಿಯಲ್ಲಿ ಹೇಗೆ ನಿಂತಿರುವಿರಿ ಎಂದರೆ ಮೋಡವು ಆಕಾಶದಲ್ಲಿ ನಿಂತಹಾಗೆ ನಿಂತಿರುವಿರಿ, ನೀವು ದೇವತೆಗಳ ಋದ್ದಿಶಕ್ತಿಯನ್ನು ಪ್ರಕಾಶಿಸಿರುವಿರಿ?
ಆಗಲು ಸಹ ಬ್ರಾಹ್ಮಣ ಮತ್ತೆ ಗಾಳಿಯಲ್ಲಿ ನಡೆದಾಡುತ್ತಾ ಮತ್ತೆ ಹೀಗೆ ಹೇಳಿದನು: ಇಲ್ಲಿದೆ ಈ ಕುಡಿಕೆ, ಮಾರಟಕ್ಕೆ ಕೊಳ್ಳುವೆಯಾ?
ಆಗ ರಾಜನು ಈ ರೀತಿ ಪ್ರಕಾಶಿಸಿದನು: ನೀವು ಯಾರು, ಯಾವರೀತಿಯ ದೇವತೆ ನೀವು? ಈ ಕುಡಿಕೆಯಲ್ಲಿ ಏನಿದೆ?
ನಂತರ ಸಕ್ಕದೇವ ಈ ರೀತಿಯಾಗಿ ಉತ್ತರಿಸಿದನು: ರಾಜ, ಈ ಕುಡಿಕೆಯು ತುಪ್ಪದಿಂದ ಕೂಡಿಲ್ಲ ಅಥವಾ ಅತ್ಯುತ್ತಮ ಎಣ್ಣೆಯಿಂದಲೂ ಕೂಡಿಲ್ಲ ಅಥವಾ ಜೇನು-ಬೆಲ್ಲದಿಂದಲೂ ಕೂಡಿಲ್ಲ ಅಥವಾ ಅತ್ಯುತ್ತಮ ಮಧುವಿನಿಂದಲೂ ಕೂಡಿಲ್ಲ. ಈ ಮಡಿಕೆಯು ಪಾಪವನ್ನು ಪ್ರವದರ್ಿಸುವುದಂತಾಗಿದೆ, ಕೇಳು ಹಾಗು ಅಥರ್ೈಸಿಕೋ. ಆ ಮಡಿಕೆಯಲ್ಲಿರುವುದರ ಅನರ್ಥಗಳು ಎಂದು ಹೇಳಿ ಮದ್ಯಪಾನದ ದುಷ್ಪರಿಣಾಮಗಳನ್ನು ಮೊದಲಿನ  ಗಾಥೆಗಳಿಂದ ಆ ಸಕ್ಕದೇವ ಹೇಳಿದನು:
1) ರಾಜನೇ, ಒಮ್ಮೆ ಈ ಮದ್ಯವನ್ನು ಸೇವಿಸಿದಾಗ ಆತನು ಸಮತಲ ನೆಲದಲ್ಲಿಯೂ ನಡೆಯುತ್ತಾನೆ, ಹಾಗೆಯೇ ಹೊಯ್ದಾಡಿ ನಿಯಂತ್ರಣ ತಪ್ಪಿ ಕೆಳಕ್ಕೆ ಬೀಳುತ್ತಾನೆ, ಆತನು ಹಳ್ಳದಲ್ಲಿ ಬೀಳುತ್ತಾನೆ, ಮುಳ್ಳಿನ ಮೇಲಿನ ಮಲದಲ್ಲಿ, ಪ್ರಾಣಿಗಳ ಗಲೀಜಿನಲ್ಲಿ ಬೀಳುತ್ತಾನೆ. ಯಾವುದು ತಿನ್ನಲು ಅತಿ ಅಯೋಗ್ಯವೋ ಅದನ್ನೆಲ್ಲಾ ತಿನ್ನುತ್ತಾನೆ. ರಾಜನೇ, ಈ ಪಾತ್ರೆಯಲ್ಲಿರುವುದು ಅಂತಹ ಅನರ್ಥ ಪಾಪ ಪಾನೀಯ, ಮಾರಾಟಕ್ಕಿದೆ ಕೊಂಡುಕೊಳ್ಳುವೆಯಾ?
2) ರಾಜನೇ, ಇದನ್ನು ಸೇವಿಸಿ ಮತ್ತನಾದವನು ತನ್ನ ಮನಸ್ಸಿನ ಮೇಲಿನ ನಿಯಂತ್ರಣ ಕಳೆದುಕೊಳ್ಳುತ್ತಾನೆ ಹಾಗು ಆತನು ಪಶುಗಳ ಹಾಗೆ ನೀರಿನಲ್ಲಿ, ಹುಲ್ಲಿನಲ್ಲಿ ಸುತ್ತಾಡುತ್ತಾನೆ, ಆತನು ನಿಸ್ಸಹಾಯಕನಾಗುತ್ತಾನೆ, ಆತನು ಅರ್ಥ, ಕಾಲವ್ಯರ್ಥ ಮಾಡುವ ನೃತ್ಯ, ಗೀತೆ ಹಾಗು ಸಂಗೀತಗಳ ಕೂಟದಲ್ಲಿ ಭಾಗಿಯಾಗುತ್ತಾನೆ. ರಾಜನೇ, ಈ ಪಾತ್ರೆಯಲ್ಲಿರುವುದು ಅಂತಹ ಅನರ್ಥ ಪಾಪ ಪಾನೀಯ, ಮಾರಾಟಕ್ಕಿದೆ ಕೊಂಡುಕೊಳ್ಳುವೆಯಾ?
3) ರಾಜನೇ, ಇದನ್ನು ಸೇವಿಸಿ ಅಮಲೇರಿದವನು ತನ್ನ ವಸ್ತ್ರವನ್ನು ವಜರ್ಿಸಿ ನಗ್ನನಾಗುತ್ತಾನೆ. ಹೀಗೆಯೇ ಆತನು ಪಾಪಲಜ್ಜೆ ಹಾಗು ಪಾಪಭಯರಹಿತನಾಗಿ ಹಳ್ಳಿಯಲ್ಲಿ, ನಗರದಲ್ಲಿ, ಹೆದ್ದಾರಿಗಳಲ್ಲಿ ನಡೆದಾಡುತ್ತಾನೆ. ಹೀಗೆಯೇ ಆತನು ದಾರಿಗಳಲ್ಲಿ ಎಲ್ಲೆಂದರಲ್ಲಿ ಪ್ರಜ್ಞೆತಪ್ಪಿ ಬಿದ್ದು ನಿದ್ರಿಸುತ್ತಾನೆ. ರಾಜನೇ, ಈ ಪಾತ್ರೆಯಲ್ಲಿರುವುದು ಅಂತಹ ಅನರ್ಥ ಪಾಪ ಪಾನೀಯ, ಮಾರಾಟಕ್ಕಿದೆ ಕೊಂಡುಕೊಳ್ಳುವೆಯಾ?
4) ರಾಜನೇ, ಒಮ್ಮೆ ಮದ್ಯವನ್ನು ಸೇವಿಸಿದವನು ಆತನು ಹಾಗೆ ಬಿದ್ದಿರುವಾಗ ಮರದ ಕೊಂಬೆಯ ಹಾಗೆ ಬಿದ್ದಿರುತ್ತಾನೆ. ನಂತರವೂ ಆ ಸ್ಥಿತಿಯಿಂದ ಎದ್ದಾಗ ಆತನು ನಗ್ನಾವಸ್ಥೆಯಲ್ಲಿಯೇ ನಾಚಿಕೆರಹಿತವಾಗಿ ನೃತ್ಯ ಮಾಡುತ್ತಾನೆ. ರಾಜನೇ, ಈ ಪಾತ್ರೆಯಲ್ಲಿರುವುದು ಅಂತಹ ಅನರ್ಥ ಪಾಪ ಪಾನೀಯ, ಮಾರಾಟಕ್ಕಿದೆ ಕೊಂಡುಕೊಳ್ಳುವೆಯಾ?
5) ರಾಜನೇ, ಈ ಪಾನೀಯವನ್ನು ಸೇವಿಸಿದವನು ಮತ್ತನಾಗಿ ಉರಿಯುತ್ತಿರುವ ಕೆಂಡದ ಮೇಲೆ ಬೀಳುತ್ತಾನೆ, ಆತನ ಶರೀರವನ್ನು ನರಿಗಳು ತಿನ್ನುತ್ತವೆ. ಆದರೂ ಅದರ ಬಗ್ಗೆ ಅವನಿಗೆ ಅರಿವಿರುವುದಿಲ್ಲ, ಅವನಿಗೆ ಮತ್ತೆ ಪ್ರಜ್ಞೆ ಬರುವುದು ಕಷ್ಟವಾಗುತ್ತದೆ. ಆಗ ಆತನು ಮಾಡಬಾರದ್ದನ್ನು ಮಾಡಿ, ಬಂಧಿಖಾನೆಗೆ ಹೋಗಬೇಕಾಗುತ್ತದೆ. ಆತನು ಸಂಪತ್ತು ಕಳೆದುಕೊಂಡು ಗೋಳಾಡುತ್ತಾನೆ. ರಾಜನೇ ಈ ಪಾತ್ರೆಯಲ್ಲಿರುವುದು ಅಂತಹ ಅನರ್ಥ ಪಾಪ ಪಾನೀಯ, ಮಾರಾಟಕ್ಕಿದೆ ಕೊಂಡುಕೊಳ್ಳುವೆಯಾ?
6. ರಾಜನೇ, ಒಮ್ಮೆ ಒಬ್ಬನು ಪಾನೀಯವನ್ನು ಸೇವಿಸಿ ಮತ್ತನಾಗಿರುವಾಗ ಆತನು ಸಭೆಗೆ ಹೋದರೆ ಅಲ್ಲಿ ಹೇಳಬಾರದ್ದನ್ನು ಮಾತನಾಡುತ್ತಾನೆ. ಅದ್ಯಾವುದು ಸಹಾ ಆತನಿಗೆ ಅರಿವಿರುವುದಿಲ್ಲ ಮತ್ತು ಆತನು ತಾನು ವಸ್ತ್ರವನ್ನು ಹೊಂದಿರಬೇಕೆ ಅಥವಾ ಬೇಡವೇ ಇದ್ಯಾವುದರ ಬಗ್ಗೆಯೂ ಅತನಿಗೆ ಎಚ್ಚರವಿರುವುದಿಲ್ಲ. ಆತನು ತಾನು ಮಾಡಿದ ವಾಂತಿಯ ಮೇಲೆಯೇ ಕುಳಿತುಕೊಳ್ಳುತ್ತಾನೆ. ಆತನು ತಾನು ಮಾಡಿದ ವಾಂತಿ ಹಾಗು ಲಾಲಾರಸ ಎಂಜಿಲು ತುಂಬಿದ ಶರೀರದಿಂದಲೆ ನಡೆದಾಡುತ್ತಾನೆ. ಅದು ಅತ್ಯಂತ ಅಸಹ್ಯಕರ ದೃಶ್ಯವಾಗಿರುತ್ತದೆ. ರಾಜನೇ, ಈ ಪಾತ್ರೆಯಲ್ಲಿರುವುದು ಅಂತಹ ಅನರ್ಥ ಪಾಪ ಪಾನೀಯ, ಮಾರಾಟಕ್ಕಿದೆ ಕೊಂಡುಕೊಳ್ಳುವೆಯಾ?
7. ರಾಜನೇ ಒಮ್ಮೆ ಈ ಪಾನೀಯ ಸೇವಿಸಿ ಮತ್ತನಾಗಿ ಆತನು ಅತಿ ಮೂರ್ಖನಾಗಿದ್ದರೂ ಸಹ ಅತಿ ಗವರ್ಿಯಾಗುತ್ತಾನೆ: ನನ್ನ ಸಮಾನರೂ ಈ ಜಗತ್ತಿನಲ್ಲಿ ಯಾರಿದ್ದಾರೆ? ಎಂದು ಬೀಗುತ್ತಾನೆ. ಆತನು ಕಣ್ಣಿನಲ್ಲಿ ಕಿಡಿಕಾರಿ ಈ ರೀತಿ ಚಿಂತಿಸುತ್ತಾನೆ: ನಾನೇ ಏಕೈಕ ಚಕ್ರವತರ್ಿಗಿಂತ ಶ್ರೇಷ್ಠ, ನನ್ನ ಹೋಲಿಕೆ ಯಾರಿಗೂ ಮಾಡಲು ಅಸಾಧ್ಯ ಎಂದು ಭಾವಿಸುತ್ತಾನೆ. ರಾಜನೇ, ಈ ಪಾತ್ರೆಯಲ್ಲಿರುವುದು ಅಂತಹ ಅನರ್ಥ ಪಾಪ ಪಾನೀಯ, ಮಾರಾಟಕ್ಕಿದೆ ಕೊಂಡುಕೊಳ್ಳುವೆಯಾ?
8. ರಾಜನೇ, ಈ ಪಾನೀಯ ಸೇವಿಸಿದವನು ಗವರ್ಿಯಾಗುತ್ತಾನೆ, ಅಹಂಕಾರಿ ಯಾಗುತ್ತಾನೆ, ಜಗಳಗಂಟನಾಗುತ್ತಾನೆ, ಕಾಡುಹರಟೆ ಮಾಡುವವನಾಗುತ್ತಾನೆ, ಕುರೂಪಿಯಾಗಿ ಕಾಣುತ್ತಾನೆ. ನಗ್ನವಾದರೂ ಅಲಕ್ಷದಿಂದಿರುತ್ತಾನೆ, ಕಾರಣವಿಲ್ಲದೆ ಹುಚ್ಚನಂತೆ ಓಡಿ ದಣಿಯುತ್ತಾನೆ. ಆತನು ಏನೇ ಹೇಳಲಿ ಅದಕ್ಕೆ ಮೌಲ್ಯವಿರದೆ ಅದು ಕುಡುಕನ ಅಥವಾ ಜೂಜಾಟದವನ ಮಾತು ಎಂದು ಪರಿಗಣಿಸಲ್ಪಡುತ್ತದೆ. ಆತನು ಅನೇಕ ಪಾಪಕಾರ್ಯ ಮಾಡುವುದಕ್ಕೆ ಕಾರಣಕರ್ತನಾಗುತ್ತಾನೆ. ಆತನು ನಿಂದಾಸ್ಪದ ಪ್ರದೇಶಗಳಿಗೆ ಅಡ್ಡಾಡಿ ಪಾಪಕರ್ತನಾಗುತ್ತಾನೆ. ರಾಜನೇ, ಈ ಪಾತ್ರೆಯಲ್ಲಿರುವುದು ಅಂತಹ ಅನರ್ಥ ಪಾಪ ಪಾನೀಯ, ಮಾರಾಟಕ್ಕಿದೆ ಕೊಂಡುಕೊಳ್ಳುವೆಯಾ?
9. ರಾಜನೇ, ಈ ಪಾನೀಯವನ್ನು ಸೇವಿಸಿದಂತಹ ಸಾವಿರಾರು ಕುಟುಂಬಗಳು ಅಗತ್ಯವಿರುವ ಪ್ರತಿಯೊಂದನ್ನು ಕಳೆದುಕೊಂಡಿದೆ. ಅಪಾರ ವಸ್ತ್ರಗಳು ಹಾಗು ಅಪಾರ ಸುಖ ಸೌಲಭ್ಯಗಳು ಪ್ರತಿಯೊಂದು ನಷ್ಟಪಡಿಸಿಕೊಂಡಿವೆ, ಅವರ ಸಂಪತ್ತು ನಾಶವಾಗಿದೆ. ರಾಜನೇ, ಈ ಪಾತ್ರೆಯಲ್ಲಿರುವುದು ಅಂತಹ ಅನರ್ಥ ಪಾಪ ಪಾನೀಯ, ಮಾರಾಟಕ್ಕಿದೆ ಕೊಂಡುಕೊಳ್ಳುವೆಯಾ?
10. ರಾಜನೇ, ಈ ಪಾನೀಯವನ್ನು ಸೇವಿಸಿದಂತಹವನು ತನ್ನನ್ನು ಹಾಳು ಮಾಡಿಕೊಂಡು ಮತ್ತು ಬೆಳ್ಳಿ, ಚಿನ್ನ, ವಸ್ತ್ರ, ಆಭರಣಗಳು, ಧಾನ್ಯಗಳು, ಉದ್ಯಾನಗಳು, ಹಸುಗಳು, ಎತ್ತುಗಳು ಮತ್ತು ವಿವಿಧಬಗೆಯ ಸಂಪತ್ತುಗಳು ಹಾಳು ಮಾಡಿಕೊಂಡಿದ್ದಾರೆ. ರಾಜನೇ, ಈ ಪಾತ್ರೆಯಲ್ಲಿರುವುದು ಅಂತಹ ಅನರ್ಥ ಪಾಪ ಪಾನೀಯ, ಮಾರಾಟಕ್ಕಿದೆ ಕೊಂಡುಕೊಳ್ಳುವೆಯಾ?
11. ರಾಜನೇ, ಈ ಪಾನೀಯವನ್ನು ಸೇವಿಸಿ ಆತನು ಅತಿ ಗವರ್ಿಯಾಗಿ, ತನ್ನ ತಂದೆ-ತಾಯಿಗಳಿಗೆ ಬಯ್ಯುತ್ತಾನೆ ಹಾಗು ಅಲ್ಪವು ಲಜ್ಜೆಯಿಲ್ಲದೆ ಆತನು ತನ್ನ ಚಿಕ್ಕಮ್ಮ ಅಥವಾ ದೊಡ್ಡಮ್ಮನನ್ನು ಮತ್ತು ಸೋದರ ಅಥವಾ ಸೋದರಿಯ ಮಗಳ ಕೈಹಿಡಿಯುತ್ತಾನೆ. ರಾಜನೇ, ಈ ಪಾತ್ರೆಯಲ್ಲಿರುವುದು ಅಂತಹ ಅನರ್ಥ ಪಾಪ ಪಾನೀಯ, ಮಾರಾಟಕ್ಕಿದೆ ಕೊಂಡುಕೊಳ್ಳುವೆಯಾ?
12. ರಾಜನೇ, ಇದನ್ನು ಸೇವಿಸಿದ ಸ್ತ್ರೀಯು ಮತ್ತಳಾಗಿ ತನ್ನ ಸೋದರನನ್ನು, ಪತಿಯನ್ನು ನಿಂದಿಸುತ್ತಾಳೆ ಹಾಗು ತನ್ನ ಸೇವಕನೊಂದಿಗೆ ಪಾಪಯುತ ಯೋಚನೆಯಿಂದ ಕೂಡಿ ಆತನ ಕೈಹಿಡಿಯುತ್ತಾಳೆ. ರಾಜನೇ, ಈ ಪಾತ್ರೆಯಲ್ಲಿರುವುದು ಅಂತಹ ಅನರ್ಥ ಪಾಪ ಪಾನೀಯ, ಮಾರಾಟಕ್ಕಿದೆ ಕೊಂಡುಕೊಳ್ಳುವೆಯಾ?
13. ರಾಜನೇ, ಈ ಪಾನೀಯವನ್ನು ಸೇವಿಸಿದವನು ಶ್ರಮಣ ಬ್ರಾಹ್ಮಣರಿಗೆ ಅಪಹಾಸ್ಯ ಮಾಡುತ್ತಾನೆ ಹಾಗು ಅವರಿಗೆ ಕಿರುಕುಳ ಕೊಡುತ್ತಾನೆ. ಹಾಗೆ ನೀತಿಯುತರಿಗೆ ಹಿಂಸಿಸಿ, ಆ ಪಾಪಕರ್ಮದ ಫಲವಾಗಿ ನರಕದಲ್ಲಿ ಬೀಳುತ್ತಾನೆ. ರಾಜನೇ, ಈ ಪಾತ್ರೆಯಲ್ಲಿರುವುದು ಅಂತಹ ಅನರ್ಥ ಪಾಪ ಪಾನೀಯ, ಮಾರಾಟಕ್ಕಿದೆ ಕೊಂಡುಕೊಳ್ಳುವೆಯಾ?
14. ರಾಜನೇ, ಈ ಪಾನೀಯವನ್ನು ಸೇವಿಸಿದವನು ಕಾಯ-ವಾಚಾ-ಮನಸಾ ಪಾಪಮಾಡಿ ನರಕದಲ್ಲಿ ಹುಟ್ಟುತ್ತಾನೆ. ಅಂತಹ ಅನರ್ಥವಾದುದು. ರಾಜನೇ, ಈ ಪಾತ್ರೆಯಲ್ಲಿರುವುದು ಅಂತಹ ಅನರ್ಥ ಪಾಪ ಪಾನೀಯ, ಮಾರಾಟಕ್ಕಿದೆ ಕೊಂಡುಕೊಳ್ಳುವೆಯಾ?
15. ರಾಜನೇ, ಈ ಪಾನೀಯವನ್ನು ಸೇವಿಸಿದವನು ಸುಳ್ಳಾಡುತ್ತಾನೆ. ಅದಕ್ಕೆ ಮೊದಲು ಆತನಿಗೆ ಅಪಾರ ಐಶ್ವರ್ಯ ನೀಡಿದ್ದರೂ ಸುಳ್ಳಾಡದವನು ಪಾನಮತ್ತನಾಗಿ ಸುಳ್ಳಾಡುತ್ತಾನೆ. ರಾಜನೇ, ಈ ಪಾತ್ರೆಯಲ್ಲಿರುವುದು ಅಂತಹ ಅನರ್ಥ ಪಾಪ ಪಾನೀಯ, ಮಾರಾಟಕ್ಕಿದೆ ಕೊಂಡುಕೊಳ್ಳುವೆಯಾ?
16. ರಾಜನೇ, ಒಬ್ಬ ಮಾಲಿಕನು ಸೇವಕನಿಗೆ ಒಂದು ಸಂದೇಶವನ್ನು ನೀಡಿ ಕಳುಹಿಸಿದರೆ ಆತನು ಪಾನಮತ್ತನಾಗಿ ಕರ್ತವ್ಯ ಭ್ರಷ್ಟನಾಗಿ ನೆನಪು ಬಾರದೆ ಸಂದೇಶರಹಿತನಾಗುತ್ತಾನೆ. ರಾಜನೇ, ಈ ಪಾತ್ರೆಯಲ್ಲಿರುವುದು ಅಂತಹ ಅನರ್ಥ ಪಾಪ ಪಾನೀಯ, ಮಾರಾಟಕ್ಕಿದೆ ಕೊಂಡುಕೊಳ್ಳುವೆಯಾ?
17. ರಾಜನೇ, ಒಬ್ಬಾತನು ಶೀಲವಂತನಾಗಿದ್ದು ಅತಿ ಪಾಪಲಜ್ಜೆ ಹಾಗು ಪಾಪಭಯದಿಂದ ಕೂಡಿದ್ದು ಒಂದು ಪಕ್ಷದಲ್ಲಿ ಪಾನೀಯ ಸೇವಿಸಿದರೆ, ಆತನು ತನ್ನ ವರ್ತನೆಯಲ್ಲಿ ಬದಲಾಗಿ ಲಜ್ಜೆ ಭಯರಹಿತನಾಗುತ್ತಾನೆ. ಆತನು ಜ್ಞಾನಿಯಾಗಿದ್ದು, ಅತಿ ಅರಿತವನಾಗಿದ್ದರೂ ಆತನು ಕ್ಷುಲ್ಲುಕ ವಿಷಯಗಳನ್ನು ಮಾತನಾಡುತ್ತಾನೆ. ರಾಜನೇ, ಈ ಪಾತ್ರೆಯಲ್ಲಿರುವುದು ಅಂತಹ ಅನರ್ಥ ಪಾಪ ಪಾನೀಯ, ಮಾರಾಟಕ್ಕಿದೆ ಕೊಂಡುಕೊಳ್ಳುವೆಯಾ?
18. ರಾಜನೇ, ಈ ಪಾನೀಯವನ್ನು ಸೇವಿಸಿದವನು ತನಗಿಂತ ಅತಿ ಹೀನರ ಜೊತೆ ಸೇರುತ್ತಾನೆ ಹಾಗು ಎಲ್ಲೆಂದರಲ್ಲಿ ಬಿದ್ದುಕೊಳ್ಳುತ್ತಾನೆ. ಆತನಿಗೆ ಯಾವ ಮಲದ ಗಮನವಿಲ್ಲದೆ ಹಂದಿಯಂತೆ ಆತನ ಸ್ಮರಣಶಕ್ತಿ ಕುಂಠಿತವಾಗುತ್ತದೆ. ಹಾಗು ಆತನ ಶರೀರ ಅಪ್ರಿಯವಾಗಿ ಕಾಣುತ್ತದೆ. ರಾಜನೇ, ಈ ಪಾತ್ರೆಯಲ್ಲಿರುವುದು ಅಂತಹ ಅನರ್ಥ ಪಾಪ ಪಾನೀಯ, ಮಾರಾಟಕ್ಕಿದೆ ಕೊಂಡುಕೊಳ್ಳುವೆಯಾ?
19. ರಾಜನೇ, ಮಹಾ ಗೂಳಿಯೊಂದಕ್ಕೆ ಸುತ್ತಿಗೆ ಪೆಟ್ಟು ಬಿದ್ದು ನೆಲದಲ್ಲಿ ಹೇಗೆ ಬಿದ್ದಿರುವುದೋ ಹಾಗೆಯೇ ಕುಡುಕ ನೆಲದಲ್ಲಿ ಬಿದ್ದು ತನ್ನ ಬುದ್ಧಿ ಭ್ರಮಣವನ್ನು ನಿಯಂತ್ರಿಸದೆ ಹೋಗುತ್ತಾನೆ. ರಾಜನೇ, ಈ ಪಾತ್ರೆಯಲ್ಲಿರುವುದು ಅಂತಹ ಅನರ್ಥ ಪಾಪ ಪಾನೀಯ, ಮಾರಾಟಕ್ಕಿದೆ ಕೊಂಡುಕೊಳ್ಳುವೆಯಾ?
20. ರಾಜನೇ, ಈ ಪಾನೀಯವನ್ನು ವಿಷಪೂರಿತ ಸರ್ಪದಂತೆ ವಜರ್ಿಸು. ಯಾರೊಬ್ಬರೂ ಸಹಾ ಇದನ್ನು ಸೇವಿಸುವ ಇಚ್ಛೆ ವ್ಯಕ್ತಪಡಿಸದಿರಲಿ, ಅಂತಹ ಕಾಲಕೂಟ ವಿಷವಿದು. ರಾಜನೇ, ಈ ಪಾತ್ರೆಯಲ್ಲಿರುವುದು ಅಂತಹ ಅನರ್ಥ ಪಾಪ ಪಾನೀಯ, ಮಾರಾಟಕ್ಕಿದೆ ಕೊಂಡುಕೊಳ್ಳುವೆಯಾ?
21. ರಾಜನೇ, ಹತ್ತು ಅಂದಕ ವೇಣುರಾಜರು ಆಟವಾಡುತ್ತಿದ್ದರು. ಆದರೆ ಅವರು ಪಾನಮತ್ತರಾಗಿ ಅವರು ಅವರೊಂದಿಗೆ ದಂಡಶಸ್ತ್ರಗಳಿಂದ ಕಾದಾಡಿ ಮರಣ ಹೊಂದಿದರು. ರಾಜನೇ, ಈ ಪಾತ್ರೆಯಲ್ಲಿರುವುದು ಅಂತಹ ಅನರ್ಥ ಪಾಪ ಪಾನೀಯ, ಮಾರಾಟಕ್ಕಿದೆ ಕೊಂಡುಕೊಳ್ಳುವೆಯಾ?
22. ರಾಜನೇ ದೇವಲೋಕದಲ್ಲಿಯೂ ಮಾದಕ ಪಾನೀಯ ಸೇವನೆ ಪಾನಮತ್ತರಾದವರಿಗೆ ಅಸುರ ದೇವರೆಂದು ಸ್ವರ್ಗದಿಂದ ಹೊರಗಟ್ಟುತ್ತಾರೆ. ಆದ್ದರಿಂದ ಯಾವ ಮಾನವರು ಇದನ್ನು ಬಯಸದಿರಲಿ. ಇದರ ಕೆಟ್ಟ ಪರಿಣಾಮ ಅರಿಯಲಿ, ಅಂತಹ ಪಾಪವರ್ಧಕ ಪಾನೀಯವಿದು. ರಾಜನೇ, ಈ ಪಾತ್ರೆಯಲ್ಲಿರುವುದು ಅಂತಹ ಅನರ್ಥ ಪಾಪ ಪಾನೀಯ, ಮಾರಾಟಕ್ಕಿದೆ ಕೊಂಡುಕೊಳ್ಳುವೆಯಾ?
23. ರಾಜನೇ, ಈ ಪಾತ್ರೆಯಲ್ಲಿ ಮೊಸರಿಲ್ಲ, ಮಧುವೂ ಇಲ್ಲ. ನಾನು ನಿನಗೆ ಇದರ ದುಷ್ಪರಿಣಾಮ ಹೇಳಿದ್ದೇನೆ. ರಾಜ ಸಬ್ಬಮಿತ್ತ, ಇದನ್ನು ಚೆನ್ನಾಗಿ ಅರಿತುಕೋ.
ಆಗ ರಾಜ ಸರ್ವಮಿತ್ರ ಈ ದುಷ್ಪರಿಣಾಮಗಳನ್ನು ಕೇಳಿ, ಸಕ್ಕದೇವರೊಂದಿಗೆ ಅತಿ ಭಕ್ತಿಯಿಂದ ಕೂಡಿ ಆನಂದಿತನಾಗಿ ಕೃತಜ್ಞತಾಪೂರ್ವಕವಾಗಿ ಹೀಗೆ ಹೇಳಿದನು:
ಓಹ್! ಬ್ರಾಹ್ಮಣರೇ, ನೀವು ನನ್ನ ಸ್ವಯಂ ತಂದೆಯ ರೀತಿ ನನಗೆ ಕರುಣೆಯಿಂದ ಬುದ್ಧಿವಾದ ನೀಡಿದ್ದೀರಿ. ಅದರಿಂದ ನನಗೆ ಈಗಲೂ ಹಾಗು ಪರಲೋಕದಲ್ಲೂ ಅಪಾರ ಲಾಭವಾಗಿದೆ. ನಾನು ತಮ್ಮ ಬೋಧನೆಯನ್ನು ಹೃತ್ಪೂರ್ವಕವಾಗಿ ಪಾಲಿಸುತ್ತೇನೆ. ನಾನು ಇದಕ್ಕೆ ಪ್ರತಿಯಾಗಿ ನಿಮಗೆ ಈ ಕೆಲವೊಂದು ನೀಡುತ್ತೇನೆ. ತಾವು ದಯೆಯಿಟ್ಟು ಸ್ವೀಕರಿಸಿಬೇಕು.  ಐದು ಹಳ್ಳಿಗಳು, ದಾಸ್ಯ, ಉದ್ಯಾನ, ವಸ್ತ್ರಗಳು, ಇನ್ನೂರು ಬಾಲಕರು, ಇನ್ನೂರು ಬಾಲಕಿಯರು, ಏಳುನೂರು ಪ್ರಧಾನ ಹಸುಗಳು ಹಾಗು ಹತ್ತು ಶ್ರೇಷ್ಠ ಅಶ್ವದಳ ರಥಗಳನ್ನು ನೀಡುತ್ತೇನೆ.
ಆಗ ಬ್ರಾಹ್ಮಣ ರೂಪದಲ್ಲಿನ ಸಕ್ಕದೇವ ನಿಜ ಸ್ವರೂಪದಲ್ಲಿ ಪ್ರಕಟಗೊಂಡರು. ಆಕಾಶದಲ್ಲಿ ನಿಂತು ಈ ರೀತಿ ಹೇಳಿದರು: ರಾಜ, ಐದು ಹಳ್ಳಿಗಳನ್ನು ಇನ್ನೂರು ಬಾಲಕ, ಬಾಲಕಿಯರನ್ನು, ರಥಗಳನ್ನು, ಕುದುರೆಗಳನ್ನು ಹಿಂದಕ್ಕೆ ತೆಗೆದುಕೋ. ರಾಜನೇ ಆದರೆ ನಾನು ಹೇಳಿದಂತೆ ಮದ್ಯಪಾನ ವಜರ್ಿಸಿ ನಿನ್ನ ರಾಜ್ಯವನ್ನು ಸತ್ಯದಿಂದ ಧರ್ಮದಿಂದ ಆಡಳಿತ ಮಾಡು. ಚೆನ್ನಾಗಿ ತಿನ್ನು, ಚೆನ್ನಾಗಿ ವಸ್ತ್ರಧರಿಸಿ ಮತ್ತು ಪುಣ್ಯಕಾರ್ಯಗಳನ್ನು ಮಾಡುತ್ತಲೇ ಇರು ಎಂದು ಹೇಳಿ ತಮ್ಮ ದಿವ್ಯವಾದ ವಾಸಕ್ಕೆ ಹಿಂತಿರುಗಿದರು.
ರಾಜ ಸರ್ವಮಿತ್ರ ಹಾಗು ಆತನ ನಾಗರಿಕರೆಲ್ಲರೂ ಆ ಪಾನೀಯಗಳನ್ನು ನಾಶಪಡಿಸಿದರು. ಸರ್ವಮಿತ್ರ ರಾಜನು ಧರ್ಮದಿಂದ ರಾಜ್ಯವಾಳಿದನು. ತನ್ನ ಅನೇಕ ಪುಣ್ಯಕಾರ್ಯದಿಂದ ಸತ್ತಮೇಲೆ ಸುಗತಿಗೆ ಹೋದನು.
ಈ ರೀತಿಯಾಗಿ ಭಗವಾನರು ವಿಶಾಖಳಿಗೆ ಬೋಧಿಸಿದರು. ಆಗ ಸರ್ವಮಿತ್ರರಾಗಿ ಆನಂದರಾಗಿದ್ದರು. ಬುದ್ಧ ಭಗವಾನರೇ ಆಗ ಸಕ್ಕದೇವರಾಗಿದ್ದರು.
- ಕುಂಭ ಜಾತಕ

THE IGNORANCE OF MAAGANDIA ಅಜ್ಞಾನ - ಮಾಗಂಡಿಯಳ ಪ್ರಸಂಗ

                                ಅಜ್ಞಾನ - ಮಾಗಂಡಿಯಳ ಪ್ರಸಂಗ


ಒಮ್ಮೆ ಬುದ್ಧ ಭಗವಾನರು ಶ್ರಾವಸ್ಥಿಯ ಜೇತವನ ವಿಹಾರದಲ್ಲಿ ತಂಗಿದ್ದರು. ಅಂದು ಬೆಳಿಗ್ಗೆ ಮಹಾಕರುಣಾ ಸಮಾಧಿಯಲ್ಲಿ ತಮ್ಮ ದಿವ್ಯ ಚಕ್ಷುಗಳಿಂದ ಯಾರಿಗೆ ಸಹಾಯ ಮಾಡಬೇಕೆಂದು ಗಮನಿಸಿದಾಗ ಅವರಿಗೆ ಮಾಗಂಡಿ ಬ್ರಾಹ್ಮಣ ಹಾಗು ಆತನ ಪತ್ನಿಯು ಕಾಣಿಸಿದರು. ಆ ಬ್ರಾಹ್ಮಣರು ಕಮ್ಮಸದಮ್ಮ ಹಳ್ಳಿಯಲ್ಲಿ ಕುದನ್ ಪ್ರಾಂತ್ಯದಲ್ಲಿ ವಾಸವಾಗಿದ್ದರು. ಅವರಿಬ್ಬರು ಅರಹಂತರಾಗುವ (ವಿಮುಕ್ತಿಯ ಪರಮಹಂತ) ಲಕ್ಷಣಗಳು ಕಾಣಿಸಿತು. ಆದ್ದರಿಂದ ಭಗವಾನರು ಶ್ರಾವಸ್ತಿಯಿಂದ ಕಮ್ಮಸದಮ್ಮ ಹಳ್ಳಿಗೆ ಹೊರಟರು. ಹಾಗು ಅಲ್ಲಿ ಮರಗಳ ತೋಪಿನಲ್ಲಿ ತಂಗಿದರು. ನಂತರ ಭಗವಾನರು ತಮ್ಮ ಸಹಜ ತ್ವಚೆ ವರ್ಣವಾದ ಸುವರ್ಣವನ್ನು ಇನ್ನಷ್ಟು ಪ್ರಕಾಶಿಸಿದರು. ಅದೇ ಸಮಯದಲ್ಲಿ ಬ್ರಾಹ್ಮಣ ಮಾಗಂಡಿಯು ಹೊಳೆಯಲ್ಲಿ ಬೆಳಗಿನ ಸ್ನಾನಕ್ಕೆ ಬಂದಿದ್ದನು. ಆತನಿಗೆ ಬಂಗಾರದ ಕಿರಣಗಳು ದಟ್ಟವಾಗಿ ಮರಗಳ ಮಧ್ಯೆ ಪ್ರಕಾಶಿಸುತ್ತಿದ್ದದನ್ನು ಕಂಡು ಹತ್ತಿರ ಬಂದಾಗ ಆ ಪ್ರಭೆಯರಾಶಿ ತಥಾಗತರೇ ಆಗಿದ್ದನ್ನು ಕಂಡನು. ಆತನಿಗೆ ಆನಂದವಾಯಿತು.
ಆ ಬ್ರಾಹ್ಮಣನು ಹೀಗೆ ಆಲೋಚಿಸಿದನು: ಅನೇಕ ಕ್ಷತ್ರಿಯ ರಾಜಕುಮಾರರು ನನ್ನ ಸುವರ್ಣ ವರ್ಣದ ಕುಮಾರಿಯನ್ನು ಪಡೆಯಲು ಬಂದಿದ್ದರು. ಆದರೆ ನಾವು ಅವರನ್ನೆಲ್ಲರನ್ನು ತಿರಸ್ಕರಿಸಿದೆವು. ಆದರೆ ಈಗ ನನ್ನ ಮಗಳನ್ನು ಈ ಶ್ರಮಣನಿಗೆ ಕೊಡುವೆನು. ಇವರಲ್ಲಿ ಮಾತ್ರ ಅಂತಹ ಶ್ರೇಷ್ಠ ವರ್ಣಕಾಂತಿಯಿದೆ ಎಂದು ಯೋಚಿಸಿ ಬೇಗ ತನ್ನ ಪತ್ನಿಯನ್ನು ಕರೆದು ಹೀಗೆ ಹೇಳಿದನು: ನಾನು ನಮ್ಮ ಸುಪುತ್ರಿಗೆ ಸಾಮ್ಯವಾಗುವ, ಅದಕ್ಕಿಂತಲೂ ಮಿಗಿಲಾದ ವರ್ಣದ ಮಾನವನಿಗೆ ನೋಡಿದ್ದೇನೆ. ಆದ್ದರಿಂದ ಬೇಗ ಪುತ್ರಿಯನ್ನು ವಸ್ತ್ರಾಭರಣಗಳಿಂದ ಸಿದ್ಧಪಡಿಸು, ಆಕೆಯನ್ನು ಆತನಿಗೆ ನೀಡಿ ವಿವಾಹ ಮಾಡಿಸೋಣ ಎಂದನು. ಇದನ್ನು ಕೇಳಿದ ಆ ಪತ್ನಿಯು ಆನಂದಿತಳಾಗಿ ಪುತ್ರಿಗೆ ಸುಗಂಧಿತ ನೀರಿನಲ್ಲಿ ಸ್ನಾನ ಮಾಡಿಸಿ, ಅತ್ಯಂತ ಆಕಷರ್ಿತವಾಗಿ ಅಲಂಕರಿಸಿದಳು.
ಭಗವಾನರು ಆಹಾರಕ್ಕಾಗಿ ಒಂದು ಸುತ್ತು ತಿರುಗಿ ಮತ್ತೆ ಅದೇ ಸ್ಥಳಕ್ಕೆ ಬಂದರು. ಮಾಗಂಡಿ ಹಾಗು ಪತ್ನಿ, ಪುತ್ರಿಯು ಆ ಸ್ಥಳಕ್ಕೆ ಬಂದಾಗ ಭಗವಾನರು ಹುಲ್ಲು ಹರಡಿದ ಆಸನದಲ್ಲಿ ಕುಳಿತಿದ್ದರು. ಬ್ರಾಹ್ಮಣನು ಲಕ್ಷಣ ಶಾಸ್ತ್ರಜ್ಞಳಾದ ತನ್ನ ಪತ್ನಿಯನ್ನು ಭಗವಾನರ ಪಾದದ ಮುದ್ರೆಯನ್ನು ಗಮನಿಸಿ ಅದರ ವಿಶೇಷ ಅರ್ಥವನ್ನು ಕೇಳಿದಾಗ, ಆಕೆ ಸೂಕ್ಷ್ಮವಾಗಿ ಗಮನಿಸಿ ಹೀಗೆ ಹೇಳಿದಳು:
ಓಹ್! ಈ ಪಾದದ ಚಿಹ್ನೆಯ ಮುದ್ರೆ ಇರುವ ವ್ಯಕ್ತಿ ತನ್ನ ಜೀವಮಾನದಲ್ಲಿ ಗೃಹಸ್ಥನಾಗಿ ಕಾಲ ಕಳೆಯಲಾರ. ಆಕೆ ಲಕ್ಷಣ ಶಾಸ್ತ್ರದಲ್ಲಿ ಅಪಾರ ಪ್ರಭುತ್ವವಿತ್ತು. ನಂತರ ಭಗವಾನರ ಶರೀರದಲ್ಲಿ ಕಾಣುವ ಇನ್ನಿತರ ಮಹಾಪುರುಷ ಲಕ್ಷಣಗಳನ್ನು ಗಮನಿಸಿ ಹೀಗೆ ಮತ್ತೆ ಹೇಳಿದಳು: ಚೆನ್ನಾಗಿ ಅರಿತುಕೊಳ್ಳಿ, ನಾವು ಬಂದ ಕಾರ್ಯ ಸಿದ್ಧಿಯಾಗುವುದಿಲ್ಲ, ಇವರು ಎಂದಿಗೂ ಗೃಹಸ್ಥರಾಗುವುದಿಲ್ಲ ಎಂದು ದೃಢವಾಗಿ ಹೇಳಿದಳು.
ಆದರೂ ಬ್ರಾಹ್ಮಣನು ಮಿಥ್ಯಾ ದೃಷ್ಟಿಯಿಂದ ತಮ್ಮ ಸುಕುಮಾರಿಯನ್ನು ಎಡಗೈಯಲ್ಲಿ ಹಿಡಿದುಕೊಂಡು ಬಲಗೈಯಲ್ಲಿ ನೀರು ತುಂಬಿದ ಪಾತ್ರೆಯನ್ನು ಹಿಡಿದುಕೊಂಡು ಭಗವಾನರ ಸಮೀಪ ಬಂದನು ಹಾಗು ಈ ರೀತಿ ಹೇಳಿದನು: ಪೂಜ್ಯ ಸಮಣರೇ, ನಿಮ್ಮ ಶರೀರದ ಹೊನ್ನ ಕಾಂತಿಯು ನನ್ನ ಮಗಳ ಶರೀರದ ವರ್ಣಕ್ಕೆ ಸಾಮಿಪ್ಯವಾಗಿದೆ. ಆದ್ದರಿಂದ ನಿಮಗೆ ಈ ಕೆ ಸರಿಯಾದ ಆಯ್ಕೆ (ಜೋಡಿ) ಯಾಗುತ್ತಾಳೆ. ಈ ಕ್ಷಣದಿಂದ ಈಕೆಯನ್ನು ನಿಮ್ಮ ಪತ್ನಿಯಾಗಿ ಸ್ವೀಕರಿಸಿ ಎಂದು ಹೇಳಿ ಇಬ್ಬರ ಕೈ ಬೆರೆಸಲು ಹಾಗು ನೀರು ಹಾಕಲು ಸಿದ್ಧನಾದನು.
ಆದರೆ ವಿರಾಗ್ಯ ಸ್ವರೂಪರಾದ ಬುದ್ಧರು ಅತ್ಯಂತ ತಾತ್ಸರದಿಂದ ಮತ್ತು ಕರುಣೆಯಿಂದ ಹೀಗೆ ನುಡಿದರು: ನಾನು ಗಯಾದಲ್ಲಿ ಬೋಧಿವೃಕ್ಷದ ಕೆಳಗೆ ಕುಳಿತಿದ್ದಾಗ ಮಾರನು ಮೂರು ಅಸಮಾನ್ಯ ಅದ್ವಿತೀಯ ಸುಂದರ ಕನ್ಯೆಯರನ್ನು ನನಗೆ ಚಂಚಲನನ್ನಾಗಿ ಮಾಡಲು ಕಳುಹಿಸಿದನು. ಆದರೆ ಅವರು ನನಗೆ ಕ್ಷಣಮಾತ್ರವೂ ಹಾಗೆ ಮಾಡಲು ಅಸಫಲರಾಗಿ ಹಿಂದಿರುಗಿದರು. ಆ ಅಪ್ಸರೆಯರಿಗೆ ಹೋಲಿಸಲು ಹೋದರೆ ಈ ಯುವತಿಯು ಮಲದ ರಾಶಿಯಂತೆ ಕಾಣುತ್ತಾಳೆ. ನಾನು ಇಂತಹವನ್ನು ನನ್ನ ಕಾಲಿನಿಂದಲೂ ಸ್ಪಶರ್ಿಸಲು ಅಸಹ್ಯಿಸುತ್ತೇನೆ. ಆದ್ದರಿಂದ ನಾನು ನೀವು ಹೇಳುವಂಥ ಕಾರ್ಯ ಹೇಗೆ ಮಾಡಲಿ.
ಆಗ ಬ್ರಾಹ್ಮಣನು ತನ್ನ ಎಲ್ಲಾ ನಂಬಿಕೆಯನ್ನು, ಭರವಸೆಯನ್ನು ಕಳೆದುಕೊಂಡನು, ಅತಿ ನಿರಾಶನಾದನು. ನಂತರ ಆತನಿಗೆ ಅರಿವಾಯಿತು, ಏನೆಂದರೆ ಅಜ್ಞಾನದಿಂದ ಯಾವುದೂ ಪ್ರಾಪ್ತಿಯಾಗುವುದಿಲ್ಲವೋ ಅದರ ತೀವ್ರ ಬಯಕೆ ಪಡುತ್ತೇವೆ, ಅದರ ಅಪ್ರಾಪ್ತತೆಯಿಂದ ದುಃಖಿತರಾಗುತ್ತೇವೆ.
ನಂತರ ಬುದ್ಧ ಭಗವಾನರು ಶ್ರೇಷ್ಠ ಬೋಧನೆ (ಮಾಗಂಡಿಯ ಸುತ್ತ) ಮಾಡಿದರು. ಪರಿಣಾಮವಾಗಿ ಸತಿಪತಿಯರಿಬ್ಬರೂ ಅರಹಂತ ಪ್ರಾಪ್ತಿ ಮಾಡಿದರು.
- ಖುದ್ದಕ ನಿಕಾಯ ಅಟ್ಠಕಥಾ

THE CONSEQUENCES OF FEAR ಭಯ - ರಾಜನ ಅಡುಗೆ ಭಟ್ಟನ ಪ್ರಸಂಗ

                            ಭಯ - ರಾಜನ ಅಡುಗೆ ಭಟ್ಟನ ಪ್ರಸಂಗ


ಒಂದು ಕಾಲದಲ್ಲಿ ಬ್ರಹ್ಮದತ್ತನು ಬನಾರಸನ್ನು ಆಳುತ್ತಿದ್ದನು. ಆತನು ಮಾಂಸವಿಲ್ಲದೆ ಅಡುಗೆಯನ್ನೇ ಮುಟ್ಟುತ್ತಿರಲಿಲ್ಲ. ಆದ್ದರಿಂದಾಗಿ ಅಡುಗೆ ಭಟ್ಟನು ಉಪೋಸಥದ (ಹುಣ್ಣಿಮೆಯ ಶುದ್ಧ ದಿನದಂದು ಮಾಡುವ ಇಂದ್ರಿಯ ನಿಗ್ರಹ ಹಾಗು ಉಪವಾಸ) ಹಿಂದು-ಮುಂದಿನ ದಿನದಂದು ಸಹಾ ಮಾಂಸವನ್ನು ಹಾಕಬೇಕಿತ್ತು. ಒಂದು ಅಂತಹ ದಿನದಂದು ಭಟ್ಟನು ಅಡುಗೆ ಮನೆಯಲ್ಲಿ ಇಲ್ಲದಿದ್ದಾಗ ರಾಜನ ನಾಯಿಗಳು ಮಾಂಸವನ್ನು ತಿಂದುಹಾಕಿದ್ದವು. ಇದರಿಂದ ಭಯಭೀತನಾದ ಭಟ್ಟನು ಹಿಡಿಯಷ್ಟು ಚಿನ್ನದ ನಾಣ್ಯಗಳನ್ನು ಹಿಡಿದು ಎಲ್ಲೆಲ್ಲಿ ಮಾಂಸವನ್ನು ಹುಡುಕಿದರೂ ಸಫಲನಾಗಲಿಲ್ಲ. ಭಟ್ಟನಿಗೆ ಈಗ ಭಯವಾಯಿತು, ಏಕೆಂದರೆ ಮಾಂಸರಹಿತ ಅಡುಗೆಯಿಂದ ರಾಜನು ಕೋಪಿಸಿ ಶಿಕ್ಷಿಸುವನೆಂದು ಭೀತಿವುಳ್ಳವನಾದನು. ಕೊನೆಗೆ ಅವನಿಗೆ ಒಂದು ಉಪಾಯ ಹೊಳೆಯಿತು.
ಸ್ಮಶಾನಕ್ಕೆ ಹೋಗಿ ಶವದ ತೊಡೆಯ ಭಾಗವನ್ನು ಕತ್ತರಿಸಿ ಹಿಂದಿರುಗಿದನು. ನಂತರ ಹಿಂದಿನ ದಿನಗಳಂತೆಯೇ ಅಡುಗೆ ಮಾಡಿ ಎಂದಿನಂತೆ ರಾಜನಿಗೆ ಬಡಿಸಿದನು. ರಾಜನು ಸ್ವಲ್ಪ ಮಾಂಸವನ್ನು ರುಚಿ ನೋಡಿದನು. ಅದರ ರುಚಿಯು ಆತನಿಗೆ ಅತಿ ಮಧುರವೆನಿಸಿತು, ಆತನ ನರಗಳು ಅತ್ಯಂತ ಪ್ರಚೋದಿತವಾಯಿತು. ರಾಜನಿಗೆ ಈ ಮಾಂಸ ಅತ್ಯಂತ ಪ್ರಿಯವಾಯಿತು. ಏಕೆಂದರೆ ಆತನು ಹಿಂದಿನ ಜನ್ಮದಲ್ಲಿ ಮಾನವ ಮಾಂಸ ಭಕ್ಷಿಸುವ ಯಕ್ಷನಾಗಿದ್ದನು. ಈಗ ಆ ಭಾವೋದ್ರೇಕವು ಈತನಲ್ಲಿ ಅತ್ಯಂತ ಪ್ರಚೋದಿತವಾಯಿತು. ರಾಜನಿಗೆ ಅಂತಹ ಮಾಂಸವನ್ನು ಪ್ರತಿನಿತ್ಯವು ತಿನ್ನಬೇಕೆನಿಸಿತು. ಆದರೂ ಅದನ್ನು ತಿರಸ್ಕರಿಸುವ ರೀತಿಯಲ್ಲಿ ಉಗಿದು ಎಸೆದನು. ಇಂತಹ ಕೆಟ್ಟ ಮಾಂಸವನ್ನು ಎಲ್ಲಿಂದ ತಂದುಹಾಕಿದೆ ಎಂದು ಪ್ರಶ್ನಿಸಿದನು. ಅದಕ್ಕೆ ಪ್ರತಿಯಾಗಿ ಭಟ್ಟನು ಇದು ಹಿಂದಿನಂತೆಯೇ ಬಡಿಸಿದ ಮಾಂಸಾಹಾರ, ಆದರೆ ಅದಕ್ಕೆ ತಯಾರಿಸಿದ ರೀತಿ ಬೇರೆಯದು ಎಂದು ಉತ್ತರಿಸಿದನು. ಅದಕ್ಕೆ ರಾಜನು ಸತ್ಯ ಹೇಳಬೇಕು, ಇಲ್ಲದಿದ್ದರೆ ಉಳಿಗಾಲವಿಲ್ಲ ಎಂದು ಬೆದರಿಸಿದನು. ಭಯಭೀತನಾದ ಭಟ್ಟ ವೃತ್ತಾಂತವನ್ನೆಲ್ಲಾ ಇದ್ದಹಾಗೆ ತಿಳಿಸಿದನು. ಆದಾದನಂತರ ರಾಜನು ಹೀಗೆ ಆಜ್ಞೆ ಮಾಡಿದನು. ಏನೆಂದರೆ ತನಗೆ ಮಾನವ ಮಾಂಸವನ್ನು ಸದಾ ಅಡುಗೆ ಮಾಡಿ ನೀಡಬೇಕು, ಅರಮನೆಯ ಇತರರಿಗೆ ಹಿಂದೆ ಮಾಡುತ್ತಿದ್ದ ಪ್ರಾಣಿ ಮಾಂಸವನ್ನೇ ನೀಡಬೇಕು ಎಂದು ಆಜ್ಞಾಪಿಸಿದನು. ಈ ಆಜ್ಞೆಯನ್ನು ಭಟ್ಟನು ನೆರವೇರಿಸುತ್ತಿದ್ದನು. ಕೆಲಕಾಲದ ನಂತರ ಭಟ್ಟನು ರಾಜನಿಗೆ ದಿನವೂ ಮಾನವ ಮಾಂಸ ಭಕ್ಷವನ್ನು ನೀಡಲು ಅಸಾಧ್ಯ ಎಂದು ವಿನಂತಿಸಿಕೊಂಡನು. ಆಗ ರಾಜನು ಭಟ್ಟನಿಗೆ ಸೆರೆಮನೆಯಲ್ಲಿನ ಖೈದಿಗಳನ್ನು ದಿನವೂ ಕೊಂದು ಅಡುಗೆ ಮಾಡಲು ಆಜ್ಞಾಪಿಸಿದನು. ಈ ಆಜ್ಞೆಯನ್ನು ಪಾಲಿಸಿದ ಕೆಲವು ದಿನಗಳಲ್ಲೇ ಅಪರಾಧಿಗಳ ಸಂಖ್ಯೆಯು ಕಡಿಮೆಯಾಗಿ ಅಪರಾಧಿಗಳು ಇಲ್ಲದೇ ಹೋದರು. ಆಗ ರಾಜನು ಡಕಾಯಿತರನ್ನು ಬಂಧಿಸಿ, ಕೊಲ್ಲಲು ಆಜ್ಞಾಪಿಸಿದನು. ಇದಾದ ನಂತರ ಡಕಾಯಿತರು ಇಲ್ಲದೇ ಹೋದರು. ಈ ಘಟನೆಯ ನಂತರ ಅಡಿಗೆ ಭಟ್ಟನು ಸಂಜೆಯ ವೇಳೆಯಲ್ಲಿ ಅಡಗಿ ಕಾಯುತ್ತಿದ್ದನು. ಮಾರುಕಟ್ಟೆಯಿಂದ ಹಿಂದಿರುಗುತ್ತಿದ್ದ ಜನರನ್ನು ಕೊಂದು ಅಡುಗೆ ಮಾಡುತ್ತಿದ್ದನು. ಜನರಿಗೆ ಇದು ಯಾವುದೋ ಮನುಷ್ಯನ ಕೈವಾಡ ಎಂದು ತಿಳಿದು ರಾಜನಿಗೆ ವಿಷಯ ತಿಳಿಸಿ, ಇದನ್ನು ತಡೆಗಟ್ಟಬೇಕೆಂದು ತಿಳಿಸಿದರು.
ಆಗ ಉಪರಾಜನು ಜನರಿಗೆ ಸಮಾಧಾನಿಸಿದನು, ಅವರಿಗೆ ಅಪರಾಧಿಯನ್ನು ಹಿಡಿದು ಶಿಕ್ಷಿಸುತ್ತೇನೆ ಎಂದು ತಿಳಿಸಿ ಭರವಸೆ ನೀಡಿದನು. ಇದಾದ ನಂತರ ಉಪರಾಜನು ಅತಿ ಗಂಭೀರವಾದ ವಾತಾವರಣ ಏರ್ಪಡಿಸಿದನು. ಆಗ ಒಬ್ಬ ಭಟನು ಒಬ್ಬ ವ್ಯಕ್ತಿಯನ್ನು ಪತ್ತೆಹಚ್ಚಿದನು. ಏನೆಂದರೆ ಆತನು ಮಹಿಳೆಯ ಶವದ ಮಾಂಸವನ್ನು ಕತ್ತಿಯಿಂದ ಕತ್ತರಿಸುತ್ತಿದ್ದನು. ಹಾಗು ಮಾಂಸವನ್ನು ಬುಟ್ಟಿಯಲ್ಲಿ ಹಾಕುತ್ತಿದ್ದನು. ಭಟರ ಗುಂಪೊಂದು ಆ ವ್ಯಕ್ತಿಯನ್ನು ಬಂಧಿಸಿ ಉಪರಾಜನ ಬಳಿ ಕರೆತಂದರು. ಆತನು ರಾಜ ಭಟ್ಟನೇ (ಅಡುಗೆಯವನು) ಆಗಿದ್ದ. ಆತನಿಗೆ ಉಪರಾಜನು ಪ್ರಶ್ನಿಸಿದಾಗ ಆತನು ಇಡೀ ವೃತ್ತಾಂತ ತಿಳಿಸಿದನು. ಅಡಿಗೆಯವನ ಮಾತನ್ನು ಪತ್ತೆಹಚ್ಚಲು ಕೆಲವರನ್ನು ಕಳುಹಿಸಿದನು. ನಂತರ ಅಡಿಗೆಯವನಿಗೆ ರಾಜನ ಮುಂದೆಯೂ ಸಹಾ ಹೇಳಲು ಕೇಳಿದಾಗ ಆತನು ಒಪ್ಪಿದನು. ನಂತರ ಉಪರಾಜನು ರಾಜ್ಯದ ಮಂತ್ರಿಗಳನ್ನು, ನಾಗರಿಕರನ್ನು ಹಾಗು ಸೈನಿಕರೊಂದಿಗೆ ಅಪರಾಧಿಯನ್ನು ಹಿಡಿದು ಹಾಕಿದನು.
ಆ ರಾತ್ರಿ ರಾಜನಿಗೆ ಅಡುಗೆ ಭಟ್ಟನನ್ನು ಹಿಡಿದುದರಿಂದ ಆಹಾರ ಸಿಗದೇ ಹೋಯಿತು. ಮಾರನೆಯದಿನ ಕಿಟಕಿಯಲ್ಲಿ ಆತನ ಪ್ರತೀಕ್ಷೆಯಲ್ಲಿರುವಾಗ ಭಾರಿ ಗುಂಪು ಬರುತ್ತಿರುವುದು ಕಂಡುಬಂದಿತು. ಆಗ ರಾಜನು ಸಿಂಹಾಸನದಲ್ಲಿ ಆಸೀನನಾದನು. ಆಗ ಉಪರಾಜನು ಅಡಿಗೆಯವನ ಪ್ರಸ್ತಾಪ ಮಾಡಿ ಈ ವಿಷಯ ನಿಜವೇ ಎಂದು ಪ್ರಶ್ನಿಸಿದಾಗ ಅದು ಸತ್ಯವೇ ಎಂದು ರಾಜನು ಒಪ್ಪಿದನು. ಅದಕ್ಕಾಗಿ ಅಡುಗೆ ಭಟ್ಟನಿಗೆ ಏಕೆ ಕಿರುಕುಳ ಕೊಡುತ್ತಿದ್ದೀಯೇ ಎಂದು ಪ್ರಶ್ನಿಸಿದನು. ಆಗ ಉಪರಾಜನು ರಾಜನಿಗೆ ಈ ನರಭಕ್ಷಣೆ ನಿಲ್ಲಿಸಲು ಕೇಳಿಕೊಂಡನು. ಇಲ್ಲದಿದ್ದರೆ ಆತನ ಜೀವನ ಹಾಗು ರಾಜಪಟ್ಟ ಸುರಕ್ಷಿತವಲ್ಲ ಎಂದು ಕೇಳಿಕೊಂಡನು. ಆಗಲೂ ಸಹಾ ರಾಜನು ನರಭಕ್ಷಣೆ ನಿಲ್ಲಿಸಲು ಅಸಾಧ್ಯ ಎಂದು ತಿಳಿಸಿದನು. ಆಗ ಬೇರೆ ಮಂತ್ರಿಗಳು ಹಾಗು ನಾಗರಿಕರಿಗೆ ಕೋಪವುಂಟಾಗಿ ರಾಜನಿಗೆ ಕಿರೀಟ ತ್ಯಾಗಮಾಡಿ ರಾಜ್ಯವನ್ನು ಬಿಟ್ಟು ಹೊರಡುವಂತೆ ಒತ್ತಾಯಿಸಿದರು. ಆಗಲೂ ಸಹಾ ಉಪರಾಜನು ರಾಜನಿಗೆ ಮತ್ತೆ ವಿನಂತಿಸಿಕೊಂಡನು. ಆದರೆ ರಾಜನು ಮಾಂಸ ತ್ಯಾಗಕ್ಕೆ ಸಿದ್ಧನಿರಲಿಲ್ಲ.
ಆನಂತರ ರಾಜನಿಗೆ ಸಿಂಹಾಸನ ಕಿರೀಟ ಕಿತ್ತುಕೊಂಡು ಗಡಿಪಾರು ಮಾಡಿದರು. ಇದೆಲ್ಲವೂ ಸಹಾ ಅಡಿಗೆ ಭಟ್ಟನ ಭಯದಿಂದಲೇ ಆಯಿತು. ಆತನು ಮೊದಲೇ ಇಂದು ಮಾಂಸ ಸಿಗಲಿಲ್ಲ ಎಂದು ಹೇಳಿದ್ದರೆ ಮುಂದಾಗುವ ಅನೇಕ ಅಮಾನವೀಯ ಘಟನೆಗಳನ್ನು ತಡೆಯಬಹುದಿತ್ತು. ಎಷ್ಟು ಕ್ರೂರ ಹತ್ಯೆಯನ್ನು ರಾಜ್ಯ ನಷ್ಟವನ್ನು ತಡೆಯಬಹುದಿತ್ತು.
- ಧಮ್ಮಪದ ಅಟ್ಠಕಥಾ

the consequences of anger ಕೋಪ - ಕಾಳಯಕ್ಷಿನಿ

                                 ಕೋಪ - ಕಾಳಯಕ್ಷಿನಿ

ಬನಾರಸ್ನಲ್ಲಿ ಶ್ರೀಮಂತ ಬ್ರಾಹ್ಮಣನಿದ್ದನು. ಆತನ ಮರಣದ ನಂತರ ಆತನ ಆಸ್ತಿಯು ಆತನ ಪತ್ನಿಗೆ ಹಾಗು ಪುತ್ರನಿಗೆ ದೊರೆಯಿತು. ಕೆಲಕಾಲದ ನಂತರ ತಾಯಿಯು ಪುತ್ರನಿಗೆ ಮದುವೆ ಮಾಡಿಕೋ ಎಂದು ಸಲಹೆ ಕೊಟ್ಟಳು. ಆದರೆ ಆತನು ನಿರಾಕರಿಸಿದನು. ತನ್ನ ತಾಯಿಯನ್ನು ಆಕೆ ಇರುವವರೆಗೂ ತಾನೇ ಸಲಹುವೇ ಎಂದು ನಿರ್ಧರಿಸಿ ಮದುವೆ ಮಾಡಿಕೊಳ್ಳಲು ನಿರಾಕರಿಸಿದನು. ಆದರೆ ತಾಯಿಯು ಮತ್ತೆ ಮತ್ತೆ ಒತ್ತಾಯಿಸಿದಳು. ಆಕೆಯ ಅಭಿಪ್ರಾಯದಂತೆ ಆತನು ಗೃಹಸ್ಥನ ಕಾರ್ಯಗಳನ್ನು ವಹಿಸಿಕೊಂಡು ಆಸ್ತಿಯಲ್ಲಿ ಸುಖವಾಗಿರಬೇಕೆಂಬುದಾಗಿತ್ತು. ತುಂಬಾ ಒತ್ತಾಯದ ನಂತರ ಪುತ್ರನು ಶಾಂತನಾದನು. ಅದು ಒಪ್ಪಿಗೆಯ ಸೂಚಕ ಎಂದು ಭಾವಿಸಿ ಸೂಕ್ತ ವಧುವನ್ನು ಹುಡುಕಲು ಪ್ರಾರಂಭಿಸಿದಳು. ಆಗ ಆಕೆ ಅದಕ್ಕೆ ಬೇಕಾದ ಪ್ರಾಥಮಿಕ ಸಿದ್ಧತೆಗಳನ್ನು ಮಾಡಿದಲು. ವಧುವು ಆಯ್ಕೆಯಾಗಿ ಭಾರಿ ಸಮಾರಂಭಗಳಿಂದ ಮದುವೆಯಾಯಿತು.
ಕಾಲವು ಸರಿದು ಹೋದರೂ ಆ ವಧುವಿಗೆ ಮಕ್ಕಳಾಗಿರಲಿಲ್ಲ. ಆಗ ಬ್ರಾಹ್ಮಣ ಯುವಕನ ತಾಯಿಯು ವಂಶಾಭಿವೃದ್ಧಿಯ ಅಗತ್ಯವಿದೆ ಎಂದು ಚಿಂತಿಸಿ ಮತ್ತೊಂದು ವಧುವನ್ನು ಹುಡುಕುವ ಪ್ರಸ್ತಾಪ ಮಗನಲ್ಲಿ ಮೂರುಬಾರಿ ವ್ಯಕ್ತಪಡಿಸಿದಳು. ಆದರೆ ಆತನು ಆ ಪ್ರಸ್ತಾವನೆಯನ್ನು ಮೂರುಬಾರಿಯು ನಿರಾಕರಿಸಿದನು. ಈ ಸಂವಾದವನ್ನು ಕೇಳಿದ ಆ ವಧುವು ತನ್ನ ಪತಿಯು ತನ್ನ ತಾಯಿಯ ಮಾತನ್ನು ನಿರಾಕರಿಸಿ ಅವಿಧೇಯನಾಗಿರಬಾರದು ಎಂದು ಚಿಂತಿಸಿ ಸ್ವಯಂ ಆಕೆಯೇ ಹೊಸ ವಧುವನ್ನು ಹುಡುಕಲು ಪ್ರಾರಂಭಿಸಿದಳು. ನಂತರ ಮೊದಲ ಪತ್ನಿಯ ಆಯ್ಕೆಯಂತೆಯೇ ಇನ್ನೊಂದು ಯುವತಿಯೊಂದಿಗೆ ಬ್ರಾಹ್ಮಣನಿಗೆ ವಿವಾಹವಾಯಿತು.
ಕೆಲವು ಕಾಲದ ನಂತರ ಮೊದಲ ಪತ್ನಿಯು ಈ ರೀತಿ ಯೋಚಿಸಿದಳು: ದ್ವಿತೀಯ ಪತ್ನಿಯು ಮಗುವಿಗೆ ಜನ್ಮವಿತ್ತರೆ ಆಕೆಯೇ ಕುಟುಂಬದ ಮುಖ್ಯಸ್ಥಳಾಗುವಳು, ಆದ್ದರಿಂದ ಮಗುವಿನ ಜನ್ಮವನ್ನು ನಿರೋಧಿಸಬೇಕೆಂದು ಇಚ್ಛಿಸಿದಳು. ಆಗ ಆಕೆಯು ನೂತನ ವಧುವಿಗೆ ಗಭರ್ಿಣಿಯಾದಾಗ ತಿಳಿಸಬೇಕೆಂದು ಹೇಳಿದಳು. ಹಾಗೆಯೇ ಆಕೆಗೆ ಚಿಹ್ನೆಗಳು ಕಾಣಿಸಿದಾಗ ಆಕೆಯು ಸೂಚಿಸಿದಳು. ಮೊದಲ ಪತ್ನಿಯು ಆಗ ಆಹಾರದಲ್ಲಿ ಕೆಲವು ಔಷಧ ಬೆರೆಸಿ ದ್ವಿತೀಯ ಪತ್ನಿಗೆ ನೀಡಿದಾಗ ಆಕೆಯು ಅರಿವಿಲ್ಲದೆ ಆ ಔಷಧಿ ಸೇವಿಸಿ ಗರ್ಭಪಾತವಾಯಿತು. ದ್ವಿತೀಯ ಬಾರಿಯು ಸಹಾ ಹಾಗೆ ಆಯಿತು. ಆಗ ನೆರೆಹೊರೆಯ ಒಬ್ಬಳು ದ್ವಿತೀಯ ಪತ್ನಿಗೆ ಎಚ್ಚರಿಸಿ ಕೇಳಿದಾಗ ಆಕೆಯು ನಡೆದುದನ್ನು ತಿಳಿಸಿದಳು. ಆ ನೆರೆಯವಳು ಆಗ ಈ ರೀತಿ ಬುದ್ಧಿವಾದ ಹೇಳಿದಳು. ಗಭರ್ಿಣಿಯಾದರೆ ಅದನ್ನು ಮೊದಲ ಪತ್ನಿಗೆ ತಿಳಿಸದಿರುವಂತೆ ಹೇಳಿದಳು. ಅದರಂತೆಯೇ ಆಕೆಯು ಮೂರನೆಯ ಬಾರಿ ಗಭರ್ಿಣಿಯಾದಾಗ ತಿಳಿಸಲಿಲ್ಲ. ನಂತರ ಚಿಹ್ನೆಗಳನ್ನು ಗಮನಿಸಿ ಮೊದಲ ಪತ್ನಿಯು ಆಕೆಗೆ ತನಗೆ ಏಕೆ ಹೇಳಲಿಲ್ಲ ಎಂದು ಕೇಳಿದಾಗ ಈ ರೀತಿ ಉತ್ತರ ನೀಡಿದಳು: ನೀನೇ ನನಗೆ ಇಲ್ಲಿಗೆ ಕರೆತಂದೆ ಮತ್ತು ಎರಡು ಬಾರಿ ಔಷಧಿ ನೀಡಿ ಗರ್ಭಪಾತ ಮಾಡಿಸಿದೆ. ಆದ್ದರಿಂದಲೇ ನಾನು ನಿನಗೆ ಹೇಳಲಿಲ್ಲ. ನಂತರ ಗಭರ್ಾವಸ್ಥೆಯು ಅತಿ ಮುಂದುವರೆದಂತೆ ಮೊದಲ ಪತ್ನಿಯು ಎರಡನೆಯವಳಿಗೆ ತಿಳಿಯದಂತೆ ಔಷಧಿ ನೀಡಿದಳು. ಅದರ ಪರಿಣಾಮವಾಗಿ ದ್ವಿತೀಯ ಪತ್ನಿಯು ಅಪಾರವಾದ ನರಕದಂತಹ ನೋವನ್ನು ಅನುಭವಿಸಬೇಕಾಯಿತು. ಆಕೆಯು ಜೀವಿಸುವುದೇ ಸಂಶಯವಾಯಿತು. ಆಗ ಆಕೆಯ ಮೊದಲನೆಯವಳಿಗೆ ಈ ರೀತಿ ಹೇಳಿದಳು: ನೀನು ನನ್ನ ಮೂರು ಮಕ್ಕಳಿಗೆ ಕೊಂದಿರುವೆ ಮತ್ತು ನಾನು ಸಹಾ ಸಾಯುತ್ತಿದ್ದೇನೆ. ನಾನು ಸತ್ತನಂತರ ಯಕ್ಷಿಣಿಯಾಗಿ ಹುಟ್ಟುತ್ತೇನೆ, ಮತ್ತು ನಿನ್ನ ಎಲ್ಲಾ ಮಕ್ಕಳನ್ನು ತಿನ್ನುತ್ತೇನೆ. ನಂತರ ನೋವನ್ನು ಅನುಭವಿಸಿ ಆಕೆಯು ಮರಣಿಸಿದಳು. ಅದೇ ಮನೆಯಲ್ಲಿ ಬೆಕ್ಕಾಗಿ ಹುಟ್ಟಿದಳು. ಈ ವೃತ್ತಾಂತವೆಲ್ಲಾ ಕೇಳಿದ ಬ್ರಾಹ್ಮಣನು ಮೊದಲ ಪತ್ನಿಯನ್ನು ಸಾಯುವವರೆಗೆ ಕರುಣಾಹೀನನಾಗಿ ಹೊಡೆದನು. ಆಕೆಯು ಸತ್ತು ಅದೇ ಮನೆಯಲ್ಲಿ ಕೋಳಿಯಾಗಿ ಹುಟ್ಟಿದಳು. ಈಗ ಕೋಳಿಯು ಮೊಟ್ಟೆಗಳನ್ನು ಹಾಕಿತು. ಆಗ ಬೆಕ್ಕು ಮೂರುಬಾರಿ ಮೊಟ್ಟೆಗಳನ್ನು ತಿಂದುಹಾಕಿತು. ಕೊನೆಗೆ ಕೋಳಿಯನ್ನು ಸಹಾ ತಿಂದುಹಾಕಿತು. ಕೋಳಿಯು ಸಾಯುವಾಗ ಕ್ರೋಧದಿಂದ ತಾನು ಸಿಂಹಿಣಿಯಾಗುವಂತೆ ನಿರ್ಧರಿಸಿತು, ಹಾಗೆಯೇ ಸಿಂಹಿಣಿಯಾಯಿತು.
ಆ ಬೆಕ್ಕು ಸಹಾ ಸತ್ತು ಜಿಂಕೆಯಾಗಿ ಹುಟ್ಟಿತು. ಆ ಜಿಂಕೆಗೆ ಮೂರು ಮರಿಗಳಿದ್ದವು. ಆಗ ಸಿಂಹಿಣಿಯು ಆ ಮರಿಗಳನ್ನು ತಿಂದುಹಾಕಿ ಕೊನೆಗೆ ಜಿಂಕೆಯನ್ನು ಸಹಾ ತಿಂದುಹಾಕಿತು. ಆ ಜಿಂಕೆಯು ಸಾಯುವಾಗ ಆ ಸಿಂಹಿಣಿಯನ್ನು ತಿನ್ನುವ ಪ್ರಬಲ ಬಯಕೆ ವ್ಯಕ್ತಪಡಿಸಿತು. ನಂತರ ಆ ಜಿಂಕೆಯು ಸತ್ತು ಯಕ್ಷಿಣಿಯಾದಳು. ಆ ಸಿಂಹಿಣಿಯು ಸತ್ತು ಶ್ರಾವಸ್ತಿಯ ಕುಟುಂಬದಲ್ಲಿ ಹುಟ್ಟಿದಳು. ಆಕೆಗೆ ಯೌವನ ಬಂದಾಗ ನೆರೆಯ ನಗರದ ಯುವಕನಿಗೆ ಕೊಟ್ಟು ಮದುವೆ ಮಾಡಿದರು. ಕಾಲನಂತರ ಆಕೆಯು ಮಗುವಿಗೆ ಜನ್ಮವಿತ್ತಳು. ಆಗ ಯಕ್ಷಿಣಿಯು ಆಕೆಯ ಮನೆಯನ್ನು ವಿಚಾರಿಸಿಕೊಂಡು ವೇಷಧರಿಸಿ ಬಂದಳು. ಆಕೆ ಮಿತ್ರಳಂತೆ ವತರ್ಿಸಿ ಮಗುವನ್ನು ನೋಡುವ ಬಯಕೆ ವ್ಯಕ್ತಪಡಿಸಿ ಆ ಕೋಣೆಯಲ್ಲಿ ಮಗುವನ್ನು ವಾತ್ಸಲ್ಯದಿಂದ ಎತ್ತಿಕೊಳ್ಳುವಂತೆ ಎತ್ತಿ ಹಾಗೆಯೇ ತಿಂದು ಪರಾರಿಯಾದಳು. ಎರಡನೆಯಬಾರಿಯು ಸಹಾ ಹೀಗೆ ಆಯಿತು. ಮೂರನೆಯ ಬಾರಿ ಆಕೆಯು ತನ್ನ ತವರಿನ ಮನೆಗೆ ಮಗುವಿಗೆ ಜನ್ಮ ನೀಡಲು ಹೋದಳು.
ಯಕ್ಷಿಣಿ ಅಲ್ಲಿ ಬಂದು ಅತಿ ದಣಿವಾದವಳಂತೆ ನಟಿಸಿ ಅಲ್ಲಿ ಆಕೆಯ ಬಗ್ಗೆ ವಿಚಾರಿಸಿದಾಗ ಆಕೆ ತನ್ನ ತವರಿಗೆ ಹೋಗಿರುವುದು ತಿಳಿಯಿತು. ಆಕೆಯು ಎಲ್ಲಿಯೇ ಹೋಗಲಿ ನಾನು ಆಕೆಯನ್ನು ಬೇಟೆಯಾಡುನೆನು ಎಂದು ಯಕ್ಷಿಣಿಯು ಹೇಳಿದಳು. ಇಲ್ಲಿ ಆ ಯುವತಿಯು ಮಗುವಿಗೆ ಜನ್ಮವಿತ್ತು ತನ್ನ ಪತಿಯ ಮನೆಗೆ ಮರಳುತ್ತಿದ್ದಳು. ದಾರಿಯಲ್ಲಿ ಜೇತವನ ವಿಹಾರದ ಬಳಿ ಕೊಳವಿತ್ತು. ಆಕೆಯು ಅಲ್ಲಿ ಸ್ನಾನ ಮುಗಿಸಿದಳು. ನಂತರ ಆಕೆಯ ಪತಿಯು ಮಗುವನ್ನು ಆಕೆಯ ಕೈಗೆ ಕೊಟ್ಟು ತಾನು ಸ್ನಾನ ಮಾಡಲು ಹೊರಟನು. ಈಗ ದಾರಿಯಲ್ಲಿ ಯಕ್ಷಿಣಿಯು ಬರುತ್ತಿದ್ದಳು. ಆ ಸ್ತ್ರೀಯು ಯಕ್ಷಿಣಿಯನ್ನು ಕಂಡು ವಿಹಾರದತ್ತ ಅತ್ಯಂತ ಭಯದಿಂದ ಓಡಿದಳು.
ಅದೇ ಸಮಯದಲ್ಲಿ ಬುದ್ಧ ಭಗವಾನರು ಜನರಿಗೆ ಬೋಧನೆಯನ್ನು ನೀಡುತ್ತಿದ್ದರು. ಆ ಯುವತಿಯು ಬುದ್ಧರ ಬಳಿ ಓಡಿಬಂದು ಅವರ ಪಾದದ ಮಣೆಯ ಮೇಲೆ ಮಗುವಿಟ್ಟು, ಬುದ್ಧ ಭಗವಾನರ ಪಾದವನ್ನು ಅಭಯಕ್ಕಾಗಿ ರಕ್ಷಣೆಗೆ ಗಟ್ಟಿಯಾಗಿ ಹಿಡಿದು ಬೇಡಿಕೊಂಡಳು. ಯಕ್ಷಿಣಿಯು ಆಕೆಯನ್ನು ಬೆನ್ನಟ್ಟಿ ಬಂದಳು. ಆದರೆ ವಿಹಾರದ ದ್ವಾರವನ್ನು ದಾಟಲಾಗಲಿಲ್ಲ. ಆಗ ಭಗವಾನರು ಆನಂದನಿಗೆ ಯಕ್ಷಿಣಿಯನ್ನು ಇಲ್ಲಿಗೆ ಕರೆತರುವಂತೆ ಹೇಳಿದರು. ಯಕ್ಷಿಣಿಯು ಬರುವುದನ್ನು ಕಂಡು ಯುವತಿಯು ಅತಿ ಭಯಗ್ರಸ್ಥಳಾಗಿ ಪ್ರಲಾಪಿಸಿದಳು, ಗಟ್ಟಿಯಾಗಿ ಅತ್ತಳು, ಭಗವಾನರು ಸಮಾಧಾನಿಸಿದರು. ನಂತರ ಭಗವಾನರು ಹೀಗೆ ಹೇಳಿದರು:
ನೀನು ನನ್ನ ಹತ್ತಿರ ಬರದೆ ಹೋಗಿದ್ದರೆ, ನಿಮ್ಮ ಕೋಪ ಹೀಗೆಯೇ ಬಹಳ ಕಾಲ ಮುಂದುವರೆಯುತ್ತಿತ್ತು. ದ್ವೇಷವು ದ್ವೇಷದಿಂದ ಎಂದಿಗೂ ಕೊನೆಯಾಗದು. ದಯೆಯಿಂದ ಮಾತ್ರ ದ್ವೇಷ ಕೊನೆಯಾಗುತ್ತದೆ ಎಂದು ಹೇಳಿದರು.
ನಂತರ ಅವರಿಬ್ಬರೂ ಮಿತ್ರರಾದರು ಮತ್ತು ಯಕ್ಷಿಣಿಯೇ ಆಕೆ ಸಹಾಯ ನೀಡಿದಳು ಹಾಗು ಆ ಸ್ತ್ರೀ ನಂಬಿಕೆಗೆ ಅರ್ಹಳಾದಳು.
- ಧಮ್ಮಪದ ಅಟ್ಠಕಥಾ

the effects of greed ದುರಾಸೆ- ಗೋಸಕ

                                       ದುರಾಸೆ- ಗೋಸಕ


ಕೋಸಂಬಿ ಪಟ್ಟಣದಲ್ಲಿ ವೇಶ್ಯೆಯೊಬ್ಬಳು ಮಗುವಿಗೆ ಜನ್ಮವಿತ್ತಳು. ಅದು ಗಂಡು ಮಗುವೆಂದು ತಿಳಿದು ಅದನ್ನು ತಿಪ್ಪೆಯ ರಾಶಿಯಲ್ಲಿ ಬಿಸಾಡಲು ಆಜ್ಞಾಪಿಸಿದಳು. ಹಾಗೆ ಮಾಡಿದಾಗ ಆ ಮಗುವಿನ ಸುತ್ತಲೂ ಕಾಗೆಗಳು ಹಾಗು ನಾಯಿಗಳು ಸುತ್ತುವರೆಯುತ್ತವೆ. ಆಗ ಅಕ್ಕಪಕ್ಕದವನೊಬ್ಬನು ಈ ದೃಶ್ಯದಿಂದ ಆಕಷರ್ಿತನಾಗಿ ಹತ್ತಿರ ಬಂದು ನೋಡಿ ಆ ಮಗುವನ್ನು ಅತ್ಯಂತ ವಾತ್ಸಲ್ಯದಿಂದ ತನ್ನ ಮನೆಗೆ ಕರೆದೊಯ್ಯುತ್ತಾನೆ.
ಒಬ್ಬ ಸಿತನ (ಲಕ್ಷಾಧಿಪತಿ) ಯೊಬ್ಬನು ತನ್ನ ಮನೆಗೆ ಹಿಂತಿರುಗಿ ಹೋಗುವಾಗ ದಾರಿಯಲ್ಲಿ ಜ್ಯೋತಿಷ್ಯನೊಬ್ಬನನ್ನು ಈ ದಿನದ ಗ್ರಹಗತಿಗಳನ್ನು ಕೇಳಿದಾಗ ಅತನು ಈ ರೀತಿ ಉತ್ತರಿಸಿದನು: ಯಾವುದೇ ಮಗುವು ಈ ದಿನ ಹುಟ್ಟಲಿ ಅದು ಈ ಊರಿನ ಮುಖ್ಯ ಲಕ್ಷಾಧಿಪತಿಯಾಗುತ್ತಾನೆ.
ಆ ದಿನದಲ್ಲಿ ಆ ಲಕ್ಷಾಧಿಪತಿಯ ಹೆಂಡತಿಯೂ ಸಹಾ ಗಭರ್ಿಣಿಯಾಗಿರುತ್ತಾಳೆ. ಆದ್ದರಿಂದ ಆ ಸಿತನ ಆತುರದಿಂದ ಅರಮನೆಯಿಂದ ಮನೆಗೆ ಬರುತ್ತಾನೆ. ಆತನು ತನ್ನ ದಾಸಿ ಕಾಳಿಯನ್ನು ಕರೆದು ಈ ದಿನ ಜನ್ಮ ಹೊಂದಿದ ಮಗುವನ್ನು ತೆಗೆದುಕೊಂಡು ಬರುವಂತೆ ಆಜ್ಞಾಪಿಸಿ ಅದಕ್ಕೆ ಪ್ರತಿಯಾಗಿ ಸಾವಿರ ರೂಪಾಯಿ ಕೊಡುತ್ತೇನೆ ಎಂದು ಹಣ ನೀಡುತ್ತಾನೆ.
ಆಕೆಯು ಅದರಂತೆ ಆ ದಿನ ಹುಟ್ಟಿದ ಮಗುವನ್ನು ಹುಡುಕುತ್ತಾ ಹೊರಡುತ್ತಾಳೆ. ಅಲ್ಲಿ ಆ ಪೋಷಕರಿಗೆ ಸಾವಿರ ವರಹಗಳನ್ನು ನೀಡಿ ಆ ಮಗುವನ್ನು ಸಿತನನಿಗೆ ತಂದು ಒಪ್ಪಿಸುತ್ತಾಳೆ. ಸಿತನ ಈ ರೀತಿ ಯೋಚಿಸುತ್ತಾನೆ: ಆತನ ಮಡದಿಯು ಹೆಣ್ಣು ಮಗುವಿಗೆ ಜನ್ಮ ನೀಡಿದರೆ ಈ ಮಗುವಿಗೂ ಅದಕ್ಕೂ ಮದುವೆ ಮಾಡಿಸುವುದು. ಒಂದುವೇಳೆ ಗಂಡು ಮಗುವಿಗೆ ಜನ್ಮ ನೀಡಿದರೆ ಪರ ಮಗುವನ್ನು ನಾಶಪಡಿಸುವುದು ಎಂದು ನಿರ್ಧರಿಸುತ್ತಾನೆ. ಆತನ ಪತ್ನಿಯು ಗಂಡು ಮಗುವಿಗೆ ಜನ್ಮ ನೀಡುತ್ತಾಳೆ. ಆಗ ಸಿತನನು ತನ್ನ ಬುದ್ಧಿಯನ್ನು ಉಪಯೋಗಿಸಿ ನಾನಾ ವಿಧದಿಂದ ಮಗುವನ್ನು ಕೊಲ್ಲಲು ಪ್ರಯತ್ನಿಸುತ್ತಾನೆ, ಆದರೆ ವಿಫಲನಾಗುತ್ತಾನೆ. ಮೊದಲು ಹಸುವಿನ ಕೊಟ್ಟಿಗೆಯ ಬಾಗಿಲಲ್ಲಿ ಇಟ್ಟು ಅದರ ತುಳಿತಕ್ಕೆ ವಶವಾಗಲೆಂದು ಇಡುತ್ತಾನೆ. ನಂತರ ಹೆದ್ದಾರಿಯಲ್ಲಿ ಮಗುವನ್ನು ಇಡುತ್ತಾನೆ. ಅಲ್ಲಿ ಅದು ಪ್ರಾಣಿಗಳ ತುಳಿತಕ್ಕೆ ಅಥವಾ ಬಂಡಿಗಳ ಚಕ್ರಕ್ಕೆ ಸಿಕ್ಕಿ ಸಾಯಲೆಂದು ಇಡುತ್ತಾನೆ. ನಂತರ ಸ್ಮಶಾನದಲ್ಲಿ ಯಕ್ಷ (ನರಭಕ್ಷಕರು) ತಿನ್ನಲೆಂದು ಇಡುತ್ತಾನೆ. ಆದರೆ ಅಲ್ಲಿ ಹೆಣ್ಣು ಮೇಕೆಯಿಂದ ಆ ಮಗು ಪೋಷಿತವಾಗುತ್ತದೆ. ಮತ್ತೊಂದುಬಾರಿ ಅಪರಾಧಿಗಳನ್ನು ತಳ್ಳುವ ಪ್ರಪಾತದಲ್ಲಿ ಎಸೆಯುತ್ತಾನೆ, ಆದರೂ ಪುಣ್ಯ ಬಲದಿಂದ ಆ ಮಗುವು ಪಾರಾಗುತ್ತಿತ್ತು. ಪ್ರತಿಸಾರಿಯು ಸಿತನನು ಸಾವಿರ ವರಹ ನೀಡಿ ಅದನ್ನು ಕಾಪಾಡಿದವರಿಂದ ಅದನ್ನು ಹಿಂದಕ್ಕೆ ಪಡೆಯಲು ವ್ಯಯಿಸುತ್ತಿದ್ದನು. ಆ ಮಗುವು ಸರ್ವ ವಿರೋಧವನ್ನು ಮೀರಿ ದೊಡ್ಡದಾಯಿತು, ಆ ಮಗುವಿನ ಹೆಸರೇ ಗೋಸಕ.
ಸಿತನನಿಗೆ ಒಬ್ಬ ಮಿತ್ರನಿದ್ದನು. ಆತನು ಕುಂಬಾರನಾಗಿದ್ದನು. ಆತನಿಗೆ ಸಿತನನು ಈ ರೀತಿ ಹೇಳಿದನು: ಸ್ನೇಹಿತನೇ, ನನಗೆ ಪ್ರಿಯವಾಗಿರುವ ಈ ಕಾರ್ಯವನ್ನು ನೆರವೇರಿಸು, ನನ್ನ ಸಾಕು ಪುತ್ರ ಅನಧಿಕಾರದ ಆ ಪುತ್ರನನ್ನು ನಿನ್ನ ಬಳಿ ಕಳುಹಿಸುತ್ತೇನೆ, ಆತನನ್ನು ನೀನು ಒಲೆಗೆ ಎಸೆದುಬಿಡು, ಈ ಕಾರ್ಯಕ್ಕೆ ಮುಂಗಡವಾಗಿ ನಿನಗೆ ಸಾವಿರ ವರಹ ನೀಡುತ್ತೇನೆ, ನಾಳೆ ನಾನು ಆ ಹುಡುಗನನ್ನು ನಿನ್ನ ಬಳಿ ಕಳುಹಿಸುತ್ತೇನೆ ಎಂದು ಹೇಳಿದಾಗ ಕುಂಬಾರನು ಅದಕ್ಕೆ ಒಪ್ಪಿದನು. ನಂತರ ಸಿತನನು ಗೋಸಕನನ್ನು ಕರೆಸಿ ಈ ರೀತಿ ಹೇಳಿದನು: ಮಗು, ನಾನು ಆ ಕುಂಬಾರನ ಬಳಿ ನನ್ನ ಒಂದು ಕೆಲಸವನ್ನು ಒಪ್ಪಿಸಿದ್ದೆ. ಅದನ್ನು ನೆರವೇರಿಸು ಎಂದು ಆತನಿಗೆ ಹೇಳು. ಆಗ ಗೋಸಕನು ಆ ಕಾರ್ಯ ಮಾಡಲು ಸಿದ್ಧನಾದನು. ಅಲ್ಲಿ ಆತನ ತಮ್ಮನು (ಸಿತನನ ಮಗ) ಎಲ್ಲಿ ಹೋಗುತ್ತಿರುವುದು ಎಂದು ಕೇಳಿದನು. ಗೋಸಾಕನು ವಿವರಿಸಿದನು. ಆಗ ಆ ಬಾಲಕನು ತಾನೇ ಆ ಕಾರ್ಯ ಮಾಡುವುದಾಗಿ ಒತ್ತಾಯಿಸಿದನು. ಬದಲಾಗಿ ತಾನು ಆಟದಲ್ಲಿ ಕಳೆದುಕೊಂಡಿರುವುದನ್ನು ಸರಿಪಡಿಸು ಎಂದು ಹೇಳಿ ಆ ತಮ್ಮನು ಗೋಸಕನ ಬದಲಿಗೆ ತಾನೇ ಕುಂಬಾರನ ಬಳಿಗೆ ಸಂದೇಶ ತೆಗೆದುಕೊಂಡು ಹೋದನು. ಆ ಕುಂಬಾರನು ಆತನನ್ನು ಹಿಡಿದು ಒಲೆಗೆ ಎಸೆದನು.
ಸ್ವಲ್ಪ ಕಾಲದ ನಂತರ ಗೋಸಕನು ಮನೆಗೆ ಹೋದಾಗ ಸಿನನು ತಾನು ಒಪ್ಪಿಸಿದ ಕಾರ್ಯ ಮಾಡಿರುವೆಯೋ ಇಲ್ಲವೋ ಎಂದು ಕೇಳಿದಾಗ ಗೋಸಕನು ನಡೆದ ವಿಷಯ ತಿಳಿಸಿದನು. ತಕ್ಷಣ ಸಿತನನು ಕುಂಬಾರನ ಬಳಿ ಓಡಿಬಂದನು. ಆದರೆ ಆತನು ತನ್ನ ಕೆಲಸ ಪೂರೈಸಿದ್ದನು. ಪರಿಣಾಮವಾಗಿ ಸಿತನನು ಅತಿ ದುಃಖದಿಂದ ತನ್ನ ದಿನಗಳನ್ನು ದೂಡುತ್ತಾನೆ. ಈ ಎಲ್ಲಾ ಕೃತ್ಯಗಳನ್ನು ಸಿತನನು ತನ್ನ ಪುತ್ರ ವಾತ್ಸಲ್ಯದಿಂದ, ಸ್ವಾರ್ಥದಿಂದ ಮಾಡಿದ್ದನು.
- ಧಮ್ಮಪದ ಅಟ್ಠಕಥಾ

the consequences of lying ಸುಳ್ಳಾಡುವಿಕೆ - ಮೀನಿನ ಪ್ರಸಂಗ

ಸುಳ್ಳಾಡುವಿಕೆ - ಮೀನಿನ ಪ್ರಸಂಗ

ಕಶ್ಶಪ ಬುದ್ಧರ ಕಾಲದಲ್ಲಿ ಇಬ್ಬರು ಸಹೋದರರು ಭಿಕ್ಷುಗಳಾಗಿ ಸಂಘದಲ್ಲಿ ಸೇರಿದರು. ಅವರಲ್ಲಿ ಹಿರಿಯನ ಹೆಸರು ಸೊದನ ಮತ್ತು ಕಿರಿಯನ ಹೆಸರು ಕಪಿಲನೆಂದಾಗಿತ್ತು. ಅವರ ತಾಯಿ ಸೋದನಿ ಹಾಗು ಸೋದರಿ ತಪನ ಕೂಡ ಭಿಕ್ಷುಣಿಗಳಾಗಿ ಸಂಘದಲ್ಲಿದ್ದರು.
ಸೊದನ ಹಾಗು ಕಪಿಲರು ಅಲ್ಲಿ ಎಷ್ಟು ವಿಧದ ದೂರ (ಭಿಕ್ಷುವಿನ ವಿವಿಧ ಜೀವನದ ವಿಧಾನ) ಎಂದು ವಿಚಾರಿಸಿದರು. ನಂತರ ಸೊದನ ಗುರುಗಳೊಂದಿಗೆ ಐದು ವರ್ಷ ವಾಸಿಸಿ ಮರುಭೂಮಿಗೆ ಹೋಗಿ ಅಲ್ಲಿ ನಿರಂತರ ದೃಢಪ್ರಯತ್ನಶೀಲತೆಯಿಂದ ಅರಹಂತನಾದನು (ನಿಬ್ಬಾಣ ಸಾಕ್ಷಾತ್ಕಾರ, ವಿಮುಕ್ತಿ (ಸಜೀವ) ಪಡೆದನು). ಆದರೆ ಕಪಿಲ ಗ್ರಂಥಾದೂರ ಭಿಕ್ಷುವಾಗಿ ತಿಪಿಟಕದಲ್ಲಿ ನಿಷ್ಣಾತ ವಾಗ್ಮಿಯಾದನು. ಆತನ ಆಳವಾದ ಜ್ಞಾನದಿಂದ ಆತನಿಗೆ ಅಪಾರ ಸಂಖ್ಯೆಯ ಹಿಂಬಾಲಕರು ದೊರೆತರು. ಅದರಿಂದ ಆತನಿಗೆ ಅಪಾರ ಲಾಭವಾಯಿತು. ಇದರಿಂದ ಅವನಿಗೆ ಅಹಂ ಹೆಚ್ಚಾಯಿತು ಮತ್ತು ಆತನು ಪರರ ಹೇಳಿಕೆಗಳನ್ನು ವಿರೋಧಿಸುತ್ತಿದ್ದನು. ಪರರ ಒಂದು ವಿಷಯವನ್ನು ತಪ್ಪು ಎಂದು ಹೇಳಿದರೆ, ಈತನು ಅದನ್ನು ಸರಿಯೆಂದು ವಾದಿಸುತ್ತಿದ್ದನು. ಪರರು ಒಂದು ವಿಷಯವನ್ನು ಸರಿ ಎಂದು ಹೇಳಿದರೆ, ಈತನು ಅದನ್ನು ತಪ್ಪೆಂದು ವಾದಿಸುತ್ತಿದ್ದನು. ಹೀಗೇ ನಡೆಯುತ್ತಿತ್ತು. ಹಿರಿಯ ಸ್ಥವಿರರು ಆತನಿಗೆ ಹೀಗೆ ಮಾಡಕೂಡದೆಂದು ಪದೇ ಪದೇ ಬುದ್ಧಿವಾದ ಹೇಳಿದರು. ಆದರೆ ಆತನು ಅವರ ಮಾತನ್ನು ಲೆಕ್ಕಕ್ಕೆ ತೆಗೆದುಕೊಳ್ಳಲಿಲ್ಲ. ಆಗ ಥೇರರು ಅವರ ಅಣ್ಣನಾದ ಸೊದನನಿಗೆ ಬುದ್ಧಿವಾದ ಹೇಳಲು ಕೇಳಿಕೊಂಡರು. ಸೊದನ ಥೇರನು ಕಿರಿಯನಿಗೆ ಹೀಗೆ ಮಾಡಕೂಡದೆಂದು ಬುದ್ಧಿವಾದ ಮಾಡಿದರೂ ಸಹಾ ಆತನು ಅಲಕ್ಷಿಸಿದನು. ಆಗ ಅರ್ಹಂತನಾದ ಸೋದನನು ಹೀಗೆ ಹೇಳಿದನು: ನೀನು ನಿನ್ನ ಕ್ರಿಯೆಗೆ ದುಃಖ ಫಲ ಪಡೆಯುವೆ ಎಂದು ಹೇಳಿ ಹೊರಟು ಹೋದನು.
ಕಪಿಲನು ಸಂಘದಲ್ಲಿರುವ ಥೇರರನ್ನು ಬೇರ್ಪಡಿಸಿದನು. ತನಗೆ ಇಚ್ಛೆಬಂದಂತೆ ವತರ್ಿಸಿದನು. ಧಮ್ಮದಲ್ಲಿರುವ ಸತ್ಯವನ್ನು ಮುಚ್ಚಿಟ್ಟನು. ಧಮ್ಮದಲ್ಲಿಲ್ಲದ ಮಿಥ್ಯವನ್ನು ಸತ್ಯವೆಂಬಂತೆ ಪ್ರಕಟಿಸಿದನು. ಭಿಕ್ಷುಗಳು ಸಭೆಯಲ್ಲಿ ಸೇರಿ ನಿವೇದನೆ ಮಾಡಲು ಸೇರಿರುವಾಗ ಗದ್ದುಗೆಯಲ್ಲಿ ಕುಳಿತ ಕಪಿಲನು ಭಿಕ್ಷುಗಳಿಗೆ ಅವರೆಲ್ಲರೂ ನಿಯಮ ಪಾಲನೆಯಲ್ಲಿರುವರೇ ಎಂದು ಕೇಳಿದನು. ಯಾರೊಬ್ಬರು ಉತ್ತರಿಸದಿದ್ದಾಗ ಹಾಗಾದರೆ ಮುಂದೆ ನಾನು ಈ ನಿಯಮಗಳೆಲ್ಲವೂ ಪಾಲಿಸಬೇಕಾಗಿಲ್ಲ ಎಂದು ಹೇಳಿ ಧರ್ಮವನ್ನು, ವಿನಯವನ್ನು ಭ್ರಷ್ಟಗೊಳಿಸಿದನು. ಅದೇದಿನವೇ ಸೊದನ ಅರಹಂತರು ನಿಬ್ಬಾಣವನ್ನು ಪಡೆದರು. ಕೆಲವು ಕಾಲದ ನಂತರ ಕಪಿಲನು ಸತ್ತುಹೋದನು ಹಾಗು ನರಕದಲ್ಲಿ ಹುಟ್ಟಿದನು. ಆತನ ತಾಯಿ, ತಂಗಿ ಮತ್ತು ಆತನನ್ನು ಅನುಸರಿಸಿದವರೆಲ್ಲರೂ ಕಾಲನಂತರ ತೀರಿಹೋಗಿ ನರಕದಲ್ಲಿ ಹುಟ್ಟಿದರು.
ಅದೇವೇಳೆಯಲ್ಲಿ 500 ದರೋಡೆಕೋರರು ಅಪಾಯದಲ್ಲಿ ಸಿಲುಕಿ ಅವರನ್ನು ಭಟರು ಬೆನ್ನಟ್ಟಿ ಬಂದಾಗ ಅವರು ರಕ್ಷಣೆಗೆ ಮರುಭೂಮಿಗೆ ಓಡಿದರು. ಅಲ್ಲಿ ಗುಹೆಯಲ್ಲಿ ಭಿಕ್ಷು ಇರುವುದನ್ನು ಕಂಡು ಅವರಲ್ಲಿ ರಕ್ಷಣೆ ಕೇಳಿಕೊಂಡರು. ಆ ಮಹಾಭಿಕ್ಷುವು ಅವರಿಗೆ : ನಿಮಗೆ ಈಗ ಯಾವುದೂ ರಕ್ಷಣೆ ನೀಡಲಾರದು, ಆದ್ದರಿಂದ ನನ್ನ ಮಿತ್ರರೇ, ನೀವು ತ್ರಿಸರಣಗಳನ್ನು ಹಾಗು ಪಂಚಶೀಲಗಳನ್ನು ನಿಮ್ಮ ಮಾರ್ಗದಶರ್ಿಯನ್ನಾಗಿ ಹಾಗು ಸಹಾಯವನ್ನಾಗಿ ಪಡೆಯಿರಿ. ಅವರು ಅದರಂತೆಯೇ ನಡೆದುಕೊಂಡರು. ಆದರೆ ಆ ಹಳ್ಳಿಗರು ಅವರಿಂದ ಬಹಳಷ್ಟು ನರಳಿದ್ದರು. ಅವರು ಬಂದು ಆ ಡಕಾಯಿತರನ್ನು ಕೊಂದು ಹಾಕಿದರು. ಅವರೆಲ್ಲರೂ ಕಾಮವಚರ ದೇವಲೋಕದಲ್ಲಿ ಜನಿಸಿದರು. ಗೌತಮ ಬುದ್ಧರ ಕಾಲದಲ್ಲಿ ಆ ಡಕಾಯಿತರ ನಾಯಕನು ಶ್ರಾವಸ್ತಿಯ ಪ್ರಧಾನ ಮೀನುಗಾರನ ಮಗನಾಗಿ ಹುಟ್ಟಿದನು. ಮಿಕ್ಕವರು ಸಹಾ ಅದೇ ನಗರದಲ್ಲಿ ಹುಟ್ಟಿದರು. ಆ ಐನೂರು ಜನರು ಸಹಾ ಬೆಳೆದು ಅವರೆಲ್ಲರು ಉತ್ತಮ ಮಿತ್ರರಾದರು.
ಕಪಿಲನು ನರಕದಲ್ಲಿ ದುಃಖ ಅನುಭವಿಸಿದ ನಂತರ ಅಚಿರವತಿ ನದಿಯಲ್ಲಿ ದೊಡ್ಡ ಮೀನಾಗಿ ಹುಟ್ಟಿದನು. ಆ ಮೀನು ಹೊಂಬಣ್ಣದ ವರ್ಣದಲ್ಲಿತ್ತು. ಆದರೆ ಬಾಯಿಂದ ಅತಿ ಅಸಹ್ಯಕರ ದುವರ್ಾಸನೆಯಿಂದ ಕೂಡಿತ್ತು.
ಒಂದುದಿನ ಮೀನುಗಾರರ ಗುಂಪು ಮೀನುಗಳನ್ನು ಹಿಡಿಯಲು ಬಲೆಯನ್ನು ಹಾಕಿದಾಗ ಕಪಿಲನು ಸಿಕ್ಕಿಬಿದ್ದನು. ಆ ಮೀನುಗಾರರಿಗೆ ಮೊದಲ ಪ್ರಯತ್ನಕ್ಕೆ ಇಂತಹ ದೊಡ್ಡ ಮೀನು ಬಿದ್ದಿತ್ತು. ಅವರು ಅದನ್ನು ರಾಜನ ಬಳಿ ತಂದು ಒಪ್ಪಿಸಿದರು. ಆ ರಾಜನು ಮೀನನ್ನು ತೆಗೆದುಕೊಂಡು ಜೇತವನ ವಿಹಾರದಲ್ಲಿ ಬುದ್ಧರ ಬಳಿ ತಂದನು. ಆಗ ಮೀನು ಬಾಯಿ ತೆಗೆದಾಗ ಇಡೀ ವಿಹಾರವೇ ದುವರ್ಾಸನೆಯಿಂದ ತುಂಬಿತು. ಆಗ ರಾಜನು ಭಗವಾನರಿಗೆ ಕೇಳಿಕೊಂಡನು. ಭಗವಾನ್, ಏತಕ್ಕಾಗಿ ಈ ಮೀನು ಇಂತಹ ಚಿನ್ನದ ವರ್ಣದಿಂದ ಕೂಡಿದ್ದರೂ ಬಾಯಿಂದ ಇಂತಹ ದುವರ್ಾಸನೆ ಇದೆ?
ಆಗ ಭಗವಾನರು ಉತ್ತರಿಸಿದರು: ಮಹಾರಾಜ, ಈ ಮೀನು ಹಿಂದೆ ಕಶ್ಶಪ ಬುದ್ಧರ ಕಾಲದಲ್ಲಿ ಭಿಕ್ಷುವಾಗಿತ್ತು. ಧರ್ಮದಲ್ಲಿ ಅತಿ ಪಾಂಡಿತ್ಯ ಪಡೆದಿದ್ದರೂ ಸಹಾ ಸತ್ಯವನ್ನು ಮಿಥ್ಯಮಾಡಿ, ಹಿಂದಿನ ಭಿಕ್ಷುಗಳ ಬುದ್ಧಿವಾದ ಧಿಕ್ಕರಿಸಿ ಧಮ್ಮವನ್ನು ಭ್ರಷ್ಟಗೊಳಿಸಿದ್ದರಿಂದ ಅಲ್ಲಿಂದ ನರಕದಲ್ಲಿ ಹುಟ್ಟಿ, ಈಗ ಮೀನಾಗಿ ಹುಟ್ಟಿದ್ದಾನೆ. ಆಗ ಭಿಕ್ಷುವಾಗಿ ಶೀಲಗಳನ್ನು ಪಾಲಿಸಿದ್ದರಿಂದ ಆ ಸುಕೃತ ಫಲದಿಂದ ಚಿನ್ನದ ವರ್ಣದಿಂದ ಕೂಡಿದೆ. ಆದರೆ ಸತ್ಯವನ್ನು ಮಿಥ್ಯ ಮಾಡಿದ್ದರ ಫಲವಾಗಿ ಹಾಗು ಹಿರಿಯ ಭಿಕ್ಷುಗಳಿಗೆ ನಿಂದಿಸಿದ್ದರ ಫಲವಾಗಿ ಈ ಹೀನಾಯ ದುವರ್ಾಸನೆಯನ್ನು ಹೊಂದಿದೆ. ಮಹಾರಾಜ ನಾನು ಈ ಮೀನನ್ನು ಮಾತನಾಡಿಸಲೇ? ಹಾಗೇ ಮಾಡಿ ಭಗವಾನ್ ಎಂದು ರಾಜನು ಉತ್ತರಿಸಿದಾಗ ಭಗವಾನರು  ಮೀನನ್ನು ಮಾತನಾಡಿಸಿದರು.
ಆ ಮೀನು ಓ ಭಗವಾನ್, ನಾನು ಕಪಿಲ.
ಎಲ್ಲಿಂದ ನೀನು ಬಂದಿರುವೆ?
ಅವೀಚಿ ನರಕದಿಂದ ಬಂದಿರುವೆ ಭಗವಾನ್.
ಅಲ್ಲಿ ಏತಕ್ಕೆ ಜನ್ಮಿಸಿದ್ದೆ ?
ಮಿಥ್ಯವನ್ನು ಸತ್ಯವೆಂದು ಪ್ರತಿಪಾದಿಸಿದ್ದಕ್ಕಾಗಿ ಭಗವಾನ್.
ನಿನ್ನ ಸೋದರ ಸೊದನ ಎಲ್ಲಿ?
ಆತನು ನಿಬ್ಬಾಣವನ್ನು ಪ್ರಾಪ್ತಿಮಾಡಿದನು ಭಗವಾನ್.
ನಿನ್ನ ಸೋದರಿ ತಪನಿ ಎಲ್ಲಿ ?
ನರಕದಲ್ಲಿದ್ದಾಳೆ ಭಗವಾನ್.
ನಿನ್ನ ತಾಯಿ ಸೊದನಿ ಎಲ್ಲಿ ?
ಆಕೆ ಮಹಾನರಕದಲ್ಲಿದ್ದಾಳೆ ಭಗವಾನ್.
ಇಲ್ಲಿಂದ ನೀನು ಎಲ್ಲಿ ಜನ್ಮಿಸಬೇಕಾಗುವುದು.
ಮಹಾ ನರಕದಲ್ಲೇ ಭಗವಾನ್.
ಹೀಗೆ ನುಡಿದ ಅಲ್ಪ ವೇಳೆಯಲ್ಲಿ ಅದು ತಲೆಯನ್ನು ಬಡಿಯುತ್ತಾ ಮೃತ್ಯುವಿನೊಂದಿಗೆ ಹೋರಾಡುತ್ತ ಮಡಿಯಿತು. ನಂತರ ಭಗವಾನರು ಸಭೆಗೆ ಸುತ್ತವನ್ನು ಬೋಧಿಸಿದರು. ಅದು ಮುಂದೆ ಕಪಿಲ ಸುತ್ತ ಎಂದು ಪ್ರಸಿದ್ಧಿಯಾಯಿತು.
- ಕಪಿಲ ಸುತ್ತ ಅರ್ಥ ವರ್ಣನಾ

the consequences of adultery ಕಾಮುಕತೆ - ಕೋಸಲ ರಾಜನ ಪ್ರಸಂಗ

ಕಾಮುಕತೆ - ಕೋಸಲ ರಾಜನ ಪ್ರಸಂಗ

(ಈ ಬೋಧನೆಯು ಬುದ್ಧ ಭಗವಾನರಿಂದ ಜೇತವನ ಆರಾಮದಲ್ಲಿ ಹೇಳಲ್ಪಟ್ಟಿತ್ತು. ಅದು ಕೋಸಲ ರಾಜನಿಗೆ ಸಂಬಂಧಪಟ್ಟಿತ್ತು.)
ಒಮ್ಮೆ ಕೋಸಲ ರಾಜ್ಯದಲ್ಲಿ ರಾಷ್ಟ್ರೀಯ ದಿನದಂದು ಪ್ರಜೆಗಳೆಲ್ಲರೂ ಆನಂದಿಸುತ್ತಿದ್ದರು. ಕೋಸಲ ರಾಜನು ಸಹಾ ಅತ್ಯಂತ ಅಲಂಕೃತ ಆನೆಯನ್ನೇರಿ (ಪಟ್ಟದ ಆನೆ) ನಗರದ ಕಡೆಗೆ ಹೊರಟನು. ವಿಸ್ತಾರವಾದ ಜನಜಂಗುಳಿಯು ರಾಜನನ್ನು ನೋಡಲು ಹಾತೊರೆಯುತ್ತಿತ್ತು. ಆತನು ಒಂದು ಬೀದಿಯನ್ನು ಹಾದು ಹೋಗುತ್ತಿರುವಾಗ ನಗರಾಧಿಪತಿಯ ಪತ್ನಿಯು ಈ ಸಡಗರವನ್ನು ಮೇಲಿನ ಮಹಡಿಯ ಕಿಟಕಿಯಿಂದ ನೋಡುತ್ತಿದ್ದಳು. ರಾಜನು ಆ ಸ್ತ್ರೀಯನ್ನು ನೋಡಿದನು. ಆಕೆಯ ರೂಪವು ಅವನನ್ನು ಅತಿ ಆಕಷರ್ಿಸಲ್ಪಟ್ಟಿತು. ಆತನು ಆಕೆಯನ್ನು ಬಯಸಿದನು. ಆತನು ಆತುರನಾಗಿ ಹಾಗೆಯೇ ಅರಮನೆಗೆ ಹಿಂತಿರುಗಿದನು. ತನ್ನ ನಿಷ್ಠಾವಂತ ಮಂತ್ರಿಯನ್ನು ಕರೆಸಿದನು. ಅವನಲ್ಲಿ ಆ ಸ್ತ್ರೀಯ ಬಗ್ಗೆ ಬೀದಿ, ಮನೆ ಹೇಳಿ ವಿಚಾರಿಸಿದನು. ಆಗ ಮಂತ್ರಿಯು ತಿಳಿದುದನ್ನು ಉತ್ತರಿಸಿದನು. ನಂತರ ರಾಜನು ಆಕೆಯು ವಿವಾಹಿತಳೇ ಅಥವಾ ಅವಿವಾಹಿತಳೇ ಎಂದು ತಿಳಿದು ಬರಲು ಆಜ್ಞಾಪಿಸಿದನು. ಆ ಮಂತ್ರಿಯು ವಿಚಾರಿಸಿ ಆಕೆ ವಿವಾಹಿತಳು, ಆಕೆಯ ಪತಿಯೊಡನೆ ವಾಸಿಸುತ್ತಿರುವಳು ಎಂದು ತಿಳಿಸಿದನು. ನಂತರ ರಾಜನು ಆಕೆಯ ಪತಿಯನ್ನು ತನ್ನನ್ನು ಕಾಣುವಂತೆ ಆಜ್ಞಾಪಿಸಿದನು. ಆತನು ಆಜ್ಞೆ ಪಾಲಿಸಲು ಅರಮನೆಗೆ ಬಂದನು. ಆತನಿಗಂತೂ ತನ್ನ ಪತ್ನಿಯ ಕಾರಣದಿಂದಲೇ ಅಪಾಯ ಉದ್ಭವಿಸಲಿದೆ ಎಂದು ಅರಿವಾಯಿತು. ಆತನು ರಾಜನನ್ನು ಕಂಡು ಗೌರವ ಅಪರ್ಿಸಿದನು. ಆಗ ರಾಜನು ಆತನಿಗೆ ಹೀಗೆ ಹೇಳಿದನು: ಇಂದಿನಿಂದ ನೀನು ನನ್ನ ಹತ್ತಿರ ಸೇವೆ ಮಾಡಿಕೊಂಡಿರು. ಆತನು ಹಾಗೇ ಆಗಲೆಂದು ಒಪ್ಪಿದನು. ಆಗ ರಾಜನು ಆತನಿಗೆ ಆತನಿಂದ ಬರುವ ತೆರಿಗೆ ಕೊಡಬೇಕಾಗಿಲ್ಲ ಅದರ ಬದಲು ವೈಯಕ್ತಿಕ ಸೇವೆ ಮಾಡಬೇಕು ಎಂದು ಹೇಳಿ ಕೆಲವು ಕಾರ್ಯ ವಹಿಸಿದನು. ಆಗ ಆತನಿಗೆ ಈ ರೀತಿ ಹೊಳೆಯಿತು: ಇದು ನನ್ನ ಪತ್ನಿಯನ್ನು ಅಪಹರಿಸುವ ರಾಜನ ಸಂಚು ಎಂದು. ಆತನು ಬಹಳಷ್ಟು ಭೀತನಾದನು. ಆದರೆ ರಾಜನು ಹೇಳಿದ ಕಾರ್ಯ ಮಾಡಿದನು. ರಾಜನಿಗೆ ಆತನ ಕಾರ್ಯದಲ್ಲಿ ಸಣ್ಣ ಕಲೆಯನ್ನು ಸಹಾ ಕಾಣಲಾಗಲಿಲ್ಲ. ಆಗ ಆತನಿಗೆ ಈ ರೀತಿ ಆಜ್ಞಾಪಿಸಿದನು: ಆತನು ಬೆಳಿಗ್ಗೆ ಎದ್ದು ನೂರು ಯೋಜನ ದೂರದಲ್ಲಿರುವ ನದಿಗೆ ಹೋಗಿ ಕಮಲದ ಹೂವುಗಳ ಕಟ್ಟನ್ನು ಹಾಗು ನಾಗಲೋಕದ ಮಣ್ಣಿನ ಮುದ್ದೆಯನ್ನು ಸಂಜೆಯ ಸ್ನಾನದ ಒಳಗೆ ತರಬೇಕು, ಈ ಕಾರ್ಯದಲ್ಲಿ ವಿಫಲನಾದರೆ ಆತನಿಗೆ ನೇಣು ಹಾಕುವುದು. ಆ ಮನುಷ್ಯನಿಗೆ ಈ ಕಾರ್ಯ ಸಾಧಿಸುವಲ್ಲಿ ಸಂಶಯವುಂಟಾಗಿ ಅತಿಯಾಗಿ ಹೆದರಿದನು. ಮನೆಗೆ ಹೋಗಿ ಅನ್ನವನ್ನು ಬುಟ್ಟಿಯಲ್ಲಿಟ್ಟುಕೊಂಡು ತನ್ನ ಪ್ರಯಾಣ ಪ್ರಾರಂಭಿಸಿದನು. ಒಂದು ಯೋಜನ ದೂರ ಹೋದನಂತರ ಒಂದು ಪಾಲು ಆಹಾರವನ್ನು ಒಂದೆಡೆಯಿಟ್ಟು ತಾನು ತಿನ್ನುವುದಕ್ಕೆ ಪ್ರಾರಂಭಿಸಿದನು. ಹಾಗೆಯೇ ಒಬ್ಬ ಬಡ ಪ್ರಯಾಣಿಕನಿಗೆ ಆ ಪಾಲನ್ನು ನೀಡಿದನು. ಇಬ್ಬರೂ ಅನ್ನದ ಪಾಲನ್ನು ತೆಗೆದುಕೊಂಡ ನಂತರ ಹಿಡಿಯಷ್ಟು ಅನ್ನವನ್ನು ನದಿಗೆ ಬಿಟ್ಟನು. ಆನಂತರ ಆತನು ದೇವತೆಗಳಿಗೆ ಮೂರುಬಾರಿ ಪ್ರಾಥರ್ಿಸಿದನು. ತಾನು ಪ್ರಯಾಣಿಕನಿಗೆ ಮತ್ತು ಮೀನುಗಳಿಗೆ ಆಹಾರ ನೀಡಿದ್ದ ಫಲವಾಗಿ ತನ್ನ ಕಾರ್ಯದಲ್ಲಿ ಯಶಸ್ಸು ಸಿಗಲೆಂದು ಪ್ರಾಥರ್ಿಸಿದನು.
ಒಬ್ಬ ದೇವತೆ ವೃದ್ಧನ ವೇಷದಲ್ಲಿ ಪ್ರತ್ಯಕ್ಷವಾಗಿ ಆತನ ಕೋರಿಕೆ ಈಡೇರಿಸಿದನು. ಅಲ್ಲಿ ರಾಜನಿಗೆ ಈ ಮನುಷ್ಯ ಏನಾದರೂ ತನ್ನ ಕಾರ್ಯದಲ್ಲಿ ಸಫಲನಾದರೆ ಅದು ವ್ಯರ್ಥವಾಗಲೆಂದು ಅರಮನೆಯ ಬಾಗಿಲನ್ನು ಮುಚ್ಚಿಸಿ ತನ್ನಲ್ಲಿಯೇ ಬೀಗದ ಕೈಯನ್ನು ಇಟ್ಟುಕೊಂಡನು.
ಇಲ್ಲಿ ಈತನು ಕಮಲದ ಹೂಗಳನ್ನು ಹಾಗು ಮಣ್ಣಿನ ಮುದ್ದೆಯನ್ನು ರಾಜನ ಸಂಜೆಯ ಸ್ನಾನದ ವೇಳೆಗೆ ಮುಂಚೆ ತಂದನು. ಆದರೆ ಅರಮನೆಯ ಬಾಗಿಲು ಹಾಕಿತ್ತು. ಆತನು ಬಾಗಿಲನ್ನು ತೆರೆಯುವಂತೆ ಪ್ರಾಥರ್ಿಸಿದಾಗ, ಕಾವಲುಗಾರನು ಏನಾಯಿತೆಂದು ಅಲ್ಲಿಂದಲೇ ಕೇಳಿದನು. ಆಗ ಈತನಿಗೆ ಜೀವ ಭಯ ಅತಿಯಾಗಿ ಆತನು ಬಾಗಿಲಿನಲ್ಲಿ ಹೂವು ಮಣ್ಣಿನ ಮುದ್ದೆಯನ್ನು ಎಸೆದು ಅಲ್ಲಿದ್ದ ನಗರವಾಸಿಗಳಿಗೆ ತಾನು ರಾಜಕಾರ್ಯ ನೆರವೇರಿಸಿದ್ದಾಗಿ ತಿಳಿಸಿ, ಅವರಿಗೆ ಸಾಕ್ಷಿಯಾಗಿ ಭಾವಿಸಿ ಶಾಂತತೆಗಾಗಿ ಸಮೀಪದ ಭಿಕ್ಷು ವಿಹಾರಕ್ಕೆ ಹೋದನು.
ರಾತ್ರಿ ರಾಜನು ಆ ಸ್ತ್ರೀಯ ಬಗ್ಗೆ ವಿಕಾರವಾಗಿ ಚಿಂತಿಸುತ್ತಾ ಆ ಮನುಷ್ಯನನ್ನು ಮರುದಿನ ಕೊಲ್ಲಲು ನಿರ್ಧರಿಸಿದನು. ಹಾಗು ಅವನ ಪತ್ನಿಯನ್ನು ಅರಮನೆಗೆ ಕರೆತರುವ ನಿಧರ್ಾರ ಮಾಡಿದನು. ರಾತ್ರಿ ನಿದ್ರಿಸುತ್ತಿರುವಾಗ ಆತನಿಗೆ ಅತಿ ಭಯಂಕರ ಶಬ್ದಗಳನ್ನು ಕೇಳಿ ಅತ್ಯಂತ ಭಯಭೀತನಾದನು. ಆ ಶಬ್ದಗಳು ನಾಲ್ಕು ಜೀವಿಗಳು ಲೋಹಕುಂಬಿ ನರಕದಿಂದ ನರಳುತ್ತಿರುವ ಶಬ್ದವಾಗಿತ್ತು. ಆತನು ಅದರಿಂದ ಭಯಪಟ್ಟನು: ಓಹ್! ಈ ಶಬ್ದಗಳು ಯಾವ ಮುನ್ಸೂಚನೆ ನೀಡುತ್ತಿವೆ, ನನಗೆ ಯಾವ ಅಪಾಯವು ಬರಬಹುದು ಅಥವಾ ನನ್ನ ರಾಣಿಗೆ ಯಾವ ಅಪಾಯ ಬರಬಹುದು, ನನ್ನ ರಾಜ್ಯಕ್ಕೆ ಏನಾದರೂ ಅಪಾಯವಿದೆಯೇ? ಹೀಗೆಂದು ಭಯದಿಂದ ನಿದ್ರಾರಹಿತ ರಾತ್ರಿ ಕಳೆದನು. ಮುಂಜಾನೆಯೇ ರಾಜ ಪುರೋಹಿತನನ್ನು ಕರೆಸಿ, ಈ ವಿಷಯವನ್ನು ವಿಚಾರಿಸಿದನು. ಆ ಬ್ರಾಹ್ಮಣನಿಗೆ ಇದರ ಬಗ್ಗೆ ಏನೂ ತಿಳಿದಿರಲಿಲ್ಲ. ಆದರೂ ಸಹಾ ಆತನು ಇದು ರಾಜರಿಗೆ ಅಪಾಯದ ಸೂಚನೆ ಎಂದನು. ರಾಜನಿಗೆ ಇದರಿಂದ ಮತ್ತಷ್ಟು ಭೀತಿಯಾಗಿ ಇದರ ನಿವಾರಣ ಮಾರ್ಗವನ್ನು ಕೇಳಿದನು. ಅದಕ್ಕೆ ಆ ಬ್ರಾಹ್ಮಣ ಹೆದರಬೇಡ ರಾಜ, ನಾನು ಮೂರು ವೇದಗಳನ್ನು ಅರಿತಿದ್ದೇನೆ. ಬಲಿ ಕೊಡುವುದರಿಂದ ಕೆಡುಕು ನಿವಾರಣೆಯಾಗುವುದು ಎಂದನು. ಅದಕ್ಕಾಗಿ ನಿನಗೆ ಏನೇನು ಬೇಕಾಗುವುದು? ಎಂದು ರಾಜನು ಕೇಳಿದಾಗ ಅವನು ಆನೆಗಳು, ಕುದುರೆಗಳು, ಗೋವುಗಳು, ಮೇಕೆಗಳು, ಕುರಿಗಳು, ಹುಂಜಗಳು, ಹಂದಿಗಳು, ಹುಡುಗರು ಮತ್ತು ಹುಡುಗಿಯರು. ಪ್ರತಿಯೊಂದು ನೂರು ನೂರು ಬೇಕು ಎಂದನು. ರಾಜನಿಗೆ ಇದರಿಂದ ತಾನು ಕ್ಷೇಮವಾಗಿ ಇರಬಹುದು ಎಂದು ಭಾಸವಾಗಿ ಪ್ರತಿಯೊಂದೂ ಆಗಲೇ ದೊರೆಯುವಂತೆ ಆಜ್ಞಾಪಿಸಿದನು. ತಂದೆ-ತಾಯಿಗಳು, ಬಂಧುಗಳು, ಮಿತ್ರರು ಬಹಳಷ್ಟು ನಾಗರಿಕರು ಮಾನವ ಬಲಿಯು ಸಹಾ ಆಗುತ್ತಿರುವುದನ್ನು ಕೇಳಿ ಅತಿಯಾಗಿ ಶೋಕಿಸಿದರು ಮತ್ತು ಪ್ರಲಾಪಿಸಿದರು.
ರಾಣಿ ಮಲ್ಲಿಕಾ ರಾಜನ ಬಳಿ ಹೋಗಿ ರಾಜನು ಚಿಂತಿತನಾಗಿರುವುದನ್ನು ಕಂಡು ಕಾರಣ ಕೇಳಿದಳು. ಅದಕ್ಕೆ ರಾಜನು ಈ ರೀತಿ ಹೇಳಿದನು: ನಿನಗೆ ಇನ್ನೂ ಗೊತ್ತಾಗಲಿಲ್ಲವೆ, ನನ್ನ ಕಿವಿಯಲ್ಲಿ ಹಾವು ಹೋಗಿದೆ ಎಂದು ಪೂರ್ಣ ವೃತ್ತಾಂತ ತಿಳಿಸಿದನು ಮತ್ತು ರಾಜ ಪುರೋಹಿತ ಮಾಡುತ್ತಿರುವ ಕಾರ್ಯ ತಿಳಿಸಿದನು. ಆಗ ರಾಣಿ ಮಲ್ಲಿಕಾಳು ಈ ರೀತಿ ಹೇಳಿದಳು: ಏನು ಓ ರಾಜರೇ, ನೀವು ಎರಡು ಸಾಮ್ರಾಜ್ಯವನ್ನು ಆಳುತ್ತಿದ್ದರೂ ಕೇವಲ ಆ ಬ್ರಾಹ್ಮಣರ ಮೇಲೆ ನಂಬಿಕೆ ಇಟ್ಟಿರಾ? ಒಬ್ಬನ ಜೀವ ಉಳಿಸಲು ಅಷ್ಟು ಜನರನ್ನು ಹಾಗು ಪ್ರಾಣಿಗಳನ್ನು ಬಲಿಕೊಟ್ಟರೆ ಸಾರ್ಥಕವಾಗುವುದೇ? ಇಲ್ಲೇ ಬುದ್ಧ ಭಗವಾನರು ವಾಸಿಸುತ್ತಿದ್ದಾರೆ, ಅವರು ಸರ್ವಜ್ಞರು, ಸರ್ವವಿದರು ಆಗಿದ್ದಾರೆ. ಅವರು ವಿಹಾರದಲ್ಲೇ ವಾಸಿಸುತ್ತಿರುವರು, ಅವರ ಬಳಿ ಹೋಗಿ ಅವರ ಬುದ್ಧಿವಾದ ಪಡೆದರೆ ತುಂಬ ಒಳಿತಾಗುವುದು ಎಂದಳು. ರಾಜನಿಗೆ ಈ ಸಲಹೆ ಒಪ್ಪಿಗೆಯಾಗಿ ಬುದ್ಧರ ಬಳಿ ರಾಣಿ ಸಮೇತ ಹೋದನು. ಅಲ್ಲಿ ಬುದ್ಧರಿಗೆ ವಂದಿಸಿ, ಅನಂತರ ಮೌನವಾಗಿ ಉಳಿದನು. ನಂತರ ಭಗವಾನರು ಪ್ರಶ್ನಿಸಿದಾಗ ರಾಣಿಯು ಉದ್ದೇಶವನ್ನು ವಿವರಿಸಿದಳು. ಆಗ ಭಗವಾನರು ಈ ರೀತಿ ಹೇಳಿದರು: ಮಹಾರಾಜ, ಹೆದರಬೇಡ, ನಿನಗೆ ಯಾವ ಅಪಾಯವೂ ಬಂದಿಲ್ಲ ಎಂದು ಹೇಳಿ ಆ ನರಕದಲ್ಲಿ ನರಳುತ್ತಿರುವ ಆ ಜೀವಿಗಳ ವೃತ್ತಾಂತ ಹೇಳಿದರು.
ಒಮ್ಮೆ ಬನಾರಸ್ನಲ್ಲಿ ನಾಲ್ಕು ಶ್ರೀಮಂತರು ತಮ್ಮಲ್ಲೇ ಈ ರೀತಿ ಚಚರ್ಿಸಿದರು. ಏಕೆಂದರೆ ತಮ್ಮ ಹಣವನ್ನು ಹೇಗೆ ಬಳಕೆ (ಖಚರ್ು) ಮಾಡುವುದು. ಒಬ್ಬನು ಭಿಕ್ಷುಗಳಿಗೆ ಆಹಾರ ನೀಡಿದರೆ ಬಹಳಷ್ಟು ಪುಣ್ಯ ಸಿಗುವುದು ಎಂದನು. ಎರಡನೆಯವನು ಮದ್ಯಪಾನ ಹಾಗು ಮಾಂಸಹಾರ ಉತ್ತಮ ಎಂದನು. ಮೂರನೆಯವನು ವಿವಿಧಬಗೆಯ ಮಾಂಸಹಾರ ಮತ್ತು ಅತ್ಯುತ್ತಮ ಆಹಾರಗಳು ಸರಿ ಎಂದನು. ನಂತರ ನಾಲ್ಕನೆಯವನು ಯಾವುದೂ ವ್ಯಭಿಚಾರ ಸುಖದಷ್ಟು ಶ್ರೇಷ್ಠ ಸುಖ ನೀಡಲಾರದು ಎಂದನು. ಇದನ್ನೇ ಎಲ್ಲರೂ ಒಪ್ಪಿದರು ಹಾಗು ತಮ್ಮ ಹಣವನ್ನೆಲ್ಲಾ ವ್ಯಭಿಚಾರದಲ್ಲಿ ವಿನಿಯೋಗಿಸತೊಡಗಿದರು. ಕಾಲನಂತರ ಅವರು ಆ ಜನ್ಮದಲ್ಲೇ ದುಃಖ ಅನುಭವಿಸಿದರು. ಸಾವಿನ ನಂತರ ಹಲವಾರು ಜನ್ಮ ನರಕದಲ್ಲಿ ನರಳಿದರು. ಕೊನೆಗೆ ಲೋಹಕುಂಬಿ ನರಕದಲ್ಲಿ ನೋವಿನ ಚೀತ್ಕಾರ ಮಾಡಿದಾಗ ಆ ಧ್ವನಿಯು ರಾಜನಿಗೆ ಕೇಳಿಸಿತ್ತು.
ಈಗ ರಾಜನಿಗೆ ವ್ಯಭಿಚಾರದ ದುಷ್ಟರಿಣಾಮದ ಬಗ್ಗೆ ಅತಿ ಭಯವುಂಟಾಗಿ ತ್ರಿಕರಣ ಪೂರ್ವಕವಾಗಿ ವ್ಯಭಿಚಾರ ವಜರ್ಿಸಿ ಆ ಮನುಷ್ಯನನ್ನು ವಿಹಾರದಿಂದ ಬಿಡುಗಡೆ ಮಾಡಿ ತನ್ನ ಸೇವಾ ಕಾರ್ಯದಿಂದಲೂ ಮುಕ್ತಿಗೊಳಿಸಿದನು.
- ಧಮ್ಮಪದ ಅಟ್ಠಕಥಾ

The effects of stealing ಕಳ್ಳತನ - ಕಳ್ಳತನ ಮಾಡಿ ಅದರ ಕೆಟ್ಟ ಫಲ ಅನುಭವಿಸಿದ ಸ್ತ್ರೀಯ ಕತೆ

ಕಳ್ಳತನ - ಕಳ್ಳತನ ಮಾಡಿ ಅದರ ಕೆಟ್ಟ ಫಲ ಅನುಭವಿಸಿದ ಸ್ತ್ರೀಯ ಕತೆ

ಕಸ್ಸಪ ಬುದ್ಧ ಭಗವಾನರ ಕಾಲದಲ್ಲಿ ಬನಾರಸ್ನ ಹತ್ತಿರ ಸ್ತ್ರೀಯೊಬ್ಬಳು ವಾಸಿಸುತ್ತಿದ್ದಳು. ಆಕೆ ಹೆಂಡ ಹಾಗು ಎಣ್ಣೆಯ ವ್ಯಾಪಾರದಿಂದ ಜೀವನ ಸಾಗಿಸುತ್ತಿದ್ದಳು. ಒಂದುದಿನ ಒಂದು ಗುಂಪು ಅಮಲಿನಲ್ಲಿ ಪ್ರಜ್ಞೆತಪ್ಪಿ ಗಾಢ ನಿದ್ರೆಯಲ್ಲಿದ್ದಾಗ ಆಕೆ ಅವರ ವಸ್ತ್ರಗಳನ್ನು ಅಪಹರಿಸಿದಳು. ಮತ್ತೆ ಒಮ್ಮೆ ಆಕೆ ಅರ್ಹಂತ (ವಿಮುಕ್ತಿ ಸಾಧಿಸಿದ) ಭಿಕ್ಷುವನ್ನು ಕಂಡು, ಸ್ವಾಗತಿಸಿ ಮಧ್ಯಾಹ್ನದ ಊಟವನ್ನು ಬಡಿಸಿದಳು. ಅವರು ಆಹಾರವನ್ನು ಮುಗಿಸಿ ಬೋಧನೆಯನ್ನು ಬೋಧಿಸಿ ಹೊರಟರು. ಹಲವು ಕಾಲದ ನಂತರ ಆಕೆಯ ಮರಣವಾಯಿತು. ಆಕೆ ಸಮುದ್ರದ ಮಧ್ಯೆ ಒಂದು ಸುಂದರವಾದ ದ್ವೀಪದಲ್ಲಿ ಜನಿಸಿದಳು. ಆಕೆಯ ಹಿಂದಿನ ಜನ್ಮದ ಪುಣ್ಯದಿಂದ ಸುಂದರಳಾಗಿದ್ದಳು. ಆದರೂ ಆಕೆ ಆ ಜನ್ಮದಲ್ಲಿ ವಸ್ತ್ರಗಳನ್ನು ಅಪಹರಿಸಿದ್ದರಿಂದಾಗಿ ಆಕೆಯ ನಗ್ನತೆಯನ್ನು ಮುಚ್ಚುವಷ್ಟು ವಸ್ತ್ರವು ಸಿಗುತ್ತಿರಲಿಲ್ಲ. ಆಕೆ ಸತ್ತು ಮತ್ತೆ ಮತ್ತೆ ಆ ದ್ವೀಪದಲ್ಲಿ ಜನಿಸುತ್ತಿದ್ದಳು. ಗೌತಮ ಬುದ್ಧರ ಕಾಲದಲ್ಲಿ ಶ್ರಾವಸ್ತಿಯ ಐನೂರು ವರ್ತಕರು ಸ್ವರ್ಣ ಭೂಮಿಗೆ ಹಡಗಿನಲ್ಲಿ (ಬರ್ಮ ದೇಶ) ಹೋಗಿ ಅಲ್ಲಿ ವ್ಯಾಪಾರ ಮಾಡಿ ಅಲ್ಲಿಂದ ಚಿನ್ನದೊಂದಿಗೆ ತಮ್ಮ ದೇಶಕ್ಕೆ ಹಿಂದಿರುಗತೊಡಗಿದರು. ಆಗ ಭೀಕರ ಬಿರುಗಾಳಿಯ ಪರಿಣಾಮವಾಗಿ ಅವರ ಹಡಗು ಆ ಸ್ತ್ರೀಯು ವಾಸಿಸುತ್ತಿದ್ದ ದ್ವೀಪಕ್ಕೆ ಬಂತು ನಿಂತಿತು.
ಆ ವರ್ತಕರು ಆಕೆಯ ಚಿನ್ನದ ಬಂಗಲೆಗೆ ಬಂದಾಗ ಆಕೆಯು ಅವರೊಂದಿಗೆ ಅವರಿಗೆ ಮಾತನಾಡಿಸಿದಳು. ಆಗ ವರ್ತಕರಲ್ಲಿ ಮುಖ್ಯಸ್ಥನು ಆಕೆಗೆ ಮುಂದೆ ಬಂದು ಮಾತನಾಡುವಂತೆ ಕೇಳಿದಾಗ ಆಕೆ ಈ ರೀತಿ ಹೇಳಿದಳು: ಸ್ನೇಹಿತರೆ, ನನಗೆ ಹೊರಬರಲು ನಾಚಿಕೆಯಾಗುತ್ತಿದೆ, ಏಕೆಂದರೆ ನನಗೆ ನನ್ನ ನಗ್ನತೆ ಮುಚ್ಚಲು ವಸ್ತ್ರಗಳಿಲ್ಲ. ಆಗ ವರ್ತಕರ ಮುಖ್ಯಸ್ಥನು ಆಕೆಗೆ ನಿಲುವಂಗಿಯನ್ನು ನೀಡಿದನು. ಆದರೆ ಆಕೆ ಈ ರೀತಿ ಹೇಳಿದಳು: ನಾನು ಈ ರೀತಿಯಾಗಿ ತೆಗೆದುಕೊಳ್ಳುವುದಿಲ್ಲ. ನಿಮ್ಮಲ್ಲಿ ಯಾರಾದರೂ ಶೀಲಗಳನ್ನು ಪಾಲಿಸುತ್ತಿದ್ದರೆ ಮತ್ತು ಬುದ್ಧರಲ್ಲಿ, ಧಮ್ಮದಲ್ಲಿ ಹಾಗು ಸಂಘದಲ್ಲಿ ಅಚಲ ಶ್ರದ್ಧೆಯಿಟ್ಟಿದ್ದರೆ ಅಂತಹವರು ತಮ್ಮ ಪುಣ್ಯವನ್ನು ನನಗೆ ಹಂಚಿಕೊಡಲಿ. ಎಂದಳು.
ಅದರಂತೆಯೇ ಅಲ್ಲಿದ್ದ ಉಪಾಸಕರೊಬ್ಬರು ಒಂದು ಜೊತೆ ಬಟ್ಟೆಯನ್ನು ನೀಡಿದರು. ಪಾತ್ರೆಯಲ್ಲಿನ ನೀರನ್ನು ಬಿಟ್ಟು ಪುಣ್ಯವನ್ನು ಹಂಚಿ ಆಕೆಗೆ ನೀಡಿದರು.
ಆ ಕ್ಷಣದಲ್ಲೇ ಮಡಚಿರುವ ಹೇರಳವಾದ ದಿವ್ಯವಾದ ವಸ್ತ್ರಗಳು ನಾನಾ ಆಕಾರವುಳ್ಳದ್ದು ಪ್ರತ್ಯಕ್ಷವಾದವು. ಅದನ್ನು ಆ ಸ್ತ್ರೀಯು ತೆಗೆದುಕೊಂಡಳು. ವಸ್ತ್ರಗಳನ್ನು ಸ್ವೀಕರಿಸಿ ಆಕೆಗೆ ಬಹಳಷ್ಟು ಅಸಂಖ್ಯಾತ ವರ್ಷಗಳಾಗಿತ್ತು.
ಹಿಂದಿನ ಜನ್ಮದಲ್ಲಿ ಒಮ್ಮೆ ವಸ್ತ್ರಗಳನ್ನು ಅಪಹರಿಸಿ ಅಸಂಖ್ಯಾತ ವರ್ಷಗಳಷ್ಟು ಕಾಲ ವಸ್ತ್ರರಹಿತಳಾಗಿ ಕಾಲಕಳೆದಳು. ಅದರಿಂದ ಕಳ್ಳತನದಿಂದಾಗುವ ಕೆಟ್ಟ ಪರಿಣಾಮಗಳನ್ನು ಅರಿತು ವಿವೇಕಿಗಳು ಅದರಿಂದ ವಿರತರಾಗಲಿ.
- ಖುದ್ದಕನಿಕಾಯ ಅಟ್ಠಕಥಾ

the consequences of killing ಕೊಲ್ಲುವಿಕೆ - ಮೂವರು ಭಿಕ್ಷುಗಳ ಘಟನೆ

                        ಕೊಲ್ಲುವಿಕೆ - ಮೂವರು ಭಿಕ್ಷುಗಳ ಘಟನೆ


ಒಮ್ಮೆ ಬುದ್ಧ ಭಗವಾನರು ಜೇತವನದ ಆಶ್ರಮದಲ್ಲಿ ತಂಗಿದ್ದರು. ಕೆಲವು ಭಿಕ್ಷುಗಳು ಅವರಲ್ಲಿಗೆ ಬಂದು ವಂದನಾರ್ಪಣೆ ಮಾಡಿದರು.
ಅವರು ದಾರಿಯಲ್ಲಿ ಒಂದು ಹಳ್ಳಿಗೆ ಆಹಾರಕ್ಕೆ ಹೊರಟಿದ್ದರು. ಹಳ್ಳಿಯವರು ಅವರನ್ನು ಸ್ವಾಗತಿಸಿ ಅವರ ಪಿಂಡಪಾತ್ರೆಗಳನ್ನು ತೆಗೆದುಕೊಂಡು ಒಂದು ವಿಶಾಲವಾದ ಭೋಜನಾಯಲದಲ್ಲಿ ಕುಳ್ಳಿರಿಸಿ ಅವರಿಗೆ ಗಂಜಿ ಮತ್ತು ಸಿಹಿತಿಂಡಿಗಳನ್ನು ಕೊಟ್ಟು, ಅವರು ಆಹಾರ ತಿಂದು ಮುಗಿಸುವುದನ್ನು ಕಾಯುತ್ತಿದ್ದರು. ಭಿಕ್ಷುಗಳು ಮಧ್ಯಾಹ್ನದ ಭೋಜನ ಮುಗಿಸಿ, ಜನರಿಗೆ ಧಮ್ಮವನ್ನು ಉಪದೇಶಿಸಿದರು. ಅಲ್ಲಿ ಒಬ್ಬ ಹೆಣ್ಣು ಅಡಿಗೆಯನ್ನು ಮಾಡುತ್ತಿದ್ದಳು. ಆಕೆ ಮಡಿಕೆಯಲ್ಲಿ ಒಂದು ತಿಂಡಿಯನ್ನು ಮಾಡುತ್ತಿದ್ದಳು. ಆ ಮಡಿಕೆ ಬೆಂಕಿಯಿಂದ ಆವೃತವಾಗಿ ಅದರ ಜ್ವಾಲೆಗಳು ಚಾವಣಿಗೆ ತಗಲಿ, ಅಲ್ಲಿದ್ದ ಹುಲ್ಲಿಗೆ ಬೆಂಕಿ ಹೊತ್ತಿಕೊಂಡಿತು. ಜ್ವಾಲೆಗಳು ಆಕಾಶಕ್ಕೆ ಏರತೊಡಗಿದವು. ಅದೇ ವೇಳೆಯಲ್ಲಿ ಒಂದು ಕಾಗೆಯು ಆ ಮನೆಯ ಮೇಲೆ ಹಾರತೊಡಗಿತು. ಉರಿಯುತ್ತಿದ್ದ ಬೆಂಕಿಯ ಹುಲ್ಲು ಕಾಗೆಯ ಕತ್ತಿಗೆ ಸುತ್ತಿಕೊಂಡಿತು. ನಂತರ ಕಾಗೆಯು ಸತ್ತು ನೆಲದಮೇಲೆ ಬಿದ್ದಿತು. ಈ ಘಟನೆಯು ಊರ ಮಧ್ಯೆ ನಡೆಯಿತು. ಇದನ್ನು ಭಿಕ್ಷುಗಳು ಗಮನಿಸಿದರು. ನಂತರ ಹೀಗೆ ಹೇಳಿಕೊಂಡರು: ಓಹ್! ಇದು ಅತ್ಯಂತ ದುಃಖಭರಿತ ಘಟನೆ. ಈ ಬಡಪಾಯಿ ಪಕ್ಷಿಗೆ ಇಂತಹ ದುರ್ಘಟನೆ ಏಕೆ ನಡೆಯಿತು? ಇದನ್ನು ಬುದ್ಧರಲ್ಲದೆ ಬೇರಾರು ಹೇಳಲಾರರು. ಏತಕ್ಕಾಗಿ ಆ ಕಾಗೆಯ ಪರಿಣಾಮ ಹೀಗಾಯಿತು. ಇದನ್ನು ಬುದ್ಧರಿಂದ ಪ್ರಶ್ನಿಸುತ್ತವೆ, ಅವರು ಹೇಳಿದ್ದನ್ನು ಅಥರ್ೈಸಿಕೊಳ್ಳುತ್ತೇವೆ. ಎಂದುಕೊಂಡು ಅವರು ಹೊರಟರು.
ಕೆಲವು ಬೇರೆ ಭಿಕ್ಷುಗಳು ದೂರದ ಸ್ಥಳದಿಂದ ಭಗವಾನರಿಗೆ ವಂದಿಸಲು ಹಡಗಿನಿಂದ ಪ್ರಯಾಣ ಬೆಳೆಸಿ ಬರುತ್ತಿದ್ದರು. ಮಾರ್ಗದಲ್ಲಿ ಸಮುದ್ರದ ಮಧ್ಯೆ ಹಡಗು ನಿಂತುಕೊಂಡಿತು.  ಆಗ ಅಲ್ಲಿದ್ದವರು ತಮ್ಮಲ್ಲೇ ಈ ರೀತಿ ಮಾತಾಡಿಕೊಂಡರು: ನಮ್ಮಲ್ಲಿ ಯಾರೋ ದುರಾದೃಷ್ಟಶಾಲಿಯು ಇದ್ದಾನೆ, ಆದಕಾರಣ ಹಡಗು ನಿಂತಿದೆ. ನಾವು ಆತನನ್ನು ಹುಡುಕೋಣ. ಅದನ್ನು ನಾವು ಚೀಟಿಗಳಲ್ಲಿ ಬರೆದು ಪರೀಕ್ಷಿಸೋಣ ಎಂದು ಮಾತನಾಡಿದಾಗ ನೌಕಾಧಿಪತಿಯು ಅದಕ್ಕೆ ಒಪ್ಪಿದನು. ಹಡಗಿನ ಮೇಲ್ಭಾಗದಲ್ಲಿ ನೌಕಾಧಿಪತಿಯ ಪತ್ನಿಯಿದ್ದಳು. ಆಕೆ ಅತ್ಯಂತ ಸುಂದರಿಯಾದ ಯುವತಿಯಾಗಿದ್ದಳು. ಸುಶೀಲೆಯು ಹಾಗು ಅತಿ ಆಕರ್ಷಕ ರೂಪವು ಮತ್ತು ಸಿಹಿಯಾದ ಮಾತು ಆಡುವವಳಾಗಿದ್ದಳು. ಒಪ್ಪಂದದಂತೆ ಎಲ್ಲರೂ ತಮ್ಮ ಹೆಸರನ್ನು ಬರೆದು ಸಮುದ್ರದ ಮೇಲೆ ಎಸೆದರು. ಆಗ ಆಶ್ಚರ್ಯವಾಯಿತು. ಏಕೆಂದರೆ ನೌಕಾಧಿಪತಿಯ ಪತ್ನಿಯ ಹೆಸರನ್ನು ಹೊಂದಿದ್ದ ಚೀಟಿಯು ಮುಳುಗಲಾರಂಭಿಸಿತು, ಇನ್ನಿತರ ಎಲ್ಲರ ಚೀಟಿಗಳು ತೇಲಲಾರಂಭಿಸಿತು. ಆದರೆ ಯಾರೂ ಇದನ್ನು ನಂಬಲಿಲ್ಲ. ಎರಡನೆಯಬಾರಿ ಅವರೆಲ್ಲರೂ ಹೆಸರನ್ನು ಬರೆದು ಮತ್ತೆ ಸಮುದ್ರಕ್ಕೆ ಎಸೆದರು. ಈ ಬಾರಿಯೂ ನೌಕಾಧಿಪತಿಯ ಪತ್ನಿಯ ಹೆಸರನ್ನೊಳಗೊಂಡ ಚೀಟಿಯು ಮುಳುಗಲಾರಂಭಿಸಿತು. ಈ ಬಾರಿಯೂ ನಂಬದೆ ಮೂರನೆಯಬಾರಿ ಹೀಗೆಯೇ ಪ್ರಯತ್ನಿಸಿದರು. ಆಗಲೂ ಸಹಾ ಹಿಂದಿನಂತೆಯೇ ಆಯಿತು. ಆಗ ಹಡಗಿನಲ್ಲಿದ್ದವರು ನೌಕಾಧಿಪತಿಯನ್ನು ಈಗ ಏನು ಮಾಡುವುದು ಎಂದು ಕೇಳಿದರು. ಅದಕ್ಕೆ ನೌಕಾಧಿಪತಿಯು ಈ ರೀತಿ ಉತ್ತರಿಸಿದನು: ನಾವು ಒಬ್ಬರಿಗಾಗಿ ಎಲ್ಲರೂ ಜೀವ ತೊರೆಯುವುದು ಬೇಡ, ಆಕೆಯನ್ನು ನೀವು ಸಮುದ್ರದಲ್ಲಿ ಎಸೆಯಿರಿ ಎಂದನು.
ಆಗ ಅವರು ಈ ರೀತಿ ಚಿಂತಿಸಿದರು: ಆಕೆಯನ್ನು ಹಿಡಿದು ನೀರಿಗೆ ಎಸೆದರೆ ಆಕೆ ಭಯಗೊಂಡು ಕಿರುಚಾಡಬಹುದು, ಆಕೆಯ ಎಲ್ಲಾ ಆಭರಣಗಳನ್ನು ತೆಗೆದುಕೊಂಡು ಕೇವಲ ಒಳ ಉಡುಪಿನಲ್ಲೇ ಆಕೆಗೆ ನೀರಿನಲ್ಲಿ ಎಸೆಯೋಣ ಎಂದು ನಿರ್ಧರಿಸಿದರು. ನಂತರ ನೌಕಾಧಿಪತಿಯು ಮತ್ತೆ ಹೀಗೆ ನುಡಿದನು: ನಾನು ಆಕೆ ಈ ರೀತಿ ನೀರಿನಲ್ಲಿ ಒದ್ದಾಡುವುದನ್ನು ನೋಡಲಾರೆ, ಸಹಿಸಲಾರೆ. ಆಕೆಯನ್ನು ಯಾವುದಾದರೂ ರೀತಿಯಲ್ಲಿ ಮುಳುಗಿಸಿ ನನ್ನ ಕಣ್ಣಿಗೆ ಕಾಣದಂತೆ ಮಾಡಿ ಆಕೆಯ ಕುತ್ತಿಗೆಗೆ ಮಣ್ಣು ತುಂಬಿರುವ ಮಡಿಕೆಯನ್ನು ಕಟ್ಟಿ ಆಕೆಯನ್ನು ಎಸೆಯಿರಿ ಎಂದನು. ಅವರು ಹಾಗೆಯೇ ಮಾಡಿದರು. ಆಕೆಯನ್ನು ಸಮುದ್ರದಲ್ಲಿ ಎಸೆದ ಕ್ಷಣದಲ್ಲೇ ಮೀನುಗಳು ಆಕೆಯನ್ನು ತಿಂದು ಮುಗಿಸಿದವು.
ಇದನ್ನು ಸಾಕ್ಷಿಯಾಗಿ ವೀಕ್ಷಿಸಿದ ಭಿಕ್ಷುಗಳು ಈ ರೀತಿ ಚಿಂತಿಸಿದರು. ಬುದ್ಧರ ಹೊರತು ಮತ್ಯಾರು ಸಹಾ ಆಕೆಯು ಈ ದುಃಖಕ್ಕೆ ಒಳಗಾದ ಕಾರಣವನ್ನು ಹೇಳಲಾರರು, ನಾವು ಭಗವಾನರನ್ನು ಈ ಬಗ್ಗೆ ಕೇಳಿ ತಿಳಿಯುವೆವು ಎಂದು ನಿರ್ಧರಿಸಿದರು. ನಂತರ ಆ ಹಡಗು ಚಲಿಸಿತು. ತಲುಪವೇಕಾದ ಸ್ಥಳಗಳಲ್ಲಿ ಪ್ರಯಾಣಿಕರು ಇಳಿದು, ತಮ್ಮ ಹಾದಿ ಹಿಡಿದರು.
ಇನ್ನೊಂದು ಕಡೆ ಏಳು ಭಿಕ್ಷುಗಳು ಬುದ್ಧ ಭಗವಾನರನ್ನು ಕಾಣಲು ಬರುತ್ತಿದ್ದರು. ಮಾರ್ಗದಲ್ಲಿಯೇ ಸಂಜೆಯಾದ ಕಾರಣ ಅಲ್ಲಿ ಒಂದು ವಿಹಾರದಲ್ಲಿ ರಾತ್ರಿ ಇರಲು ಸ್ಥಳವನ್ನು ಕೇಳಿದರು. ಅಲ್ಲಿ ವಾಸವಾಗಿದ್ದ ಭಿಕ್ಷುಗಳು ಸಮೀಪದಲ್ಲಿದ್ದ ಗುಹೆಯನ್ನು ತೋರಿಸಿದರು. ಅಲ್ಲಿ ಏಳು ಹಾಸಿಗೆಗಳು ಇದ್ದವು. ಈ ಏಳು ಭಿಕ್ಷುಗಳು ರಾತ್ರಿ ನಿದ್ರಿಸಲಾರಂಭಿಸಿದರು. ಅವರು ನಿದ್ರಿಸುವಾಗ ಮನೆಯಷ್ಟು ಗಾತ್ರದ ದೊಡ್ಡ ಬಂಡೆಯು ಉರುಳಿ ಗುಹೆಯ ದ್ವಾರವನ್ನು ಮುಚ್ಚಿಕೊಂಡಿತು. ಅಲ್ಲಿದ್ದ ಭಿಕ್ಷುಗಳು ಇದನ್ನು ಗಮನಿಸಿ ದುಃಖಿತರಾದರು. ಅವರು ಹಳ್ಳಿಗರನ್ನು ಕೂಡಿಹಾಕಿ ಗುಹೆಗೆ ಮುಚ್ಚಿಕೊಂಡಿದ್ದ ಬಂಡೆಯನ್ನು ಜರುಗಿಸಲು ಪ್ರಯತ್ನಿಸಿದರು. ಆದರೆ ಸಫಲರಾಗಲಿಲ್ಲ. ಅವರು ಏಳು ದಿನಗಳ ಕಾಲ ಪ್ರಯತ್ನಿಸಿದರೂ ಸಾಧ್ಯವಾಗಲಿಲ್ಲ ಮತ್ತು ಗುಹೆಯಲ್ಲಿದ್ದ ಭಿಕ್ಷುಗಳು ಅಲ್ಲಿಯವರೆಗೂ ಏನನ್ನೂ ತಿನ್ನಲಿಲ್ಲ ಹಾಗು ಕುಡಿಯಲೂ ಇಲ್ಲ. ಆ ಸಮಯದಲ್ಲಿ ಅವರು ಆಹಾರ ಇಲ್ಲದೆ ಬಹಳ ನೋವನ್ನು ಅನುಭವಿಸಿದರು. ಏಳು ದಿನಗಳ ನಂತರ ಆ ಬಂಡೆಯು ತಾನಾಗಿಯೇ ತನ್ನ ಸ್ಥಳದಲ್ಲಿ ನಿಂತಿತು. ದುಃಖಿತ ಭಿಕ್ಷುಗಳು ಈಗ ಹೊರಬಂದರು. ಹೀಗೆ ಯೋಚಿಸಿದರು: ಬುದ್ಧ ಭಗವಾನರ ಹೊರತು ಮತ್ಯಾರು ತಮ್ಮ ಈ ದುಃಖ ಅನುಭವಕ್ಕೆ ಕಾರಣವನ್ನು ಹೇಳಲಾರರು ಎಂದು ಭಾವಿಸಿ ಭಗವಾನರನ್ನು ಕಾಣಲು ಬಂದರು.
ಎಲ್ಲಾ ಮೂರು ಗುಂಪುಗಳು ದಾರಿಯಲ್ಲಿ ಒಂದುಗೂಡಿದರು. ಮತ್ತು ಒಟ್ಟಾಗಿಯೇ ಭಗವಾನರನ್ನು ಕಂಡರು ಹಾಗು ವಂದನೆ ಅಪರ್ಿಸಿದರು. ಗೌರವದಿಂದ ಒಂದೆಡೆ ಕುಳಿತರು. ಪ್ರತಿಯೊಂದು ಗುಂಪು ಸಹಾ ಭಗವಾನರಿಗೆ ತಮ್ಮ ಘಟನೆಗಳನ್ನು ವಿವರಿಸಿ ಅದಕ್ಕೆ ಕಾರಣವನ್ನು ಕೇಳಿದರು. ಅದಕ್ಕೆ ಪ್ರತಿಯಾಗಿ ಭಗವಾನರು ಈ ರೀತಿ ವಿವರಿಸಿದರು:
ಭಿಕ್ಷುಗಳೇ, ಯಾವ ಆ ಕಾಗೆ ಈ ರೀತಿ ದುಃಖದಿಂದ ಮರಣಿಸಿತೋ ಅದಕ್ಕೆ ಕಾರಣ ಅದರ ಹಿಂದಿನ ಜನ್ಮದ ಕರ್ಮವೇ ಆಗಿದೆ. ಹಿಂದೆ ಬನಾರಸ್ದಲ್ಲಿ ಒಬ್ಬ ಧನದಾಹಿಯು ಒಂದು ಗೂಳಿಯನ್ನು ಪಳಗಿಸಲು ಪ್ರಯತ್ನಿಸಿದನು, ಆದರೆ ಸಫಲನಾಗಲಿಲ್ಲ. ಆ ಗೂಳಿಯು ಸ್ವಲ್ಪ ಅಂತರದಲ್ಲಿ ಹೋಗಿ ಬಿದ್ದುಕೊಂಡಿತು. ಆತನು ಅದನ್ನು ಎಬ್ಬಿಸಲು ಪ್ರಯತ್ನಿಸಿದನು. ಅದು ಸ್ವಲ್ಪ ದೂರ ಕ್ರಮಿಸಿ ಮತ್ತೆ ಬಿದ್ದುಕೊಂಡಿತು. ಆತನ ಸರ್ವ ಪ್ರಯತ್ನಗಳು ಪಳಗಿಸುವಲ್ಲಿ ವಿಫಲವಾದವು. ಆಗ ಆತನಿಗೆ ಕ್ರೋಧವುಂಟಾಗಿ ಆ ಗೂಳಿಯ ಮೂಳೆಗಳು ಪುಡಿಪುಡಿಯಾಗುವ ಹಾಗೆ ಹೊಡೆದನು. ಗೂಳಿಯ ಸುತ್ತಲೂ ಹುಲ್ಲನ್ನು ಸುತ್ತಿ ಬೆಂಕಿಯಿಟ್ಟನು. ಅದರ ಪರಿಣಾಮವಾಗಿ ಆ ಗೂಳಿಯು ಅತಿ ಘೋರ ವೇದನೆಯಿಂದ ನರಳಿ ಮರಣಿಸಿತು. ಭಿಕ್ಷುಗಳೇ, ಈ ಪಾಪಕೃತ್ಯದ ಪರಿಣಾಮದಿಂದ ಆ ಧನದಾಹಿಯು ಮೊದಲು ಅವೀಚಿ ನರಕದಲ್ಲಿ ಹುಟ್ಟಿದನು. ಅಲ್ಲಿ ದುಃಖಪೂರಿತ ಅನುಭವ ಅನುಭವಿಸಿ ಅಲ್ಲಿಂದ ಕಾಗೆಯಾಗಿ ಏಳು ಜನ್ಮ ಎತ್ತಿದನು. ಅದೇರೀತಿಯಾಗಿ ಪ್ರತಿಸಲವೂ ಅದೇರೀತಿ ದುಃಖ ಅನುಭವಿಸಿ ಸತ್ತನು.
ನೌಕಾಧಿಪತಿಯ ಪತ್ನಿಯು ಸಹಾ ಅಷ್ಟೇ. ಆಕೆಯ ಹಿಂದಿನ ಜನ್ಮದ ಪಾಪದ ಪರಿಣಾಮವಾಗಿ ಆಕೆ ದುಃಖ ಅನುಭವಿಸಿದಳು. ಬಹುಕಾಲದ ಹಿಂದೆ ಬನಾರಸ್ನಲ್ಲಿ ಒಬ್ಬ ಗೃಹಸ್ಥನ ಪತ್ನಿಯಾಗಿದ್ದಳು. ಆಗ ಆಕೆಯ ಕೆಲಸ ಭತ್ತ ಕುಟ್ಟುವುದು, ನೀರು ತರುವುದು ಮತ್ತು ಸೌದೆ ಹೊಡೆಯವುದು ಆಗಿತ್ತು. ಆಕೆ ಅಂತಹ ಕೆಲಸವನ್ನು ಮಾಡುವಾಗ ಆಕೆಯ ನಾಯಿಯು ಆಕೆಗೆ ಸದಾ ನೋಡುತ್ತಿತ್ತು, ಆಕೆಯನ್ನು ಬಿಟ್ಟು ಅದು ಇರುತ್ತಿರಲಿಲ್ಲ. ಆಕೆ ತನ್ನ ಯಜಮಾನನಿಗೆ ಭೋಜನವನ್ನು ಗದ್ದೆಗಳಿಗೆ ತೆಗೆದುಕೊಂಡು ಹೋಗುವಾಗ ಅಥವಾ ಕಟ್ಟಿಗೆಗಳಿಗೆ ಅಡವಿಗೆ ಹೋಗುವಾಗ ಸದಾ ನಾಯಿಯು ಆಕೆಯ ನೆರಳಿನಂತೆ ಇರುತ್ತಿತ್ತು. ಇದನ್ನು ಗಮನಿಸಿದ ಕೆಲವು ಹುಡುಗರು ಓ ನೋಡಿ, ಇಲ್ಲಿ ಸ್ತ್ರೀ ಬೇಟೆಗಾತಿ ಹೋಗುತ್ತಿರುವಳು, ಆಕೆ ಬೇಟೆಯಾಡಿ ಇಂದು ಮಾಂಸದ ಭೋಜನ ಹಾಗು ಉತ್ತಮ ಭೋಜನ ಸಿದ್ಧವಾಗುತ್ತದೆ ಎಂದೆಲ್ಲಾ ಗೇಲಿ ಮಾಡುತ್ತಿದ್ದರು. ಆಗ ಆಕೆಗೆ ಅವಮಾನವಾದಂತೆ ಆಕೆ ಆ ನಾಯಿಯನ್ನು ದೂರಮಾಡಲು ಪ್ರಯತ್ನಿಸಿದಳು. ಅದನ್ನು ಹುಲ್ಲಿನಿಂದ, ಕೋಲಿಯಿಂದ ಹೊಡೆಯುತ್ತಿದ್ದಳು. ಆ ನಾಯಿ ಸ್ವಲ್ಪದೂರ ಹೋದಂತೆ ವತರ್ಿಸಿ ಮತ್ತೆ ಆಕೆಯ ಹಿಂದೆಯೇ ಬರುತ್ತಿತ್ತು. ಅದಕ್ಕೂ ಕಾರಣವಿತ್ತು, ಆ ನಾಯಿಯು ನಿರಂತರ ಮೂರು ಜನ್ಮಗಳ ಹಿಂದೆ ಆಕೆಯ ಪತಿಯಾಗಿತ್ತು. ಇದರಿಂದಾಗಿ ಅದು ಆಕೆಯನ್ನು ತೊರೆಯಲು ಆಗುತ್ತಿರಲಿಲ್ಲ. ಪ್ರಬಲವಾಗಿ ಆಕೆಯನ್ನು ಪ್ರೀತಿಸುತ್ತಿತ್ತು. ಹೊಸ ಜನ್ಮ ಸಿಕ್ಕನಂತರ ಯಾರೂ ಹಿಂದಿನ ಜನ್ಮದ ಪತಿ ಅಥವಾ ಪತ್ನಿ ಎಂದು ತಿಳಿಯುವುದು ಅತಿ ಕಷ್ಟವಾಗುತ್ತದೆ. ಅದರಿಂದಾಗಿ ಆ ನಾಯಿಯನ್ನು ಆಕೆಯಿಂದ ದೂರ ಮಾಡಲು ಆಗುತ್ತಿರಲಿಲ್ಲ. ಒಂದು ಬೆಳಿಗ್ಗೆ ಆಕೆ ತನ್ನೊಂದಿಗೆ ಮೊಸರನ್ನು ಕೊಂಡೊಯ್ದಳು, ಅದನ್ನು ತನ್ನ ಬಟ್ಟೆಯಿಂದ ಮುಚ್ಚಿಕೊಂಡು ಹಾಗೇ ಗಂಜಿಯನ್ನು ತೆಗೆದುಕೊಂಡು ಹೊಲದ ಕಡೆಗೆ ಪತಿಗಾಗಿ ಹೊರಟಳು. ತನ್ನ ಪತಿಗೆ ಈ ಆಹಾರ ನೀಡಿದ ಬಳಿಕ ಆಕೆ ನೀರಿಗಾಗಿ ಮಡಿಯೊಂದಿಗೆ ಬಾವಿಯ ಬಳಿ ಬಂದಳು. ಆಕೆ ಬರುವಾಗ ದಾರಿಯಲ್ಲಿ ಮಡಿಕೆಯಲ್ಲಿ ಮರಳನ್ನು ತುಂಬಿದಳು. ಸುತ್ತಲೂ ನೋಡಿ ನಾಯಿಯನ್ನು ಕರೆದಳು. ನಾಯಿಯು ಅತಿ ಸಂತೋಷದಿಂದ ಆಕೆಯ ಹತ್ತಿರ ಬಾಲವಾಡಿಸುತ್ತಾ ಬಂದಿತು. ಆಕೆ ನಾಯಿಯನ್ನು ಹಿಡಿದು ಅದನ್ನು ಹಗ್ಗದಿಂದ ಕಟ್ಟಿ, ಇನ್ನೊಂದು ತುದಿಯಲ್ಲಿ ಮಡಿಕೆಯನ್ನು ಕಟ್ಟಿ ಅದನ್ನು ನಾಯಿಯ ಕುತ್ತಿಗೆಗೆ ಕಟ್ಟಿ ಆ ಬಾವಿಯ ನೀರಿಗೆ ನಾಯಿಯನ್ನು ಮಡಿಕೆ ಸಹಿತ ಎಸೆದಳು. ಆ ನಾಯಿಯು ಕೆಟ್ಟ ರೀತಿಯಲ್ಲಿ ತನ್ನ ಅಂತ್ಯವನ್ನು ಕಂಡಿತು. ಈ ಹೀನ ಕೃತ್ಯದಿಂದ ಆಕೆ ನರಕದಲ್ಲಿ ಹಲವಾರು ಜನ್ಮವೆತ್ತಿದಳು. ಮಾನವಳಾಗಿಯೂ ಸಹಾ ಆಕೆಯು ನೂರುಸಲ ಇದೇರೀತಿ ಮರಳಿನ ಮಡಿಕೆಯೊಂದಿಗೆ ಮುಳುಗಿದ್ದಳು.
ಭಿಕ್ಷುಗಳೇ ನೀವು ಸಹಾ ಈ ರೀತಿಯಾಗಿ ದುಃಖವನ್ನು ಅನುಭವಿಸಿದ್ದು ನಿಮ್ಮ ಹಿಂದಿನ ಜನ್ಮದ ಪಾಪಕೃತ್ಯದಿಂದಾಗಿಯೇ ಆಗಿತ್ತು. ಬಹುಕಾಲದ ಹಿಂದೆ ನೀವು ಏಳು ಜನರು ಬನಾರಸ್ನ ದನಗಾಹಿಗಳಾಗಿದ್ದಿರಿ. ಆಗ ಅವರುಗಳು ಹಸುಗಳನ್ನು ಏಳುದಿನಗಳ ವರೆಗೆ ಹುಲ್ಲು ಮೇಯಿಸಿಕೊಂಡು ಇದ್ದರು. ಆಗ ಅವರು ಒಂದು ಉಡವನ್ನು ಕಂಡರು. ಅದನ್ನು ಬೆನ್ನತ್ತಿದರು. ಹಾಗು ಅದು ಬಿದಿರಿಯಲ್ಲಿ ಅವಿತಿತು. ಆ ಬಿದಿರಿಗೆ ಏಳು ರಂಧ್ರಗಳಿತ್ತು. ಅದನ್ನು ಹಿಡಿಯಲು ಆಗಲಿಲ್ಲ. ನಾಳೆ ಹಿಡಿಯುವ ಉದ್ದೇಶದಿಂದ ಆ ಏಳು ರಂಧ್ರಗಳನ್ನು ಮುಚ್ಚಿದರು. ಮುಂದಿನ ದಿನ ಅವರು ಹಸುಗಳನ್ನು ಹೊಡೆದುಕೊಂಡು ಹೋದರು. ಅದನ್ನು ಮರೆತೇಬಿಟ್ಟರು. ಏಳು ದಿನದ ನಂತರ ಅವರು ಆ ಬಿದಿರಿನ ಕಡೆ ಧಾವಿಸುವಾಗ ಅವರಿಗೆ ಉಡದ ನೆನಪು ಬಂದು, ತಾವು ಮುಚ್ಚಿದ್ದ ಕೊಂಬೆಗಳು ಮತ್ತು ಎಲೆಗಳನ್ನು ತೆಗೆದರು. ಅಲ್ಲಿ ಆ ಉಡವು ಏಳುದಿನ ಕಾಲ ಆಹಾರವಿಲ್ಲದೆ ಅಸ್ತಿಪಂಜರದಂತೆ ಆಗಿತ್ತು. ಅತಿ ಕಷ್ಟದಿಂದ ಅದು ಮೇಲೆ ಬರಲು ಯತ್ನಿಸುತ್ತಿತ್ತು. ಇದನ್ನು ನೋಡಿ ಅವರು ಅದನ್ನು ಹಿಡಿದು ಅದಕ್ಕೆ ಹೋಗಲು ಬಿಟ್ಟರು. ಆ ದನಗಾಹಿಗಳು ಅದನ್ನು ಕೊಲ್ಲದಿದ್ದರಿಂದ ಅವರು ನರಕಕ್ಕೆ ಬೀಳಲಿಲ್ಲ. ಆದರೆ ಅವರು ಮುಂದಿನ ಹದಿನಾಲ್ಕು ಜನ್ಮಗಳಲ್ಲಿ ಆ ಏಳು ದನಗಾಹಿಗಳು ಏಳೇಳು ದಿನ ಹಸಿದು ದುಃಖ ಅನುಭವಿಸಿದರು. ಭಿಕ್ಷುಗಳೇ ನೀವೇ ಆಗ ದನಗಾಹಿಗಳಾಗಿದ್ದಿರಿ. ಉಡಕ್ಕೆ ಹಸಿವು ಉಂಟುಮಾಡಿದ ಕಾರಣ ನೀವು ಸದಾ ದುಃಖ ಅನುಭವಿಸಿದಿರಿ.
ಆ ಬೋಧನೆಯನ್ನು ಅಂತ್ಯ ಮಾಡುವ ವೇಳೆಯಲ್ಲಿ ಅವರಲ್ಲಿ ಒಬ್ಬ ಭಿಕ್ಷು ಈ ರೀತಿ ಕೇಳಿದನು: ಓ ಭಗವಾನ್, ಯಾರಾದರೂ ತಮ್ಮ ಪಾಪದ ಪರಿಣಾಮವನ್ನು ಆಕಾಶದಲ್ಲಿಯಾಗಲಿ, ಸಮುದ್ರದ ಮಧ್ಯೆಯಾಗಲಿ ಅಥವಾ ಗುಹೆಯಲ್ಲಿದ್ದು ಪಾರಾಗಬಹುದೇ?
ಆಗ ಬುದ್ಧ ಭಗವಾನರು ಹೀಗೆ ಗಾಥೆಯನ್ನು ನುಡಿದರು:
ಆಕಾಶದಲ್ಲಿಯಾಗಲಿ, ಸಾಗರದ ಮಧ್ಯೆಯಾಗಲಿ ಅಥವಾ ಗುಹೆಯಲ್ಲಾಗಲಿ ಅಂತಹ ಯಾವ ಸ್ಥಳವೂ ಇಲ್ಲ. ಯಾರೊಬ್ಬನು ತನ್ನ ಪಾಪದ ಪರಿಣಾಮ (ಫಲ) ದಿಂದ ಪಾರಾಗಲು ಸಾಧ್ಯವಿಲ್ಲ.