Tuesday 19 March 2019

ಪಾಲ್ಗುಣ ಪುರ್ಣಮಿಯ ವಿಶೇಷ the significance of march full moon day or phalguna purnima







      ಪಾಲ್ಗುಣ ಪುರ್ಣಮಿಯ ವಿಶೇಷ


1 .ಈ ಶುಭ ದಿನದಂದು ಭಗವಾನರು 20000 ಅರಹತ ಭಿಕ್ಖುಗಳೊಂದಿಗೆ ರಾಜಗೃಹದ ವೇಲುವನ ಆರಾಮದಿಂದ ಕಿಂಬಿಲವತಪುರಗೆ ಹೋರಟರು. ಅಲ್ಲಿ ಅವರು ಸಂಬೋದಿ ಪ್ರಾಪ್ತಿಯ ನಂತರ ಪ್ರಥಮ ಬಾರಿಗೆ ಅಂದರೆ 7 ವರ್ಷದ ನಂತರ ತಂದೆ ಶುದ್ಧೋಧನ ಹಾಗೂ ತಮ್ಮ ಶಾಕ್ಯಕುಲದ ಸಕಲ ಬಂಧು ಬಾಂಧವರನ್ನು ಭೇಟಿಮಾಡಲು ಹೋರಟರು. ಆ ಬಿಕ್ಖುಗಳಲ್ಲಿ ಅಂಗ ಮತ್ತು ಮಗಧದ 10000 ಬಿಕ್ಖುಗಳು ಹಾಗು ಕಪಿಲವಸ್ತುವಿನ 10000 ಬಿಕ್ಖುಗಳಿದ್ದರು. ಅವರಿಗೆಲ್ಲಾ ದಾರಿಯುದ್ದಕ್ಕೂ ಶುದ್ಧೋದನರೇ ಆಹಾರದ ವ್ಯವಸ್ಥೆ ಮಾಡಿದ್ದರು.


2. ಈ ಶುಭ ಸಂದರ್ಭದಲ್ಲಿ ಭಗವಾನರು ಶಾಕ್ಯರ ಅಹಂಕಾರವನ್ನು ದಮಿಸಲು ಯಮಕ ಪತಿಹಾರ ಎಂಬ ಅದ್ವಿತೀಯ ಅತೀಂದ್ರಿಯ ಶಕ್ತಿ ಪ್ರದಶರ್ಿಸಿದರು.


3. ಅದರಿಂದಾಗಿಯೇ ಈ ಶುಭ ಸಂದರ್ಭದಲ್ಲಿಯೇ ತಂದೆ ಶುದ್ಧೋಧನರು ತಮ್ಮ ಪುತ್ರರಾದ ಬುದ್ಧರಿಗೆ ಮೂರನೆಯ ಬಾರಿಗೆ ಪೂಜಿಸಿದರು. ಇದರಿಂದ ಪ್ರೇರಿಪಿತರಾದ ಉಳಿದ ಶಾಕ್ಯ ರಾಜಕುಮಾರರು, ರಾಜಕುಮಾರಿಯರು, ಉಳಿದ ಉತ್ತಮೋತ್ತಮರು ಸಹಾ ಬುದ್ಧರಿಗೆ ಪೂಜಿಸಿದರು, ಆಗ ಭಗವಾನರು ಅವರಿಗೆಲ್ಲಾ ತಮ್ಮ ಹಿಂದಿನ ಜನ್ಮದಲ್ಲಿ ತಾವು ವೆಸ್ಸಂತರರಾಗಿದ್ದಂತಹ ಆ ವೃತ್ತಾಂತಗಳೆಲ್ಲಾ ತಿಳಿಸಿದರು. ಬುದ್ಧವಂಸವನ್ನು ಹಾಗೂ ಧಮ್ಮವನ್ನು ಬೋದಿಸಿದರು. ಆಗ ಆಕಾಶದಿಂದ ಪುಷ್ಪವೃಷ್ಟಿಯಾಯಿತು. ನಂತರ ಯಶೋದರೆ ಸಹಿತ ಎಲ್ಲಾ ಬಾಂಧವರನ್ನು ಬೇಟಿಮಾಡಿದರು.


4 . ಈ ಶುಭದಿನದಂದೆ ತಂದೆಯಾದ ಶುದ್ಧೋದನರು ಸೋತಪನ್ನರಾದರು. 

4. ಇದೇ ಶುಭ ದಿನದ 3ನೇಯ ದಿನದಂದು ರಾಜಕುಮಾರ ನಂದ ಹಾಗೂ 7ದಿನದ ನಂತರ ರಾಜಕುಮಾರ ರಾಹುಲರು ಸಹಾ ಬುದ್ಧಶಾಸನವನ್ನು ಪ್ರವೇಶಿಸಿದರು. ನಂತರದ ಕೆಲ ದಿನದ ನಂತರ ಶುದ್ಧೋದನರು ಅನಾಗಾಮಿತ್ವ ಹಾಗೂ ತಾಯಿ ಗೋತಮಿಯು ಸೋತಪನ್ನರಾದರು.


5. ಇದೇ ಶುಭದಿನದಂದು ಇಡಿ ದಕ್ಷಿಣ ಭಾರತದಲ್ಲಿ ಭವ್ಯವಾಗಿ ಹಿಂದಿನ ಬೌದ್ಧಸಂಸ್ಕೃತಿಯನ್ನು ಮರಳಿ ಚಾಲನೆಮಾಡಿದಂತಹ ಪೂಜ್ಯ ಆಚಾರ್ಯ ಬುದ್ಧರಕ್ಖಿತ ಥೇರರು ಜನ್ಮತಾಳಿದಂತಹ ದಿನವಾಗಿದೆ.


6.ಇದೇ ಶುಭದಿನದಂದು ಇಡಿ ಕನರ್ಾಟಕವು ಧಮ್ಮಪದ ಹಬ್ಬದ ಉತ್ಸವವನ್ನು ಆಚರಿಸುತ್ತಿದೆ.




No comments:

Post a Comment