Sunday 8 November 2015

ಮಿಥ್ಯಾ ದೃಷ್ಟಿಗಳಿಗೆ ಬೋಧಿಸತ್ವರ ಖಂಡನೆ the bodhisatta's refute on wrong views

ಮಿಥ್ಯಾ ದೃಷ್ಟಿಗಳಿಗೆ ಬೋಧಿಸತ್ವರ ಖಂಡನೆ


                ಮಿಥ್ಯಾದೃಷ್ಟಿಗಳನ್ನು ಕೇವಲ ಬುದ್ಧರು ಮಾತ್ರವಲ್ಲ, ತಮ್ಮ ಹಿಂದಿನ ಜನ್ಮಗಳಲ್ಲಿ ಬೋಧಿಸತ್ವರಾಗಿದ್ದಾಗ ಸಹಾ ಖಂಡಿಸಿದ್ದರು. ಆಗ ಪ್ರಚಲಿತವಾಗಿದ್ದ ಅಹೇತುವಾದಿ (ಕಾರಣವೇ ಇಲ್ಲ ಎನ್ನುವ ಮತ), ಇಸ್ಸರ ಕತೃವಾದಿ (ಎಲ್ಲದಕ್ಕೂ ದೇವರೇ ಕಾರಣ ಎನ್ನುವ ಮತ) ಪೂರ್ವಕೃತವಾದಿ (ಎಲ್ಲದಕ್ಕೂ ಹಿಂದಿನ ಜನ್ಮದ ಕರ್ಮಗಳೇ ಕಾರಣವೆನ್ನುವ ಮತ), ಉಚ್ಛೇದವಾದಿ (ಪರಲೋಕವಿಲ್ಲ, ಎಲ್ಲವೂ ಸತ್ತನಂತರ ನಾಶ ಎನ್ನುವ ಮತ) ಮತ್ತು ಕ್ಷತವಿಧವಾದಿಗಳಿದ್ದರು. ಅವರಿಗೆ ಬೋಧಿಸತ್ತ ಈ ಕೆಳಕಂಡಂತೆ ಖಂಡಿಸಿದ್ದರು. ಈ ಘಟನೆಯು ಮಹಾಬೋಧಿ ಜಾತಕದಲ್ಲಿ ಕಂಡುಬರುತ್ತದೆ.
ಅಹೇತುವಾದದ ಖಂಡನೆ : ಎಲ್ಲವೂ ಸ್ವಭಾವದಿಂದಲೋ, ಅನಿಚ್ಚೆಯಿಂದಲೋ, ಕಾರಣರಹಿತದಿಂದಲೋ, ಹೇತುವಿಲ್ಲದೆಯೇ ನಡೆಯುವುದಾದರೆ ಹತ್ಯೆಯು ಅಪರಾಧವಲ್ಲ ಎಂದಾಯಿತು, ಏಕೆಂದರೆ ಅದು ಆಕಸ್ಮಿಕ, ಇಲ್ಲಿ ಯಾರು ದೋಷಿಯಲ್ಲ.
ಇಸ್ಸರ ಕತೃವಾದಿಯ ಖಂಡನೆ : ಇಡೀ ಲೋಕದ ವ್ಯವಸ್ಥೆಯು ಸರ್ವಶಕ್ತ ದೇವರಿಂದಲೇ ಆಗಿದ್ದರೆ, ಆತನ ಇಚ್ಛೆಯಂತೆಯೇ ಸೌಭಾಗ್ಯ ಮತ್ತು ವಿಪತ್ತು ಬರುವುದಾದರೆ, ಒಳ್ಳೆಯದು, ಕೆಟ್ಟದ್ದು ಎಲ್ಲಕ್ಕೂ, ಪ್ರತಿಜೀವಿಯ ಸುಖ-ದುಃಖಕ್ಕೂ ಆತನೇ ಕಾರಣವೆನ್ನುವದಾಗಿದ್ದರೆ, ಮಾನವ ಕೇವಲ ನಿಮತ್ತ ಮಾತ್ರ, ಕೇವಲ ಆಜ್ಞಾ ಪರಿಪಾಲಕನಾಗಿದ್ದಾನೆ. ಆ ದೇವರೇ ಪಾಪದ ಕಲೆಯನ್ನು ಹೊಂದಿ ದೋಷಿಯಾಗುತ್ತಾನೆ.
ಪೂರ್ವಕೃತವಾದಿಯ ಖಂಡನೆ: ಪೂರ್ವಜನ್ಮದ ಕರ್ಮದ ಕಾರಣದಿಂದಲೇ ಇಲ್ಲೂ ಸುಖ-ದುಃಖಗಳು ಉಂಟಾಗುತ್ತಿದ್ದರೆ, ಇಲ್ಲಿನ ಪಾಪಕರ್ಮವೂ ಸಹಾ, ಹಿಂದಿನ ಕರ್ಮಕ್ಕೆ ಋಣಮುಕ್ತವಾಗಲು ಕಾರಣವಾಗುತ್ತದೆ. ಹೀಗಿರುವಾಗ ಇಲ್ಲಿಯ ಪಾಪ ಯಾರನ್ನು ಯಾರಿಗೆ ಸ್ಪಶರ್ಿಸುತ್ತದೆ?
ಉಚ್ಛೇದವಾದಿಯ ಖಂಡನೆ : ನಾಲ್ಕು ಮಹಾಭೂತಗಳಿಂದ ಜೀವೋತ್ಪತ್ತಿ ಆಗುವುದು. ಇಲ್ಲಿ ಬದುಕಿರುವತನಕ ಜೀವನ, ಪರಲೋಕವಿಲ್ಲ. ಹಾಗಿರುವಾಗ ಪಾಪಫಲವಿಲ್ಲದಿರುವಾಗ ಪಾಪ ಮಾಡಿದರೂ ತಪ್ಪಿಲ್ಲದಿರುವಾಗ ಇಲ್ಲಿ ಪಾಪವು ಯಾರನ್ನು ಮುಟ್ಟುತ್ತದೆ.
ಕ್ಷತವಿಧಿವಾದಿಯ ಖಂಡನೆ : ಪರಲೋಕವಿಲ್ಲದಿರುವಾಗ ಬುದ್ಧಿವಂತನು ತನ್ನ ಸ್ವಾರ್ಥ ಸಾಧನೆಗೆ, ಪ್ರಯೋಜನವಿದ್ದಲ್ಲಿ ಯಾರಿಗೆ ಬೇಕಾದರೂ ಕೊಲ್ಲಬಹುದು ಎಂದು ಹೇಳುವ ಪಾಪ ಪ್ರಚೋದಕ ಸಿದ್ಧಾಂತಕ್ಕೆ ಧಿಕ್ಕಾರವಿರಲಿ ಎಂದು ಖಂಡಿಸಿ ತಮ್ಮ ಸಿದ್ಧಾಂತ ಹೀಗೆ ಹೇಳುತ್ತಾರೆ.
ಬೋಧಿಸತ್ವರ ಸಿದ್ಧಾಂತ : ಯಾವ ಮರದ ನೆರಳಿನಲ್ಲಿ ಕುಳಿತುಕೊಳ್ಳುತ್ತೇವೆಯೋ ಅಥವಾ ಮಲಗಿರುತ್ತೇವೆಯೋ ಆ ವೃಕ್ಷದ ಕೊಂಬೆಯನ್ನು ಸಹಾ ಮುರಿಯಬಾರದು. ಮಿತ್ರದ್ರೋಹಪಾತಕವಾದುದು.
ಭೂರಿದತ್ತ ಜಾತಕದಲ್ಲೂ ಬೋಧಿಸತ್ವರ ಖಂಡನೆ
                ಯಾರಿಗೆ ಕಣ್ಣಿದೆಯೋ, ಆತನು ರೋಗಗ್ರಸ್ಥ ದೃಶ್ಯಗಳನ್ನು ಕಾಣುತ್ತಾನೆ. ಏತಕ್ಕಾಗಿ ಸೃಷ್ಟಿಕರ್ತನು ತನ್ನ ಜೀವಿಗಳನ್ನು ಸರಿಯಾಗಿ ಸ್ಥಾಪಿಸಲಿಲ್ಲ?
                ಏತಕ್ಕಾಗಿ ಆತನ ಮಿತಿಯೇ ಇಲ್ಲದ ವಿಶಾಲ ಶಕ್ತಿಯು ಕುಂಠಿತಗೊಂಡಿದೆ. ಏಕೆ ಆತನ ಕೈಯು ಹಾರೈಸಲು ಅಪರೂಪಕ್ಕೊಮ್ಮೆ ಮುಂದಾಗುವುದು?
                ಏತಕ್ಕಾಗಿ ಎಲ್ಲಾ ಜೀವಿಗಳು ನೋವುಗಳಿಗೆ ಬಲಿಯಾಗುತ್ತವೆ? ಏಕೆ ಆತನು ಎಲ್ಲರಿಗೂ ಸುಖವನ್ನು ನೀಡಬಾರದು?
                ಏತಕ್ಕಾಗಿ ಮೋಸಗಾರರು, ಸುಳ್ಳುಗಾರರು ಮತ್ತು ಮೂರ್ಖರು ಉನ್ನತಿ ಪಡೆಯುತ್ತಾರೆ? ಏಕೆ ಮಿಥ್ಯವೇ ಜಯಗಳಿಸುತ್ತದೆ ಮತ್ತು ಸತ್ಯ ಹಾಗು ನ್ಯಾಯ ಸೋಲುತ್ತದೆ?

                ನಾನು ನಿಮ್ಮ ಸೃಷ್ಟಿಕರ್ತ ದೇವರನ್ನು ಅನ್ಯಾಯಿಗಳಲ್ಲಿ ಒಬ್ಬರೆಂದು ತೀಮರ್ಾನಿಸುತ್ತೇನೆ. ಏಕೆಂದರೆ ಈ ಜಗತ್ತು ತಪ್ಪಾದ ರಕ್ಷಣೆಯಲ್ಲಿ ಇರುವಂತೆ ಸೃಷ್ಟಿಸಿದ್ದಾನೆ.

No comments:

Post a Comment