Wednesday 30 September 2015

more paths for nibbana/ಅರಹತ್ವಕ್ಕೆ (ನಿಬ್ಬಾಣಕ್ಕೆ) ಹಲವು ಹಾದಿಗಳು

ಅರಹತ್ವಕ್ಕೆ (ನಿಬ್ಬಾಣಕ್ಕೆ) ಹಲವು ಹಾದಿಗಳು

                ಒಮ್ಮೆ 4 ಭಿಕ್ಷುಗಳು ಬುದ್ಧ ಭಗವಾನರ ಬಳಿ ಧ್ಯಾನದ ವಿಷಯ ವಸ್ತು ಕೇಳಿದರು. ಭಗವಾನವರು ಅವರವರ ಪ್ರಚ್ಚನ್ನತೆಗೆ ತಕ್ಕಂತೆ ಅವರಿಗೆ (ಪರಿಕಮ್ಮ ನಿಮಿತ್ತ) ಧ್ಯಾನ ವಿಷಯ ವಸ್ತು ತಿಳಿಸಿದರು. ಅವರು ಅದನ್ನು ಪಡೆದು ಹಗಲು-ರಾತ್ರಿ ಪರಿಶ್ರಮಿಸಿದರು. ಅವರಲ್ಲಿ ಒಬ್ಬ 4 ಮಹಾಭೂತವನ್ನು ಮತ್ತೊಬ್ಬ 18 ಧಾತುಗಳನ್ನೇ ವಿಷಯವಸ್ತುವಾಗಿ ಪಡೆದುಕೊಂಡರು. ಮಗದೊಬ್ಬ ಪಂಚಖಂಧವನ್ನು ಮತ್ತು ಕೊನೆಯವನು ಆರು ಆಯತನವನ್ನು ಧ್ಯಾನ ವಸ್ತುವಾಗಿ ಪಡೆದುಕೊಂಡನು. ಅವರೆಲ್ಲರೂ ಅರಹಂತರಾದರು. ಅವರೆಲ್ಲರೂ ತಮ್ಮ ಧ್ಯಾನವಸ್ತು ಭಿನ್ನ, ಆದರೆ ನಿಬ್ಬಾಣ ಮಾತ್ರ ಒಂದೇ. ಇದು ಹೇಗೆ ಎಂಬ ಅನುಮಾನ ಮೂಡಿ ಭಗವಾನರಲ್ಲಿ ಬಂದು ಈ ವಿಷಯವನ್ನು ಕೇಳಿದರು. ಆಗ ಭಗವಾನರು ಅವರಿಗೆ ಭಿಕ್ಷುಗಳೇ ನಿಮಗೆ ಕಿಂಶುಕ ವೃಕ್ಷವನ್ನು ನೋಡಿದ ಸೋದರರಿಗೆ ಉಂಟಾಗಿದ್ದ ಸಂಶಯ ಬಂದಿತೇ?
                ಆ ವಿಷಯ ತಿಳಿಸುವಂತೆ ಭಿಕ್ಷುಗಳು ಪ್ರಾಥರ್ಿಸಿದರು.
                ಭಗವಾನವರು ಆಗ ಹಿಂದಿನ ಜಾತಕದ ಕಥೆ ತಿಳಿಸಿದರು. ಹಿಂದಿನ ಜನ್ಮದಲ್ಲಿ ಭಗವಾನರು ವಾರಾಣಾಸಿಯ ರಾಜರಾಗಿದ್ದರು. ಆಗ ಈಗಿನ ಈ ನಾಲ್ಕು ಭಿಕ್ಷುಗಳೇ ಹಿಂದಿನ ಜನ್ಮದಲ್ಲಿ ಅವರಿಗೆ ಮಕ್ಕಳಾಗಿದ್ದರು. ಒಮ್ಮೆ ಈ ನಾಲ್ಕು ಮಕ್ಕಳು ತಂದೆಯ ಬಳಿಗೆ ಬಂದು ತಾವು ಕಿಂಶುಕ ವೃಕ್ಷವನ್ನು ನೋಡಬೇಕೆಂದು ತಿಳಿಸಿದರು. ರಾಜರು ಆಗ ಸಾರಥಿಗೆ ಈ ಕಾರ್ಯ ಒಪ್ಪಿಸಿದರು. ಆತನು ಹಿರಿಯ ಮಗನಿಗೆ ಬೋಳಾಗಿದ್ದ ಕಿಂಶುಕ ವೃಕ್ಷವನ್ನು, ಎರಡನೆಯವನಿಗೆ ಸಣ್ಣ ಚಿಗುರು ಕಿಂಶುಕ ವೃಕ್ಷವನ್ನು, ಮೂರನೆಯವನಿಗೆ ಹೂಗಳು ತುಂಬಿದ ಕಿಂಶುಕ ವೃಕ್ಷ ತೋರಿಸಿದನು. ಈ ನಾಲ್ಕು ರಾಜಕುಮಾರರು ತಮ್ಮ ಅನುಭವ ಹಂಚಿಕೊಂಡಾಗ ಅವರಲ್ಲಿ ಭಿನ್ನಾಭಿಪ್ರಾಯ ಮೂಡಿ ಮತ್ತೆ ರಾಜರ ಬಳಿಗೆ  ಬಂದರು. ಆಗ ಮಹಾರಾಜರು ಕಿಂಶುಕ ವೃಕ್ಷದ ವಿವಿಧ ಅವಸ್ಥೆ ತಿಳಿಸಿ ಅವರ ಸಂದೇಹ ನೀಗಿಸಿದರು.
                ನಂತರ ಭಗವಾನರು ಅವರಿಗೆ ಇದು ಸಹ ಇದೇ ಬಗೆಯಾದ ಸಂದೇಹವೆಂದು ತಿಳಿಸಿ, ಇವೆಲ್ಲವೂ ನಿಬ್ಬಾಣಕ್ಕೆ, ಅರಹತ್ವಕ್ಕೆ, ವಿವಿಧ ಮಾರ್ಗಗಳೆಂದು ತಿಳಿಸಿ ಅವುಗಳನ್ನು ವಿಶ್ಲೇಷಿಸಿ ವಿವರಿಸಿದಾಗ ಅವರಿಗಿದ್ದ ಸಂದೇಹ ನಿವಾರಣೆಯಾಯಿತು.
                ಹೀಗೆಯೇ ಇದೇ ರೀತಿಯಲ್ಲಿ ಬುದ್ಧ ಭಗವಾನರು ವಿವಿಧ ರೀತಿಯಲ್ಲಿ ತಮ್ಮ ಬೋಧನೆಯನ್ನು ಪ್ರಕಟಪಡಿಸಿದ್ದಾರೆ. ಈ ಬೋಧನೆಯ ಬೋಧಿಯ ಹಾದಿಯನ್ನು ನಾವು ಆಲಿಸಿದಾಗ ನಮ್ಮ ಮಿಥ್ಯಾದೃಷ್ಠಿಯು ತೊಡೆದು ಹೋಗಿ ಸಮ್ಮಾದೃಷ್ಟಿಯ ತಳಹದಿಯ ಮೇಲೆ ನಾವು ನಿಲ್ಲುವೆವು. ಆದ್ದರಿಂದ ಪ್ರಾಥಮಿಕವಾಗಿ ನಾವು ಧ್ಯಾನ ಸಾಧನೆಗೆ ಮುನ್ನ ಬೋಧನೆಯನ್ನು ಚೆನ್ನಾಗಿ ಅರಿತುಕೊಳ್ಳಬೇಕು. ಬುದ್ಧ ಭಗವಾನರು ತಮ್ಮ ಬೋಧನೆಯನ್ನು ಅಥವಾ ಧ್ಯಾನ ವಿಧಾನಗಳನ್ನು ಈ ರೀತಿಗಳಲ್ಲಿ ವಿವರಿಸಿದ್ದಾರೆ:
1.            ನಾಲ್ಕು ಆರ್ಯಸತ್ಯಗಳು ಮತ್ತು ಆರ್ಯ ಅಷ್ಠಾಂಗ ಮಾರ್ಗ.
2.            ಅವಲಂಬನೆಯಿಂದ ಉದಯಿಸುವಿಕೆ (ಪಟಿಚ್ಚ ಸಮುಪ್ಪಾದ).
3.            ಕುಶಲ ಮತ್ತು ಅಕುಶಲವನ್ನು ಹಾಗು ಅವುಗಳ ಮೂಲವನ್ನು ಅರಿಯುವಿಕೆ.
4.            ಇಂದ್ರೀಯಗಳ ಪೂರ್ಣ ಸ್ವರೂಪ ಅರಿಯುವಿಕೆ.
5.            ಧಾತುಗಳನ್ನು ಅರಿಯುವಿಕೆ.

6.            ಪಂಚಖಂಧ (ಐದು ಸ್ಕಂದ) (ದೇಹ ಮತ್ತು ಮನಸ್ಸು) ಅರಿಯುವಿಕೆ ಇತ್ಯಾದಿ...

No comments:

Post a Comment